Literature

Sandarbhasūkti - part 17

138. Na hi svato'satī śaktiḥ kartumanyena śakyate

It is impossible to impart some power which we don’t have in the first place. Milk has the inherent capacity of turning into curds. It is evident. The sour buttermilk is the base. If the milk didn’t have that inherent capability in the first place then it would have been impossible to turn it into curds. You can’t turn water or air into curds.

ಮಹತ್ತಿನ ಉಪಾಸನೆ - ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ - 2

ಕಾದಂಬರಿಗಳ ಪೌರಾಣಿಕ ಪರ್ಯಾವರಣವನ್ನು ಪುಷ್ಟಿಗೊಳಿಸುವಂತೆ ಅನೇಕ ಪ್ರಸಂಗಗಳು ರೂಪಿತವಾಗಿವೆ. ರುದ್ರಸಾಕ್ಷಾತ್ಕಾರ, ಆಪೋದೇವಿಯರ ದರ್ಶನ, ತ್ರಿಶಂಕುವಿನ ದಿವ್ಯದೇಹನಿರ್ಮಾಣ (‘ಮಹಾಬ್ರಾಹ್ಮಣ’), ಬ್ರಹ್ಮಹತ್ಯೆಯ ಪಾಪವನ್ನು ವೃಕ್ಷ, ಸ್ತ್ರೀ, ನದಿ ಮತ್ತು ಭೂಮಿಗಳಲ್ಲಿ ಹಂಚುವುದು ಹಾಗೂ ವೃತ್ರಾಸುರನು ಪಂಚಭೂತಗಳನ್ನು ಹಿಡಿಯುವುದು (‘ಮಹಾಕ್ಷತ್ರಿಯ’), ಆದಿತ್ಯನು ಕುದುರೆಯ ರೂಪದಲ್ಲಿ ಯಾಜ್ಞವಲ್ಕ್ಯನಿಗೆ ಕಾಣಿಸಿಕೊಳ್ಳುವುದು, ಪಂಚಭೂತಗಳ ಸಾಕ್ಷಾತ್ಕಾರ, ಕುಲಪತಿ ವೈಶಂಪಾಯನರಿಗೆ ಶ್ರುತಿಭಗವತಿ ಪ್ರತ್ಯಕ್ಷಳಾಗುವುದು (‘ಮಹಾದರ್ಶನ’) ಮುಂತಾದ ಸನ್ನಿವೇಶಗಳು ಕಲ್ಪಿತವಾದರೂ ಹೀಗೆಯೇ ನಡೆದಿದ್ದಿರಬೇಕೆಂದು ಓದುಗರಿಗೆ ತೋರುವ ಮಟ್ಟಿಗೆ ಅಧಿಕೃತವಾಗಿ ರೂಪುಗೊಂಡಿವೆ. ಇವುಗಳ ಸಾಂಕೇತಿಕ ಸ್ವಾರಸ್ಯವೂ ಹಿರಿದು.

Sandarbhasūkti - part 16

130. Na hi bhikṣuko bhikṣukāntaraṃ yācitumarhati satyanyasminnabhikṣuke

When there is someone who isn’t a beggar in the vicinity one beggar shouldn’t beg from another beggar! When there are wealthy and charitable patrons the beggar should ask from them. What use is asking another beggar who lives on other people’s mercy?
The import is, A dependent should relate himself to someone who is independent rather than to another dependent who is in a similar situation.

ಮಹತ್ತಿನ ಉಪಾಸನೆ - ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ - 1

ದೇವುಡು ನರಸಿಂಹಶಾಸ್ತ್ರಿಗಳು ರಚಿಸಿದ ‘ಮಹಾಬ್ರಾಹ್ಮಣ,’ ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ ಎಂಬ ‘ಮಹಾತ್ರಯ’ದ ಪ್ರಸ್ತಾವ ಬಂದಾಗಲೆಲ್ಲ ವೇದಮಂತ್ರವೊಂದರ ಭಾಗ ನನಗೆ ನೆನಪಾಗುತ್ತದೆ - “ಮಹೋ ದೇವೋ ಮರ್ತ್ಯಾನಾವಿವೇಶ.” ಮಹಿಮಶಾಲಿಯಾದ ಭಗವಂತ ಮನುಷ್ಯರಲ್ಲಿ ಪ್ರವೇಶಿಸಿದನು ಎಂದು ಅದರ ತಾತ್ಪರ್ಯ. ಸಾಮಾನ್ಯವಾಗಿ ಮನುಷ್ಯಬುದ್ಧಿಗೆ ನಿಲುಕದ, ಅದನ್ನೂ ಮೀರಿದ ಸಂಗತಿಗಳನ್ನು ವಿವರಿಸುವಾಗ ಇದನ್ನು ಉದ್ಧರಿಸಲಾಗುತ್ತದೆ. ಪ್ರಕೃತ ದೇವುಡು ಅವರ ಮೂರು ಕಾದಂಬರಿಗಳನ್ನು ಕುರಿತು ಚಿಂತಿಸುವಾಗ ಈ ಮಂತ್ರವೇ ನಮಗೆ ದಿಕ್ಕು. ಮನುಷ್ಯಮಾತ್ರರಿಂದ ಇಂಥ ಸೃಷ್ಟಿ ಅಸಾಧ್ಯವಷ್ಟೆ! ಈ ಹಿನ್ನೆಲೆಯಲ್ಲಿ ನರಸಿಂಹಶಾಸ್ತ್ರಿಗಳು ‘ದೇವುಡು’ ಮನೆತನದಲ್ಲಿ ಹುಟ್ಟಿದುದು ಅಚ್ಚರಿಯೆನಿಸದು.

Sandarbhasūkti - part 13

107. Tuṣyatu durjana-nyāya

“Let the wicked be happy” is the import of this nyāya. When the point raised by an opponent is impertinent, the debater agrees to it in a serious manner and when he counters it this nyāya finds use. “Very good; let’s assume what you say is true for a moment. But what would you say about the following then?”, this is the import of this nyāya.

ಅದ್ವೈತಂ ಸುಖದುಃಖಯೋಃ - 2

ಮಾಸ್ತಿ ಅವರು ಕಾಣಿಸಿದ ಗಂಡ-ಹೆಂಡಿರು ವಿಪ್ರಕುಲದವರು. ಅವರಿಬ್ಬರ ಸಂಸ್ಕಾರಪರಿಪಾಕಕ್ಕೆ ಆ ಕಾಲದಲ್ಲಿ ಈ ವರ್ಣಕ್ಕೆ ಸಹಜವಾಗಿಯೇ ಒದಗಿಬರುತ್ತಿದ್ದ ಅರಿವು-ಮನ್ನಣೆಗಳ ಅನುಕೂಲತೆಯೂ ನೆರವಾಗಿದೆ ಎನ್ನಬಹುದು. ಆದರೆ ನಾವೀಗ ನೋಡಲಿರುವ ಶಿವರಾಮ ಕಾರಂತರ ಕಲಾಸೃಷ್ಟಿಯ ಎರಡು ಗೌಣಪಾತ್ರಗಳಾದ ಪಮ್ಮ ಮತ್ತು ದುಗ್ಗಿಯರಿಗೆ ಇಂಥ ಸೌಲಭ್ಯವೂ ಇಲ್ಲ. ‘ಮೈ ಮನಗಳ ಸುಳಿಯಲ್ಲಿ’ ಎಂಬ ರಸೋಜ್ಜ್ವಲ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಈ ಜೋಡಿ ಸಿರಿ-ಅರಿಮೆಗಳ ಸಮೃದ್ಧಿಗಿರಲಿ, ಸಾಮಾನ್ಯದ ಹೊತ್ತುಹೊತ್ತಿನ ತುತ್ತಿಗೂ ಕಷ್ಟ ಪಡಬೇಕಿರುವ ಜೀವಗಳು. ಕಾರಂತರೇ ಹೇಳುವಂತೆ ಅವರು “ಮುಟ್ಟಾಳುಗಳಲ್ಲ.” ಅಂದರೆ, ಅಸ್ಪೃಶ್ಯತೆಯ ದಬ್ಬಾಳಿಕೆಯಲ್ಲಿ ನಲುಗಿದ ಸಮುದಾಯದವರು; ಕುಗ್ರಾಮಗಳಲ್ಲಿಯೋ ಅವುಗಳಾಚಿನ ಕಾಡು-ಮೇಡುಗಳಲ್ಲಿಯೋ ಪ್ರಾಯಶಃ ಬಾಳನ್ನು ಕಳೆಯಬೇಕಾದ ಹತಭಾಗ್ಯರು.

ಅದ್ವೈತಂ ಸುಖದುಃಖಯೋಃ - 1

ಮಹಾಕವಿ ಭವಭೂತಿಯ ‘ಉತ್ತರರಾಮಚರಿತ’ ನಾಟಕವು ತನ್ನ ಘನತೆ-ಮಹೋನ್ನತಿಗಳಿಂದ ಅನನ್ಯವೆನಿಸಿದೆ. ಸೀತಾ-ರಾಮರ ಅಮೃತದಾಂಪತ್ಯವನ್ನು ಇದು ಕಂಡರಿಸಿರುವ ಪರಿ ಇಡಿಯ ರಾಮಾಯಣಸಾಹಿತ್ಯದಲ್ಲಿಯೇ ಮಿಗಿಲೆನಿಸಿದೆ. ಪ್ರೀತಿ ಮತ್ತು ಕರ್ತವ್ಯಗಳ ನಡುವೆ ಸಂಘರ್ಷ ತಲೆದೋರಿದಾಗ ಸಂವೇದನಶೀಲರಾದ ವ್ಯಕ್ತಿಗಳು ಹೇಗೆ ತಳಮಳಿಸುತ್ತಾರೆ ಮತ್ತು ಅವರ ಅಂತರಂಗದ ಮೌಲ್ಯಪ್ರಕ್ಷೋಭ ಏನೆಲ್ಲ ಅವಸ್ಥೆಗಳನ್ನು ಪಡೆಯುತ್ತದೆಂಬ ಜೀವನದರ್ಶನವನ್ನು ಈ ಕೃತಿಯು ಕಂಡರಿಸುವಂತೆ ಹೆಚ್ಚಿನ ಕಾವ್ಯಗಳು ರೂಪಿಸುವುದಿಲ್ಲ. ಈ ಕಾರಣದಿಂದಲೇ ತತ್ತ್ವಶಾಸ್ತ್ರ ಮತ್ತು ಸೌಂದರ್ಯಶಾಸ್ತ್ರಗಳ ಮೂರ್ಧನ್ಯವಿದ್ವಾಂಸರಾದ ಪ್ರೊ|| ಎಂ. ಹಿರಿಯಣ್ಣನವರು ‘ಉತ್ತರರಾಮಚರಿತ’ವನ್ನು ವಿಶೇಷವಾಗಿ ಮೆಚ್ಚಿಕೊಳ್ಳುತ್ತಾರೆ.[1]