ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 16
ಬಾಣಭಟ್ಟ
ಮಹಾಕವಿ ಭಟ್ಟಬಾಣನ ಕೃತಿಗಳ ಪೈಕಿ “ಹರ್ಷಚರಿತ” ಒಂದರಲ್ಲಿಯೇ ಕಾವ್ಯಮೀಮಾಂಸೆಯ ಚಿಂತನಶಕಲಗಳು ಕಂಡುಬರುತ್ತವೆ. “ಕಾದಂಬರಿ”ಯ ಉಪಕ್ರಮಶ್ಲೋಕಗಳಲ್ಲಿ ಕಾವ್ಯಕಲೆಯನ್ನು ಕುರಿತ ಒಂದೆರಡು ಮಾತುಗಳಿದ್ದರೂ ಅವು ಸಾಹಿತ್ಯತತ್ತ್ವಕ್ಕೆ ನೇರವಾಗಿ ಸಂಬಂಧಿಸಿಲ್ಲ; ಮೌಲಿಕವೂ ಎನಿಸಿಲ್ಲ. ಹೀಗಾಗಿ ಹರ್ಷಚರಿತವೊಂದೇ ನಮಗಿರುವ ಆಲಂಬನ. ಇಲ್ಲಿಯ ಕೆಲವೊಂದು ಮಾತುಗಳು ನಿಜಕ್ಕೂ ಸತ್ತ್ವಪೂರ್ಣವಾಗಿವೆ. ಆರಂಭದಲ್ಲಿಯೇ ಕೃತಿಚೋರರನ್ನು ಕುರಿತು ಹೀಗೆ ಹೇಳುತ್ತಾನೆ:
ಅನ್ಯವರ್ಣಪರಾವೃತ್ತ್ಯಾ ಬಂಧಚಿಹ್ನನಿಗೂಹನೈಃ |
