Literature

ಕಾಳಿದಾಸನ ಕುಮಾರಸಂಭವ : ಒಂದು ವಿಶಿಷ್ಟವಿಲೋಕನ

I

ಮಹಾಕವಿ ಕಾಳಿದಾಸನ ಮಹಾಕೃತಿ ಕುಮಾರಸಂಭವವನ್ನು ಕುರಿತು ಜಗತ್ತಿನ ಅನೇಕಭಾಷೆಗಳಲ್ಲಿ ಅಸಂಖ್ಯಗ್ರಂಥಗಳೂ ಲೇಖನಗಳೂ ಬಂದಿವೆ. ಆಂಶಿಕವಾಗಿ, ಸಮಗ್ರವಾಗಿ, ಗದ್ಯ-ಪದ್ಯಾತ್ಮಕವಾಗಿ ನೂರಾರು ಅನುವಾದಗಳೂ ಸಾವಿರಾರು ಅನುಕರಣಗಳೂ ಇದಕ್ಕುಂಟು. ಹೀಗೆ ಬೃಹತ್ತಾದ ಗ್ರಂಥಾಲಯಕ್ಕೂ ಹೆಚ್ಚಾಗಬಲ್ಲಷ್ಟು ಸಾಹಿತ್ಯವಿರುವ ಕುಮಾರಸಂಭವವನ್ನು ಕುರಿತು ಹೊಸತೆನ್ನುವುದನ್ನು ಹೇಳಬಯಸುವವರಿಗೆ ಎಂಟೆದೆ ಬೇಕು. ಆದರೆ ಇಂಥ ಮಹಾಕಾವ್ಯವನ್ನು ಕುರಿತು ಪುನರುಕ್ತಿಪ್ರಾಯವಾದ ಮಾತುಗಳನ್ನಾಡುವ ಬರೆಹವೂ ಮೂಲಾಶ್ರಯದ ಮಾಹಾತ್ಮ್ಯದ ಕಾರಣ ಅಷ್ಟಿಷ್ಟಾದರೂ ಸ್ವಾರಸ್ಯವನ್ನು ತಳೆಯದಿರಲಾರದೆಂಬ ನಚ್ಚಿನಿಂದ ಈ ಲಘುಲೇಖನವನ್ನು ಮೊದಲಿಡುವುದಾಗಿದೆ.

ಪು.ತಿ. ನರಸಿಂಹಾಚಾರ್ಯರ ರಸದರ್ಶನ

ಅಧ್ಯಾತ್ಮ ಎಂದರೆ ಸೃಷ್ಟಿಯಲ್ಲಿ ಅಭಿವ್ಯಕ್ತಗೊಂಡಿರುವ ಚೆಲುವು, ಬದುಕಿನಲ್ಲಿ ಅಂತರ್ಗವಾಗಿರುವ ಚೆಲುವು, ಒಲವು ಮತ್ತು ಇತರ ರಾಗ ಭಾವಗಳಿಗೆಲ್ಲ ವಿಮುಖವಾಗಿ ಧ್ಯಾನ-ತಪಸ್ಸುಗಳಲ್ಲಿ ನಿರತರಾಗಿ, ವೈಯಕ್ತಿಕ ಮೋಕ್ಷಕ್ಕೆ ಪ್ರಯತ್ನಿಸುವುದು ಮಾತ್ರವಲ್ಲ.  ಬದುಕಿನ ಜಂಜಡಗಳಿಂದ ಜರ್ಜರಿತವಾದ ಮಾನವ ಚೇತನವನ್ನು ಉನ್ನತ ಸ್ತರಕ್ಕೆ ಏರಿಸಿ ಈ ಸೃಷ್ಟಿಯಲ್ಲಿನ ವ್ಯಕ್ತ ಮತ್ತು ಅವ್ಯಕ್ತ ಚಲುವನ್ನು , ಇದರ ಹಿಂದಿರುವ ಸೃಷ್ಟಿಕರ್ತನ ಅದ್ಭುತ ಚೆಲುವು-ಚೈತನ್ಯಗಳನ್ನು ಅರಗಳಿಗೆಯಾದರೂ ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುವ ರಸದೃಷ್ಟಿಯನ್ನು ಜಾಗೃತಗೊಳಿಸುವ ಅದ್ಭುತಶಕ್ತಿಯೇ ಅಧ್ಯಾತ್ಮ ಎನಿಸುತ್ತದೆ. ಇಂತಹ ಅಧ್ಯಾತ್ಮ ರಸ-ದರ್ಶನ ಪು.ತಿ. ನರಸಿಂಹಾಚಾರ್ಯರ ಕಾವ್ಯದಲ್ಲಿ ಓತ-ಪ್ರೋತವಾಗಿ ಕಂಡುಬರುತ್ತದೆ.

संस्कृतसाहित्यचर्यासपर्या

IV

इदानीं पाण्डित्यपारम्यमात्रमेदुरं दर्शनध्वनिदूरं प्रदर्शनपर्याप्तवाच्यवैदुष्यं विद्वत्काव्यविषये किञ्चिदालोचयामः। तदिदं बहुधा श्रद्धाजडं, रूपगर्वितं, यातयामञ्च कविकर्म परिणामात् प्रयत्नं, प्रतिभानात् पाण्डित्यं, परिपाकात् प्रावीण्यञ्च बहुमन्यमानानां दुर्विलसितमेव समजनि। अनेनैव हेतुना हि युगेऽस्मिन् कल्पनावतां कवीनां स्थाने वैदुष्यदुर्विदग्धानां प्रत्यादेश आसीत्।

[contextly_sidebar id="gitNMfbHZ2QNMTaRUVhC1ibNRkzznNpN"]