Literature

ಸ್ಥಿರತೆಯ ಸಮುನ್ನತಿ - ಭೈರಪ್ಪನವರ ಕಾದಂಬರಿಗಳಲ್ಲಿ ಬೆಟ್ಟ-ಗುಡ್ಡ-ಪರ್ವತಗಳು - 2

‘ಜಲಪಾತ’ದಲ್ಲಿ ಸಹ್ಯಾದ್ರಿಶ್ರೇಣಿಯ ಖಂಡಾಲಘಾಟ್‌ನ ಭವ್ಯವಾದ ವರ್ಣನೆಯಿದೆ. ಸೃಷ್ಟಿಶೀಲತೆಯ ಬಹುಸೂಕ್ಷ್ಮ ಆಯಾಮಗಳನ್ನು ಕಲೆ, ಪ್ರಕೃತಿ, ಸಂಸ್ಕೃತಿ, ಮಾನವಜೀವನವೇ ಮುಂತಾದ ಮಾಧ್ಯಮಗಳ ಮೂಲಕ ಚಿತ್ರಿಸುವ ಈ ಕಾದಂಬರಿ ಕಾವ್ಯಾತ್ಮಕತೆಯಿಂದ ವಿಶಿಷ್ಟವಾಗಿದೆ. ಶ್ರೀಪತಿ-ವಸುಂಧರೆಯರ ಬಲವದ್ ಬ್ರಹ್ಮಚರ್ಯೆ ಮುಗಿದು ಮಿಲನ ಸಫಲವಾದ ಬಳಿಕ “ಇನ್ನು ಮೇಲೆ ನಿನ್ನನ್ನು ದಿನಾ ಭೂದೇವಿ ಅಂತೀನಿ” ಎಂದು ಶ್ರೀಪತಿ ಹೇಳುತ್ತಾನೆ (ಪು. ೧೦೩). ಭೂದೇವಿ ಎಂಬುದು ವಸುಂಧರೆಗೆ ಚಿಕ್ಕ ವಯಸ್ಸಿನಿಂದ ರೂಢವಾಗಿದ್ದ ಮುದ್ದಿನ ಹೆಸರು. ಅದು ಶ್ರೀಪತಿಗೆ ನೆನಪಾದ ಸಂದರ್ಭ ಮಾರ್ಮಿಕವಾಗಿದೆ. ಇದರ ತರುಣದಲ್ಲಿಯೇ ಅವರು ‘ವಸುಂಧರೆ’ಯ ಸಂಪತ್ತಿಗಳಲ್ಲೊಂದಾದ ಬೆಟ್ಟವನ್ನು ಕಾಣಲು ಖಂಡಾಲಕ್ಕೆ ತೆರಳುತ್ತಾರೆ.

ಸ್ಥಿರತೆಯ ಸಮುನ್ನತಿ - ಭೈರಪ್ಪನವರ ಕಾದಂಬರಿಗಳಲ್ಲಿ ಬೆಟ್ಟ-ಗುಡ್ಡ-ಪರ್ವತಗಳು - 1

ಸಂಸ್ಕೃತದಲ್ಲಿ ಬೆಟ್ಟವನ್ನು ಸೂಚಿಸುವ ಹಲವು ಪದಗಳಿವೆ. ಮಹೀಧ್ರ, ಶಿಖರಿ, ಅಹಾರ್ಯ, ಪರ್ವತ, ಗೋತ್ರ, ಅಚಲ, ಶಿಲೋಚ್ಚಯ ಎಂಬುವನ್ನು ಪ್ರಾತಿನಿಧಿಕವಾಗಿ ಪರಿಗಣಿಸಿದರೆ ಭೂಮಿಯನ್ನು ತಳೆದಿರುವುದು, ಉನ್ನತವಾದ ತುದಿಯನ್ನು ಹೊಂದಿರುವುದು, ಒಯ್ಯಲಾಗದ್ದು / ಅಪಹರಿಸಲಾಗದ್ದು, ಪೂರ್ಣವಾದುದು, ಭೂಮಿಯನ್ನು ಕಾಪಾಡುವುದು, ಸ್ಥಿರವಾದುದು, ಬಂಡೆಗಳ ಒಟ್ಟುಗೂಡು ಎಂಬ ಅರ್ಥಗಳು ಹೊರಡುತ್ತವೆ. ಬೆಟ್ಟವೆಂದೊಡನೆ ನಮ್ಮ ಮನಸ್ಸಿಗೆ ಬರುವುವಾದರೂ ಗಟ್ಟಿತನ ಮತ್ತು ಔನ್ನತ್ಯಗಳೇ ತಾನೆ? ಈ ಎಲ್ಲ ಅರ್ಥಗಳೂ ಎಸ್. ಎಲ್. ಭೈರಪ್ಪನವರಲ್ಲಿ ಸಂಗತವಾಗುತ್ತವೆ. ಅವರ ವ್ಯಕ್ತಿತ್ವವೇ ಹಾಗೆ.

ಇಂಗ್ಲಿಷ್ ಗೀತಗಳು

(ಕನ್ನಡಸಾಹಿತ್ಯನವೋದಯದ ಮುಂಗಿರಣದಂತೆ ಮೂಡಿದುದು ಬಿ. ಎಂ. ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತಗಳು’. ಈ ಕೃತಿ ಪ್ರಕಟವಾದ ತರುಣದಲ್ಲಿಯೇ ನವೋದಯದ ನಿರ್ಮಾತೃಗಳ ಪೈಕಿ ಪ್ರಮುಖರಾದ ಡಿ.ವಿ.ಜಿ. ಇದನ್ನು ಕುರಿತು ತಾವು ನಡಸುತ್ತಿದ್ದ ‘Karnataka: Indian Review of Reviews’ ಮಾಸಪತ್ರಿಕೆಯ ೧೯೨೭ ಜನವರಿ ಸಂಚಿಕೆಯಲ್ಲಿ ಲೇಖನವೊಂದನ್ನು ಬರೆದರು. ಉತ್ತಮ ಕೃತಿಯ ಅತ್ಯುತ್ತಮ ವಿಮರ್ಶೆ ಎಂಬಂತಿರುವ ಪ್ರಕೃತ ಲೇಖನದ ಕನ್ನಡ ಅನುವಾದ ಇಲ್ಲಿದೆ. ಸದ್ಯದ ಅನುವಾದವು ಮೊದಲಿಗೆ ‘ಉತ್ಥಾನ’ ಮಾಸಪತ್ರಿಕೆಯ ೨೦೨೩ ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು. –ಸಂ.)

ನವಿಲುಗರಿಯ ಸೊಬಗು - 2

ಪಾತ್ರ-ಘಟನೆಗಳಿಗೆ ತಕ್ಕಂತೆ ಭಾಷೆ ಬಳಕೆಗೊಂಡಿದೆ. ಅಭಿಜಾತ ಇತಿವೃತ್ತಗಳ ಬಣ್ಣನೆಯೇ ಆದ್ಯಂತ ಇರುವುದರಿಂದ ಅದಕ್ಕೆ ತಕ್ಕಂತೆ ಇಲ್ಲಿಯ ಭಾಷೆ ಶಿಷ್ಟ, ಸುಭಗ ಮತ್ತು ಕಾವ್ಯಾತ್ಮಕವಾಗಿದೆ. ಇನ್ನು ಸನ್ನಿವೇಶ ಅಪೇಕ್ಷಿಸುವಂತೆ ಬೇರೆ ಬಗೆಯ ಮಾತುಗಳೂ ಬಳಕೆಗೆ ಬಂದಿವೆ. ಉದಾಹರಣೆಗೆ ಪಾಂಡುವಿನ ಕಥೆ ಚಿತ್ರಿಸುವ ಅತ್ಯುತ್ಕಟ ಪ್ರಸಂಗದಲ್ಲಿ ಮನಸ್ಸಿನೊಳಗೆ ಅವನಾಡಿಕೊಳ್ಳುವ ಮಾತುಗಳು ಶಿಷ್ಟಾಚಾರದ ಸೋಗು ಕಳಚಿದಾಗ ಎಷ್ಟೋ ಬಾರಿ ಎಲ್ಲರೂ ಆಡಿಕೊಳ್ಳುವ ಮಾತುಗಳೇ ಆಗಿವೆ. ಪ್ರಾಣಿಮಾತ್ರದ ಚೋದನೆಯ ಒತ್ತಡದಲ್ಲಿದ್ದಾಗ ಮಾತು ಕೂಡ ಹಾಗೆಯೇ ಹೊರಬರುವುದಷ್ಟೆ. ಇನ್ನು ಕಾಳಿದಾಸನನ್ನು ಕುರಿತ ಕಥೆಯಲ್ಲಿ ನಮ್ಮ ಕಾಲದ ದೈನಂದಿನ ಭಾಷೆಯೂ ಬಳಕೆಗೊಂಡಿದೆ; ಸಂಭಾಷಣೆಗೊಂದು ಅನೌಪಚಾರಿಕ ಸೊಗಸನ್ನು ನೀಡಿದೆ.

ನವಿಲುಗರಿಯ ಸೊಬಗು - 1

ಶತಾವಧಾನಿ ಡಾ|| ಆರ್. ಗಣೇಶರು ರಚಿಸಿರುವ ಹತ್ತು ಸಣ್ಣಕತೆಗಳ ಸಂಕಲನ ‘ಪುಟಗಳ ನಡುವಣ ನವಿಲುಗರಿ’. ಇದರ ಬಣ್ಣಗಳ ಬೆಡಗನ್ನು ಇಲ್ಲಿಯದೇ ನೂರಾರು ಕಣ್ಣುಗಳ ಮೂಲಕ ಓದುಗರಿಗೆ ಕಾಣಿಸಿಕೊಡುವ ಯತ್ನ ಸದ್ಯದ ಲೇಖನದ್ದು. ಸಾಮಾನ್ಯವಾಗಿ ಪುಸ್ತಕ ಓದುವಾಗ ಪುಟಗಳ ಗುರುತಿಗಾಗಿ ಚೀಟಿಯೊಂದನ್ನು ಬಳಸುತ್ತೇವಷ್ಟೆ. ಹಿಂದಿನ ಕಾಲದಲ್ಲಿ (ಈಗಲೂ ಈ ಪರಿಪಾಟಿ ಇದ್ದಲ್ಲಿ ಸಂತೋಷ!) ಇದಕ್ಕಾಗಿ ನವಿಲುಗರಿಯನ್ನು ಉಪಯೋಗಿಸುತ್ತಿದ್ದರು. ಹೀಗೆ ಪುಟಗಳ ನಡುವೆ ಇರಿಸಿದ ನವಿಲುಗರಿ ಮರಿ ಹಾಕುವುದೆಂದು ಮಕ್ಕಳ ಮುಗ್ಧ ವಿಶ್ವಾಸ. ಮಕ್ಕಳದ್ದಷ್ಟೇ ಅಲ್ಲ, ಮುಗ್ಧತೆಯನ್ನು ಕಳೆದುಕೊಂಡಿರದ ಹದಿಹರೆಯದ ಹುಡುಗ-ಹುಡುಗಿಯರಿಂದ ಜೀವನಸಂಧ್ಯೆಯಲ್ಲಿರುವ ವೃದ್ಧರವರೆಗೆ ಎಲ್ಲರ ನಂಬುಗೆಯೂ ಇದೇ. ಈ ಬಗೆಯ ವಿಶ್ವಾಸವೇ ಜೀವನದ ಶ್ವಾಸ.

‘ಗೊಲ್ಗೊಥಾ’ ಕಾವ್ಯದ ರಸಸಿದ್ಧಿ

ಉನ್ನತ ಮಟ್ಟದ ವಿದ್ವಾಂಸರೆಂದು ಪ್ರಖ್ಯಾತರಾಗಿದ್ದ ಗೋವಿಂದ ಪೈಗಳಿಗೆ ಶ್ರೇಷ್ಠ ಕವಿಗಳೆಂಬ ಯುಕ್ತ ಖ್ಯಾತಿ ಬಂದದ್ದು ಬಹುಶಃ ‘ಗೊಲ್ಗೊಥಾ’ ಮತ್ತು ‘ವೈಶಾಖಿ’ ಖಂಡಕಾವ್ಯಗಳಿಂದಲೇ. ಇವನ್ನು ಖಂಡಕಾವ್ಯಗಳೆನ್ನುವುದಕ್ಕಿಂತ ಮಹಾಕಾವ್ಯಖಂಡಗಳೆಂದು (Epic Fragments) ಗುರುತಿಸುವುದು ಒಳಿತೆಂಬುದು ಎಸ್. ಅನಂತನಾರಾಯಣ ಅವರ ಅಭಿಪ್ರಾಯ.[1] ಅವರ ಈ ನಿಲವು ಒಪ್ಪುವಂಥದ್ದೇ ಆಗಿದೆ. ಈ ಎರಡು ಕೃತಿಗಳಿಂದಲೇ ಪೈಗಳನ್ನು ನಮ್ಮ ನಾಡಿನ ಮೊತ್ತಮೊದಲ ರಾಷ್ಟ್ರಕವಿಯೆಂದು ಅಂಗೀಕರಿಸಿದಲ್ಲಿ ತಪ್ಪಾಗದು. ಇವನ್ನು ಕುರಿತು ಅನೇಕ ವಿಮರ್ಶಕರೂ ವಿದ್ವಾಂಸರೂ ಸಾಕಷ್ಟು ವಿಶದವಾಗಿ ಬರೆದಿದ್ದಾರೆ. ಇವರ ಪೈಕಿ ಜಿ. ಪಿ. ರಾಜರತ್ನಂ, ರಂ. ಶ್ರೀ. ಮುಗಳಿ, ಜಿ. ವರದರಾಜರಾವ್, ಎಸ್. ಎಂ.

Parimalapadmagupta, Bhoja

Parimalapadmagupta

Parimalapadmagupta or Parimalagupta is the author of the historical poem, Navasāhasāṅkacarita. This work describes the attainments of Sindhula, Bhoja’s illustrious father. A verse from this work is significant to our discussion:

चक्षुस्तदुन्मेषि सदा मुखे वः

सारस्वतं शाश्वतमाविरस्तु।

पश्यन्ति येनावहिताः कवीन्द्राः

त्रिविष्टपाभ्यन्तरवर्ति वस्तु॥ (1.4)

Trivikrama-bhaṭṭa, Somadevasūri

Trivikrama-bhaṭṭa

Among the ornate campū compositions available in Sanskrit, Nala-campū authored by Trivikrama-bhaṭṭa is the oldest. The author had a penchant for puns, which he justifies in this manner:

वाचः काठिन्यमायान्ति भङ्गश्लेषविशेषतः।

नोद्वेगस्तत्र कर्तव्यो यस्मान्नैको रसः कविः॥ (1.16)