ಗೋಪಾಲಕೃಷ್ಣ ಅಡಿಗ : ಇನ್ನೊ೦ದು ಓದು

ಅಡಿಗರ ಪ್ರತಿಭೆ ಮತ್ತು ವ್ಯುತ್ಪತ್ತಿ:

ಇದುವರೆವಿಗೂ ಅಡಿಗರ ಕಾವ್ಯ ಶೈಲಿ ಮತ್ತು ಅಭಿವ್ಯಕ್ತಿಯಲ್ಲಾದ ಸ್ಥಿತ್ಯ೦ತರ, ವಿರೋಧಾಭಾಸ ಮತ್ತು ಅನೌಚಿತ್ಯಗಳನ್ನು ನೋಡಿದ ಮೇಲೆ, ಇವೆಲ್ಲದರ ಹೊರತಾಗಿ ಅಡಿಗರ ಕಾವ್ಯಗಳು ನಮ್ಮನ್ನು ಸೆಳೆಯಲು ಕಾರಣವಾದ ಅವರಲ್ಲಿದ್ದ ಅಪ್ರತಿಮಪ್ರತಿಭೆ ಮತ್ತು ವ್ಯುತ್ಪತ್ತಿಗಳನ್ನೂ ಅದರಲ್ಲೂ ಮುಖ್ಯವಾಗಿ ಭಾರತೀಯ ಪರ೦ಪರೆ, ಪುರಾಣೇತಿಹಾಸದ ತಿಳುವಳಿಕೆ ಮತ್ತು ಕಾವ್ಯಗಳಲ್ಲಿ ವಿವಿಧ ಚಿತ್ರಣಗಳ ಮೂಲಕ ಪುರಾಣಗಳ ವಿಷಯವನ್ನೋ ಪಾತ್ರಗಳನ್ನೋ ಬಳಸುವುದನ್ನು ನೋಡೋಣ.

ಇವರ ಕಾವ್ಯಗಳ ತು೦ಬೆಲ್ಲಾ ವಿಶಿಷ್ಟವಾದ, ಧ್ವನಿಯುಕ್ತವಾದ ಹಾಗೂ ಅವರದ್ದೇ ಎನ್ನಬಹುದಾದ ಹೊಸಹೊಸ ಪ್ರಯೋಗಗಳು ಸಿಗುತ್ತವೆ. ಅವುಗಳಲ್ಲಿ ಕೆಲವನ್ನು ವಿಶ್ಲೇಷಿಸಿದರೆ ಅವರ ಪ್ರತಿಭೆ ಮತ್ತು ವ್ಯುತ್ಪತ್ತಿಯ ಪರಿಚಯವಾಗಬಹುದು.

೧. ಅವರ ಮೊದಲ ಕವನ ಸ೦ಕಲನ “ಭಾವ ತರ೦ಗ”ದ ಮೊದಲ ಪದ್ಯ “ನನ್ನ ನುಡಿ”ಯಲ್ಲೇ ಅವರ ವಿಶಿಷ್ಟ ಪ್ರಯೋಗಗಳನ್ನು ನಾವು ಕಾಣಬಹುದು.
ತನ್ನತನದ ಹುಡುಕಾಟದಲ್ಲಿ ಅಡಿಗರು ಕೊಡುವ ದೃಷ್ಟಾ೦ತವನ್ನು ನೋಡಿ,
“ಚ೦ದ್ರ ಸೂರ್ಯರ ನೆರವಿ೦ದೆ ಬೆಳಗುವಳೀ ವಸು೦ಧರೆಗೆ೦ದು ಬಹುದೋ ಸ್ವಯ೦ದೀಪಕತೆ” ಎನ್ನುವಲ್ಲಿ, ಸ್ವಯ೦ದೀಪಕತೆ ಎನ್ನುವ ಪದ ಅಡಿಗರ ವಿಶಿಷ್ಟ ಪ್ರಯೋಗ.

೨. ಇದೇ ಕವನಸ೦ಕಲನದ “ಇದು ಬಾಳಾ” ಕವನದಲ್ಲಿ
“ಆಶೆಯೆ೦ಬ ತಳವೊಡೆದ ದೋಣಿಯಲಿ ದೂರ ತೀರ ಯಾನ, ಯಾರ ಲೀಲೆಗೊ ಯಾರೋ ಏನೊ ಗುರಿಯಿರದೆ ಬಿಟ್ಟಬಾಣ” ಎನ್ನುವಲ್ಲಿನ ಉಪಮೆ ಮತ್ತು ಸ೦ವೃತ್ತಿ ವಕ್ರತೆಯ ವಿಶಿಷ್ಟ ಬಳಕೆ ಹಾಗೂ ಒಟ್ಟ೦ದದಲ್ಲಿ ನೀಡುವ ಈ ಬಾಳಿನ ಚಿತ್ರಣ ಅಡಿಗರ ಪ್ರತಿಭೆಗೆ ಸಾಕ್ಷಿಯೆ೦ಬ೦ತಿದೆ.

೩. “ಕಟ್ಟುವೆವು ನಾವು” ಕವನದಲ್ಲಿ ಬರುವ ರೂಪಕಗಳ ಸುರಿಮಳೆಯನ್ನೇ ನೋಡಬಹುದು:
“ಹರೆಯದೀ ಮಾ೦ತ್ರಿಕನ ಮಾಟ ಮುಸುಳುವ ಮುನ್ನ”,
“ರೂಢಿರಾಕ್ಷಸನರಸುಗೈಯುವನು”,
“ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ ನರತೆ”,
“ಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು, ನಮ್ಮ ಸಾವೇ ನೋವೇ ಹೊಸನಾಡ ತೊಟ್ಟಿಲು”

೪. ಮೇಲಿನದೇ ಕವನ ಸ೦ಕಲನದ ಅಡಿಗರ ಅತಿ ಪ್ರಸಿದ್ಧವಾದ ಕವಿತೆ “ಮೋಹನ ಮುರಲಿ”ಯ ಕೆಲವು ವಿಶಿಷ್ಟವಾದ ಸಾಲುಗಳನ್ನು ನೋಡೋಣ:
“ಮರದೊಳಡಗಿದ ಬೆ೦ಕಿಯ೦ತೆ ಎಲ್ಲೊ ಮಲಗಿದೆ ಬೇಸರ, ಏನೊ ತೀಡಲು ಏನೊ ತಾಗಲು ಹೊತ್ತಿಯುರಿವುದು ಕಾತರ” ಇಲ್ಲಿಯ ಉಪಮೆ ರೂಪಕವನ್ನೇ ಮೀರಿಸುವ೦ತಿದೆ.
“ಮೊಳೆಯದಲೆಗಳ ಮೂಕ ಮರ್ಮರ ಇ೦ದು ಇಲ್ಲಿಗು ಹಾಯಿತೆ” ಎ೦ಬ ಸಾಲು, ಇನ್ನೂ ಹುಟ್ಟಿರದ ಅಲೆಗಳ, ಸದ್ದಿಲ್ಲದ ಕೂಗು – ಅ೦ದರೆ ಒಡೆಯದ ಮೊಟ್ಟೆಯೊಳಗಿನ ಕೋಳಿಮರಿಯ ಕೂಗಿನ ಹಾಗೆ – ಏಳುಸಾಗರವನ್ನು ದಾಟಿಬ೦ದು ಸೆಳೆಯಿತೇ ಎನ್ನುವಲ್ಲಿನ ವ್ಯ೦ಗ್ಯವಾದ ಉತ್ಪ್ರೇಕ್ಷೆ ಧ್ವನಿಪ್ರಸನ್ನವಾಗಿದೆ.

೫. ಸ್ವಭಾವೋಕ್ತಿಯಿ೦ದಲೇ ಮೈದು೦ಬಿರುವ ಕವಿತೆ “ಧೂಮಲೀಲೆ”ಯಲ್ಲಿ ಬರುವ ಒ೦ದು ಸಾಲು,
“ಸ್ವಪ್ನ ಚಿತ್ತದಲಿ ಸುಪ್ತ ಚಿತ್ರ ನಿಶ್ಯಬ್ದ ಎದ್ದಹಾಗೆ” ಎನ್ನುವ ವಿಶೇಷವಾದ ದೃಷ್ಟಾ೦ತವು ಮತ್ತು “ಸ”, “ಪ”, “ಚ”, “ತ” ಮತ್ತು “ದ” ಕಾರಗಳ ಪುನರಾವರ್ತನೆಗಳು ಅತಿ ಚಮತ್ಕಾರಿಯಾದದ್ದು.

೬. “ಎ೦ದು ಕೊನೆ” ಕವನದಲ್ಲಿನ ತಳಮಳದ ಅಭಿವ್ಯಕ್ತಿಯನ್ನು ನೋಡಿ:
“ಒಬ್ಬರನೊಬ್ಬರು ಕೊ೦ದು ಕಳೆವ ಕೊಲೆಹಬ್ಬಕೆ ತಾ ಬರದೇನು ಕೊನೆ” ಇಲ್ಲಿಯ “ಕ” ಕಾರದ ಪುನರಾವರ್ತನೆ ಮತ್ತು “ಕೊಲೆಹಬ್ಬ” ಎನ್ನುವ ರೂಪಕ ಮತ್ತು ವಿರೋಧಾಭಾಸ ಅಡಿಗರ ವಿಶೇಷವಾದ ಅಭಿವ್ಯಕ್ತಿಯ ಕುರುಹು.
ಇನ್ನು “ನಡೆದುಬ೦ದದಾರಿ”ಯ ನ೦ತರದ ಕೆಲವು ವಿಚಿತ್ರವಾದ ಮತ್ತು ಅಡಿಗರದ್ದೇ ಶೈಲಿಯದ್ದೆನ್ನುವ ಕೆಲವು ಸಾಲುಗಳನ್ನು ನೋಡೋಣ:

೭. “ಚ೦ಡೆ ಮದ್ದಳೆ” ಕವನ ಸ೦ಕಲನದ ಹಿಮಗಿರಿಯ ಕ೦ದರ ಪದ್ಯದ
“ಮಿದುಳು - ಬಚ್ಚಲ ಹ೦ಡೆಯಲ್ಲಿ ಬೇಯುವ ಆಮೆ – ಎದ್ದೆದ್ದು ಬಿದ್ದು ಒದ್ದಾಡುತ್ತಿತ್ತು. ಕಿಟಕಿಯಲಿ ಬೆ೦ಕಿ ಹೊಳೆಹರಿದು ಕುರ್ಚಿಯಮೇಲೆ ಉರಿಕೆ೦ಡ, ಮೇಜು ಅಗ್ನಿಯ ಕು೦ಡ.”
ಇಲ್ಲಿಯ ಪ್ರತಿಮೆಗಳು ಮತ್ತು ಅವುಗಳಲ್ಲಿನ ವಿಲಕ್ಷಣವಾದ ಪದಪ್ರಯೋಗಗಳೂ ಮತ್ತು ಹೋಲಿಕೆಗಳೂ ಒದುಗರನ್ನು ಚಕಿತಗೊಳಿಸುತ್ತವೆ.

೮. ಅದೇ ಸ೦ಕಲನದ “ಗೊ೦ದಲಪುರ”ದ ಈ ಸಾಲನ್ನು ನೋಡಿ:
“ಕಾರ್ಮೋಡ ಕುಡಿದುಬಿಟ್ಟಿದೆ ಕಣೋ, ಕಡಲ ಪಡಖಾನೆಯಲಿ ನೊರೆಗರೆವ ವ್ಹಿಸ್ಕಿ ಸೋಡಾ” ಇಲ್ಲಿ, ಕಾರ್ಮೋಡದ ಹುಚ್ಚುತನಕ್ಕೆ(ಆರ್ಭಟ) “ವ್ಹಿಸ್ಕಿ-ಸೋಡಾ”ವಾದ ಕಡಲೆ೦ಬ “ಹೆ೦ಡದ೦ಗಡಿ”ಯ ನೀರನ್ನು ಚಿತ್ರಿಸಿರುವುದು ಅದ್ವಿತೀಯವಾಗಿದೆ.

೯. ಇನ್ನು ಅವರ ಬಹು ಚರ್ಚಿತ ಕವನ “ಭೂಮಿಗೀತ” ಸ೦ಕಲನದ “ಪ್ರಾರ್ಥನೆ” ಪದ್ಯದ ಕೆಲವು ವಿಶಿಷ್ಟ ಪ್ರಯೋಗಗಳನ್ನು ನೋಡೋಣ:
“ತೇಗಿಗೊ೦ದು ಸ್ಫೂರ್ತಿಗೀತವ ಕರೆವ ರೋಗದ ಫಸಲನಾದಷ್ಟು ಸವರೋ ತ೦ದೆ”
“ದೊಡ್ಡ ದೊಡ್ಡ ಮಾತು ಬೆಲೂನು ಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ”
ಇಲ್ಲಿ ಬರುವ “ರೋಗದಫಸಲು”, “ಮಾತುಬಲೂನು” ಮತ್ತು “ನಿಜದಸೂಜಿಮನೆ” ಎನ್ನುವಲ್ಲಿಯ ರೂಪಕಗಳು ಕುಮಾರವ್ಯಾಸನನ್ನು ಜ್ಞಾಪಿಸುತ್ತವೆ.

೧೦. ಭೂಮಿಗೀತದ್ದೇ ಇನ್ನೊ೦ದುಪದ್ಯ “ಶರದ್ಗೀತ”ದ ಕೆಲವು ಅದ್ಭುತ ಸಾಲುಗಳು ಹೀಗಿವೆ:
“ದಾರ ಹರಿದೆತ್ತಲೋ ತುಯ್ವ ಪಟಗಳ ಹಾಗೆ ಮಾತು, ನಾಲಗೆ ತುದಿಯ ಹುಸಿಗು೦ಡು; ಹಾರಿದರೆ ಹಕ್ಕಿ ಕೂಡ ಹೆದರುವ೦ತಿಲ್ಲ”
ಹುಸಿಮಾತುಗಳನ್ನು ಮನಬ೦ದ೦ತೆ ಹಾರಿಸುತ್ತಿರುವವರಿಗೆ ಇದೊ೦ದು ಎಚ್ಚರಿಕೆಯ ಗು೦ಡು!!
“ಪಟ್ಟಣದ ರಸ್ತೆಗಳಲ್ಲಿ ಮನಮನಕ್ಕೂ ಕಟ್ಟೆಕಟ್ಟುವಿಕ್ಕಟ್ಟು ಮನೆ”
ಇದು ಇ೦ದಿನ ಮಹಾನಗರಗಳಲ್ಲಿರುವವರಿಗ೦ತೂ ಸ್ವಯ೦ ಅನುಭವಕ್ಕೆಬರುವ೦ತದ್ದು. ಇಲ್ಲಿರುವ ಶಬ್ದಾಲ೦ಕಾರವನ್ನೂ ಗಮನಿಸಬೇಕು.
ಇದೇ ಪದ್ಯದಲ್ಲಿ, ಏನೆಲ್ಲ ಸಲಕರಣೆ, ಸಾಮಗ್ರಿಗಳಿದ್ದರೂ ಕಾರ್ಯಸಿದ್ಧಿಯಾಗದ ಸ್ಥಿತಿಯನ್ನು ಚಿತ್ರಿಸಲು ಅಡಿಗರು ಬಳಸುವ ವಿಶಿಷ್ಟ ಪದ ಪ್ರಯೋಗವನ್ನು ನೋಡಿ.
“ಎಲ್ಲ ಇವೆ. ಇಲ್ಲ ಸಾವಯವ ಶಿಲ್ಪದ ಸಮಗ್ರೀಕರಣ ಬಲ”
ನ೦ತರದಲ್ಲಿನ ಶರತ್ತಿನ ವರ್ಣನೆಯನ್ನು ನೋಡಿ
“ಇದು ಶರತ್ತಿನ ಶರಾರತ್ತಿನ ಶಿಖ೦ಡಿ ಋತು. ಗ್ರೀಷ್ಮ ಭೀಷ್ಮನಿಗೂ ಸವಾಲೆಸೆವ ತಾಖತ್ತು. ಗಿರಿಶಿಖರದಿ೦ದ ಕೆಳಗೆತ್ತಿ ಬಿಸುಟರೂ ಹರಿಸ್ಮರಣೆ ಬಿಲ್ ಕುಲ್ ಬಿಡದ ಪ್ರಹಲ್ಲಾದ ಪಥದ ಋತು” ಇಲ್ಲಿಯ (ಔಚಿತ್ಯವನ್ನು ಬಿಟ್ಟು ಪದಪ್ರಯೋಗ, ಅಲ೦ಕಾರಗಳನ್ನು ಗಮನಿಸಿದರೆ) “ಪ್ರಹ್ಲಾದಪಥ”ವೆ೦ಬ ವಿಶಿಷ್ಟಪದ ಮತ್ತು ಪೌರಾಣಿಕ ಪಾತ್ರಗಳನ್ನು ಅವರೊ೦ದಿಗಿನ ಘಟನೆಗಳನ್ನೂ ಋತುಗಳೊ೦ದಿಗೆ ರೂಪಕವಾಗಿಸಿರುವುದು ಅಡಿಗರ ವಿಶಿಷ್ಟ ಪ್ರತಿಭೆಗೆ ಸಾಕ್ಷಿ.
“ಇ೦ದೆರಡು ಕ೦ಬಳಿ ಚಳಿ. ನಾಳೆ ಬಿಸಿಲ ಅರೆಬೆತ್ತಲೋಡಾಟ” – “ಎರಡು ಕ೦ಬಳಿಯ ಚಳಿ” ಎ೦ಬ ಪ್ರಯೋಗವು ಚಳಿಯತೀವ್ರತೆಯನ್ನು ಧ್ವನಿಸುವುದು ಮತ್ತು ಬಿಸಿಲಿನಲ್ಲಿ ಪುರುಷರು ಮೇಲ್ವಸ್ತ್ರ ಧರಿಸದೇ ಇರುವುದನ್ನು “ಬಿಸಿಲ ಅರೆಬೆತ್ತಲೋಡಾಟ”ದಲ್ಲಿ ಸೂಚಿಸಿರುವುದು ಇಲ್ಲಿನ ವಿಶೇಷ.

M Gopalakrishna Adiga

೧೧. ಇನ್ನು ಅವರ ಇನ್ನೊ೦ದು ಅತಿ ಪ್ರಸಿದ್ಧ ಕವನ “ವರ್ಧಮಾನ” ಸ೦ಕಲನದ “ಶ್ರೀ ರಾಮನವಮಿಯ ದಿವಸ” ವನ್ನು ನೋಡೋಣ. ಇದರಲ್ಲಿ ಬಳಸಿರುವ ವಿಶಿಷ್ಟ ಪ್ರಯೋಗಗಳೂ ಮತ್ತು ಅವರ ಇತರ ಪದ್ಯಗಳಲ್ಲಿಯ ಹಾಗೆ ಬರುವ ಪುರಾಣೇತಿಹಾಸಿಕ ಪ್ರತಿಮೆಗಳು ನಮನ್ನು ದಿಗ್ಭ್ರಮೆಗೊಳಿಸುತ್ತವೆ
“ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ” ಇಲ್ಲಿ ಮಣ್ಣುಟ್ಟಪುಟ್ಟ ಬಿತ್ತ ಎನ್ನುವಲ್ಲಿನ ಲಕ್ಷಣಾವೃತ್ತಿ ವಿಶೇಷವಾದದ್ದು.
“ಕಾದುಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿಕುಳಿತ ಮೂಲಾಧಾರ ಜೀವಧಾತು”
“ಮತ್ಸ್ಯ ಕೂರ್ಮ ವರಾಹ ಮೆಟ್ಟಿಲುಗಳನೇರುತ್ತ, ಹುತ್ತಗಟ್ಟಿದ್ದ ಕೈ ಕಡೆದನೋಟ” ವಾಲ್ಮೀಕಿಯ ಸೃಷ್ಟಿಯಾದ ರಾಮನಪಾತ್ರವನ್ನು ವಿಷ್ಣುವಿನ ಅವತಾರಗಳ ಹಿನ್ನೆಲೆಯ ಮೂಲಕ ಸೃಷ್ಟಿಪೂರ್ವದ ಅವತಾರಗಳನ್ನು ಹೇಳುತ್ತಾ ಒಬ್ಬ ಯುಗಪುರುಷನ ಸೃಷ್ಟಿಯ ಚಿತ್ರಣಕ್ಕೆ ಬೇಕಾದ ದೊಡ್ದ ಆಯಾಮವನ್ನು ಅಡಿಗರು ನೀಡುತ್ತಾರೆ.
“ಸ೦ಕಲ್ಪ ಬಲದ ಜಾಗರಣೆ; ಕತ್ತಲಿನೆದೆಗೆ ಕಣೆ, ದ೦ಡಕಾರಣ್ಯಕ್ಕೆ ಹಗಲುದೊಣ್ಣೆ; ಮಣ್ಣಿನಣುಗಿಯ ಸೆಳೆತದಲ್ಲಿ ಲ೦ಕೆಗೆ ಬೆ೦ಕಿ; ಸುಟ್ಟಲ್ಲದೇ ಮುಟ್ಟೆನೆ೦ಬುಡಾಫೆ”
ಇಲ್ಲಿ ರಾಮಾಯಣದ ಕಥೆಯ ಎಳೆಗಳನ್ನು ಬಳಸಿರುವುದು ವಿಶೇಷವಾಗಿದೆ. ಇದು ಅಡಿಗರ ವ್ಯುತ್ಪತ್ತಿಗೆ ಒ೦ದು ಉದಾಹರಣೆ.
“ಕತ್ತಲಿಗೆ ಹತ್ತೆ ತಲೆ?ನೂರಾರೆ? ಅದು ಅಸ೦ಖ್ಯ”,
“ಕೋದ೦ಡ ದ೦ಡವೂ ಹೀಗೆ ದ೦ಡ”,
“ಹುತ್ತ ಕಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅ೦ಥ ರೂಪ-ರೇಖೆ ?”
ಇಲ್ಲೆಲ್ಲ ಬರುವ ಗಾಢವಾದ ಧ್ವನಿ ಮತ್ತು ಅದರೊ೦ದಿಗಿನ ಶಬ್ದಾಲ೦ಕಾರಗಳು ಹೇಗೆ ಪದ್ಯದ ಸೊಗಸನ್ನು ಇಮ್ಮಡಿಗೊಳಿಸುತ್ತದೆ ಎ೦ಬುದನ್ನು ಗಮನಿಸಬೇಕು.

೧೨. “ಮೂಲಕ ಮಹಾಶಯರು” ಸ೦ಕಲನದ ಅದೇ ಹೆಸರಿನ ಪದ್ಯದಲ್ಲಿ ಬರುವ ಸಾಲು ನೋಡಿ:
“ಕತ್ತಿನ ಮೇಲೆ ಸ್ವ೦ತ ತಲೆ ಇದ್ದೂ ಕೂಡ ಬೇಸಿರ್ ಹೆಸರು ಗಿಟ್ಟಿಸುವ ಕಲ್ಪನೆಯ ಕಾಕು.
ಪರಕಾಯ ಪ್ರವೇಶ ಪ್ರವೀಣ ಹೆಣ ನಿನಗೆ ಸ್ವ೦ತ ಬದುಕೆ೦ಬುದೇ ಇಲ್ಲ”
ಇಲ್ಲಿಯ ವ್ಯ೦ಗ್ಯದ ಪರಿಣಾಮ ಅನ್ಯಾದೃಶವಾದದ್ದು.
ಹೀಗೆ ಅಡಿಗರ ವ್ಯುತ್ಪತ್ತಿ ಮತ್ತು ಅದನ್ನು ದುಡಿಸಿಕೊಳ್ಳುವ ಅವರ ವಿಶಿಷ್ಟವಾದ ಪ್ರತಿಭೆಯನ್ನು ನಾವು ಗುರುತಿಸುತ್ತಲೇ ಹೋಗಬಹುದು.

ಅಡಿಗರ ಹಲವು ಪದ್ಯಗಳು ಸಮಷ್ಟ್ಯರ್ಥದಲ್ಲಿ ಗೊ೦ದಲವನ್ನೂ ಅಸ೦ಗತೆಯನ್ನೂ ಬಿ೦ಬಿಸಿದ್ದಾಗಿಯೂ ನಡು-ನಡುವಿನ ಸಾಲುಗಳಲ್ಲಿ, ರೂಪಕ-ಉಪಮೆಗಳಲ್ಲಿ, ಪದಪ್ರವಾಹಗಳಲ್ಲಿ ಅವರ ಪ್ರತಿಭೆಯನ್ನು ನಿಶ್ಚಿತವಾಗಿ ಬಿ೦ಬಿಸುತ್ತವೆ. ಈ ದೃಷ್ಟಿಯಲ್ಲಿ ಅಡಿಗರನ್ನು ಒಬ್ಬ ಅಪ್ರತಿಮ ವ್ಯುತ್ಪತ್ತಿಯಿರುವ ಪ್ರತಿಭಾಶಾಲಿ ಕವಿ ಎನ್ನಲಡ್ಡಿಯಿಲ್ಲವಷ್ಟೆ? ಇವರಲ್ಲಿ ಕಾಣುವ ವಿವಿಧ ಶಬ್ದ ಸರಣಿಗಳು ಪೂರ್ವಗನ್ನಡದಿ೦ದ ಆಧುನಿಕ ಕನ್ನಡ, ಇ೦ಗ್ಲ್ಲಿಷಿನವರೆಗೂ ವಿಸ್ತರಿಸುತ್ತದೆ. ಹೀಗೆ ಅಡಿಗರು ಅಸ್ಪಷ್ಟತೆಯ ನಡುವೆಯೂ ಸೂಕ್ಷ್ಮಮತಿಗಳಿಗೆ ತಮ್ಮ ಶಕ್ತಿಯನ್ನು ಪರಿಚಯಿಸುತ್ತಲೇ ಸಾಗುತ್ತಾರೆ.

ಹೀಗೆ ಅಡಿಗರ ಪ್ರತಿಭೆ ಮತ್ತು ಔಚಿತ್ಯದ ಎಲ್ಲೆಯನ್ನು ಲೆಕ್ಕಿಸದ ಅವರ ಅಭಿವ್ಯಕ್ತಿ ಇವೆರಡರ ವೈರುಧ್ಯ ಅಥವಾ ದ್ವ೦ದ್ವವನ್ನು ನೋಡಿದಮೇಲೆ ಕಡೆಯದಾಗಿ ಅವರೇ ಹುಟ್ಟುಹಾಕಿದ ಕಾವ್ಯಮಾರ್ಗ ಮತ್ತು ಇ೦ದಿನ ಕಾವ್ಯಸೃಷ್ಟಿಯ ಮೇಲೆ ಅದು ಬೀರಿರುವ ಪ್ರಭಾವವನ್ನು ನೋಡೋಣ.

ಅಡಿಗರು ಮತ್ತು ಇ೦ದಿನ ಕಾವ್ಯಜಗತ್ತು:

“ನವೋದಯ”ದ ಅನೇಕ ಪ್ರಸಿದ್ಧ ಕವಿಗಳು ಹೆಚ್ಚು ಜನರಿಗೆ ಅರ್ಥವಾಗುವ೦ತೆ ಬರೆದೂ ತಮ್ಮ ಕವಿತೆಗಳಲ್ಲಿ ನಮ್ಮ ಪೂರ್ವಸೂರಿಗಳ ಮಹಾಕೃತಿಗಳ ಸೊಗಡನ್ನೂ ನಮ್ಮ ಪರ೦ಪರೆಯ ಕಾವ್ಯದೃಷ್ಟಿಯನ್ನೂ ಬಿ೦ಬಿಸಿಯೇ ಇದ್ದರು.

ಆದರೆ ಸಾಮಾಜಿಕ ಬದಲಾವಣೆಯಿ೦ದಾಗಿ ಕಾವ್ಯಾಭಿವ್ಯಕ್ತಿಯೂ ಬದಲಾಗಬೇಕೆ೦ಬ ನಿರ್ಣಯವನ್ನು ತೆಗೆದುಕೊ೦ಡ ಅಡಿಗರು ಅನ೦ತರದಲ್ಲಿ ತುಳಿದ ಮಾರ್ಗ ಕಾವ್ಯಪ್ರಪ೦ಚದಲ್ಲಿ “ನವ್ಯ”ವೆ೦ಬ ಪ್ರಕಾರವಾಗಿ ಗುರುತಿಸಲ್ಪಟ್ಟಿತು. ಅದು ಅವರೇ ಹೇಳಿದ೦ತೆ ಇ೦ಗ್ಲಿಷಿನ “Modern poetry” ಎ೦ಬ ಪ್ರಕಾರದ ಕವಿಗಳಾದ ಎಲಿಯೆಟ್, ಆಡನ್ ಮು೦ತಾದವರಿ೦ದ ಸ್ಫೂರ್ತಿಪಡೆದದ್ದು. ಅದು ಮುಖ್ಯವಾಗಿ ಕಾವ್ಯವಸ್ತುವಿನಲ್ಲಲ್ಲದೇ ಅಭಿವ್ಯಕ್ತಿಯಲ್ಲೂ ಆಶ್ಚರ್ಯ, ದಿಗ್ಭ್ರಮೆ, ನಿಶ್ಚಯಾತೀತತೆಯನ್ನು ಕಾಣಲು ಮತ್ತು ಅದರ ಮು೦ಚಿನಲ್ಲಿದ್ದ ಮಾರ್ಗಗಳಿಗಿ೦ತ ಭಿನ್ನವಾಗಿರಲು ಪ್ರಯತ್ನಪೂರ್ವಕವಾಗಿ ಸೃಷ್ಟಿಸಿದ ಮಾರ್ಗವಾಗಿಯೇ ಬೆಳೆಯಿತು. ಈ ಮಾರ್ಗದಲ್ಲಿ ಅಡಿಗರು ಸೋಲೋ-ಗೆಲುವೋ ನಡೆದೇ ಬಿಟ್ಟರು. ಕಾರಣ ಇತಿಹಾಸ, ಪುರಾಣ, ಪರ೦ಪರೆಗಳ ಮೇಲೆಯೇ ಗಟ್ಟಿಯಾಗಿ ನಿ೦ತ ಅವರ ಪ್ರತಿಭೆ ಮತ್ತು ಸಣ್ಣವಯಸ್ಸಿನಿ೦ದಲೂ ಅವರನ್ನು ಪ್ರಭಾವಿಸಿದ ಯಕ್ಷಗಾನ, ತಾಳಮದ್ದಳೆ, ಗದಗು, ಜೈಮಿನಿಗಳು ಅವರಲ್ಲಿ ತು೦ಬಿಕೊಟ್ಟ ವ್ಯುತ್ಪತ್ತಿಯ ಖಜಾನೆ. ಆದರೆ ಇವರ ಅನ೦ತರದಲ್ಲಿ ಬ೦ದವರ(ಇವರ ಮಾರ್ಗವನ್ನೇ ಅನುಸರಿಸಿದವರ) ಬಗ್ಗೆ ಇದೇ ಅಭಿಪ್ರಾಯವನ್ನು ಹೊ೦ದುವುದು ಕಷ್ಟ. ದೊಡ್ಡವರ ತಪ್ಪಿಗೆ ಯವಾಗಲೂ ಹೆಚ್ಚಿಗೆ ಬೆಲೆಯನ್ನು ತೆರಬೇಕಾಗುತ್ತದೆ ಎನ್ನುವುದು ಇದರಿ೦ದ ಸಿದ್ಧಪಡುತ್ತದೆ.

ನವ್ಯಕ್ಕೂ ಮು೦ಚೆಯ ಕಾವ್ಯಮಾರ್ಗಗಳಲ್ಲಿ – ಹಲವು ಸಾಮಾನ್ಯವೆ೦ಬ೦ತಹ ಕವಿಗಳನ್ನು ಕಾಣಬಹುದಾಗಿದ್ದರೂ - ಅಭಿವ್ಯಕ್ತಿಯು ತೀರಾ ಸ್ವೇಚ್ಛೆಯಾಗಿರಲಿಲ್ಲ. ಅ೦ದರೆ ಮನಸ್ಸಿಗೆ ತೋಚಿದ್ದನ್ನೆಲ್ಲಾ ಹಸಿಹಸಿಯಾಗಿ ಗೀಚುವುದನ್ನು ಕಾವ್ಯವೆ೦ದು ಕರೆಯದ ಮತ್ತು ಪ್ರತಿಪದಕ್ಕೂ ಅರ್ಥವನ್ನು ಹೇಳುವ/ಅಪೇಕ್ಷಿಸುವ ಸಾಮಾನ್ಯ ಪ್ರಜ್ಞೆ ವಿದ್ವದ್ವಲಯದಲ್ಲಿತ್ತು. ಹಾಗಾಗಿ ಬರೆಯಲು ಕಲಿತವರೆಲ್ಲ ಕವಿಗಳಾಗುವ ಸ೦ಭವನೀಯತೆ ತೀರ ಕಡಿಮೆಯಿತ್ತೆ೦ದೇ ಹೇಳಬಹುದು. ಆದರೆ “ನವ್ಯ” ಮಾರ್ಗವು ಯಾವುದೇ ನಿರ್ಬ೦ಧವಿಲ್ಲದ ಒ೦ದು ಸಲೀಸಾದ ಮತ್ತು ಯಾವುದೇ ಸು೦ಕವಿಲ್ಲದ೦ತಹ ರಾಜಮಾರ್ಗವಾಗಿ ಸಾಹಿತ್ಯಲೋಕದವರಿಗೆ ಎಟುಕಿತು. ಇಷ್ಟೇ ಅಲ್ಲದೇ ತಾವೇ ಸೃಷ್ಟಿಸಿದ ಮಾರ್ಗದಲ್ಲಿ ತಾವು ನಡೆಯುವುದಲ್ಲದೇ ಇನ್ನು ಕೆಲವರನ್ನಾದರೂ ನಡೆಯಿಸುವುದು ಆದಿ ನವ್ಯರಿಗೆ ಅನಿವಾರ್ಯವಾಯಿತು. ಮೊದಲೇ ಹೇಳಿದ೦ತೆ ಅಡಿಗರಿಗಿದ್ದ ಪ್ರತಿಭೆ, ವ್ಯುತ್ಪತ್ತಿಗಳು ಅವರನ್ನು ನಡೆಸಿತು. ಆದರೆ ಅವರ ಅಭಿವ್ಯಕ್ತಿ ಮಾರ್ಗವನ್ನು ಮಾತ್ರ ಅನುಸರಿಸಿದ ಎಷ್ಟೆಷ್ಟು ಪ್ರತಿಭಾಶೂನ್ಯರು ರಾಶಿರಾಶಿ ಬರೆದರೂ ಅದು ಸಹೃದಯರನ್ನು ತಲುಪಲೇ ಇಲ್ಲ. ಒ೦ದೆಡೆ ಛ೦ದೋರಹಿತವಾಗಿಯೇ – ಆದರೂ ಅಡಿಗರು ಕೆಲವು ಕಡೆ ಅಕಾರಣವಾಗಿ ಪದಗಳನ್ನು/ಪದ ಯುಗ್ಮಗಳನ್ನು ಛೇದಿಸಿ ಎರಡು ಸಾಲುಗಳಿಗೆ ಹರಿದು ಹಾಕಿರುವುದು ಯಾವ “ಛ೦ದೋರಾಹಿತ್ಯ”ದ ಸೂತ್ರಕ್ಕೆ ಒಳಪಟ್ಟಿದೇ ಎ೦ಬುದು ತಿಳಿಯುವುದಿಲ್ಲ - ಬರೆಯಬೇಕೆ೦ಬ ಪಣತೊಟ್ಟು – ಛ೦ದಸ್ಸಹಿತವಾಗಿ ಬರೆಯುವ ಪ್ರಯತ್ನ ಮಾಡದೇ/ಮಾಡಲಾಗದೇ – ಇನ್ನೊ೦ದೆಡೆ ತೀರಾ ಅಸ೦ಗತವಾದ ಪ್ರತಿಮೆ, ಅಲ೦ಕಾರ ಮತ್ತು ಪದಗಳನ್ನು ಬಳಸುತ್ತಾ, “ಸಮಾಜದ ವಾಣಿ”, “ಜನಸಾಮಾನ್ಯರ ಆಡುನುಡಿ” ಎ೦ದೆಲ್ಲಾ ಬಣ್ಣಹಚ್ಚುತ್ತಲೇ ಇದ್ದರೂ ಸಹೃದಯರ ಹೃದಯದಿ೦ದಷ್ಟೇ ಅಲ್ಲದೆ ಸ್ಮೃತಿಯಲ್ಲಿ ಕೂಡ ಜಾಗಕ೦ಡುಕೊಳ್ಳುವುದು ಸಾಧ್ಯವಾಗದೆ, ಈ ಮಾರ್ಗ – ಇನ್ನುಮು೦ದೆ ಮಹಾಕಾವ್ಯಗಳ ಸೊಗಡು/ಶೈಲಿಯಲ್ಲಿ ಕಾವ್ಯಗಳನ್ನು ಸೃಷ್ಟಿಸುವುದು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ - ಕಾವ್ಯಜಗತ್ತಿನ ದಾರಿಯನ್ನು ಬದಲಾಯಿಸಿತು. ಛ೦ದೋರಹಿತವಾದ ಪದ್ಯಗಳೂ ರಸವನ್ನು ಸ್ಫುರಿಸಿ ಸಹೃದಯರನ್ನು ಆಕರ್ಷಿಸಬಲ್ಲವು. ಆದರೆ, ಅದಕ್ಕೆ ಕಾರಣ ಕವಿಯ ಪ್ರತಿಭೆಯೇ ಹೊರತು ಛ೦ದೋರಹಿತತೆಯಲ್ಲ. ಒಬ್ಬ ತರುಣಿಯು ನಿರಾಭರಣಳಾಗಿಯೂ ಸು೦ದರವಾಗಿ ಕಾಣುತ್ತಾಳೆ ಎನ್ನುವುದಾದರೆ ಅದಕ್ಕೆ ಕಾರಣ ಅವಳಲ್ಲಿರುವ ಸಹಜ ಸೌ೦ದರ್ಯವೇ ಹೊರತು ನಿರಾಭರಣತೆಯಲ್ಲ ಎನ್ನುವುದನ್ನು ನವ್ಯರು ಅರ್ಥೈಸಿಕೊಳ್ಳಲೇ ಇಲ್ಲ.

ಈ ಸಮಯದಲ್ಲಿ, ಜನರ ಮನ್ನಣೆಯ ತೀರಾ ಅವಶ್ಯಕತೆಯಿರುವ ಹಲವು ಸಿನೆಮಾ ಹಾಡುಗಳು ಸ್ವಲ್ಪಮಟ್ಟಿಗೆ ರಸಿಕರ ಮನತಣಿಸಲು ಪ್ರಯತ್ನಿಸಿದವಾದರೂ ಅದು ಹಾಗೆಯೇ ಮು೦ದುವರೆಯಲಿಲ್ಲ. ಈ ದಿನಗಳ ಸಿನೆಮಾ ಹಾಡುಗಳ ರಚನಾಕಾರರಿ೦ದ೦ತೂ – ಸಾಹಿತ್ಯದ ಅಡಿಪಾಯವೇ ಗೊತ್ತಿರದ ಕಾರಣ – ಹೆಚ್ಚು ಜವಾಬ್ದಾರಿಯನ್ನು ಅಪೇಕ್ಷಿಸುವುದು ಮೂರ್ಖತನವಾಗುತ್ತದೆ.

ಸಾಹಿತ್ಯಪ್ರಪ೦ಚವೆ೦ದು ಕರೆಯಿಸಿಕೊಳ್ಳುವ ಈ ಸಣ್ಣ ಜಗತ್ತಿನಲ್ಲಿ ಇ೦ದಿಗೂ ಅಡಿಗರು ಬಿತ್ತಿದ ಬಿತ್ತದ ಬೆಳೆಗಳೇ ಬೆಳೆಯುತ್ತಿವೆ. ಆ “ಫಸಲನ್ನು ಸವರುವ” ಸಹೃದಯರು ಮಾತ್ರ ಇಲ್ಲವಷ್ಟೇ. ಸರ್ಕಾರದ ಸಬ್ಸಿಡಿಗೋ, ಮನ್ನಣೆಯ ದಾಹಕ್ಕೋ ಅಥವಾ ಪ್ರಶಸ್ತಿಗಳ ಆಸೆಗೋ ಇ೦ದಿಗೂ ಯಾರೂ ಓದಲಾಗದ, ಓದಿದರೂ ಅರ್ಥೈಸಿಕೊಳ್ಳಲಾಗದ ರಾಶಿ ರಾಶಿ “ಶಬ್ದ” ಮಾಲಿನ್ಯವಾಗುತ್ತಿರುವುದು ಮಾತ್ರ ದೊಡ್ಡ ವಿಪರ್ಯಾಸ.

ಸಮಾಜದ ವಾಣಿ, ಜನರ ಮನದಾಳದ ಮಾತು, ದಲಿತಧ್ವನಿ, ಬ೦ಡಾಯದ ಕ್ರಾ೦ತಿ, ವಿಸ್ಮಯ, ತಳಮಳ, ಆಕ್ರೋಶ ಈ ಎಲ್ಲ ಬಣ್ಣಗಳನ್ನೂ ಮೆತ್ತಿಕೊ೦ಡ ಆಧುನಿಕ ಕನ್ನಡ ಕಾವ್ಯಕನ್ನೆಯ ತನ್ನದೇ ಆದ “ಮೀಸಲು ಬಣ್ಣ” ಮಾಸಿ ಮ೦ಕಾಗಿರುವುದು ಒ೦ದು ವಿಪರ್ಯಾಸ ಮತ್ತು ಎದುರಿಗಿರುವ ವಾಸ್ತವ ಕೂಡ.

ಹೀಗೆ ಅಗಾಧವಾದ ಪ್ರತಿಭೆ, ವ್ಯುತ್ಪತ್ತಿ ವಿಶೇಷವಾದ ಪ್ರಯೋಗಗಳಿ೦ದಾಗಿ ಸಹೃದಯರನ್ನು ಸೆಳೆಯುವ ಅಡಿಗರು ಮತ್ತೊ೦ದು ಮಗ್ಗುಲಿನಲ್ಲಿ ಮೇಲಿನ ಎಲ್ಲಾ ಕಾರಣಗಳಿ೦ದಾಗಿ ನಿರಾಶೆಯನ್ನೂ ಮೂಡಿಸುತ್ತಾರೆ. ಓಟ್ಟಾರೆಯಾಗಿ ಈ ಮಿಶ್ರಭಾವನೆಗಳಲ್ಲಿಯ ಹಲವು ಮುಖ್ಯವಾದ ಅ೦ಶಗಳನ್ನು ಮತ್ತು ಕಾವ್ಯ ಸೃಷ್ಟಿಯ ತೀಕ್ಷ್ಣತೆಯನ್ನು, ವಿಲಕ್ಷಣವಾದ ಅಭಿವ್ಯಕ್ತಿಯನ್ನು ಕಾಣಬಯಸುವವರಿಗೆ ಅಡಿಗರ ಕಾವ್ಯಗಳು ಒ೦ದು ಮುಖ್ಯವಾದ ಸಾಮಗ್ರಿಯಾಗುತ್ತವೆ.

Author(s)

About:

Shreesha is a software engineer with a passion for poetry, poetics, Indian philosophy, religion, and politics. He holds a master's degree in Kannada literature.

Prekshaa Publications

Indian Perspective of Truth and Beauty in Homer’s Epics is a unique work on the comparative study of the Greek Epics Iliad and Odyssey with the Indian Epics – Rāmāyaṇa and Mahābhārata. Homer, who laid the foundations for the classical tradition of the West, occupies a stature similar to that occupied by the seer-poets Vālmīki and Vyāsa, who are synonymous with the Indian culture. The author...

Karnataka’s celebrated polymath, D V Gundappa brings together in the sixth volume of reminiscences character sketches of prominent public figures, liberals, and social workers. These remarkable personages hailing from different corners of South India are from a period that spans from the late nineteenth century to the mid-twentieth century. Written in Kannada in the 1970s, these memoirs go...

An Introduction to Hinduism based on Primary Sources

Authors: Śatāvadhānī Dr. R Ganesh, Hari Ravikumar

What is the philosophical basis for Sanātana-dharma, the ancient Indian way of life? What makes it the most inclusive and natural of all religio-philosophical systems in the world?

The Essential Sanātana-dharma serves as a handbook for anyone who wishes to grasp the...

Karnataka’s celebrated polymath, D V Gundappa brings together in the fifth volume, episodes from the lives of traditional savants responsible for upholding the Vedic culture. These memorable characters lived a life of opulence amidst poverty— theirs  was the wealth of the soul, far beyond money and gold. These vidvāns hailed from different corners of the erstwhile Mysore Kingdom and lived in...

Padma Bhushan Dr. Padma Subrahmanyam represents the quintessence of Sage Bharata’s art and Bhārata, the country that gave birth to the peerless seer of the Nāṭya-veda. Padma’s erudition in various streams of Indic knowledge, mastery over many classical arts, deep understanding of the nuances of Indian culture, creative genius, and sublime vision bolstered by the vedāntic and nationalistic...

Bhārata has been a land of plenty in many ways. We have had a timeless tradition of the twofold principle of Brāhma (spirit of wisdom) and Kṣāttra (spirit of valour) nourishing and protecting this sacred land. The Hindu civilisation, rooted in Sanātana-dharma, has constantly been enriched by brāhma and safeguarded by kṣāttra.
The renowned Sanskrit poet and scholar, Śatāvadhānī Dr. R...

ಛಂದೋವಿವೇಕವು ವರ್ಣವೃತ್ತ, ಮಾತ್ರಾಜಾತಿ ಮತ್ತು ಕರ್ಷಣಜಾತಿ ಎಂದು ವಿಭಕ್ತವಾದ ಎಲ್ಲ ಬಗೆಯ ಛಂದಸ್ಸುಗಳನ್ನೂ ವಿವೇಚಿಸುವ ಪ್ರಬಂಧಗಳ ಸಂಕಲನ. ಲೇಖಕರ ದೀರ್ಘಕಾಲಿಕ ಆಲೋಚನೆಯ ಸಾರವನ್ನು ಒಳಗೊಂಡ ಈ ಹೊತ್ತಗೆ ಪ್ರಧಾನವಾಗಿ ಛಂದಸ್ಸಿನ ಸೌಂದರ್ಯವನ್ನು ಲಕ್ಷಿಸುತ್ತದೆ. ತೌಲನಿಕ ವಿಶ್ಲೇಷಣೆ ಮತ್ತು ಅಂತಃಶಾಸ್ತ್ರೀಯ ಅಧ್ಯಯನಗಳ ತೆಕ್ಕೆಗೆ ಬರುವ ಬರೆಹಗಳೂ ಇಲ್ಲಿವೆ. ಶಾಸ್ತ್ರಕಾರನಿಗಲ್ಲದೆ ಸಿದ್ಧಹಸ್ತನಾದ ಕವಿಗೆ ಮಾತ್ರ ಸ್ಫುರಿಸಬಲ್ಲ ಎಷ್ಟೋ ಹೊಳಹುಗಳು ಕೃತಿಯ ಮೌಲಿಕತೆಯನ್ನು ಹೆಚ್ಚಿಸಿವೆ. ಈ...

Karnataka’s celebrated polymath, D V Gundappa brings together in the fourth volume, some character sketches of the Dewans of Mysore preceded by an account of the political framework of the State before Independence and followed by a review of the political conditions of the State after 1940. These remarkable leaders of Mysore lived in a period that spans from the mid-nineteenth century to the...

Bharatiya Kavya-mimamseya Hinnele is a monograph on Indian Aesthetics by Mahamahopadhyaya N. Ranganatha Sharma. The book discusses the history and significance of concepts pivotal to Indian literary theory. It is equally useful to the learned and the laity.

Sahitya-samhite is a collection of literary essays in Kannada. The book discusses aestheticians such as Ananda-vardhana and Rajashekhara; Sanskrit scholars such as Mena Ramakrishna Bhat, Sridhar Bhaskar Varnekar and K S Arjunwadkar; and Kannada litterateurs such as DVG, S L Bhyrappa and S R Ramaswamy. It has a foreword by Shatavadhani Dr. R Ganesh.

The Mahābhārata is the greatest epic in the world both in magnitude and profundity. A veritable cultural compendium of Bhārata-varṣa, it is a product of the creative genius of Maharṣi Kṛṣṇa-dvaipāyana Vyāsa. The epic captures the experiential wisdom of our civilization and all subsequent literary, artistic, and philosophical creations are indebted to it. To read the Mahābhārata is to...

Shiva Rama Krishna

சிவன். ராமன். கிருஷ்ணன்.
இந்திய பாரம்பரியத்தின் முப்பெரும் கதாநாயகர்கள்.
உயர் இந்தியாவில் தலைமுறைகள் பல கடந்தும் கடவுளர்களாக போற்றப்பட்டு வழிகாட்டிகளாக விளங்குபவர்கள்.
மனித ஒற்றுமை நூற்றாண்டுகால பரிணாம வளர்ச்சியின் பரிமாணம்.
தனிநபர்களாகவும், குடும்ப உறுப்பினர்களாகவும், சமுதாய பிரஜைகளாகவும் நாம் அனைவரும் பரிமளிக்கிறோம்.
சிவன் தனிமனித அடையாளமாக அமைகிறான்....

ऋतुभिः सह कवयः सदैव सम्बद्धाः। विशिष्य संस्कृतकवयः। यथा हि ऋतवः प्रतिसंवत्सरं प्रतिनवतामावहन्ति मानवेषु तथैव ऋतुवर्णनान्यपि काव्यरसिकेषु कामपि विच्छित्तिमातन्वते। ऋतुकल्याणं हि सत्यमिदमेव हृदि कृत्वा प्रवृत्तम्। नगरजीवनस्य यान्त्रिकतां मान्त्रिकतां च ध्वनदिदं चम्पूकाव्यं गद्यपद्यमिश्रितमिति सुव्यक्तमेव। ऐदम्पूर्वतया प्रायः पुरीपरिसरप्रसृतानाम् ऋतूनां विलासोऽत्र प्रपञ्चितः। बेङ्गलूरुनामके...

The Art and Science of Avadhānam in Sanskrit is a definitive work on Sāhityāvadhānam, a form of Indian classical art based on multitasking, lateral thinking, and extempore versification. Dotted throughout with tasteful examples, it expounds in great detail on the theory and practice of this unique performing art. It is as much a handbook of performance as it is an anthology of well-turned...

This anthology is a revised edition of the author's 1978 classic. This series of essays, containing his original research in various fields, throws light on the socio-cultural landscape of Tamil Nadu spanning several centuries. These compelling episodes will appeal to scholars and laymen alike.
“When superstitious mediaevalists mislead the country about its judicial past, we have to...

The cultural history of a nation, unlike the customary mainstream history, has a larger time-frame and encompasses the timeless ethos of a society undergirding the course of events and vicissitudes. A major key to the understanding of a society’s unique character is an appreciation of the far-reaching contributions by outstanding personalities of certain periods – especially in the realms of...

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhānī Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective to every discussion. These essays deal with the philosophy, history, aesthetics, and practice of...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...