Literature

ಮಹಾಕವಿಗಳು ಕಂಡ ಮಹಾವೃಕ್ಷಗಳು - 3

ಕಾಳಿದಾಸನ ಎರಡು ಮಹಾಕಾವ್ಯಗಳಲ್ಲಿಯೂ ಅವನಿಗಿದ್ದ ಸಸ್ಯಪ್ರೇಮದ ಭಾವಗಳು ಹೃದಯಂಗಮವಾಗಿ ಒಡಮೂಡಿವೆ. ‘ಕುಮಾರಸಂಭವ’ದಲ್ಲಿ ಪಾರ್ವತಿಯು ತಪೋದೀಕ್ಷೆಯನ್ನು ತಾಳಿದಾಗ ತನ್ನ ತನುವಿನ ಒನಪು-ಒಯ್ಯಾರಗಳನ್ನು ಬಳ್ಳಿಗಳಲ್ಲಿ ಒತ್ತೆಯಿಟ್ಟಳೆಂದು ಕವಿಯು ಹೇಳುವಾಗ ಅವನ ಮಾತುಗಳಲ್ಲಿರುವುದು ಪಾರ್ವತಿಯ ಒಡಲು ಬಳ್ಳಿಯಂತೆ ಬಳುಕುವುದೆಂಬ ಸೀಮಿತಾರ್ಥದ ಚಮತ್ಕಾರ ಮಾತ್ರವಲ್ಲ, ಅವಳಿಗೂ ಗಿಡ-ಬಳ್ಳಿಗಳಿಗೂ ಸಾಜಾತ್ಯವಿದೆಯೆಂಬ ಅನುಬಂಧವೇ ಪ್ರಧಾನ ಮತ್ತು ರಸಸ್ಫೋರಕವೆಂಬ ದಿವ್ಯಧ್ವನಿ: “ಪುನರ್ಗ್ರಹೀತುಂ ನಿಯಮಸ್ಥಯಾ ತಯಾ ... ನಿಕ್ಷೇಪ ಇವಾರ್ಪಿತಂ ಲತಾಸು ತನ್ವೀಷು ವಿಲಾಸಚೇಷ್ಟಿತಂ ...” (೫.೧೩).

ಮಹಾಕವಿಗಳು ಕಂಡ ಮಹಾವೃಕ್ಷಗಳು - 2

ಆರ್ಷಗ್ರಂಥಗಳಲ್ಲಿ ವಿಶಿಷ್ಟ ಪಾತ್ರವನ್ನು ವಹಿಸುವ ಮಹಾವೃಕ್ಷಗಳನ್ನು ಬೀಳ್ಗೊಂಡು ಅಭಿಜಾತ ಸಾಹಿತ್ಯಯುಗದ ವರಕವಿಗಳತ್ತ ಬಂದರೆ ನಮಗೆ ಕಾಣುವ ಮೊದಲ ತಾರೆ ಕಾಳಿದಾಸ. ಇವನು ಸಂಸ್ಕೃತಸಾಹಿತ್ಯಾಕಾಶದ ಧ್ರುವತಾರೆಯೂ ಹೌದು. ದಿಟವೇ, ಇವನಿಗಿಂತ ಮುನ್ನ ಅಶ್ವಘೋಷನಿದ್ದ. ಅವನಿಗೆ ತನ್ನ ‘ಬುದ್ಧಚರಿತ’ ಮಹಾಕಾವ್ಯದಲ್ಲಿ ಸಿದ್ಧಾರ್ಥನು ಸಂಬೋಧಿಯನ್ನು ಪಡೆಯುವಾಗ ಆಶ್ರಯಿಸಿದ ಬೋಧಿವೃಕ್ಷ ಅಥವಾ ಅಶ್ವತ್ಥವನ್ನು ಹೃದಯಂಗಮವಾಗಿ ಬಣ್ಣಿಸುವ ಪುಣ್ಯಾವಕಾಶವಿದ್ದಿತಾದರೂ ಅದೇಕೋ ಅವನು ಈ ಸುಸಂದರ್ಭವನ್ನು ಬಳಸಿಕೊಳ್ಳಲೇ ಇಲ್ಲ. ಹದಿನಾಲ್ಕನೆಯ ಸರ್ಗದಲ್ಲಿ ಒಂದೆಂದರೆ ಒಂದೇ ಮಾತಿನಿಂದ ಈ ಮಹಾವೃಕ್ಷವನ್ನು ಯಾಂತ್ರಿಕವಾಗಿ ಹೆಸರಿಸಿ ಮುಂದಿನ ಕಥೆಗೆ ದಾಪಿಡುತ್ತಾನೆ.

ಮಹಾಕವಿಗಳು ಕಂಡ ಮಹಾವೃಕ್ಷಗಳು - 1

ಪ್ರಾಚೀನ ಭಾರತೀಯರ ಪ್ರಕೃತಿಪ್ರೀತಿಗೆ ಎಣೆಯೇ ಇಲ್ಲ. ‘ಸರ್ವಂ ಖಲ್ವಿದಂ ಬ್ರಹ್ಮ’ ಎಂಬ ಕೇವಲಾದ್ವೈತದೃಷ್ಟಿಗೆ ವಿಶ್ವವೆಲ್ಲ ಸಚ್ಚಿದಾನಂದಘನವಾಗಿ ಅನುಭವಕ್ಕೆ ಬರುವುದು ಸಹಜವೇ ತಾನೆ? ಪಾಂಚಭೌತಿಕ ಪ್ರಕೃತಿಯ ಎಲ್ಲ ಚರಾಚರ ಮತ್ತು ಜಡ-ಚೇತನ ಆಯಾಮಗಳನ್ನೂ ಅವರು ಆರಾಧಿಸುತ್ತ ಬಂದಿದ್ದಾರೆ. ವಿಶೇಷತಃ ಭೂಮಿಗೆ ಸೇರಿದ ಬೆಟ್ಟ-ಗುಡ್ಡ, ನದಿ-ನದ, ಕೆರೆ-ಕಡಲು, ಮರ-ಗಿಡ, ಪ್ರಾಣಿ-ಪಕ್ಷಿಗಳಲ್ಲಿ ನಮ್ಮವರು ಇರಿಸಿದ ಅಕ್ಕರೆ-ಆದರಗಳು ಅಪಾರ. ಇದರ ಇತಿಹಾಸವೂ ಚಿರಂತನ. ವೇದಗಳಲ್ಲಿಯೇ ಇದಕ್ಕೆ ವಿಪುಲ ಸಾಕ್ಷ್ಯಗಳನ್ನು ಕಾಣಬಹುದು.

अलङ्कारसुधानिधिः—उदाहरणपद्यानि

४.. उदाहरणपद्यानि

भोगनाथविरचितानि उदाहरणपद्यानि सायणाचार्यविजयनगरसाम्राज्यसम्बद्धानेकविषयस्फोरकाणीति प्रागेव प्रत्यपादि। अत्र विप्रतिपद्यमानाः केचिदाचक्षीरन्—काव्यसहजया नैकालङ्कारभूषितया शैल्या सन्दृब्धानि पद्यानीमानि सत्यदूराणीति। नैवं युक्तं वक्तुम्। सालङ्कारा शैली भूषणमेव न दूषणमिति इहोदाहरिष्यमाणानि पद्यान्यवलोक्य बोद्धुम् अर्हन्ति सन्तः॥

अलङ्कारसुधानिधिः—ग्रन्थविमर्शः

४.२. गुणदोषौ

शरीरगताः शौर्यादयो गुणा आत्मानमिव काव्यशरीरगताः प्रसादादयो गुणाः काव्यात्मानं रसम् उत्कर्षयन्ति—

शौर्यादय इवात्मानं ये धर्मा अङ्गिनं रसम्।

उत्कर्षयन्ति नियतस्थितयस्ते गुणा इह॥ १.१११

नयन्ति नित्यमुत्कर्षं समवायाद्रसं गुणाः।

शौर्यादय इवात्मानं शरीरेषु शरीरिणाम्॥ १.११३

अलङ्कारसुधानिधिः—ग्रन्थविस्तरः तद्विमर्शश्च

. ग्रन्थविस्तरः तद्विमर्शश्च

ग्रन्थेऽस्मिन् प्रतिपादितानि शास्त्रप्रमेयाणि विषयानुक्रमण्यां साकल्येन निरूपितानि। अत्र केवलं केचन विशिष्टा विषयाः सङ्गृह्य प्रतिपाद्यन्ते।

अलङ्कारसुधानिधिः—स्वरूपं तत्कर्तृत्वं च

. अलङ्कारसुधानिधेः स्वरूपं तत्कर्तृत्वं च

यदा हि उपात्तविद्यो द्वितीयः सङ्गमः स्वयं राज्यधुराम् अवोढ तदा सारस्वतानि कार्याणि निर्वर्तयितुं सायणाचार्येण पर्याप्तः अवसरोऽलम्भि। तथा हि उदयगिरिस्थितेन तेन १३५५ वर्षस्य १३६५ वर्षस्य चान्तराले विद्यमाने संवत्सराणां दशके अलङ्कारसुधानिधिः प्रणीत इति प्रतीमः॥