Profiles

ವಿದ್ಯಾಭವನದ ಅನುಭವಗಳು - 5

ಪರಿಚಿತರಿಗೆಲ್ಲ ಅಡ್ಡಹೆಸರನ್ನಿಡುವುದರಲ್ಲಿ ಎಸ್. ಕೆ. ಎಮ್. ಅಗ್ರಗಣ್ಯರು. ಒಬ್ಬ ಸಂಗೀತವಿದುಷಿಯನ್ನು ‘ಎನ್. ಬಿ.’ ಎಂದು ಕರೆಯುತ್ತಿದ್ದರು. ಆಗೆಲ್ಲ ಅಬ್ರಾಹ್ಮಣರನ್ನು ಸೂಚ್ಯವಾಗಿ ಹೀಗೆ ನಿರ್ದೇಶಿಸುತ್ತಿದ್ದುದು ಲೋಕದ ವಾಡಿಕೆ. ಇದನ್ನು ಗಮನಿಸಿದ ನಾನು “ಇಲ್ಲ ಸರ್; ಅವರು ಬ್ರಾಹ್ಮಣರೇ” ಎಂದೆ. ಆಗ ಕೃಷ್ಣಮೂರ್ತಿ ನಗುತ್ತ “ನಿಮಗೆ ವಾಸ್ತವ ಹೇಳಿದರೆ ಬೇಜಾರಾಗಬಹುದು. ಆದರೆ ಸತ್ಯವೇ ಮುಖ್ಯ ಅಲ್ಲವೇ! ಇದರ ಅರ್ಥ ನಾನ್-ಬ್ರಾಹ್ಮಿನ್ ಎಂದಲ್ಲ; ‘ನಿತ್ಯಬಹಿಷ್ಠೆ’ ಅಂತ!”

ಇದನ್ನು ಕೇಳಿ ನಾನು ಮೂರ್ಚ್ಛೆ ಹೋಗುವುದೊಂದು ಬಾಕಿ.

ಹೀಗೆಯೇ ಅವರಿಗೆ ಚೆನ್ನಾಗಿ ಪರಿಚಯವಿದ್ದ ಮಾಜಿ ಸಂಗೀತವಿದುಷಿಯೊಬ್ಬರಿಗೆ ‘ಶ್ವೇತಪ್ರೇತ’ ಎಂದೂ ಇನ್ನೊಬ್ಬ ಮಾಜಿ ಸಮಾಜಸೇವಕಿಗೆ ‘ಗ್ರೇ ಬ್ಯೂಟಿ’ ಎಂದೂ ಅಡ್ಡಹೆಸರಿಟ್ಟಿದ್ದರು.

ವಿದ್ಯಾಭವನದ ಅನುಭವಗಳು - 4

ರಂಗನಾಥ್ ಅವರ ಮೊದಲ ಮಗಳ ಹೆಸರು ಅಂಜನಾ. ಎರಡನೆಯ ಮಗಳು ಹುಟ್ಟಿದಾಗ ಯಾವ ಹೆಸರು ಇಡಬೇಕೆಂದು ಕೇಳಿದಾಗ ಎಸ್. ಕೆ. ಎಮ್. ಹೀಗೆ ಹೇಳಿದ್ದರಂತೆ: “ನಿರಂಜನಾ ಅಂತ ಇಡಿ. ಮತ್ತೂ ಒಬ್ಬಳು ಹುಟ್ಟಿದರೆ ಇದ್ದೇ ಇದೆ ಅಮೃತಾಂಜನಾ!” ಇಲ್ಲಿಯ ಧ್ವನಿ ಆ ಕಾಲದ ಕನ್ಯಾಪಿತೃಗಳಿಗೆ ಚೆನ್ನಾಗಿ ತಿಳಿಯುತ್ತದೆ. ಚೋದ್ಯವೆಂದರೆ ರಂಗನಾಥ್ ಅವರಿಗೆ ನಿಜಕ್ಕೂ ಮೂವರು ಹೆಣ್ಣುಮಕ್ಕಳಾದರು! ಪುಣ್ಯಕ್ಕೆ ಹೆಸರುಗಳು ಮಾತ್ರ ಬೇರೆಯಾದವು. ಕೃಷ್ಣಮೂರ್ತಿಗಳ ಈ ವಿನೋದ ಎಚ್. ಕೆ. ಆರ್. ಅವರಿಗೆ ಅದೆಷ್ಟು ಇಷ್ಟವಾಯಿತೆಂದರೆ ಒಮ್ಮೆ ಡಿ.ವಿ.ಜಿ. “ನಿಮಗೆಷ್ಟು ಮಕ್ಕಳು?” ಎಂದು ಕೇಳಿದಾಗ “ಅಂಜನಾ, ನಿರಂಜನಾ, ಅಮೃತಾಂಜನಾ” ಎಂದೇ ಉತ್ತರಿಸಿದ್ದರು!

Fundamental Principles of a State’s Well-being - Part 7

It is appropriate that the system of governance in India is a collection of one and many.
Given the land’s geographical expanse, large population, bio-/geo-diversity of various regions, differences in the nature of the air, socio-cultural specialties of people, and differences in traditions and administrative organizations, it is inevitable that the Central government is one and inside that, the Regional or State governments are many.

ವಿದ್ಯಾಭವನದ ಅನುಭವಗಳು - 1

ನನ್ನ ಜಾತಕದಲ್ಲಿ ಯಾವ ಸಂಸ್ಥೆಯಲ್ಲಿಯೂ ಐದು ವರ್ಷಕ್ಕಿಂತ ಹೆಚ್ಚಾಗಿ ದುಡಿಯುವ ಯೋಗವಿಲ್ಲ ಎನಿಸುತ್ತದೆ. ಇದ್ದುದರಲ್ಲಿ ಭಾರತೀಯ ವಿದ್ಯಾಭವನದ ನೆರಳಿನಲ್ಲಿ ನಾನು ಐದು ವಸಂತಗಳ ಸಂತಸವನ್ನು ಕಂಡದ್ದೇ ಅತಿಶಯ. ಕಡೆಯ ವರ್ಷದಲ್ಲಿ ಆಡಳಿತದ ಮಾರ್ಪಾಟಿನ ಕಾರಣ ಅಲ್ಪ-ಸ್ವಲ್ಪದ ಇರುಸುಮುರುಸಾದರೂ ಅದನ್ನೆಲ್ಲ ಮರೆಸುವಂಥದ್ದು ಭವನದ ಬಾಳು.