ದೇವರ್ಷಿ ನಾರದರ ವಿಶ್ವರೂಪ - 2
ನಿಗ್ರಹಾನುಗ್ರಹಸಮರ್ಥರಾಗಿದ್ದ ನಾರದರಿಗೂ ಅನ್ಯರಿಂದ ಶಾಪ ಬಂದಿತ್ತು; ಆಗೀಗ ಅಪಮಾನಗಳೂ ಆಗಿದ್ದವು. ಇವುಗಳ ಸೂಚನೆಯನ್ನು ನಾವು ಮುನ್ನವೇ ಕಂಡೆವಾದರೂ ಅವುಗಳ ಕೆಲವು ವಿವರಗಳನ್ನೀಗ ನೋಡಬಹುದು. ಹಿಂದೊಮ್ಮೆ ಇಂದ್ರಸಭೆಯಲ್ಲಿ ಉರ್ವಶಿಯ ನೃತ್ಯಕ್ಕಾಗಿ ನಾರದರು ವೀಣಾವಾದನ ಮಾಡುತ್ತಿದ್ದರಂತೆ. ಆಗ ಅವಳು ಅಲ್ಲಿದ್ದ ಇಂದ್ರಪುತ್ರ ಜಯಂತನನ್ನು ನೋಡಿ ಮರುಳಾಗಿ ತಾಳ ತಪ್ಪಿದಳು. ಇದನ್ನು ಲೇವಡಿ ಮಾಡಲೆಂದು ನಾರದರು ತಾವು ಕೂಡ ಬೇಕೆಂದೇ ಶ್ರುತಿ ತಪ್ಪಿದರಂತೆ. ಇದನ್ನೆಲ್ಲ ಕಂಡು ಕನಲಿದ ಅಗಸ್ತ್ಯರು ಇಬ್ಬರನ್ನೂ ಶಪಿಸಿದ್ದಲ್ಲದೆ ಮಹತೀ ವೀಣೆಗೂ ಶಾಪವಿತ್ತರಂತೆ! (ವಾಯುಪುರಾಣ).
