Literature

ಗೋವಿಂದ ಪೈಗಳ ಕಾವ್ಯದ ಮರುನೋಟ - 4

ಪರಂಪರೆಯ ಪರಿಜ್ಞಾನ ಮತ್ತು ಸಂಪ್ರದಾಯದ ಮುಂದುವರಿಕೆಯ ಜೊತೆಗೆ ಪ್ರಯೋಗಶೀಲತೆ ಹಾಗೂ ನೂತನ ಆವಿಷ್ಕಾರಗಳ ವಿಷಯದಲ್ಲಿ ಕೂಡ ಪೈಗಳಿಗೆ ಆಸ್ಥೆಯುಂಟು. ಇದಕ್ಕೆ ಅವರ ಛಂದೋನುಶೀಲನವೂ ಒಂದು ಸಮರ್ಥ ನಿದರ್ಶನ. ಆದಿಪ್ರಾಸದ ಪಾಲನೆ ಮತ್ತು ಅದರ ನಿರಾಸದೊಂದಿಗೆ ಪೈಗಳು ಅಲ್ಲಲ್ಲಿ ಸಾಂಪ್ರದಾಯಿಕ ವೃತ್ತಗಳನ್ನು ಹಿಗ್ಗಿಸುವ ಇಲ್ಲವೇ ಹೊಸ ಬಗೆಯ ರಚನೆಗೆ ಒಗ್ಗಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

ಗೋವಿಂದ ಪೈಗಳ ಕಾವ್ಯದ ಮರುನೋಟ - 3

ಪೈಗಳ ಕವಿತೆಯಲ್ಲಿ ಭಕ್ತಿಯ ಮತ್ತೊಂದು ಆಯಾಮವಾದ ಹೃದಯವಿಸ್ತಾರ, ಆತ್ಮನಿವೇದನೆ ಮತ್ತು ಭೂತಾನುಕಂಪೆಗಳನ್ನು ಕೂಡ ಗಮನಿಸಬಹುದು. ಅವರು ಮೇಲ್ನೋಟಕ್ಕೆ ಜಿಗುಟಾದ ಅಭಿಪ್ರಾಯಗಳನ್ನು ಹೊಂದಿದ ನಿರ್ಭೀತ ವಿದ್ವಾಂಸರೆಂದು ತೋರಿದರೂ ಅಂತರಂಗದಲ್ಲಿ ಅವರದು ಸಮಾರ್ದ್ರ ಮನಸ್ಸು. ಹೀಗಾಗಿ ಜಗತ್ತಿನಲ್ಲಿ ಎಲ್ಲಿ ನೋವು ಕಂಡರೂ ಎಲ್ಲಿ ಕಷ್ಟ ಕೆರಳಿದರೂ ಅವರ ಹೃದಯ ಕರಗುತ್ತದೆ, ಅವರ ಮನಸ್ಸು ಮರುಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಹಲವು ಕವಿತೆಗಳಿವೆ. ತುರ್ಕಿಯ ಪರವಾಗಿ ಅವರು ಮಾಡಿದ ಪ್ರಾರ್ಥನೆಯನ್ನು ಈಗಾಗಲೇ ನೋಡಿದ್ದೇವೆ. ‘ಹೊಲೆಯನು ಯಾರು?’ (ಪು. ೧೬) ಎಂಬ ಕವಿತೆಯಲ್ಲಿ ಜನ್ಮಕ್ಕಂಟಿ ಬಂದ ಹೊಲೆ ಎಂಬುದು ಇಲ್ಲವೆಂಬ ಧೀರ ದರ್ಶನಕ್ಕೆ ತಮ್ಮ ದನಿಯನ್ನು ಪೈಗಳು ಜೋಡಿಸುತ್ತಾರೆ. ‘ಅಣು ಬಾಂಬು’ (ಪು. ೧೯೩), ‘ಹಿರೋಶಿಮಾ’ (ಪು.

ಗೋವಿಂದ ಪೈಗಳ ಕಾವ್ಯದ ಮರುನೋಟ - 2

ವಸ್ತು

ಎಸ್. ಶಿವಾಜಿ ಜೋಯಿಸ್ ಅವರು ಸಂಪಾದಿಸಿಕೊಟ್ಟಿರುವ ಗೋವಿಂದ ಪೈಗಳ ಸಮಗ್ರ ಕವಿತೆಗಳ ಪ್ರಸ್ತಾವನೆಯನ್ನು ಕಂಡಾಗ ಅಲ್ಲಿ ಸುಮಾರು ನೂರೆಂಬತ್ತು ಕವಿತೆಗಳು ಅಡಕವಾಗಿವೆಯೆಂದು ತಿಳಿಯುತ್ತದೆ; ಇವಲ್ಲದೆ ಮತ್ತೂ ಒಂಬತ್ತು ಅನುಪಲಬ್ಧ ಕವಿತೆಗಳಿದ್ದಂತೆಯೂ ತಿಳಿಯುತ್ತದೆ.[1] ಸದ್ಯದ ಅಧ್ಯಯನವು ಪೂರ್ವೋಕ್ತ ಸಂಗ್ರಹವನ್ನಲ್ಲದೆ ‘ಹೆಬ್ಬೆರಳು’ ಎಂಬ ಏಕಾಂಕನಾಟಕವನ್ನೂ ಸೇರಿಸಿಕೊಂಡಿದೆ. ಇದಕ್ಕೆ ಕಾರಣ ಈ ರೂಪಕದ ಸಂಪೂರ್ಣ ಪದ್ಯಾತ್ಮಕತೆಯೇ. ಆದರೆ ಈ ಅವಲೋಕನದಲ್ಲಿ ಪೈಗಳು ಮಾಡಿದ ಗೀತಾಂಜಲಿಯ ಗದ್ಯಾನುವಾದವಾಗಲಿ, ಅವರ ಇಂಗ್ಲಿಷ್ ಮತ್ತು ಕೊಂಕಣಿ ಕವನಗಳಾಗಲಿ ಪರಿಗಣನೆಗೆ ಬಂದಿಲ್ಲ.

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 10

ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ದ್ರುತವಿಲಂಬಿತವೃತ್ತದ ಅತ್ಯಧಿಕ ಪ್ರಯೋಗವನ್ನು ‘ಕವಿರಾಜಮಾರ್ಗ’ದಲ್ಲಿ ಕಾಣಬಹುದು. ಅಲ್ಲಿ ಒಟ್ಟಾರೆ ಹತ್ತು ಪದ್ಯಗಳು ಈ ವೃತ್ತದಲ್ಲಿ ನಿಬದ್ಧವಾಗಿವೆ. ಇವಲ್ಲದೆ ಇಲ್ಲಿ ಬಳಕೆಗೊಂಡ ಹಲವು ಅಪೂರ್ವ ಬಂಧಗಳ ಪೈಕಿ ‘ವೀರ’, ‘ಮಣಿಭೂಷಣ’ ಮತ್ತು ‘ಮಂಗಳ’ ಎಂಬವು ದ್ರುತವಿಲಂಬಿತವೃತ್ತವನ್ನು ಅತಿಶಯವಾಗಿ ಹೋಲುತ್ತವೆ. ಕವಿರಾಜಮಾರ್ಗವು ಉಪಲಬ್ಧ ಕನ್ನಡಗ್ರಂಥಗಳ ಪೈಕಿ ಅತ್ಯಂತ ಪ್ರಾಚೀನವಾದುದು ಮಾತ್ರವಲ್ಲದೆ ಕಾವ್ಯಲಕ್ಷಣಗ್ರಂಥವೂ ಆಗಿರುವ ಕಾರಣ ಇಲ್ಲಿ ಬಳಕೆಗೊಂಡ ಕೆಲವು ವೃತ್ತಗಳು ಹೆಚ್ಚಿನ ವಿವೇಚನೆಗೆ ಅರ್ಹವಾಗಿವೆ.

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 9

{ದ್ರುತವಿಲಂಬಿತ} ದ್ರುತವಿಲಂಬಿತವನ್ನು ಸಂತುಲಿತಮಧ್ಯಾವರ್ತಗತಿಯ ಹಂದರದ ಮೇಲೆ ಹಬ್ಬಿದ ವೃತ್ತವಲ್ಲಿಗಳ ಜೊತೆಗೆ ಸೇರಿಸಿಕೊಳ್ಳುವುದು ಸ್ವಲ್ಪ ಚಿಂತ್ಯವೆನಿಸಬಹುದು. ಆದರೆ ಈ ಬಂಧದ ಹಾಸು-ಹೊಕ್ಕನ್ನು ಬಿಡಿಸಿ ನೋಡಿದರೆ ಈ ಸೇರ್ಪಡೆಯ ಔಚಿತ್ಯ ಸ್ಪಷ್ಟವಾಗುತ್ತದೆ.

ಮೊದಲಿಗೆ ದ್ರುತವಿಲಂಬಿತದ ಪ್ರಸ್ತಾರವನ್ನು ಪರಿಕಿಸೋಣ:

u u u – u u – u u – u –  

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 8

{ಜಲೋದ್ಧತಗತಿ} ಪೃಥ್ವೀವೃತ್ತದ ಪ್ರಸ್ತಾರದಲ್ಲಿ ‘ಜಲೋದ್ಧತಗತಿ’ ಎಂಬ ಪ್ರಬಲವಾದ ಲಯಾನ್ವಿತ ವೃತ್ತ ಗರ್ಭೀಕೃತವಾಗಿರುವುದು ಮತ್ತೊಂದು ವಿಶೇಷ: 

ಪೃಥ್ವೀ

[u – u u u – u – u u u –] u – – u – 

ಜಲೋದ್ಧತಗತಿ

u – u u u – | u – u u u –

Yaśovarmā

Yaśovarmā, Bhavabhūti’s contemporary, is the author of the now-unavailable play, Rāmābhyudaya. Eminent aestheticians such as Ānandavardhana have held this work in high regard and have quoted from it. This tells us that the play was indeed wonderful. Let us examine a verse that probably was a part of its prologue:

औचित्यं वचसां प्रकृत्यनुगतं सर्वत्र पात्रोचिता

                                  पुष्टिः स्वावसरे रसस्य च कथामार्गे न चातिक्रमः।

Bhavabhūti

In the plays written by the great poet Bhavabhūti we find passages that not only reveal his personality and learning, but also his insights into literary aesthetics. Let us examine a few such passages. The poet presents the superior qualities of his creation in a verse that appears in Mālatīmādhava:

भूम्ना रसानां गहनप्रयोगाः

सौहार्दहृद्यानि विचेष्टितानि।

औद्धत्यमायोजितकामसूत्रं

Māgha

Māgha

In the second canto of Śiśupālavadha, the poet Māgha uses ideas from various sciences to support his arguments on polity. It is appropriate that he has included literary aesthetics as well. A few observations in this section are worth noting:

बह्वपि स्वेच्छया कामं प्रकीर्णमभिधीयते।

अनुज्झितार्थसम्बन्धः प्रबन्धो दुरुदाहरः॥(2.73)