ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 7)
ಪಾಂಡವರಲ್ಲಿ ಭೀಮ, ಆಕಾರ ಮತ್ತು ಸ್ವಭಾವ ಎರಡರಲ್ಲಿಯೂ ವಿಶಿಷ್ಟನಾಗಿ ನಿಲ್ಲುತ್ತಾನೆ. ಕಪಟ, ಕುತಂತ್ರಗಳಾಗಲೀ, ಇರದ ನೇರ ನುಡಿ ನೇರ ನಡೆಯವನು. ಇವನ ಅಸಾಧ್ಯ ಹಸಿವಿನಿಂದಾಗಿ ಇವನಿಗೆ ವೃಕೋದರನೆಂಬ ಹೆಸರೂ ಸಹ ಇದ್ದಿತು. ತನ್ನ ಮಗನ ಹಸಿವಿನ ಪ್ರಮಾಣ ಅರಿತಿದ್ದ ಕುಂತಿ, ಏಕಚಕ್ರನಗರದಲ್ಲಿ ಐವರು ಮಕ್ಕಳೂ ತಂದ ಭಿಕ್ಷೆಯಲ್ಲಿ ಅರ್ಧವನ್ನು ‘ಭೀಮ ಪಾಲು’ ಎಂದು ತೆಗೆದಿಡುತ್ತಿದ್ದಳು. ಇಂಥ ಭೀಮ ದಿನ ಗಟ್ಟಳೆ ಉಪವಾಸ ಕೂಡ ಇರಬಲ್ಲವನಾಗಿದ್ದ. ಬಕನಂತಹ ರಾಕ್ಷಸನನ್ನು, ಅದೊಂದು ವಿನೋದದ ಆಟವೆಂಬಂತೆ ತಣ್ಣಗೆ ಕೊಂದು ಬರುವ ಭೀಮ ಮಕ್ಕಳಿಂದ, ದೊಡ್ಡವರತನಕ ಎಲ್ಲರನ್ನೂ ಮುದಗೊಳಿಸುತ್ತಾನೆ. ಭಿಕ್ಷಾನ್ನದ ರುಚಿ ಇರದ ಆಹಾರವನ್ನು ಅರೆಹೊಟ್ಟೆ ಉಂಡೂ ಉಂಡು ಬೇಸತ್ತಿದ್ದ ಭೀಮನಿಗೆ ಬಕನನ್ನು ಕೊಲ್ಲಲು ಹೊರಟಂದು ಸುಗ್ಗ
