ಸಾಕ್ಷಿ – ಇರುವು; ಅರಿವು; ಹರವು – 5
೫. ಅನುರಣಿಸುವ ಕೆಲವು ಧ್ವನಿಗಳು
ಸಾಕ್ಷಿಯ ಅಂತ್ಯದಲ್ಲಿ ಕೆಲವೊಂದು ಸೂಚನೆಗಳು ಸೂಕ್ಷ್ಮವಾಗಿ ಕಾಣುತ್ತವೆ. ಅವುಗಳಲ್ಲಿ ಗಣೇಶ(ಸುಕನ್ಯಳ ಮಗ) ಮತ್ತೊಬ್ಬ ಮಂಜಯ್ಯನಂತಾಗಿರುವುದು ಮತ್ತು ಮಂಜಯ್ಯನ ತೋಟದ ಸುತ್ತ ಬೆಳೆದಿರುವ ಕಟ್ಟುಕತೆಯು ಮೌಲ್ಯ, ಅಹಂಕಾರ ಮತ್ತು ಪ್ರವೃತ್ತಿಗಳ ವಾಸ್ತವತೆ ಮತ್ತು ವಿಸ್ತಾರವನ್ನೂ ಮತ್ತು ಅವುಗಳ ನಡುವಿನ ಸಂಘರ್ಷದ ನಿತ್ಯತೆಯನ್ನೂ ಹಾಗೂ ಇವುಗಳು ವೈಯಕ್ತಿಕ ನೆಲೆಯಿಂದ ಸಾಮಾಜಿಕ ನೆಲೆಗೆ ಏರಿದಾಗ ಯಾವ ವಿಸ್ತಾರವನ್ನು ಪಡೆಯುತ್ತವೆ ಎಂಬುದನ್ನೂ ತೋರಿಸುತ್ತವೆ.