Literature

Śīlāditya Harṣavardhana

Harṣavardhana has made a mark in the annals of Sanskrit literature with his three plays: Priyadarśikā, Ratnāvalī and Nāgānanda. Interestingly, the prologues of these plays are largely similar. Although there is no discussion here significant to literary aesthetics, we do find a verse that lays down certain fundamental tenets:

श्रीहर्षो निपुणः कविः परिषदप्येषा गुणग्राहिणी

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 7

{ಮಂಜುಭಾಷಿಣಿ} ರಥೋದ್ಧತಾವೃತ್ತದ ಪ್ರತಿ ಪಾದದ ಮೊದಲಿಗೆ ಎರಡು ಲಘುಗಳನ್ನು ಬೆಸೆದರೆ ‘ಮಂಜುಭಾಷಿಣಿ’ ಸಿದ್ಧವಾಗುತ್ತದೆ:  

ರಥೋದ್ಧತಾ

– u – u u u – u – u –    

ಮಂಜುಭಾಷಿಣಿ

[u u] – u – u u u – u – u –    

ಇದು ಸಂಸ್ಕೃತಸಾಹಿತ್ಯದಲ್ಲಿ ತಕ್ಕಮಟ್ಟಿಗೆ ನೆಲೆಗೊಂಡಿದೆ. ಮಾಘನೇ ಮೊದಲಾದ ಕವಿಗಳು ಇದನ್ನು ಕಥನಕ್ಕೆ ಕೂಡ ಬಳಸಿದ್ದಾರೆ. ಒಂದೆರಡು ಉದಾಹರಣೆಗಳನ್ನೀಗ ಕಾಣೋಣ:

ಬೆಲೆಚೀಟಿ ನಿನ್ನ ಬೆಲೆಯಂ ಪೊಗಳ್ವುದೇಂ

ತಲೆಮಾಸಿಕೊಂಡ ಬಳಿಕಲ್ತೆ ಸಲ್ವೆಯಯ್ |

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 6

{ಸ್ವಾಗತಾ} ರಥೋದ್ಧತಾವೃತ್ತಕ್ಕಿರುವ ಚತುರಸ್ರಶೋಭಿಯಾದ ಗತಿಸೌಂದರ್ಯ ಎಂಥದ್ದೆಂದು ಮನಗಾಣಲು ವ್ಯತಿರೇಕರೂಪದ ಉದಾಹರಣೆಯೆಂಬಂತೆ ಸ್ವಾಗತಾ ಎಂಬ ವೃತ್ತವನ್ನು ನಾವು ಕಾಣಬಹುದು. ಅದರ ಪ್ರಸ್ತಾರ ಮತ್ತು ಕೆಲವೊಂದು ಉದಾಹರಣೆಗಳು ಹೀಗಿವೆ:

– u – u u u – u u – –    

(೫+೩+೪+೪) – u – | u u u | – u u | – –    

(೩+೫+೪+೪) – u | – u u u | – u u | – –    

ಕೆಮ್ಮನುಮ್ಮಳಿಸಿ ಕೋಪಿಸದಿರ್ಮಾಣ್

ನಿಮ್ಮನುಜ್ಞೆ ದೊರೆಕೊಂಡೊಡೆ ಸಾಲ್ಗುಂ |

ನಿಮ್ಮ ನಚ್ಚಿನ ತಪೋಧನನಂ ತಂ-

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 5

ರಥೋದ್ಧತಾ, ಸ್ವಾಗತಾ, ಮಂಜುಭಾಷಿಣಿ ಇತ್ಯಾದಿ

ಸಂಸ್ಕೃತಸಾಹಿತ್ಯದಲ್ಲಿ ಛಂದಃಪ್ರಯೋಗಗಳು ಬೆಳೆದ ರೀತಿಯನ್ನು ಗಮನಿಸಿದಾಗ - ನಿರಾಲಂಬವೂ ಧ್ಯಾನಶೀಲವೂ ಆದ ಬಗೆಯಿಂದ ಭಾಷೆಯ ಸಹಜಸುಂದರ ಪದಗತಿಯನ್ನು ಸ್ಮರಣೀಯವಾಗಿ ಅಭಿವ್ಯಂಜಿಸುವ ಲಯರಹಿತ ಗತಿಗಳ ಆರಾಧನೆ ಒಂದು ಕಡೆ, ಉಲ್ಲಸಿತವೂ ನರ್ತನಶೀಲವೂ ಆದ ಪರಿಯಿಂದ ಭಾಷೆಯ ನಡೆಯನ್ನು ಹೃದಯಂಗಮವಾಗಿ ತೆರೆದಿಡುವ ಲಯಾನ್ವಿತ ಗತಿಗಳ ಆಕರ್ಷಣೆ ಮತ್ತೊಂದು ಕಡೆ ನಿಂತು ವರಕವಿಗಳ ಪ್ರತಿಭಾಸಾಗರವನ್ನು ಮಥಿಸಿರುವಂತೆ ತೋರುತ್ತದೆ. ಈ ಎರಡು ತುದಿಗಳಲ್ಲಿಯೂ ತಮ್ಮವೇ ಆದ ಔಚಿತ್ಯ ಮತ್ತು ಅರ್ಥವಂತಿಕೆಗಳಿವೆ. ಇವೆರಡನ್ನೂ ಸಮಾನಾಂತರವಾಗಿ ಸಾಗಿಸಿಕೊಂಡು ಹೋಗುವ ಸಾಧ್ಯತೆ ಇರುವಂತೆಯೇ ಇವುಗಳ ಕಸಿ ಮಾಡಿ ತನ್ಮೂಲಕ ಉಭಯಗುಣಗಳ ಸ್ವಾರಸ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಹವಣೂ ಕಂಡುಬರುತ್ತದೆ.

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 4

{ವಂಶಸ್ಥ} ವಂಶಸ್ಥದ ಛಂದೋವಿನ್ಯಾಸವನ್ನು ಗಮನಿಸಿದಾಗ ನಾಲ್ಕು ಗಣಗಳನ್ನುಳ್ಳ ಇದರ ಮೊದಲ ಹಾಗೂ ಕಡೆಯ ಗಣಗಳು ಪ್ರತೀಪರೂಪದವೆಂದು ತಿಳಿಯುತ್ತದೆ. ಅಂದರೆ, ಮೊದಲಿಗೆ ಎರಡು ಲಘುಗಳ ನಡುವಣ ಗುರುವೊಂದನ್ನುಳ್ಳ ಜ-ಗಣ ಬಂದಿದ್ದರೆ ಕಡೆಗೆ ಎರಡು ಗುರುಗಳ ನಡುವಣ ಲಘುವೊಂದನ್ನುಳ್ಳ ರ-ಗಣವಿದೆ: 

[u – u] – – u u – u [– u –]

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 3

ಈವರೆಗೆ ವಿವೇಚಿತವಾದ ಮೂರೂ ವೃತ್ತಗಳು ಕನ್ನಡಕ್ಕೇಕೆ ಹೆಚ್ಚಾಗಿ ಒದಗಲಿಲ್ಲ ಎಂಬ ಪ್ರಶ್ನೆ ಹುಟ್ಟಬಹುದು. ಕನ್ನಡಕ್ಕಿರುವ ಆದಿಪ್ರಾಸದ ನಿರ್ಬಂಧದ ಕಾರಣ ಉಪಜಾತಿ ಬರಲು ಸಾಧ್ಯವಿಲ್ಲ. ಏಕೆಂದರೆ ಗಜಪ್ರಾಸ ಮತ್ತು ಸಿಂಹಪ್ರಾಸಗಳ ಮಿಶ್ರಣಕ್ಕೆ ಕನ್ನಡದಲ್ಲಿ ಅವಕಾಶವಿಲ್ಲ. ಇನ್ನುಳಿದ ಎರಡು ವೃತ್ತಗಳಲ್ಲಿ ಇಂಥ ತೊಡಕಿಲ್ಲದಿದ್ದರೂ ಅವು ತಮ್ಮ ತಮ್ಮ ಪಾದಾಂತಗಳಲ್ಲಿ ಎರಡು ಗುರುಗಳನ್ನು ಹೊಂದಿದ ಕಾರಣ ಆದಿಪ್ರಾಸವನ್ನು ಹೊಂದಿಸುವಲ್ಲಿ ಸಾಕಷ್ಟು ಕಷ್ಟವೀಯುತ್ತವೆ. ಇದು ಖಂಡಪ್ರಾಸ ಮತ್ತು ಖಂಡೇತರ ಪ್ರಾಸಗಳೆರಡಕ್ಕೂ ಸಮಾನವಾಗಿ ಕ್ಲೇಶಕರ. ಎರಡು ಗುರುಗಳು ಪಾದದ ಕಡೆಗೆ ಬರುವ ಯಾವುದೇ ವರ್ಣವೃತ್ತದ ವಿಷಯದಲ್ಲಿಯೂ ಕನ್ನಡದ ಮಟ್ಟಿಗೆ ಇದು ಸತ್ಯ.

ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 2

ಗಾನಕ್ರಮದ ಕರ್ಷಣದ ಮೂಲಕ ಇಂದ್ರವಜ್ರಾವೃತ್ತದ ಪಾದಗಳಿಗೆ ಒದಗಿದ ಪಂಚಕಲಗತಿ ಮತ್ತಷ್ಟು ದೃಢವಾಗಿ ಗುರು-ಲಘುವಿನ್ಯಾಸದಲ್ಲಿಯೇ ನಿಕ್ಷಿಪ್ತವಾದ ಬೆಳೆವಣಿಗೆಯನ್ನು ‘ಶ್ಯೇನಿ’ ಅಥವಾ ‘ಲಯಗ್ರಾಹಿ’ ಎಂಬ ಬಂಧದಲ್ಲಿ ನೋಡುತ್ತೇವೆ. ಇದು ಪ್ರತಿಪಾದಕ್ಕೆ ಮೂರು ತ-ಗಣ ಮತ್ತೆರಡು ಗುರುಗಳನ್ನು ಒಳಗೊಂಡ ಸಮವೃತ್ತ. ಅದರ ವಿನ್ಯಾಸ ಹೀಗೆ:

– – u – – u – – u – –

ಇದು ಐದೈದು ಮಾತ್ರೆಗಳ ಮೂರು ಗಣ ಮತ್ತು ನಾಲ್ಕು ಮಾತ್ರೆಗಳ ಒಂದು ಗಣವನ್ನು ಒಳಗೊಂಡ ಖಂಡಗತಿಯಲ್ಲಿ ಸಾಗುವ ಲಯಾನ್ವಿತ ವೃತ್ತ. ಕೊನೆಯ ಗಣವು ಒಂದು ಮಾತ್ರಾಕಾಲದ ಕರ್ಷಣಕ್ಕೆ ತುತ್ತಾಗಿ ಸಹಜವಾಗಿಯೇ ಲಯಸಮತೆಯನ್ನು ಪಡೆಯುವುದು ಸುವೇದ್ಯ.