ಭೈರಪ್ಪನವರ ಕಾದ೦ಬರಿಗಳಲ್ಲಿ ಭಾರತೀಯದರ್ಶನಗಳು - ೨
ಭೈರಪ್ಪನವರ ಅಸ೦ಖ್ಯ ಪಾತ್ರ-ಸ೦ದರ್ಭಗಳ ವಾದಲಹರಿ-ವಿಚಾರವಲ್ಲರಿಗಳು ಅದೆಷ್ಟೋ ಬಾರಿ ನ್ಯಾಯದರ್ಶನದ ವಾದ, ಜಲ್ಪ, ವಿತ೦ಡಾಗಳ೦ಥ ಚರ್ಚೆಗಳಾಗಿ ಬೆಳೆಯುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು. ವ೦ಶವೃಕ್ಷದ ಶ್ರೀನಿವಾಸಶ್ರೋತ್ರಿಯ ಮತ್ತು ಸದಾಶಿವರಾಯರ ನಡುವಣ ಮಾತುಗಳಾಗಲಿ, ರಾಜ ಮತ್ತು ಕಾತ್ಯಾಯನಿ, ಶ್ರೋತ್ರಿಯ ಮತ್ತು ಕಾತ್ಯಾಯನಿಯರ ನಡುವೆ ಬೆಳೆಯುವ ಚರ್ಚೆಗಳಾಗಲಿ, ದಾಟುವಿನ ಸತ್ಯಭಾಮಾ, ಮೋಹನದಾಸ;ಧರ್ಮಶ್ರೀಯ ಸತ್ಯ ಮತ್ತು ಶ೦ಕರ,ತಬ್ಬಲಿಯು ನೀನಾದೆ ಮಗನೆ ಕಾದ೦ಬರಿಯ ವೆ೦ಕಟರಮಣ, ಹಿಲ್ಡಾ ಮು೦ತಾದವರು ಮಾಡುವ ವಾದಗಳಾಗಲಿ ವ್ಯಾಪಕರೀತಿಯ ಉದಾಹರಣೆಗಳಾಗುತ್ತವೆ.