Profiles

DVG through Letters - 3

The letters also contain valuable discussions on grammar, stylistics and poetics. DVG the natural poet has occasionally composed entire letters in verse (K V Puttappa: 18.2.1944, V K Gokak: 4.9.1941). We learn of DVG’s respect for his predecessors and his honest efforts at republishing their works (T N Padmanabhan: 3.9.1968), as also his lively sense of humour that sometimes bordered on the risqué (T N Sreekantaiya: 30.3.1947). Included here is a unique letter that became the foreword to a modern Kannada classic, Maisūru Malligè (K S Narasimhaswamy: 31.12.1941).

DVG through Letters - 2

Let us look at a few instances that illustrate these traits.

The self-effacing DVG protested against having a special issue of a literary magazine dedicated to him and against a book written about him (Masti Venkatesha Iyengar: 27.5.1950, V Sitaramiah: 25.4.1973). When V Sitaramiah wished to celebrate DVG’s eightieth birthday, he made a mockery of the proposal by suggesting eight hilarious activities (23.12.1968). When he was pressed into accepting an Hon. D. Litt. from the University of Mysore, he remarked:

DVG through Letters - 1

[The following forms the Editors’ Introduction to DVG through Letters, a volume published by the Gokhale Institute of Public Affairs, Bengaluru, to mark the fiftieth death anniversary of D V Gundappa.]

The publication of this volume of letters is a significant milestone in our endeavour to make available the major works of D V Gundappa in English. Together with the eleven-volume Selected Writings of D. V. Gundappa, it brings to light important primary material for the first time.

ಸಾರ್ವಪಾರ್ಷದ - 5

ಬಹುಮುಖತೆ

ಇನ್ನು ರಾಯರ ಕಲಾಕೌಶಲವನ್ನು ಕುರಿತು ಸ್ವಲ್ಪ ಚಿಂತಿಸಬಹುದು. ಅವರು ತಮ್ಮ ಅನೇಕ ಪುಸ್ತಕಗಳಿಗೆ ಮೂರ್ತಿಶಿಲ್ಪಗಳ ಚಿತ್ರಗಳನ್ನೂ ಕಲ್ಪಿತ ಹಾಗೂ ವಾಸ್ತವ ವ್ಯಕ್ತಿಗಳ ರೂಪಚಿತ್ರ ಮತ್ತು ಭಾವಚಿತ್ರಗಳನ್ನೂ ಬರೆದಿದ್ದಾರೆ; ವಿವಿಧ ಮಾಧ್ಯಮಗಳಲ್ಲಿ ಹಲಕೆಲವು ಶಿಲ್ಪಗಳನ್ನೂ ರೂಪಿಸಿದ್ದಾರೆ. ಎರಡು ಬಾರಿ ತಮ್ಮ ಕಲಾಕೃತಿಗಳ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಆತ್ಮೀಯರ ಒತ್ತಾಯಕ್ಕೆ ಮಣಿದು, ಸಾಂದರ್ಭಿಕ ಒತ್ತಡಕ್ಕೆ ಓಗೊಟ್ಟು ಒಂದೆರಡು ರಂಗಪ್ರಯೋಗಗಳಿಗೆ ಹಿತಮಿತವಾದ ವೀಣಾವಾದನದ ಬೆಂಬಲವನ್ನೂ ನೀಡಿದ್ದರು.

ಸಾರ್ವಪಾರ್ಷದ - 4

‘ಅವಧೂತ’ ಎಂಬ ವಿಶಿಷ್ಟ ಕೃತಿಯನ್ನು ರಾಯರ ಸುವಿಖ್ಯಾತ ಗ್ರಂಥ ‘ಶಾರದಾಪೀಠದ ಮಾಣಿಕ್ಯ’ಕ್ಕೆ ಅನುಬಂಧವೆನ್ನಬಹುದು. ಅವಧೂತತ್ವ ಎಂಬುದು ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಮಿಗಿಲಾದ ಆದರವನ್ನು ಗಳಿಸಿದೆ. ವೇದಾಂತವಾಗಲಿ, ಬೌದ್ಧವಾಗಲಿ, ಜೈನವಾಗಲಿ ನಿರೂಪಿಸುವ ಜೀವನ್ಮುಕ್ತರ, ಬುದ್ಧರ, ಅರ್ಹಂತರ ಕೇವಲಸ್ಥಿತಿ ಬಲುಮಟ್ಟಿಗೆ ಇದೇ ಆಗಿದೆ. ಪ್ರಕೃತ ಗ್ರಂಥದಲ್ಲಿ ‘ತ್ರಿಪುರಾರಹಸ್ಯ’ದ ‘ಅಷ್ಟಾವಕ್ರೀಯ’, ‘ಅವಧೂತಗೀತೆ’, ‘ಅವಧೂತೋಪನಿಷತ್ತು’, ‘ಮಹೋಪನಿಷತ್ತು’ ಮುಂತಾದ ಆಕರಗಳನ್ನು ಆಧರಿಸಿದ ಸರಳಸುಂದರ ವಿಷಯನಿರೂಪಣೆಯಿದೆ. ಇಲ್ಲಿರುವುದು ಪ್ರಖರವಾದ ವೈರಾಗ್ಯ, ಉತ್ಕಟವಾದ ಅದ್ವೈತತ, ಪ್ರಚಂಡವಾದ ಬ್ರಾಹ್ಮಭಾವ. ರಾಯರ ಹೆಚ್ಚಿನ ಬರೆಹಗಳಲ್ಲೆಲ್ಲ ಕಾಣಸಿಗುವ ಸಾಧನಪ್ರಧಾನವಾದ ಮನೋಧರ್ಮಕ್ಕೆ ‘ಅವಧೂತ’ವೂ ಒಂದು ಒಳ್ಳೆಯ ನಿದರ್ಶನ. 

ಸಾರ್ವಪಾರ್ಷದ - 3

‘ಜಯದೇವನ ಗೀತಗೋವಿಂದ’ ಎಂಬ ಕಿರುಹೊತ್ತಿಗೆ ‘ಗೀತಗೋವಿಂದ’ ಎಂಬ ಅಭಿಧಾನದಿಂದ ಮತ್ತೊಮ್ಮೆ ಪ್ರಕಟನೆಗೆ ಸಿದ್ಧವಾದಾಗ ಇದರಲ್ಲಿ ಮೊದಲ ಆವೃತ್ತಿಯ ಕೆಲವಂಶಗಳು ಇಲ್ಲವಾಗಿ ಮತ್ತೆ ಹಲವು ಅಂಶಗಳು ಸೇರಿಕೊಂಡದ್ದಲ್ಲದೆ ಲೀಲಾಶುಕನ ‘ಶ್ರೀಕೃಷ್ಣಕರ್ಣಾಮೃತ’ ಕಾವ್ಯದ ಕೆಲವೊಂದು ವಿವರಗಳೂ ಒಟ್ಟುಗೂಡಿವೆ. ಜಯದೇವಕವಿಯ ಬಾಳಿನ ವಿವರಗಳನ್ನು ‘ಜಯದೇವಚರಿತ’ವೆಂಬ ಸಾಂಪ್ರದಾಯಿಕ ರಚನೆಯನ್ನೂ ಆಧುನಿಕ ವಿದ್ವಾಂಸರ ಸಂಶೋಧನೆಗಳನ್ನೂ ಆಧರಿಸಿ ನಿರೂಪಿಸುವ ರಾಯರು ಹಳೆಯ ಆವೃತ್ತಿಯಲ್ಲಿ ಬಂದಿರುವ ಪ್ರಯೋಜಕವೂ ಆದ ಕೆಲವೊಂದು ವಿವರಗಳನ್ನು ಬಿಟ್ಟು ‘ಗೀತಗೋವಿಂದ’ದ ಇತಿವೃತ್ತವನ್ನೇ ಆಕರ್ಷಕವಾಗಿ ಒಕ್ಕಣಿಸಿದ್ದಾರೆ. ಜೊತೆಗೆ ಮಧುರಭಕ್ತಿಯ ಹಲವು ಮೌಲಿಕ ವಿಚಾರಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ.

ಎಸ್. ಎಲ್. ಭೈರಪ್ಪ: ಮಾರ್ಗದರ್ಶಕ ಮಹನೀಯರಿಗೆ ವಚಃಸುಮಾಂಜಲಿ

ನಿನ್ನೆಯಷ್ಟೇ ನಮ್ಮನ್ನು ಭೌತಿಕವಾಗಿ ಅಗಲಿದ ಎಸ್. ಎಲ್. ಭೈರಪ್ಪನವರೊಡನೆ ಕನ್ನಡಸಾಹಿತ್ಯದ – ಮಾತ್ರವಲ್ಲ, ಭಾರತೀಯ ಸಾಹಿತ್ಯದ – ಒಂದು ಯುಗವೇ ಸರಿದುಹೋಗಿದೆ ಎಂದರೆ ಅತಿಶಯದ ಮಾತಲ್ಲ. ಪುಸ್ತಕಗಳ ಮೂಲಕ ರಸಾಸ್ವಾದವನ್ನು ಪಡೆಯುವ ಒಂದು ಸಂಸ್ಕೃತಿಯ ಸಾಕಾರವಾಗಿದ್ದ ಅವರು ಇದೀಗ ಓದಿನಿಂದಲೇ ದೂರವಾಗುತ್ತಿರುವ ಸಮಾಜದ ಸ್ಥಿತ್ಯಂತರವನ್ನು ಗಮನಿಸುತ್ತಲೇ ನಮ್ಮಿಂದ ದೂರವಾಗಿರುವುದು ಧ್ವನಿಪೂರ್ಣವಾದ ಎಚ್ಚರಿಕೆ. ಮುಂದೆ ಆಗಬಹುದಾದ ಪರಿಣಾಮಗಳು ಏನೇ ಇದ್ದರೂ ಭೈರಪ್ಪನವರನ್ನು ಮೂಲದಲ್ಲಿಯೇ ಓದಿಕೊಳ್ಳುವ ಆಸ್ವಾದದಿಂದ ವಂಚಿತರಾದವರನ್ನು ನತದೃಷ್ಟರೆಂದು ನಾವುಗಳಂತೂ ಭಾವಿಸಬಹುದು. ಇಂಥ ಸಾಹಿತ್ಯವಿಭೂತಿಯ ಅಸ್ತಮಾನ ಮತ್ತೊಂದು ಅರುಣೋದಯದ ಆಶೆಯನ್ನು ಹುಟ್ಟಿಸದೆಯೇ ಆಗಿರುವುದು ನಿಶೀಥದಷ್ಟೇ ವಿಷಾದದ ಸಂಗತಿ.

ಸಾರ್ವಪಾರ್ಷದ - ೧

ನಮ್ಮ ಪರಂಪರೆಯಲ್ಲಿ ‘ಸಾರ್ವಪಾರ್ಷದ’ ಎಂಬ ಒಂದು ವಿಶಿಷ್ಟ ಪದವಿದೆ. ಇದು ಹೆಚ್ಚಾಗಿ ಶಾಸ್ತ್ರಚರ್ಚೆಗಳಲ್ಲಿ ಕಾಣಸಿಗುತ್ತದೆ. ‘ಪಾರ್ಷದ್’ ಎಂದರೆ ಪರಿಷತ್ತು ಎಂದರ್ಥ. ಹತ್ತು ಹಲವರು ಹಿರಿಯರು ಒಟ್ಟಿಗೆ ಒಂದೆಡೆ ಕುಳಿತು ಕಲೆಯುವುದನ್ನು ‘ಪರಿಷತ್’ ಎನ್ನುವರು. ಪರಿಷತ್ತಿಗೆ ‘ಸಭಾ’ ಪರ್ಯಾಯಪದ. ಸಭೆಗೆ ಬೆಳಕಿನಿಂದ ಕೂಡಿದ್ದು ಎಂಬ ಅರ್ಥವೂ ಇದೆ. ಹತ್ತು ಜನರ ನೆರವಿ ಒಂದೆಡೆ ಸುಮ್ಮನೆ ಸೇರಿ ಗೌಜೆಬ್ಬಿಸುವುದನ್ನು ಪರಿಷತ್ತೆಂದು ಕರೆಯುವುದಿಲ್ಲ. ಹೀಗೆ ಎಲ್ಲರೂ ಕಲೆತು ಕೋಲಾಹಲಿಸುವ ಗುಂಪಿಗೆ ‘ಪರಿಷೆ’ ಎಂಬ ಬೇರೊಂದು ಶಬ್ದವೇ ಇದೆ. ಇದು ಪರಿಷತ್ತಿನ ತದ್ಭವ ಎಂಬುದು ಸ್ವಾರಸ್ಯಕರ ಸಂಗತಿ! ಸಂಸ್ಕೃತವಾದುದು ಪರಿಷತ್ತು, ಪ್ರಾಕೃತವಾದುದು ಪರಿಷೆ. ಇವೆರಡಕ್ಕೂ ತಮ್ಮವೇ ಆದ ಮೌಲ್ಯ-ಮಹತ್ತ್ವಗಳಿವೆ.

ಜೀವರೇಖೆಗಳು – ಸಾ.ಕೃ.ರಾ. ಚಿತ್ರಿಸಿದ ಸತ್ತ್ವಮೂರ್ತಿಗಳು - 2

‘ಪುರುಷಸರಸ್ವತಿ’ (ವಿ.ಸೀ. ಸಂಪದ, ಬೆಂಗಳೂರು, ೧೯೯೪) ಸಣ್ಣದಾದರೂ ಹಿರಿದಾದ ಕೃತಿ. ಕೇವಲ ಐವತ್ತು ಪುಟಗಳ ಒಳಗೆ ಕರ್ಣಾಟಾಂಧ್ರಸವ್ಯಸಾಚಿ ರಾಳ್ಲಪಲ್ಲಿ ಅನಂತಕೃಷ್ಣಶರ್ಮರ ಸ್ಫಟಿಕೋಪಮ ಜೀವನವನ್ನು ಕಟ್ಟಿಕೊಡುವ ರಾಯರು ಅನುಬಂಧವಾಗಿ ‘ಸಂಗೀತದ ಮೂಲದ್ರವ್ಯಗಳು’ ಎಂಬ ಶರ್ಮರ ತೆಲುಗು ಬರೆಹವೊಂದರ ಕನ್ನಡ ಅನುವಾದವನ್ನು ಒದಗಿಸಿ, ಅವರ ಜೀವನಪಥದ ಪ್ರಮುಖ ಘಟ್ಟಗಳನ್ನೂ ಅವರಿಗೆ ಸಂದ ಪ್ರಶಸ್ತಿಗಳನ್ನೂ ಅವರು ಬರೆದ ಗ್ರಂಥಗಳ ವಿವರಗಳನ್ನೂ ನೀಡಿದ್ದಾರೆ. ಹೀಗೆ ಇದೊಂದು ಸ್ವಯಂಪೂರ್ಣವಾದ ರಚನೆ. ಶರ್ಮರ ಜನ್ಮಶತಮಾನೋತ್ಸವದಲ್ಲಿ ಪ್ರಕಟವಾದ ಈ ಕೃತಿಗೆ ಸಂದರ್ಭದ ಔಚಿತ್ಯವೂ ಸಂದಿದೆ.