Philosophy

ಶಂಕರ ಮತ್ತು ಆನಂದವರ್ಧನ - 6

ಇಂತಿದ್ದರೂ ಶಂಕರ-ಆನಂದವರ್ಧನರು ತಮ್ಮ ಕಾಲವನ್ನಷ್ಟೇ ಅಲ್ಲ, ಎಲ್ಲ ಕಾಲವನ್ನೂ ಮೀರಿ ನಿಲ್ಲಬಲ್ಲ ಸತ್ತ್ವವನ್ನು ಹೊಂದಿದ್ದಾರೆ. ಅವರ ವಿಚಾರಗಳನ್ನು ರೂಪಮಾತ್ರದಿಂದ ಅಳೆಯುವುದು ಅವರಿಗೆ ಮಾತ್ರವಲ್ಲ, ನಮಗೂ ಮಾಡಿಕೊಳ್ಳುವ ಅನ್ಯಾಯ; ಜ್ಞಾನಜಗತ್ತಿಗೇ ಮಾಡುವ ಅನ್ಯಾಯ. ಅಭಿವ್ಯಕ್ತಿಯ ಜಟಿಲತೆಯಿಂದ, ಉದಾಹರಣೆಗಳ ಅಸುಂದರತೆಯಿಂದ, ವಾದೋಪಯೋಗಿಯಾದ ನ್ಯಾಯ-ದೃಷ್ಟಾಂತಗಳ ಏಕದೇಶೀಯತೆಯಿಂದ ಅವರ ತತ್ತ್ವಕ್ಕೆ ಯಾವುದೇ ಕೊರತೆಯಾಗಿಲ್ಲ. ಈ ಅಂಶಗಳನ್ನು ನಾವು ಅವರಿಗಿಂತ ಚೆನ್ನಾಗಿ ಆ ಪರಂಪರೆಯಿಂದಲೋ ನಮ್ಮ ಪರಿಸರದಿಂದಲೋ ತುಂಬಿಕೊಳ್ಳಬಹುದು. ಇದು ಕಷ್ಟದ ಸಂಗತಿಯೇನಲ್ಲ. ಆದರೆ ಅವರು ಕಾಣಿಸಿದ ತತ್ತ್ವವನ್ನು ಮಾತ್ರ ಯಾರೇ ಆಗಲಿ ತಾವಾಗಿ ಸಾಕ್ಷಾತ್ಕರಿಸಿಕೊಳ್ಳುವುದು ಅಸಾಧ್ಯವೆಂಬಷ್ಟರ ಮಟ್ಟಿಗೆ ದುಷ್ಕರ.

Ch. 2 Yoga of Discernment of Reality (Part 11)

Appendix 5. Vyavasāya (Sustained effort)

vyavasāyātmikā buddhirekeha kurunandana || (2.41)

Here vyavasāya refers to sustained effort or continuous industry focused on a single goal. That is penance (tapas). A person needs to be of a single-pointed mind to satisfy any immense objective. If, on the other hand, his mind were to vacillate from one side to another every moment, none of his efforts would go very far.

ಶಂಕರ ಮತ್ತು ಆನಂದವರ್ಧನ - 3

ನಿರ್ಗುಣಬ್ರಹ್ಮ-ಸಗುಣಬ್ರಹ್ಮ, ಧ್ವನಿ-ಗುಣೀಭೂತವ್ಯಂಗ್ಯ

ಶಂಕರ ಮತ್ತು ಆನಂದವರ್ಧನರ ಸಿದ್ಧಾಂತಗಳಿಗಿರುವ ಸರ್ವಸಮನ್ವಯದೃಷ್ಟಿ ಮತ್ತೂ ಒಂದು ಅಂಶದಲ್ಲಿದೆ. ಅದು ಬ್ರಹ್ಮಕ್ಕೆ ಸಗುಣತ್ವ ಮತ್ತು ನಿರ್ಗುಣತ್ವಗಳೆಂಬ ಎರಡು ಸ್ತರಗಳ ಕಲ್ಪಿಸುವಿಕೆ ಹಾಗೂ ವ್ಯಂಜನಾವ್ಯಾಪಾರದ ಪ್ರಾಧಾನ್ಯ ಮತ್ತು ಅಪ್ರಾಧಾನ್ಯಗಳಿಗೆ ಅನುಸಾರವಾಗಿ ವ್ಯಂಗ್ಯ ಮತ್ತು ಗುಣೀಭೂತವ್ಯಂಗ್ಯ ಎಂಬ ಎರಡು ಹಂತಗಳ ರೂಪಿಸುವಿಕೆಯನ್ನು ಕುರಿತಿದೆ.[1]

ಶಂಕರ ಮತ್ತು ಆನಂದವರ್ಧನ

ವೇದಾಂತಾರ್ಥತದಾಭಾಸಕ್ಷೀರನೀರವಿವೇಕಿನಮ್ |

ನಮಾಮಿ ಭಗವತ್ಪಾದಂ ಪರಹಂಸಧುರಂಧರಮ್ || (ಅಮಲಾನಂದ)

ಧ್ವನಿನಾತಿಗಭೀರೇಣ ಕಾವ್ಯತತ್ತ್ವನಿವೇಶಿನಾ |

ಆನಂದವರ್ಧನಃ ಕಸ್ಯ ನಾಸೀದಾನಂದವರ್ಧನಃ || (ರಾಜಶೇಖರ)