Literature

ಮಹತ್ತಿನ ಉಪಾಸನೆ - ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ - 1

ದೇವುಡು ನರಸಿಂಹಶಾಸ್ತ್ರಿಗಳು ರಚಿಸಿದ ‘ಮಹಾಬ್ರಾಹ್ಮಣ,’ ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ ಎಂಬ ‘ಮಹಾತ್ರಯ’ದ ಪ್ರಸ್ತಾವ ಬಂದಾಗಲೆಲ್ಲ ವೇದಮಂತ್ರವೊಂದರ ಭಾಗ ನನಗೆ ನೆನಪಾಗುತ್ತದೆ - “ಮಹೋ ದೇವೋ ಮರ್ತ್ಯಾನಾವಿವೇಶ.” ಮಹಿಮಶಾಲಿಯಾದ ಭಗವಂತ ಮನುಷ್ಯರಲ್ಲಿ ಪ್ರವೇಶಿಸಿದನು ಎಂದು ಅದರ ತಾತ್ಪರ್ಯ. ಸಾಮಾನ್ಯವಾಗಿ ಮನುಷ್ಯಬುದ್ಧಿಗೆ ನಿಲುಕದ, ಅದನ್ನೂ ಮೀರಿದ ಸಂಗತಿಗಳನ್ನು ವಿವರಿಸುವಾಗ ಇದನ್ನು ಉದ್ಧರಿಸಲಾಗುತ್ತದೆ. ಪ್ರಕೃತ ದೇವುಡು ಅವರ ಮೂರು ಕಾದಂಬರಿಗಳನ್ನು ಕುರಿತು ಚಿಂತಿಸುವಾಗ ಈ ಮಂತ್ರವೇ ನಮಗೆ ದಿಕ್ಕು. ಮನುಷ್ಯಮಾತ್ರರಿಂದ ಇಂಥ ಸೃಷ್ಟಿ ಅಸಾಧ್ಯವಷ್ಟೆ! ಈ ಹಿನ್ನೆಲೆಯಲ್ಲಿ ನರಸಿಂಹಶಾಸ್ತ್ರಿಗಳು ‘ದೇವುಡು’ ಮನೆತನದಲ್ಲಿ ಹುಟ್ಟಿದುದು ಅಚ್ಚರಿಯೆನಿಸದು.

Sandarbhasūkti - part 13

107. Tuṣyatu durjana-nyāya

“Let the wicked be happy” is the import of this nyāya. When the point raised by an opponent is impertinent, the debater agrees to it in a serious manner and when he counters it this nyāya finds use. “Very good; let’s assume what you say is true for a moment. But what would you say about the following then?”, this is the import of this nyāya.

ಅದ್ವೈತಂ ಸುಖದುಃಖಯೋಃ - 2

ಮಾಸ್ತಿ ಅವರು ಕಾಣಿಸಿದ ಗಂಡ-ಹೆಂಡಿರು ವಿಪ್ರಕುಲದವರು. ಅವರಿಬ್ಬರ ಸಂಸ್ಕಾರಪರಿಪಾಕಕ್ಕೆ ಆ ಕಾಲದಲ್ಲಿ ಈ ವರ್ಣಕ್ಕೆ ಸಹಜವಾಗಿಯೇ ಒದಗಿಬರುತ್ತಿದ್ದ ಅರಿವು-ಮನ್ನಣೆಗಳ ಅನುಕೂಲತೆಯೂ ನೆರವಾಗಿದೆ ಎನ್ನಬಹುದು. ಆದರೆ ನಾವೀಗ ನೋಡಲಿರುವ ಶಿವರಾಮ ಕಾರಂತರ ಕಲಾಸೃಷ್ಟಿಯ ಎರಡು ಗೌಣಪಾತ್ರಗಳಾದ ಪಮ್ಮ ಮತ್ತು ದುಗ್ಗಿಯರಿಗೆ ಇಂಥ ಸೌಲಭ್ಯವೂ ಇಲ್ಲ. ‘ಮೈ ಮನಗಳ ಸುಳಿಯಲ್ಲಿ’ ಎಂಬ ರಸೋಜ್ಜ್ವಲ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಈ ಜೋಡಿ ಸಿರಿ-ಅರಿಮೆಗಳ ಸಮೃದ್ಧಿಗಿರಲಿ, ಸಾಮಾನ್ಯದ ಹೊತ್ತುಹೊತ್ತಿನ ತುತ್ತಿಗೂ ಕಷ್ಟ ಪಡಬೇಕಿರುವ ಜೀವಗಳು. ಕಾರಂತರೇ ಹೇಳುವಂತೆ ಅವರು “ಮುಟ್ಟಾಳುಗಳಲ್ಲ.” ಅಂದರೆ, ಅಸ್ಪೃಶ್ಯತೆಯ ದಬ್ಬಾಳಿಕೆಯಲ್ಲಿ ನಲುಗಿದ ಸಮುದಾಯದವರು; ಕುಗ್ರಾಮಗಳಲ್ಲಿಯೋ ಅವುಗಳಾಚಿನ ಕಾಡು-ಮೇಡುಗಳಲ್ಲಿಯೋ ಪ್ರಾಯಶಃ ಬಾಳನ್ನು ಕಳೆಯಬೇಕಾದ ಹತಭಾಗ್ಯರು.

ಅದ್ವೈತಂ ಸುಖದುಃಖಯೋಃ - 1

ಮಹಾಕವಿ ಭವಭೂತಿಯ ‘ಉತ್ತರರಾಮಚರಿತ’ ನಾಟಕವು ತನ್ನ ಘನತೆ-ಮಹೋನ್ನತಿಗಳಿಂದ ಅನನ್ಯವೆನಿಸಿದೆ. ಸೀತಾ-ರಾಮರ ಅಮೃತದಾಂಪತ್ಯವನ್ನು ಇದು ಕಂಡರಿಸಿರುವ ಪರಿ ಇಡಿಯ ರಾಮಾಯಣಸಾಹಿತ್ಯದಲ್ಲಿಯೇ ಮಿಗಿಲೆನಿಸಿದೆ. ಪ್ರೀತಿ ಮತ್ತು ಕರ್ತವ್ಯಗಳ ನಡುವೆ ಸಂಘರ್ಷ ತಲೆದೋರಿದಾಗ ಸಂವೇದನಶೀಲರಾದ ವ್ಯಕ್ತಿಗಳು ಹೇಗೆ ತಳಮಳಿಸುತ್ತಾರೆ ಮತ್ತು ಅವರ ಅಂತರಂಗದ ಮೌಲ್ಯಪ್ರಕ್ಷೋಭ ಏನೆಲ್ಲ ಅವಸ್ಥೆಗಳನ್ನು ಪಡೆಯುತ್ತದೆಂಬ ಜೀವನದರ್ಶನವನ್ನು ಈ ಕೃತಿಯು ಕಂಡರಿಸುವಂತೆ ಹೆಚ್ಚಿನ ಕಾವ್ಯಗಳು ರೂಪಿಸುವುದಿಲ್ಲ. ಈ ಕಾರಣದಿಂದಲೇ ತತ್ತ್ವಶಾಸ್ತ್ರ ಮತ್ತು ಸೌಂದರ್ಯಶಾಸ್ತ್ರಗಳ ಮೂರ್ಧನ್ಯವಿದ್ವಾಂಸರಾದ ಪ್ರೊ|| ಎಂ. ಹಿರಿಯಣ್ಣನವರು ‘ಉತ್ತರರಾಮಚರಿತ’ವನ್ನು ವಿಶೇಷವಾಗಿ ಮೆಚ್ಚಿಕೊಳ್ಳುತ್ತಾರೆ.[1]

ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 7

ಆದಿಪ್ರಾಸದ ನಿರ್ಬಂಧ ಇಲ್ಲವಾದ ಬಳಿಕ ಮತ್ತೆ ಕನ್ನಡಕ್ಕೆ ಶ್ಲೋಕ ಬರಬಹುದಿತ್ತು  ಎಂಬ ಪ್ರಶ್ನೆ ಏಳಬಹುದು. ಇದಕ್ಕೂ ಕಾರಣವಿದೆ. ಆದಿಪ್ರಾಸ ಅಳಿಯುವ ಹೊತ್ತಿಗೆ ಹಳಗನ್ನಡವಿರಲಿ, ನಡುಗನ್ನಡವೂ ಅಳಿದು ಹೊಸಗನ್ನಡದ ಯುಗ ಮೊದಲಾಗಿತ್ತು. ನಾವು ಈ ಮೊದಲೇ ಕಂಡಂತೆ ಶ್ಲೋಕಕ್ಕೆ ಒಗ್ಗುವ ಭಾಷೆ ಹಳಗನ್ನಡವೇ. ಅಷ್ಟೇಕೆ, ಕಂದ-ವೃತ್ತಗಳಿಗೆಲ್ಲ ಇದೇ ಅನಿವಾರ್ಯ. ನಡುಗನ್ನಡ-ಹೊಸಗನ್ನಡಗಳಲ್ಲಿ ಈ ಎಲ್ಲ ಬಂಧಗಳು ನೀರಿಲ್ಲದ ಸರೋವರದ ಮೀನುಗಳಂತೆಯೇ ಸರಿ. ಹೀಗಾಗಿ ಶ್ಲೋಕದ ಪ್ರವೇಶಕ್ಕೆ ನವೋದಯವೂ ಒದಗಿಬರಲಿಲ್ಲ. ಮತ್ತೂ ಮುಂದಿನ ಕಾಲದಲ್ಲಿ ಛಂದಸ್ಸೇ ಬಹಿಷ್ಕೃತವಾದುದು ತಿಳಿದೇ ಇದೆ. ಪರಿಸ್ಥಿತಿ ಹೀಗಿರುವಾಗ ಶ್ಲೋಕಕ್ಕೆ ಆಸ್ಪದವೆಲ್ಲಿ?

ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 6

ಕರ್ಷಣಜಾತಿಗಳು ಮಾತ್ರಾಜಾತಿಗಳಂತೆಯೇ ಏಕದೇಶಸ್ಥಿರವಾಗಿವೆ. ಈ ಸ್ಥಿರತೆ ಪದ್ಯಬಂಧಗಳ ಚಾಕ್ಷುಷರೂಪದಲ್ಲಿರದೆ ಶ್ರಾವಣರೂಪದಲ್ಲಿ ಕಾಣಸಿಗುತ್ತದೆ. ಅಂದರೆ, ಕರ್ಷಣಜಾತಿಗಳ ಭಾಷಾಪದಗತಿ ಗದ್ಯಕ್ಕಿಂತ ಬಲುಮಟ್ಟಿಗೆ ಬೇರೆ ಎನಿಸದ ಹಾಗೆ ಅನಿಬದ್ಧವಾಗಿ ತೋರುತ್ತದೆ. ಅವುಗಳ ಪದ್ಯಗತಿ ಛಂದಃಪದಗತಿಯ ಮೂಲಕ ಮಾತ್ರ ಉನ್ಮೀಲಿಸಬೇಕು. ಆದುದರಿಂದಲೇ ಇವುಗಳ ಭಾಷಾಪದಗತಿ ಹೇಗೇ ಇದ್ದರೂ ಏಕ / ಆದಿ, ರೂಪಕ, ಖಂಡ ಮತ್ತು ಮಿಶ್ರ ಎಂಬ ನಾಲ್ಕು ಬಗೆಯ ಮೂಲಭೂತ ಲಯಗಳಿಗೆ ಒಗ್ಗುವಂತೆ ಪದ್ಯಗತಿ ಕರ್ಷಣದ ಮೂಲಕ ರೂಪುಗೊಳ್ಳುತ್ತದೆ. ಇದನ್ನು ಸಾಂಗತ್ಯದಂಥ ಒಂದು ಬಂಧ ಶ್ರಾವಣರೂಪದಲ್ಲಿ ನಾಲ್ಕು ಬಗೆಯ ಗತಿಗಳಿಗೂ ಅಳವಟ್ಟಾಗ ಎಷ್ಟೆಲ್ಲ ಮಾತ್ರೆಗಳ ಆಕೃತಿವ್ಯತ್ಯಾಸವನ್ನು ಹೊಂದುವುದೆಂಬ ನಿದರ್ಶನದ ಮೂಲಕ ಮನಗಾಣಬಹುದು: