Prekshaa articles feed

ಶ್ರೀಹರ್ಷನ ನೈಷಧೀಯಚರಿತ - 2

ನೈಷಧೀಯಚರಿತವು ಸಂಸ್ಕೃತಸಾಹಿತ್ಯದ ವಿದ್ವತ್ತೆಯ, ವಿದ್ಯಾಸ್ಪರ್ಧೆಯ, ಚಮತ್ಕಾರಪಾರಮ್ಯದ ಯುಗದ ಅಪ್ರತಿಮ ಪ್ರತಿನಿಧಿ. ವ್ಯಾಸ-ವಾಲ್ಮೀಕಿಗಳ ಮಹಾಕೃತಿಗಳಲ್ಲಿ ಕಂಡುಬರುವ ಕಥೆ-ಪಾತ್ರಗಳ ಆಳ-ಅಗಲಗಳನ್ನಾಗಲಿ, ಜೀವನಮೌಲ್ಯಗಳ ಸಹಜಗಂಭೀರ ಶೋಧನೆಯನ್ನಾಗಲಿ, ಅಕೃತಕವೂ ಉದಾರಮನೋಹರವೂ ಆದ ವಾಗ್ವಿಲಾಸವನ್ನಾಗಲಿ ಇದರಲ್ಲಿ ಕಾಣಲು ಬಯಸಿದರೆ ನಮಗೆ ನಿರಾಶೆಯಾಗದಿರದು. ಆ ಬಗೆಯ ದೃಷ್ಟಿ ಎಷ್ಟೇ ಉನ್ನತವಾಗಿದ್ದರೂ ಇಂಥ ಕಾವ್ಯಗಳ ಮಟ್ಟಿಗೆ ಅದನ್ನು ಅಳವಡಿಸಿಕೊಂಡರೆ ನಮಗೆ ಬೇರೊಂದು ಬಗೆಯ ನಷ್ಟವೇ ಎದುರಾಗುತ್ತದೆ. ಇದೇ ರೀತಿ ಭಾಸ, ಶೂದ್ರಕ, ಕಾಳಿದಾಸ, ಭರ್ತೃಹರಿ, ವಿಶಾಖದತ್ತರಂಥ ಅಭಿಜಾತ ಕವಿಗಳ ಕೃತಿಗಳೊಡನೆ ನೈಷಧೀಯವನ್ನು ಹೋಲಿಸಿ ನೋಡಿದಾಗ ಅಪ್ಪಟ ಸಹೃದಯರಿಗೆ ಬೇಸರವಾಗದಿರದು. ಹಾಗೆಂದು ವಿದ್ಯಾವಿದಗ್ಧರಿಗೆ ಅತ್ಯುತ್ಸಾಹವೂ ಮೂಡದಿರದು.

ಕನ್ನಡ ಚಿತ್ರಗೀತಗಳಲ್ಲಿ ಅಲಂಕಾರಗಳು – ಒಂದು ಹಕ್ಕಿನೋಟ

|| ಶ್ರೀಃ ||

ಯಾವ ಜೀವಿಗಾಗಲಿ ಬೇಕಾಗಿರುವ ದುಃಖನಿವೃತ್ತಿ ಮತ್ತು ಸುಖಪ್ರಾಪ್ತಿಗಳು ಶಾಶ್ವತವಾಗಿ ಮೋಕ್ಷದಿಂದ ದೊರೆತರೂ ತಾತ್ಕಾಲಿಕವಾಗಿ ಕಲಾಸ್ವಾದದ ಮೂಲಕವೂ ಪಡೆಯಬಹುದೆಂದು ಲೋಕಾನುಭವವೇದ್ಯ. ಇದೇ ಮೂಲಪ್ರವೃತ್ತಿಯು ಮಾನವಚರಿತ್ರೆಯಲ್ಲಿ ಕಲೆಯ ಬೆಳೆವಳಿಗೆಗೂ ಕಾರಣವಾಗಿದೆ. ಕಲೆಯ ಕವಲುಗಳು ಹಲವಾದರೂ ಕಲಾಸ್ವಾದದ ತಿರುಳನ್ನೂ  ಹುರುಳನ್ನೂ ರಸ-ಸಿದ್ಧಾಂತದ ಮೂಲಕ ಸೆರೆ ಹಿಡಿಯುವಲ್ಲಿ ಭಾರತೀಯಸೌಂದರ್ಯಮೀಮಾಂಸಕರು ಸಮರ್ಥರಾಗಿದ್ದಾರೆ.  

Saṃskṛta-nāṭaka - Harṣavardhana (Part 3) - Priyadarśikā and Ratnāvalī

Sāṅkṛtyāyanī had designed a play that showcased the manner in which Vatsa-rāja, who taught music to Vāsavadattā fell in love with her. The play was planned to be staged in the royal court; Araṇyakā was to play the role of Vāsavadattā and Manoramā, the role of Vatsa-rāja. Araṇyakā’s friends Manoramā and vidūṣaka planned to use the occasion to enable the king and his newfound love to unite with each other. Accordingly, instead of Manoramā, Vatsa-rāja himself ended up playing his role as a part of the play; he used the opportunity to engage in romantic exchanges with Araṇyakā.

भारतीय क्षात्त्र परम्परा - Part 70

जो महिलाए उनके लिए अप्राप्य थी जैसे कि रानी रूपमती, रानी जयवंती, रानी दुर्गावती तथा अन्य भी उन्हे बादशाहों की अतृप्त वासना की आग में जलना पड़ा। इस प्रकार के अनेक विवरण अबुल फजल से लेकर विन्सेंट स्मिथ द्वारा लिखे गये है। 

ಶ್ರೀಹರ್ಷನ ನೈಷಧೀಯಚರಿತ - 1

ಶ್ರೀಹರ್ಷ ಹನ್ನೆರಡನೆಯ ಶತಮಾನದಲ್ಲಿದ್ದ ವಿದ್ವತ್ಕವಿ. ಅಂದಿನ ಕಾನ್ಯಕುಬ್ಜವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳುತ್ತಿದ್ದ ಗಾಹಡವಾಲ ರಾಜಪುತ್ರರ ವಂಶದ ಜಯಚಂದ್ರ ಅಥವಾ ಜಯಂತಚಂದ್ರನ (೧೧೬೯-೧೧೯೫) ಆಸ್ಥಾನಕವಿ ಈತ. ಇವನ ಮೂಲಸ್ಥಳ ಯಾವುದೆಂಬ ವಿಷಯದಲ್ಲಿ ಏಕಾಭಿಪ್ರಾಯವಿಲ್ಲ. ಉತ್ತರಭಾರತಕ್ಕೆ ಸೇರಿದವನೆಂಬುದಂತೂ ನಿರ್ವಿವಾದ. ಆದರೆ ಬಂಗಾಳದವನೋ ಕಾಶ್ಮೀರದವನೋ ಅಥವಾ ಕಾನ್ಯಕುಬ್ಜದವನೋ ಎಂದು ನಿಶ್ಚಯವಾಗಿ ತಿಳಿಯುತ್ತಿಲ್ಲ. ಈ ಎಲ್ಲ ಪ್ರದೇಶಗಳಿಗೆ ಸೇರಿದ್ದಿರಬಹುದೆಂಬುದಕ್ಕೆ ಅಷ್ಟಿಷ್ಟು ಆಧಾರಗಳನ್ನು ಇವನ ಕಾವ್ಯದಲ್ಲಿ ಕಾಣಬಹುದು. ಒಟ್ಟಿನಲ್ಲಿ ಶ್ರೀಹರ್ಷ ನಮ್ಮ ಹೆಮ್ಮೆಯ ಕವಿ. ಈತನ ತಂದೆ ಹೀರಪಂಡಿತ ಅಥವಾ ಶ್ರೀಹೀರ. ತಾಯಿ ಮಾಮಲ್ಲದೇವಿ.

Saṃskṛta-nāṭaka - Harṣavardhana (Part 2)

Jayāpīḍa (around 800 CE) says that Ratnāvalī was authored by the king. Jayadeva (around 11th Century CE) also concurs with this opinion – he says that the play is by Harṣavardhana. Madhusūdana (circa. 1654 CE) calls him kavi-jana-mūrdhanya and ratnāvalyākhya nāṭikā-kārtā.[1] In fact, we don’t even have to rely upon external testimonies to attest that Harṣa was a poet and a playwright.

भारतीय क्षात्त्र परम्परा - Part 68

भारत में हम ऐसे अनेक साम्राज्यो के उदाहरण पाते है कि एक क्षेत्र के साम्राज्य का आधिपत्य किसी अन्य क्षेत्र पर स्थापित हुआ हो। जैसे नेपाल और मिथिला के शासक सेन वंश तथा उत्तरभारत के सोलंकी लोग, कर्नाटक क्षेत्र से यंहा स्थापित हुए थे। इसी प्राकर राठोड़ वंश भी कर्नाटक के राष्ठ्रकूटों के वंशज है। इसी प्रकार गंगा के तटवासी गंग लोग दक्षिणी कर्नाटक के शासक बन गये थे। विजयनगर साम्राज्य के पतन के उपरांत नायक राजाओं द्वारा आंध्र, तमिलनाडु में प्रतिस्थापित हो कर दक्षिणांध्र – युग के रुप में उभरा।

ಜೀವರೇಖೆಗಳು – ಸಾ.ಕೃ.ರಾ. ಚಿತ್ರಿಸಿದ ಸತ್ತ್ವಮೂರ್ತಿಗಳು - 2

‘ಪುರುಷಸರಸ್ವತಿ’ (ವಿ.ಸೀ. ಸಂಪದ, ಬೆಂಗಳೂರು, ೧೯೯೪) ಸಣ್ಣದಾದರೂ ಹಿರಿದಾದ ಕೃತಿ. ಕೇವಲ ಐವತ್ತು ಪುಟಗಳ ಒಳಗೆ ಕರ್ಣಾಟಾಂಧ್ರಸವ್ಯಸಾಚಿ ರಾಳ್ಲಪಲ್ಲಿ ಅನಂತಕೃಷ್ಣಶರ್ಮರ ಸ್ಫಟಿಕೋಪಮ ಜೀವನವನ್ನು ಕಟ್ಟಿಕೊಡುವ ರಾಯರು ಅನುಬಂಧವಾಗಿ ‘ಸಂಗೀತದ ಮೂಲದ್ರವ್ಯಗಳು’ ಎಂಬ ಶರ್ಮರ ತೆಲುಗು ಬರೆಹವೊಂದರ ಕನ್ನಡ ಅನುವಾದವನ್ನು ಒದಗಿಸಿ, ಅವರ ಜೀವನಪಥದ ಪ್ರಮುಖ ಘಟ್ಟಗಳನ್ನೂ ಅವರಿಗೆ ಸಂದ ಪ್ರಶಸ್ತಿಗಳನ್ನೂ ಅವರು ಬರೆದ ಗ್ರಂಥಗಳ ವಿವರಗಳನ್ನೂ ನೀಡಿದ್ದಾರೆ. ಹೀಗೆ ಇದೊಂದು ಸ್ವಯಂಪೂರ್ಣವಾದ ರಚನೆ. ಶರ್ಮರ ಜನ್ಮಶತಮಾನೋತ್ಸವದಲ್ಲಿ ಪ್ರಕಟವಾದ ಈ ಕೃತಿಗೆ ಸಂದರ್ಭದ ಔಚಿತ್ಯವೂ ಸಂದಿದೆ.