Prekshaa articles feed

Kathāmṛta - 130 - The Story of the Bṛhatkathā-śloka-saṅgraha

Then he thought, ‘Fie upon me – I brought this allegation upon myself! Or why should I blame myself? The king was happy for a long time. Which other prince achieved so much, uprooted both the internal and external enemies with great tact? Did any of them take great care such that the varṇāśrama-dharma was followed without lapses? Who else has a son like Avantivardhana who is blessed with such noble qualities? Let all these be so; hasn’t Naravāhanadatta recognised me as the emperor?

ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 2

೨. ವಿಷಮಪಾದದ ಉತ್ತರಾರ್ಧದಲ್ಲಿ ಲಘುಬಾಹುಳ್ಯವುಳ್ಳ ಸಂದರ್ಭಗಳಲ್ಲಿ ಆಯಾ ಓಜಪಾದಗಳ ಪಂಚಮಾಕ್ಷರಗಳು ಲಘು ಅಥವಾ ಗುರುವೇ ಆಗಿರಲಿ, ಮೇಲಣ ಎಚ್ಚರಿಕೆಯನ್ನು ಪಾಲಿಸಿದ್ದೇ ಆದಲ್ಲಿ ಶ್ಲೋಕದ ಧಾಟಿ ಕೆಡುವುದಿಲ್ಲ. ಇಂತಿದ್ದರೂ ಪಂಚಮಾಕ್ಷರವು ‘ಲಕ್ಷಣವಿರುದ್ಧ’ವಾಗಿ ಗುರುವಾದಲ್ಲಿ ಒಟ್ಟಂದದ ಶ್ಲೋಕಗತಿಗೆ ಹೆಚ್ಚಿನ ಸೊಗಸು ಬರುತ್ತದೆ. ಉದಾ:

ಷಾಣ್ಮಾತುರಃ ಕ್ತಿಧರಃ ಕುಮಾರಃ ಕ್ರೌಂಚದಾರಣಃ || (ಅಮರಕೋಶ, ೧.೧.೪೭)

ಆದರೆ ಓಜಪಾದದ ಪೂರ್ವಾರ್ಧವು ಗುರುಗಳಿಂದಲೇ ತುಂಬಿದ್ದರೆ - ವಿಶೇಷತಃ ಮೂರು ಹಾಗೂ ನಾಲ್ಕನೆಯ ಅಕ್ಷರಗಳು ಗುರುಗಳಾಗಿದ್ದರೆ - ಐದನೆಯ ಅಕ್ಷರವು ಲಕ್ಷಣಾನುಸಾರವಾಗಿ ಲಘುವಾಗುವುದೇ ಒಳಿತು.

Sandarbhasūkti - part 7

46. Kadambakoraka-nyāya

The buds of Kadamba trees are the topic of this nyāya. These buds bloom simultaneously.  If one blooms it's a given that all will bloom. One can remember how the streetlights of an area or all the lights pertaining to a drama performance lights up together. When many things happen simultaneously then this nyāya is used to describe them. It is also called kadambamukula-nyāya or kadambagolaka-nyāya.

ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 1

‘ಶ್ಲೋಕ’ ಎಂಬ ಪದ್ಯಪ್ರಕಾರವು ಸಾಲಿಗೆ ಎಂಟರಕ್ಷರಗಳಂತೆ ನಾಲ್ಕು ಪಾದಗಳನ್ನುಳ್ಳ ಅನುಷ್ಟುಪ್‌ವರ್ಗದ ಛಂದಸ್ಸುಗಳಲ್ಲಿ ಒಂದು ಪ್ರಭೇದವಾದರೂ ಇದಕ್ಕೆ ಇಡಿಯ ಆ ವರ್ಗದ ಹೆಸರೇ ರೂಢವಾಗಿದೆ. ಈ ವೈಚಿತ್ರ್ಯಕ್ಕೆ ಕಾರಣ ಅದರ ಪ್ರಾಚುರ್ಯ ಮತ್ತು ವೈದಿಕಸಾಹಿತ್ಯದ ಅನುಷ್ಟುಪ್ಪಿನೊಡನೆ ಅದಕ್ಕಿರುವ ನೈಕಟ್ಯ-ಸಾದೃಶ್ಯಗಳೇ ಆಗಿವೆ. ಸಾಮಾನ್ಯವಾಗಿ ಸಮೂಹವೊಂದರಲ್ಲಿ ಹೆಚ್ಚು ಪ್ರಸಿದ್ಧವಾದ ಪ್ರಭೇದವನ್ನು ಇಡಿಯ ಗುಂಪಿನ ಹೆಸರಿನಿಂದಲೋ, ಅಥವಾ ಆ ಗುಂಪನ್ನೇ ತತ್ಸಂಭೂತವಾದ ಪ್ರಭೇದದ ಹೆಸರಿನಿಂದಲೋ ಗುರುತಿಸುವುದುಂಟು.

ಸೀಸಪದ್ಯ ಮತ್ತು ಸಾನೆಟ್: ಪದ್ಯಶಿಲ್ಪವಿವೇಚನೆ - 7

ಈ ಮೊದಲೇ ಕಂಡಂತೆ ನವೋದಯದಿಂದೀಚೆಗೆ ನಮ್ಮಲ್ಲಿ ಸಾನೆಟ್ ಹೆಚ್ಚಿನ ಪ್ರಸಿದ್ಧಿ-ಪ್ರಾಶಸ್ತ್ಯಗಳನ್ನು ಗಳಿಸಿದೆ. ನವ್ಯ-ನವ್ಯೋತ್ತರಯುಗಗಳಲ್ಲಿಯೂ ಈ ಬಂಧವು ಉಳಿದುಬಂದಿದೆ. ಆದರೂ ಲಕ್ಷಣಶುದ್ಧವಾದ ಸಾನೆಟ್‌ಗಳನ್ನು ನವೋದಯದಲ್ಲಿಯೇ ಕಾಣಬಹುದು. ಈಚಿನ ದಶಕಗಳಲ್ಲಿ ಮಾತ್ರಾಸಮತೆ, ಪಾದಬದ್ಧತೆ, ಪ್ರಾಸಪೂರ್ಣತೆ ಮುಂತಾದ ಶಿಸ್ತಿಲ್ಲದೆ ಸಾನೆಟ್ ತನ್ನ ಲಕ್ಷಣಶುದ್ಧಿಯನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಲಕ್ಷಣಬದ್ಧವಾದ ಬಂಧಗಳನ್ನೇ ವಿವೇಚಿಸುವ ಈ ಪ್ರಯತ್ನದಲ್ಲಿ ಚ್ಯುತಲಕ್ಷಣಗಳಿಗೆ ಅವಕಾಶವಿಲ್ಲದಿರುವುದು ಯುಕ್ತವೇ ಆಗಿದೆ. ಈ ಹಿನ್ನೆಲೆಯಲ್ಲಿ ನವೋದಯದ ಕೆಲವು ಮಾದರಿಗಳನ್ನು ನಾವು ಪರಿಶೀಲಿಸಬಹುದು:

ನನ್ನವೀ ನುಡಿಗಳಿರ! ಕಾಲದಲೆಗಳಲಿ