ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 30
ಗಂಗಾದೇವಿ
ಕಥನಕಾವ್ಯಗಳನ್ನು ರಚಿಸಿದ ಕವಯಿತ್ರಿಯರ ಪೈಕಿ ಗಂಗಾದೇವಿಯ ಸ್ಥಾನ ಅದ್ವಿತೀಯ. ಅಷ್ಟೇಕೆ, ವಾರ್ತಮಾನಿಕ ವಸ್ತುವನ್ನು ಆಧರಿಸಿ ಪ್ರಸನ್ನಗಂಭೀರವಾದ ಶೈಲಿಯಲ್ಲಿ ಕಲ್ಪನಾವೈಚಿತ್ರ್ಯವಿರುವಂತೆ ಕಾವ್ಯವನ್ನು ರಚಿಸಿದ ಕವಿಗಳ ಪಂಕ್ತಿಯಲ್ಲಿಯೇ ಇವಳ ಸ್ಥಾನ ಗಣ್ಯವಾದುದು. ಈಕೆಯ “ಮಧುರಾವಿಜಯ” ಅಥವಾ “ವೀರಕಂಪಣರಾಯಚರಿತ” ಎಂಬ ಐತಿಹಾಸಿಕಮಹಾಕಾವ್ಯದ ಮೊದಲಿಗೆ ಬರುವ ಕೆಲವು ಮಾತುಗಳು ನಮ್ಮ ಉದ್ದೇಶಕ್ಕೆ ಪೂರಕವಾಗಿವೆ.
ಗಂಗಾದೇವಿ ಗುಣ-ದೋಷಗಳನ್ನು ಕುರಿತು ಹೇಳುವ ಮಾತುಗಳು ಮನನೀಯ:
ಪ್ರಬಂಧಮೀಷನ್ಮಾತ್ರೋऽಪಿ ದೋಷೋ ನಯತಿ ದೂಷ್ಯತಾಮ್ |
