ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 5

ಪ್ರತಿಕೃತಿ, ಪ್ರತಿಮಾ

ಸಾಹಿತ್ಯವೇ ಮೊದಲಾದ ಸಕಲ ಕಲೆಗಳಲ್ಲಿ ಸತ್ಯವು ಮೈದೋರುವ ಎರಡು ವಿಧಾನಗಳನ್ನು ಪುಟ್ಟಪ್ಪನವರು ಪ್ರತಿಕೃತಿ ಮತ್ತು ಪ್ರತಿಮಾ ಎಂದು ಹೆಸರಿಸಿದ್ದಾರೆ. ಅವರ ಪ್ರಕಾರ “ಇದ್ದುದನ್ನು ಇದ್ದಂತೆಯೆ, ನಡೆದುದನ್ನು ನಡೆದಂತೆಯೆ ಚಿತ್ರಿಸಲು ಪ್ರಯತ್ನಿಸುತ್ತದೆ ಪ್ರತಿಕೃತಿವಿಧಾನ ... ಇದ್ದುದನ್ನು ಇದ್ದಂತೆಯೆ, ನಡೆದುದನ್ನು ನಡೆದಂತೆಯೆ ಚಿತ್ರಿಸಬೇಕು ಎಂಬ ಪ್ರಯತ್ನಕ್ಕೆ ಹೋಗದೆ, ಇದ್ದದ್ದೂ ನಡೆದದ್ದೂ ತನಗೆ ಹೇಗೆ ಗೋಚರಿಸಿತೋ ಆ ಅನುಭವಕ್ಕೆ ಆಕಾರಕಲ್ಪನೆ ಮಾಡುವ ಪ್ರಯತ್ನದ ರೀತಿಯನ್ನು ಪ್ರತಿಮಾವಿಧಾನ ಎಂದು ಕರೆಯುತ್ತೇವೆ ... ಪ್ರತಿಕೃತಿಯ ದೃಷ್ಟಿ ಲೌಕಿಕ ದೃಷ್ಟಿ, ಅದರ ಪ್ರಯೋಜನವೂ ಸಾಮಾನ್ಯವಾಗಿ ಲೌಕಿಕವೆ. ಪ್ರತಿಮಾದೃಷ್ಟಿ ಅಪೂರ್ವವಾಗಿ ಲೌಕಿಕವಾಗಿದ್ದರೂ ಸಾಧಾರಣವಾಗಿ ಅಲೌಕಿಕ.”[1] ಇವು ಕ್ರಮವಾಗಿ ಅಭಿಧೆ ಮತ್ತು ಧ್ವನಿಗಳನ್ನು ಬೇರೆಯ ಮಾತುಗಳಲ್ಲಿ ಹೇಳುತ್ತಿವೆಯೆಂಬುದು ನಿಚ್ಚಳವಾಗಿದೆ.

ಪುಟ್ಟಪ್ಪನವರು ಪ್ರತಿಮೆಯ ಪರಿಕಲ್ಪನೆಯನ್ನು ಪಾಶ್ಚಾತ್ತ್ಯರ ‘ಇಮೇಜ್’ ಮತ್ತು ‘ಮಿಥ್’ಗಳಿಗೆ ಸಂವಾದಿಯಾಗಿ ಗ್ರಹಿಸಿದ್ದಾರೆ. ಇದು ಅವರ ಮುಂದಿನ ಮಾತುಗಳಿಂದ ಸ್ಪಷ್ಟವಾಗುತ್ತದೆ: “ಪ್ರತಿಮೆ ಯಾವ ಒಬ್ಬ ವ್ಯಕ್ತಿಯ ಒಂದು ಮನಸ್ಸಿನ ರಚನೆಯಲ್ಲ. ಅದು ಒಂದು ಧರ್ಮಕ್ಕೆ ಸೇರಿದ ಒಂದು ಜನಾಂಗದ ಸಮಷ್ಟಿಮನಸ್ಸಿನ ಸಾಮೂಹಿಕ ಸೃಜನೆ.”[2] “...ನಮ್ಮ ಪುರಾಣಗಳ ಅನಂತ ವಿಸ್ತೀರ್ಣದಲ್ಲಿ ಅರ್ಥಗರ್ಭಿತವಾದ ಅದ್ಭುತ ಕಥೋಪಕಥನ ಪ್ರತಿಮೆಗಳು ಅಸಂಖ್ಯವಾಗಿವೆ ... ದೇವಾಸುರರ ಅಮೃತಮಂಥನದ ಕಥಾಪ್ರತಿಮೆ, ಭಗೀರಥಪ್ರಯತ್ನದ ಗಂಗಾವತರಣದ ಕಥಾಪ್ರತಿಮೆ, ಬಲಿಚಕ್ರವರ್ತಿಯ ತಲೆಮೆಟ್ಟಿ ಪಾತಾಳಕ್ಕಟ್ಟಿದ ವಾಮನತ್ರಿವಿಕ್ರಮ ಕಥಾಪ್ರತಿಮೆ, ಹರನು ಮನ್ಮಥನನ್ನು ಸುಟ್ಟರೂ ಗಿರಿಜೆಯನ್ನು ಕೈಹಿಡಿದ ಕಥಾಪ್ರತಿಮೆ, ವಿಶ್ವಾಮಿತ್ರ ತ್ರಿಶಂಕು ಕಥಾಪ್ರತಿಮೆ, ಭಸ್ಮಾಸುರ ಮೋಹಿನೀ ಕಥಾಪ್ರತಿಮೆ, ಇತ್ಯಾದಿ ಇತ್ಯಾದಿ ಪ್ರಧಾನ ಪ್ರತಿಮೆಗಳೂ ಮಂದರಗಿರಿ, ವಾಸುಕಿ, ಹಾಲಾಹಲ, ಹಣೆಗಣ್ಣು, ತ್ರಿವಿಕ್ರಮಪಾದ, ಮೋಹಿನಿ ಇಂತಹ ಸಾವಿರಾರು ಅಂಗೋಪಾಂಗ ಪ್ರತಿಮೆಗಳೂ ವಿಪುಲ ಸಂಖ್ಯೆಯಲ್ಲಿ ನಮ್ಮ ಮಾತು, ಮತ, ಸಂಸ್ಕೃತಿ, ಸಾಹಿತ್ಯ, ಕಾವ್ಯ, ಕಲೆಗಳಲ್ಲಿ ಭಾವನೆಯ, ಚಿಂತನೆಯ, ಆಲೋಚನೆಯ, ಅನುಭವದ ರಕ್ತನಾಳಗಳಂತೆ, ಸ್ನಾಯುಗಳಂತೆ, ನರಗಳಂತೆ ಅವಯವೈಕ್ಯವಾಗಿವೆ.”[3]

ಕುವೆಂಪು ಪ್ರತಿಮೆಯನ್ನು ರೂಪಕಕ್ಕೆ ಸಂಬದ್ಧವಾಗಿಯೂ ಕಾಣಿಸುತ್ತಾರೆ. ಇದು ಪಾಶ್ಚಾತ್ತ್ಯ ಕಾವ್ಯಚಿಂತಕರು ಅಲಂಕಾರವಾಗಿ ಮಾತ್ರವಲ್ಲದೆ ವ್ಯಾಪಕವಾಗಿ ಗ್ರಹಿಸಿರುವ ‘ಮೆಟಫರ್’ ತತ್ತ್ವಕ್ಕೆ ಸಂವಾದಿಯಾಗಿದೆ. ವಿಶೇಷವೆಂದರೆ, ಪುಟ್ಟಪ್ಪನವರ ಪರಿಕಲ್ಪನೆಯಲ್ಲಿ ಉಪಮಾನ-ಉಪಮೇಯಗಳ ಅಭೇದವನ್ನು ಮೂಲವಾಗಿಸಿಕೊಂಡಿರುವ ರೂಪಕಾಲಂಕಾರವೂ ವಾಕ್ಯಮಾತ್ರವಿಶ್ರಾಂತವಾಗಿರದೆ ಹೆಚ್ಚಿನ ವ್ಯಾಪ್ತಿಯುಳ್ಳ ಮೆಟಫರ್ ತತ್ತ್ವವೂ ಸಮ್ಮಿಳಿತವಾಗಿವೆ. “ರೂಪಕ ಕಾವ್ಯದ ಜೀವಾಳದಂತಿದೆ ... ಕಾವ್ಯವೆಲ್ಲ ಪ್ರತಿಮಾಜಗತ್ತೆ ಆಗಿರುವುದರಿಂದ ಅಲ್ಲಿ ಅನಿವಾರ್ಯವಾಗಿ ರೂಪಕಕ್ಕೆ ಅಗ್ರಸ್ಥಾನ ... ಕಾವ್ಯದಲ್ಲಿ ರೂಪಕ ಕವಿಚೇತನದ ಶಕ್ತಿಮಾಪಕ ... ಅದೊಂದು ಶಬ್ದಪ್ರಕಾರ ಮಾತ್ರವಲ್ಲ; ಅರ್ಥಪ್ರಕಾರ ಮಾತ್ರವಲ್ಲ; ಅನುಭವಪ್ರಕಾರವೂ ಆಗಿದೆ ... ಇದ್ದುದು ಯಾವುದನ್ನಾದರೂ ತೀಕ್ಷ್ಣವಾಗಿ ಹೇಳುವುದಷ್ಟೆ ಅದರ ಕೆಲಸವಲ್ಲ; ಅದುವರೆಗೂ ಇಲ್ಲದುದನ್ನು ಸೃಷ್ಟಿಸುವುದೂ ಅದರ ಕರ್ತವ್ಯ ... ಅದೊಂದು ಅಪರೋಕ್ಷ ಸಾಕ್ಷಾತ್ಕಾರ. ಅನಿವಾರ್ಯತೆ, ಅಸದೃಶತೆ, ಏಕೈಕತಾಭಾವ - ಇವು ಉತ್ತಮ ರೂಪಕದ ಪ್ರಾಣಸ್ಪಂದನಗಳಾಗಿರುತ್ತವೆ.”[4] ಈ ಮಾತುಗಳು ನಮ್ಮಲ್ಲಿ ಬೆಳೆದುಬಂದ ರೂಪಕಾಲಂಕಾರವನ್ನು ಕುರಿತ ಚರ್ಚೆಯನ್ನು ಧನಾತ್ಮಕವಾಗಿ ಮುಂದುವರಿಸಿರುವುದಷ್ಟೇ ಅಲ್ಲದೆ ಅಲ್ಲಿ ಅವಿಮೃಷ್ಟವಾದ ಹೊಸ ವಿಷಯಗಳನ್ನೂ ಅರುಹಿವೆ. ಜೊತೆಗೆ ರೂಪಕಪ್ರಧಾನವಾದ ಪುಟ್ಟಪ್ಪನವರ ಕವಿತೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದನ್ನೂ ತಿಳಿಸುತ್ತಿವೆ. (ಮುಕ್ತಿರಾಹು, ಕೀರ್ತಿಶನಿ, ಕೃಪಾಕೃಪಾಣ, ಸಂಯಮಸಮ್ಮಾರ್ಜನಿ ಮುಂತಾದ ನೂರಾರು ವಿನೂತನ ರೂಪಕಗಳನ್ನು ಗಮನಿಸಬಹುದು.)

ಇದೇ ಸಂದರ್ಭದಲ್ಲಿ ‘ಡೆಡ್ ಮೆಟಫರ್ಸ್’ ಎಂದು ಪಶ್ಚಿಮದಲ್ಲಿ ಕೀಳಾಗಿ ಕಾಣಲ್ಪಟ್ಟ ಮೃತರೂಪಕಗಳನ್ನೂ ವಿವೇಚಿಸಿದ್ದಾರೆ. ಅವರ ದೃಷ್ಟಿಯಲ್ಲಿ “ಪ್ರತಿಮೆಯ ಪೌರಾಣಿಕತೆಯನ್ನಾಗಲಿ, ರೂಪಕದ ಪ್ರಾಚೀನತೆಯನ್ನಾಗಲಿ ಕಾವ್ಯದ ನಿಸ್ಸಾರತೆಗೆ ಸರ್ವಕಾರಣವನ್ನಾಗಿ ಒಡ್ಡುವುದರಲ್ಲಿ ಅರ್ಥವಿಲ್ಲ. ಮುಖ್ಯಕಾರಣವಿರುವುದು ಕವಿಶಕ್ತಿಯಲ್ಲಿ, ಕವಿಪ್ರತಿಭೆಯಲ್ಲಿ.” “ಪದಗಳನ್ನು ಮೃತಪದಗಳೆಂದು ಕೈಬಿಟ್ಟರೆ ಹೇಗೊ ಹಾಗೆಯೆ ರೂಪಕಗಳನ್ನೆಲ್ಲ ಮೃತರೂಪಕಗಳೆಂದು ಕೈಬಿಟ್ಟರೆ ಕಾವ್ಯಶ್ರೀ ದರಿದ್ರೆಯಾಗುತ್ತಾಳೆ.” “ನಿಜವಾಗಿಯೂ ಮೃತವಾಗಿರುವುದು ಆ ರೂಪಕಗಳಲ್ಲ; ಅವುಗಳನ್ನು ಶಕ್ತಿಯುತವಾಗಿ ಬಳಸಲಾರದ ಕವಿ, ಅಥವಾ ಅವುಗಳಿಗೆ ಜೀವತುಂಬಲಾರದ ಸಹೃದಯ.”[5] ಇದು ಸಾಹಿತ್ಯದ ಸ್ವಾಸ್ಥ್ಯವನ್ನು ಕಾಪಿಡುವ ನಿಲವು. ಮತ್ತಿದು ಮೃತರೂಪಕಗಳಿಗೆ ಮಾತ್ರವಲ್ಲದೆ ಕವಿಸಮಯವೇ ಮೊದಲಾದ ಸಾಂಪ್ರದಾಯಿಕ ಪರಿಕರಗಳಿಗೂ ಅನ್ವಯಿಸುತ್ತದೆ. ಒಟ್ಟಿನಲ್ಲಿ ಕುವೆಂಪು ಅವರು ಪರಂಪರೆಯನ್ನು ಬಲಿಗೊಡದೆ, ಕವಿಯ ಸ್ವಾತಂತ್ರ್ಯ-ಸ್ವೋಪಜ್ಞತೆಗಳನ್ನೂ ಗಾಸಿಗೊಳಿಸದೆ ಒಳ್ಳೆಯ ಹದವನ್ನು ಕಾಪಾಡಿಕೊಂಡಿದ್ದಾರೆ.

ಅಲಂಕಾರ, ಉಪಮೆ

ಅಲಂಕಾರಸಾಮಾನ್ಯವನ್ನು, ಕಾವ್ಯಕ್ಕೆ ಅಲಂಕಾರದ ಆವಶ್ಯಕತೆಯನ್ನು ಕುರಿತು ಕುವೆಂಪು ಬೆಲೆಯುಳ್ಳ ಮಾತನ್ನಾಡಿದ್ದಾರೆ: “ಕಾವ್ಯಕ್ಕೂ ಅಲಂಕಾರಗಳಿಗೂ ಇರುವ ಪ್ರಣಯವು ಚಿತ್ರಕಲೆಗೂ ವರ್ಣಗಳಿಗೂ ಇರುವ ಪರಸ್ಪರಾನುರಾಗದಂತೆ ಚಿರಸಂಯುತವಾದುದು. ವರ್ಣಶಿಲ್ಪಿಯ ಭಾವಪ್ರಕಾಶನಕ್ಕೆ ಬಣ್ಣಗಳ ಸಹಕಾರ ಸ್ನೇಹಗಳು ಎಷ್ಟರಮಟ್ಟಿಗೆ ಆವಶ್ಯಕವೊ ಹಾಗೆಯೆ ಕವಿಯ ಆತ್ಮದ ಸುರುಚಿರಾನುಭವಗಳ ಸುಂದರಾವಿರ್ಭಾವಕ್ಕೆ ಅಲಂಕಾರಗಳು ಆವಶ್ಯಕ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಾವ್ಯವೆಂಬುದೆಲ್ಲ ಅಲಂಕೃತಾನುಭವ ಎಂದು ಹೇಳಬಹುದು.”[6] ಕಡೆಯ ಮಾತು ಕಾವ್ಯಾನುಭವಕ್ಕೆ ಹೊಸ ಒಳನೋಟವನ್ನು ಒದಗಿಸಿದೆ. ನಮ್ಮಲ್ಲಿ ಅಲಂಕಾರವನ್ನು ನಿರ್ವಚಿಸುತ್ತ ಯಾವುದರಿಂದ ಉದ್ದಿಷ್ಟ ವಸ್ತು ಸುಂದರವಾಗುವುದೋ ಪರ್ಯಾಪ್ತಿಯನ್ನು ಕಾಣುವುದೋ ಅದು ಅಲಂಕಾರವೆಂದಿದ್ದಾರೆ (ಅರಂಭಾವಃ, ಅಲಂಭಾವಃ). “ಉತ್ಕರ್ಷ-ಅಪಕರ್ಷಗಳಿಲ್ಲದೆ ಯಾವ ವಿಷಯವೂ ಸೊಗಯಿಸುವುದಿಲ್ಲ; ಇದಕ್ಕಾಗಿಯೇ ಕವಿಗಳು ಅಲಂಕಾರಗಳನ್ನು ಆಶ್ರಯಿಸುತ್ತಾರೆ”[7] ಎಂದು ಮಹಿಮಭಟ್ಟ ಅಲಂಕಾರಪ್ರಯೋಗಕ್ಕೆ ಕಾರಣವನ್ನು ಕೊಟ್ಟಿದ್ದಾನೆ. ಇದರ ಪ್ರಕಾರ ಲೋಕದ ವಸ್ತುಗಳಿಗೆ ಸುಂದರವಾಗಿ ಏನನ್ನಾದರೂ ಸೇರಿಸಿಯೋ ಅವುಗಳಿಂದ ಏನನ್ನಾದರೂ ಕಳೆದೋ ವರ್ಣಿಸುವ ಮಾಧ್ಯಮ ಅಲಂಕಾರವೆಂದಾಗುತ್ತದೆ. ಕೂಡಿ ಕಳೆಯುವ ಕ್ರಿಯೆ ಸಮಂಜಸವಾಗಿದೆಯೇ ಇಲ್ಲವೇ ಎಂದು ನೋಡಿಕೊಳ್ಳುವುದು ಔಚಿತ್ಯ. ಈ ಹಿನ್ನೆಲೆಯಲ್ಲಿ ‘ಕಾವ್ಯವು ಅಲಂಕೃತಾನುಭವ’ ಎಂಬ ಮಾತು ಅರ್ಥಪೂರ್ಣವೆನಿಸದಿರದು. ಲೋಕದ ಅನುಭವವನ್ನೇ ಆಧರಿಸುವ ಕಾವ್ಯ ಅದನ್ನು ಇನ್ನಷ್ಟು ಏಕಾಗ್ರವಾಗಿ, ಸುಂದರವಾಗಿ ಕಟ್ಟಿಕೊಡುತ್ತದೆ. ಲೋಕಾನುಭವ ಬಂಗಾರದ ಗಟ್ಟಿಯಾದರೆ, ಕಾವ್ಯಾನುಭವ ಅದರಿಂದ ತಯಾರಿಸಿದ ಅಂದವಾದ ಆಭರಣ. ಇದೇ ಅಭಿಪ್ರಾಯವನ್ನು ವಿಖ್ಯಾತ ವಿದ್ವಾಂಸ ಡಾ|| ವಿ. ಎಸ್. ಸುಕಥನಕರ್ ಕೊಂಚ ಭಿನ್ನವಾಗಿ ವ್ಯಕ್ತಪಡಿಸಿದ್ದಾರೆ.[8]

ಅಲಂಕಾರಗಳ ಪೈಕಿ ಸಾದೃಶ್ಯಮೂಲದ ನುಡಿಬೆಡಗುಗಳು ಮೂಲಭೂತವಾದುವು. ಇವುಗಳಲ್ಲಿ ಪ್ರಮುಖವಾದುದು ಉಪಮೆ. ಹಿರಿದಾದ ವ್ಯಾಪ್ತಿಯನ್ನುಳ್ಳ ಉಪಮೆಯು “ವಿಸ್ಮಯವೆಸಗುವ ವಿವಿಧ ಪಾತ್ರಗಳನ್ನು ನಿರ್ವಹಿಸುವ ನಟಿಯಂತೆ ಕಾವ್ಯರಂಗದಲ್ಲಿ ಸಹೃದಯರ ಹೃದಯಗಳನ್ನು ತಣಿಸುತ್ತಾಳೆ” ಎಂದು ಅಪ್ಪಯ್ಯದೀಕ್ಷಿತರು ಕೊಂಡಾಡಿದ್ದಾರೆ.[9] ಇಷ್ಟು ಹಿರಿದಾದ ಅಲಂಕಾರವನ್ನು ಕುರಿತು ಕುವೆಂಪು ಹೊಸ ದಿಕ್ಕಿನಲ್ಲಿ ಆಲೋಚಿಸಿದ್ದಾರೆ. ಅವರ ಪ್ರಕಾರ “ಒಂದು ಪ್ರಕೃತ ವಿಷಯದ ಭಾವಕೋಶಕ್ಕೆ ಮತ್ತೊಂದು ಅನ್ಯವಿಷಯದ ಭಾವಕೋಶವನ್ನು ಸಂಗಗೊಳಿಸಿ, ಪ್ರಕೃತ ವಿಷಯದ ಭಾವಕೋಶದ ವೃದ್ಧಿಯಿಂದ ರಸವೃದ್ಧಿಯಾಗುವಂತೆ ಮಾಡುವುದೇ ಉಪಮಾ ಅಲಂಕಾರದ ಉದ್ದೇಶ. ಮೊದಲನೆಯದರ ಭಾವಕೋಶ ಪುಷ್ಟಿಗೊಳ್ಳಬೇಕಾದರೆ ಎರಡನೆಯದರ ಭಾವಕೋಶ ಅದಕ್ಕೆ ಅವಿರುದ್ಧವಾಗಿರಬೇಕೆಂದು ಬೇರೆ ಹೇಳಬೇಕಾಗಿಲ್ಲ ... ಭಾವಕೋಶವೆಂದರೆ ಪದದ ಅರ್ಥವನ್ನು ಕೇಂದ್ರಬಿಂದುವಾಗುಳ್ಳ ರಾಗಾನುಭವಗಳ, ನಿಷ್ಕೃಷ್ಟ ತೀರವಿಲ್ಲದ ಅಸ್ಪಷ್ಟ ಪಾರಾವಾರ ಅಥವಾ ಪರಿವೇಷ. ಭಾವಕೋಶವು ವ್ಯಕ್ತಿಯ ಸ್ವಯಂ ಅನುಭವದಿಂದ ಮಾತ್ರ ವೃದ್ಧಿಯಾಗುತ್ತದೆ.”[10] ಇಲ್ಲಿ ಪ್ರಕೃತ ವಿಷಯವೆಂದು ಉಪಮೇಯವನ್ನೂ ಅನ್ಯವಿಷಯವೆಂದು ಉಪಮಾನವನ್ನೂ ಸೂಚಿಸಲಾಗಿದೆ. ‘ಅವಿರುದ್ಧ’ ಎಂಬ ಮಾತಿನಲ್ಲಿ ಸಾಧಾರಣಧರ್ಮದ ಸೂಚನೆಯಿದೆ. ಹೀಗೆ ಉಪಮೆಯ ಘಟಕಗಳನ್ನು ಭಾವಕೇಂದ್ರಿತವಾಗಿ ವರ್ಣಿಸುವಲ್ಲಿ ಹೆಚ್ಚಿನ ಔಚಿತ್ಯವಿದೆ. ಪ್ರತಿಯೊಂದು ಶಬ್ದಕ್ಕೂ ತನ್ನದಾದ ಭಾವಕೋಶವಿರುತ್ತದೆ ಎಂಬ ಇಲ್ಲಿಯ ಕಾಣ್ಕೆ ಮಹತ್ತ್ವದ್ದು. ಪದಾರ್ಥವೊಂದನ್ನು ನಿರ್ದೇಶಿಸಲು ನಿರ್ದಿಷ್ಟವಾದ ಪದವೊಂದನ್ನು ಬಳಸುವಾಗ ಅದರ ಸಂಕೇತಿತ ಅರ್ಥ ನಮ್ಮ ಗಮನದಲ್ಲಿರುತ್ತದೆ. ಇದಲ್ಲದೆ ಶತಶತಮಾನಗಳಿಂದ ವಿವಿಧ ಸನ್ನಿವೇಶಗಳಲ್ಲಿ ಹಲವು ಬಗೆಯ ಜನರಿಂದ ಪ್ರಯುಕ್ತವಾದ ಆ ಶಬ್ದಕ್ಕೆ ನಿರ್ದಿಷ್ಟವಲ್ಲದ ಹೆಚ್ಚುವರಿ ಅರ್ಥವು ಪ್ರಾಪ್ತವಾಗಿರುತ್ತದೆ. ಇದನ್ನು ಪದಪರಮಾತ್ಮನ ಪ್ರಭಾವಳಿ ಎಂದು ಕರೆಯಬಹುದು. ಇದೇ ಅದರ ಭಾವಕೋಶ. ಭಾವಕೋಶಗಳಿಗೆ ಸಂವಾದವುಂಟಾದಾಗ ಉಪಮೆ ಆವಿರ್ಭವಿಸುತ್ತದೆ. ಒಟ್ಟಿನಲ್ಲಿ ಕುವೆಂಪು ಉಪಮೆಯ ನೆಲೆಯನ್ನು ವಸ್ತುಗಳ ಭೌತಸಾದೃಶ್ಯದಲ್ಲಿ ಕಾಣಿಸದೆ ಭಾವಸಾದೃಶ್ಯದಲ್ಲಿ ಕಾಣಿಸಿದ್ದಾರೆ.

ಉಪಮೆಯು ಸದೃಶವಸ್ತುಗಳನ್ನು ಕುರಿತ ಪ್ರಾಥಮಿಕ ಜ್ಞಾನಕ್ಕೂ ಸಹಕಾರಿಯಾಗುತ್ತದೆ. ಇದನ್ನು ಕುರಿತು ಅವರು ಹೀಗೆನ್ನುತ್ತಾರೆ: “ಉಪಮೆಯನ್ನು ಅಲಂಕಾರವೆಂದು ಕರೆದರೂ ಅದರಿಂದ ಒಂದೊಂದು ವೇಳೆ ಉಪಕಾರವೂ ಆಗುವ ಸಂಭವವಿದೆ. ಚೆನ್ನಾಗಿ ಅನುಭವಕ್ಕೆ ಬಂದ ವಸ್ತುವಿನ ಸಾದೃಶ್ಯವನ್ನು ಹೇಳಿ, ಚೆನ್ನಾಗಿ ಅನುಭವಕ್ಕೆ ಬಾರದ ವಸ್ತುವಿನ ಅನುಭವವನ್ನು ಆದಷ್ಟು ಮಟ್ಟಿಗಾದರೂ ಮಾಡಿಕೊಡಬಹುದು. ಆದರೆ ... ಕಾವ್ಯದಲ್ಲಿ ಉಪಕಾರಕ್ಕಾಗಿ ಉಪಮೆಯನ್ನು ಉಪಯೋಗಿಸುವುದಕ್ಕಿಂತಲೂ ಅಲಂಕಾರಕ್ಕಾಗಿ ಉಪಯೋಗಿಸುವುದೇ ಹೆಚ್ಚು. ಕೆಲವು ಸಾರಿ ಉಪಮೆ ಎರಡು ಕೆಲಸಗಳನ್ನೂ ಮಾಡುವುದು, ಗಂಗಾವಾರಿ ದೇಹದ ಕೊಳೆಯನ್ನು ತೊಳೆದು ಆತ್ಮದ ಪಾಪವನ್ನೂ ಪರಿಹರಿಸಿದಂತೆ.”[11] ಉಪಮೆಯ ಈ ಆಯಾಮವನ್ನು ಅನುಲಕ್ಷಿಸಿಯೇ ನಮ್ಮ ಪ್ರಾಚೀನ ದಾರ್ಶನಿಕರಲ್ಲಿ ಕೆಲವರು - ವಿಶೇಷವಾಗಿ ನೈಯಾಯಿಕರು - ಅದನ್ನೊಂದು ಪ್ರಮಾಣವಾಗಿ ಅಂಗೀಕರಿಸಿದರು.

ಉಪಮೆಯಲ್ಲಿ ರೂಪೋಪಮೆ, ಗುಣೋಪಮೆ ಮತ್ತು ಭಾವೋಪಮೆ ಎಂದು ಮೂರು ಬಗೆಗಳಿವೆ ಎಂದು ಕುವೆಂಪು ಹೇಳಿದ್ದಾರೆ: “ಸಾದೃಶ್ಯವು ರೂಪದಲ್ಲಿರಬಹುದು, ಗುಣದಲ್ಲಿರಬಹುದು ಅಥವಾ ರೂಪ ಗುಣಗಳಲ್ಲಿ ಸಂಪೂರ್ಣ ವ್ಯತ್ಯಾಸವಿರುವ ಎರಡು ವಸ್ತುಗಳು ಪ್ರೇಕ್ಷಕನ ಹೃದಯದಲ್ಲಿ ಉನ್ಮೇಷಗೊಳಿಸುವ ಒಂದೇ ತೆರನಾದ ಭಾವದಲ್ಲಿರಬಹುದು.”[12] ರೂಪೋಪಮೆ ಮತ್ತು ಗುಣೋಪಮೆಗಳ ಸ್ವರೂಪ ತೊಡಕಿಲ್ಲದೆ ತಿಳಿಯುತ್ತದೆ. ಭಾವೋಪಮೆಗೆ ಸ್ವಲ್ಪ ವಿವರಣೆ ಬೇಕಾಗುತ್ತದೆ. ಅದಕ್ಕಾಗಿ ಪುಟ್ಟಪ್ಪನವರ ನುಡಿಯನ್ನೇ ಅವಲಂಬಿಸೋಣ: “ಭಾವೋಪಮೆಯಲ್ಲಿ ವಸ್ತುವಿನಿಂದ ಉನ್ಮೇಷವಾಗುವ ಭಾವಕ್ಕೆ ತತ್ತ್ವತಃ ಅದರ ಗುಣಗಳೆಯೆ ಕಾರಣವಾದರೂ ಗುಣೋಪಮೆಯಲ್ಲಿರುವಂತೆ ಕಾರಣಗಳು ಅಷ್ಟು ಪ್ರತ್ಯಕ್ಷವಾಗಿರುವುದಿಲ್ಲ ... ಭಾವೋಪಮೆಯು ವ್ಯಕ್ತಿಯ ತಾತ್ಕಾಲಿಕ ಮನೋವೃತ್ತಿಗೆ ಅನುಸಾರವಾಗಿ ಮೈದೋರುವುದು.” ಇದಕ್ಕೆ ಉದಾಹರಣೆಗಳನ್ನೂ ಅವರೇ ನೀಡಿದ್ದಾರೆ: “ಬನದ ಕಣ್ಣೆಂಬಂತೆ ತಿಳಿಗೊಳವು ರಂಜಿಸಿತು,” “ಹಸುರ ಮೇಲೆ ಎಳೆಬಿಸಿಲು ಹಸುಳೆಯಂತೆ ನಲಿದಾಡಿತು,” “ಚಿಟ್ಟೆಯು ಬನದ ಬಣ್ಣಗಳ ಕವಿತೆಯಂತೆ ಶೋಭಿಸಿತು” ಇತ್ಯಾದಿ. ಇವುಗಳ ಜಾಡನ್ನು ಹಿಡಿದು ಭಾವೋಪಮೆಯನ್ನು ಅರ್ಥೈಸಲೆಳಸಿದರೆ ಅದು ದೃಷ್ಟಾಂತ, ನಿದರ್ಶನಾ, ಉತ್ಪ್ರೇಕ್ಷೆ, ಅತಿಶಯೋಕ್ತಿ ಮೊದಲಾದ ಇನ್ನಿತರ ಅಲಂಕಾರಗಳ ಛಾಯೆಯನ್ನು ಹೊಂದಿರುವಂತೆ ತೋರುತ್ತದೆ. ಆದರೆ ಇವುಗಳಲ್ಲಿ ಹೆಚ್ಚಿನವು ಸಾದೃಶ್ಯಮೂಲದವು ಎಂಬುದು ನಿರ್ವಿವಾದ. ಇನ್ನೂ ಮುಂದುವರಿದು ಆಲೋಚಿಸಿದರೆ, ಮೂರ್ತಕ್ಕೆ ಅಮೂರ್ತವನ್ನೂ ಅಮೂರ್ತಕ್ಕೆ ಮೂರ್ತವನ್ನೂ ಒಪ್ಪವಿಟ್ಟಾಗ ಅದು ಭಾವೋಪಮೆ ಎಂದು ಕರೆಸಿಕೊಳ್ಳುತ್ತದೆ ಎಂಬುದು ಕುವೆಂಪು ಅವರ ಇಂಗಿತ ಇದ್ದಿರಬೇಕೆಂದು ತೋರುತ್ತದೆ. ಇದು ಅವರಿಗೆ ಮೆಚ್ಚಾದ ಕಾವ್ಯಪದ್ಧತಿಯೂ ಹೌದು. ಈ ಪರಿಕಲ್ಪನೆಗಳಿಗೆ ಅವರು ಹೆಚ್ಚಾಗಿ ಪಾಶ್ಚಾತ್ತ್ಯ ಸರಣಿಯನ್ನು ಆಧರಿಸಿದ್ದಾರೆ; ತಮ್ಮ ಹೊಳಹುಗಳನ್ನೂ ನೆಮ್ಮಿದ್ದಾರೆ. ಇವುಗಳ ಜೊತೆಗೆ ಭಾರತೀಯ ಕಾವ್ಯಮೀಮಾಂಸೆಯ ಮೂಲಗ್ರಂಥಗಳನ್ನು ಅಭ್ಯಾಸ ಮಾಡಿದ್ದರೆ ವಿಚಾರಗಳಿಗೆ ನಿಷ್ಕೃಷ್ಟತೆ ಬರುತ್ತಿತ್ತು; ಈಗಾಗಲೇ ಪರಂಪರೆಯಲ್ಲಿ ವಿವೃತವಾಗಿರುವ ತತ್ತ್ವಗಳೊಡನೆ ಸಾಮ್ಯ ಕಂಡು ಚಿಂತನೆಯ ಅನುಸ್ಯೂತತೆ ಏರ್ಪಡುತ್ತಿತ್ತು.

ಅವರು ಉಪಮೆಯಲ್ಲಿ ಮಹೋಪಮೆಯೆಂಬ ಮತ್ತೊಂದು ಪ್ರಭೇದವನ್ನು ಪಾಶ್ಚಾತ್ತ್ಯಮೂಲದಿಂದ ಗ್ರಹಿಸಿದ್ದಾರೆ.

ಪಾಶ್ಚಾತ್ತ್ಯಪ್ರಭಾವ

ಮಹೋಪಮೆ ಎಂಬುದು ‘ಹೋಮರಿಕ್ ಸಿಮಿಲಿ’ ಅಥವಾ ‘ಎಪಿಕ್ ಸಿಮಿಲಿ’ ಎಂಬುದರ ಕನ್ನಡ ರೂಪ; ಪುಟ್ಟಪ್ಪನವರೇ ನಮ್ಮ ನುಡಿಗೆ ತಂದುಕೊಟ್ಟ ಸೊಬಗಿನ ಒಂದು ಪರಿ. ಇದರ ಗುಣ-ಲಕ್ಷಣಗಳನ್ನು ಅವರೇ ಹೀಗೆ ವಿವರಿಸಿದ್ದಾರೆ: “ಮಹೋಪಮೆ ಎಂದರೆ ಮಹಾ ಉಪಮೆ. ಮಹಾ ಎಂದರೆ ದೀರ್ಘ ಎಂದಷ್ಟೇ ಅರ್ಥವಾಗದಿದ್ದರೂ ದೀರ್ಘತೆಯೂ ಅದಕ್ಕೊಂದು ಅನಿವಾರ್ಯವಾದ ಆತ್ಮಲಕ್ಷಣ ... ಓದುಗನೇ ಬಹುಕಾಲದ ಪ್ರಯತ್ನದಿಂದಲೂ ಶ್ರಮದಿಂದಲೂ ಪಡೆಯಬಹುದಾದ ಅನುಭವಗಳನ್ನೆಲ್ಲ ಮಹೋಪಮೆ ಒಟ್ಟಿಗೆ ತಂದುಕೊಡುತ್ತದೆ ... ಪರಿಚಿತವಾದುದರ ಸಹಾಯದಿಂದ ಪರಿಚಯದೂರವಾದುದನ್ನೂ ಅನುಭವಕ್ಕೆ ತರುತ್ತದೆ ... ಸಂಸ್ಕಾರಗಳನ್ನು ಉದ್ದೀಪನಗೊಳಿಸಿ ಮಹೋಪಮೆ ತನ್ನ ಕಾರ್ಯಸಾಧನೆ ಮಾಡಿಕೊಳ್ಳುತ್ತದೆ. ಸಂಸ್ಕಾರಗಳನ್ನು ಹೊಸದಾಗಿ ಸೃಷ್ಟಿಸಲೂ ಪ್ರಯತ್ನಿಸುತ್ತದೆ.”[13] ಅದರ ಸಾಮೂಹಿಕ ಸೌಂದರ್ಯವನ್ನು ಒಟ್ಟಾಗಿ ಸವಿಯಬೇಕೇ ಹೊರತು ಒಂದೊಂದು ಅವಯವವನ್ನೂ ಸೀಳಿ ನೋಡಬಾರದೆಂಬ ಎಚ್ಚರಿಕೆಯನ್ನೂ ನೀಡುತ್ತಾರೆ: “ಸಾದೃಶ್ಯಸಂಪತ್ತಿಯ ಆಯವ್ಯಯದ ಪಟ್ಟಿಯನ್ನು ಲೆಕ್ಕಾಚಾರ ಹಾಕಿ ತರುವಾಯ ಉಪಮೆಯಿಂದ ರಸವನ್ನು ಹಿಂಡಲು ಹೊರಟರೆ ಉತ್ತಮ ಪರಿಣಾಮ ಲಭಿಸುವುದಿಲ್ಲ.”[14] ಮಹೋಪಮೆಯಲ್ಲಿ ನಾವು ಹಿಂದೆ ಗಮನಿಸಿದ ಭಾವೋಪಮೆಯ ಪಾಲೇ ಹೆಚ್ಚು. ಕುವೆಂಪು ಅವರು ಇದರ ಲಕ್ಷಣವನ್ನು ಮೊತ್ತಮೊದಲ ಬಾರಿಗೆ ಕನ್ನಡದಲ್ಲಿ ನಿರೂಪಿಸಿದ್ದಷ್ಟೇ ಅಲ್ಲದೆ ಅದರ ಹತ್ತಾರು ಲಕ್ಷ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಸ್ವಯಂ ರಚಿಸಿ ತೋರಿಸಿದ್ದಾರೆ. ಅವರ ‘ಚಿತ್ರಾಂಗದಾ’ ಎಂಬ ಖಂಡಕಾವ್ಯದಲ್ಲಿ ಮೊದಲ ಬಾರಿಗೆ ಬಳಕೆಯಾದ ಮಹೋಪಮೆ ‘ಶ್ರೀರಾಮಾಯಣದರ್ಶನಂ’ನಲ್ಲಿ ತನ್ನ ವಿಶ್ವರೂಪವನ್ನು ತೋರಿಸಿದೆ. ಇದು ಕಾವ್ಯಮೀಮಾಂಸೆಗೆ ಅವರಿತ್ತ ಕೊಡುಗೆ.

ಪಾಶ್ಚಾತ್ತ್ಯರ ಪ್ರಭಾವ ಕುವೆಂಪು ಅವರ ಮೇಲೆ ಆಗಿರುವ ರೀತಿಯನ್ನು ಪ್ರಭುಶಂಕರ, ಎಲ್. ಎಸ್. ಶೇಷಗಿರಿ ರಾವ್ ಮುಂತಾದ ವಿದ್ವಾಂಸರು ಚೆನ್ನಾಗಿ ಚರ್ಚಿಸಿದ್ದಾರೆ.[15] ಅವರಿಗೆ ಹೋಮರಿನ ವಿಶಾಲವಾದ ಹರಹು; ಶೆಲ್ಲಿಯ ಸ್ವತಂತ್ರಪ್ರವೃತ್ತಿ; ವರ್ಡ್ಸ್ವರ್ತ್ನ ಪ್ರಕೃತಿಪ್ರೀತಿ; ಮಿಲ್ಟನ್‌ನ ಪಾಂಡಿತ್ಯ, ಮತಶ್ರದ್ಧೆ ಮತ್ತು ಉದ್ದಾಮತೆಗಳು ಮೆಚ್ಚಾಗಿದ್ದುವು. ಈ ಗುಣಗಳನ್ನೇ ಆಯಾ ಕವಿಗಳಿಂದ ಗ್ರಹಿಸಿದ್ದಾರೆ. ಇವಲ್ಲದೆ ಮಿಲ್ಟನ್ ಮಾಡುವ ಸ್ಫೂರ್ತಿದೇವತೆಯ ಪ್ರಾರ್ಥನೆಯ ಪ್ರೇರಣೆಯಿಂದ ರಾಮಾಯಣದರ್ಶನದ ಹಲವೆಡೆ ಸೊಗಸಾದ ಪ್ರಾರ್ಥನೆಗಳನ್ನು ರಚಿಸಿದ್ದಾರೆ (ಆರಂಭದಲ್ಲಿ ಮಾತ್ರವಲ್ಲದೆ ಎಂಟನೆಯ ಸಂಚಿಕೆಯ ಮೊದಲಿನಲ್ಲಿ ಹಾಗೂ ಕಿಷ್ಕಿಂಧಾಸಂಪುಟದ ಮೊದಲ ಸಂಚಿಕೆಯ ಪ್ರಾರಂಭದಲ್ಲಿ). ಇನ್ನು ಮಹೋಪಮೆಯನ್ನು ಈಗಾಗಲೇ ಪರಿಶೀಲಿಸಿದ್ದೇವೆ. ನಾಟಕೀಯತೆ, ಎರಡು ಸಮಾನಾಂತರ ಸನ್ನಿವೇಶಗಳ ಕಥನ, “ಕೃತಿಯ ಕ್ರಿಯೆ ನಡೆಯಿತೆಂದು ಭಾವಿಸಬಹುದಾದ ಕಾಲದನಂತರ ನಡೆದ ಎಷ್ಟೋ ಘಟನೆಗಳನ್ನೂ ಕಾವ್ಯ ತನ್ನ ವೃತ್ತದೊಳಕ್ಕೆ ಸೆಳೆದುಕೊಳ್ಳುವುದು”[16] - ಇವೇ ಮುಂತಾದ ರಾಚನಿಕ ವಿಧಾನಗಳಿಗೂ ಪಾಶ್ಚಾತ್ತ್ಯ ಪ್ರಭಾವವನ್ನು ವಿಮರ್ಶಕರು ಕಾಣಿಸಿದರೂ ಇವು ಭಾರತೀಯ ಕಾವ್ಯಗಳಲ್ಲಿಯೂ ಕಾಣುವ ಕಾರಣ ಪ್ರತ್ಯೇಕವಾಗೇನೂ ಗಣಿಸಬೇಕಿಲ್ಲ.

ಏನೇ ಆಗಲಿ, ಪುಟ್ಟಪ್ಪನವರು ತಾವು ಪಡೆದ ಪ್ರೇರಣೆಯ ನೆರಳೂ ಕಾಣದಂತೆ ಅವುಗಳನ್ನು ಸ್ವಂತಿಕೆಯಿಂದ ಬಳಸಿಕೊಂಡಿದ್ದಾರೆ. ಇದು ಅವರ ಶಕ್ತಿ.

 



[1] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೩೫-೩೬

[2] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೪೯೯

[3]   ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೫೧೩

ಮಿಥ್‌ಗಳನ್ನು ಕುರಿತ ಪಾಶ್ಚಾತ್ತ್ಯರ ಆಲೋಚನೆಗಳನ್ನು ಸಂಗ್ರಹವಾಗಿ ತಿಳಿಯಲು ಥಾಮಸ್ ಕ್ಯಾಂಪ್‌ಬೆಲ್ ಬರೆದಿರುವ ‘ದ ಪವರ್ ಆಫ್ ಮಿಥ್’ ಕೃತಿಯನ್ನು ಓದಬಹುದು.

[4] ದಾರ್ಶನಿಕ ಕಾವ್ಯಮೀಮಾಂಸೆ, ಪು. ೮೩, ೮೮, ೯೨

[5] ದಾರ್ಶನಿಕ ಕಾವ್ಯಮೀಮಾಂಸೆ, ಪು. ೯೦, ೯೨, ೯೩

[6] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೫೮೫

[7]   “ವಿನೋತ್ಕರ್ಷಾಪಕರ್ಷಾಭ್ಯಾಂ ಸ್ವದಂತೇಽರ್ಥಾ ನ ಜಾತುಚಿತ್ | ತದರ್ಥಮೇವ ಕವಯೋಽಲಂಕಾರಾನ್ ಪರ್ಯುಪಾಸತೇ ||” (ವ್ಯಕ್ತಿವಿವೇಕ, ೨.೧೪)

[8]  “The value to us of a work of art or literature depends, I think, primarily on two factors: firstly, the intensity with which we are transported to a new world; and, secondly, the nature of the world to which we are transported.” (On the Meaning of the Mahābhārata, p. 35)

[9]   “ಉಪಮೈಕಾ ಶೈಲೂಷೀ ಸಂಪ್ರಾಪ್ತಾ ಚಿತ್ರಭೂಮಿಕಾಭೇದಾನ್ | ರಂಜಯತಿ ಕಾವ್ಯರಂಗೇ ನೃತ್ಯಂತೀ ತದ್ವಿದಾಂ ಚೇತಃ ||” (ಚಿತ್ರಮೀಮಾಂಸಾ, ೨.೧)

[10] ದಾರ್ಶನಿಕ ಕಾವ್ಯಮೀಮಾಂಸೆ, ಪು. ೯೮

[11] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೫೮೮

[12] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೫೮೯

[13] ದಾರ್ಶನಿಕ ಕಾವ್ಯಮೀಮಾಂಸೆ, ಪು. ೯೯, ೧೦೨, ೧೦೪, ೧೦೬

[14] ದಾರ್ಶನಿಕ ಕಾವ್ಯಮೀಮಾಂಸೆ, ಪು. ೧೦೦

[15] ನೋಡಿ: ‘ಪಾಶ್ಚಾತ್ಯ ರೊಮಾಂಟಿಕ್ ಕವಿಗಳು ಮತ್ತು ಕುವೆಂಪು’ - ಪ್ರಭುಶಂಕರ (ಶ್ರೀ ಕುವೆಂಪು, ಪು. ೭೧-೯೦); ‘ಪಾಶ್ಚಾತ್ಯ ಮಹಾಕಾವ್ಯಗಳಿಂದ ಕುವೆಂಪು ಪಡೆದ ಪ್ರೇರಣೆಗಳು’, ‘ಕುವೆಂಪು ಮತ್ತು ಹೋಮರ್’, ‘ಕುವೆಂಪು ಮತ್ತು ಮಹೋಪಮೆ’ - ಎಲ್. ಎಸ್. ಎಸ್. (ಪ್ರೊ|| ಎಲ್. ಎಸ್. ಶೇಷಗಿರಿ ರಾವ್ ಸಮಗ್ರ ವಿಮರ್ಶಾ ಸಾಹಿತ್ಯ, ಸಂ. ೧, ಪು. ೫೫೪-೫೮೧, ೬೦೫-೬೧೧)

[16] ಶ್ರೀ ಕುವೆಂಪು, ಪು. ೯೯

To be continued.

 

Author(s)

About:

Shashi Kiran B N holds a bachelor’s degree in Mechanical Engineering and a master's degree in Sanskrit. His interests include Indian aesthetics, Hindu scriptures, Sanskrit and Kannada literature and philosophy.

Prekshaa Publications

Indian Perspective of Truth and Beauty in Homer’s Epics is a unique work on the comparative study of the Greek Epics Iliad and Odyssey with the Indian Epics – Rāmāyaṇa and Mahābhārata. Homer, who laid the foundations for the classical tradition of the West, occupies a stature similar to that occupied by the seer-poets Vālmīki and Vyāsa, who are synonymous with the Indian culture. The author...

Karnataka’s celebrated polymath, D V Gundappa brings together in the sixth volume of reminiscences character sketches of prominent public figures, liberals, and social workers. These remarkable personages hailing from different corners of South India are from a period that spans from the late nineteenth century to the mid-twentieth century. Written in Kannada in the 1970s, these memoirs go...

An Introduction to Hinduism based on Primary Sources

Authors: Śatāvadhānī Dr. R Ganesh, Hari Ravikumar

What is the philosophical basis for Sanātana-dharma, the ancient Indian way of life? What makes it the most inclusive and natural of all religio-philosophical systems in the world?

The Essential Sanātana-dharma serves as a handbook for anyone who wishes to grasp the...

Karnataka’s celebrated polymath, D V Gundappa brings together in the fifth volume, episodes from the lives of traditional savants responsible for upholding the Vedic culture. These memorable characters lived a life of opulence amidst poverty— theirs  was the wealth of the soul, far beyond money and gold. These vidvāns hailed from different corners of the erstwhile Mysore Kingdom and lived in...

Padma Bhushan Dr. Padma Subrahmanyam represents the quintessence of Sage Bharata’s art and Bhārata, the country that gave birth to the peerless seer of the Nāṭya-veda. Padma’s erudition in various streams of Indic knowledge, mastery over many classical arts, deep understanding of the nuances of Indian culture, creative genius, and sublime vision bolstered by the vedāntic and nationalistic...

Bhārata has been a land of plenty in many ways. We have had a timeless tradition of the twofold principle of Brāhma (spirit of wisdom) and Kṣāttra (spirit of valour) nourishing and protecting this sacred land. The Hindu civilisation, rooted in Sanātana-dharma, has constantly been enriched by brāhma and safeguarded by kṣāttra.
The renowned Sanskrit poet and scholar, Śatāvadhānī Dr. R...

ಛಂದೋವಿವೇಕವು ವರ್ಣವೃತ್ತ, ಮಾತ್ರಾಜಾತಿ ಮತ್ತು ಕರ್ಷಣಜಾತಿ ಎಂದು ವಿಭಕ್ತವಾದ ಎಲ್ಲ ಬಗೆಯ ಛಂದಸ್ಸುಗಳನ್ನೂ ವಿವೇಚಿಸುವ ಪ್ರಬಂಧಗಳ ಸಂಕಲನ. ಲೇಖಕರ ದೀರ್ಘಕಾಲಿಕ ಆಲೋಚನೆಯ ಸಾರವನ್ನು ಒಳಗೊಂಡ ಈ ಹೊತ್ತಗೆ ಪ್ರಧಾನವಾಗಿ ಛಂದಸ್ಸಿನ ಸೌಂದರ್ಯವನ್ನು ಲಕ್ಷಿಸುತ್ತದೆ. ತೌಲನಿಕ ವಿಶ್ಲೇಷಣೆ ಮತ್ತು ಅಂತಃಶಾಸ್ತ್ರೀಯ ಅಧ್ಯಯನಗಳ ತೆಕ್ಕೆಗೆ ಬರುವ ಬರೆಹಗಳೂ ಇಲ್ಲಿವೆ. ಶಾಸ್ತ್ರಕಾರನಿಗಲ್ಲದೆ ಸಿದ್ಧಹಸ್ತನಾದ ಕವಿಗೆ ಮಾತ್ರ ಸ್ಫುರಿಸಬಲ್ಲ ಎಷ್ಟೋ ಹೊಳಹುಗಳು ಕೃತಿಯ ಮೌಲಿಕತೆಯನ್ನು ಹೆಚ್ಚಿಸಿವೆ. ಈ...

Karnataka’s celebrated polymath, D V Gundappa brings together in the fourth volume, some character sketches of the Dewans of Mysore preceded by an account of the political framework of the State before Independence and followed by a review of the political conditions of the State after 1940. These remarkable leaders of Mysore lived in a period that spans from the mid-nineteenth century to the...

Bharatiya Kavya-mimamseya Hinnele is a monograph on Indian Aesthetics by Mahamahopadhyaya N. Ranganatha Sharma. The book discusses the history and significance of concepts pivotal to Indian literary theory. It is equally useful to the learned and the laity.

Sahitya-samhite is a collection of literary essays in Kannada. The book discusses aestheticians such as Ananda-vardhana and Rajashekhara; Sanskrit scholars such as Mena Ramakrishna Bhat, Sridhar Bhaskar Varnekar and K S Arjunwadkar; and Kannada litterateurs such as DVG, S L Bhyrappa and S R Ramaswamy. It has a foreword by Shatavadhani Dr. R Ganesh.

The Mahābhārata is the greatest epic in the world both in magnitude and profundity. A veritable cultural compendium of Bhārata-varṣa, it is a product of the creative genius of Maharṣi Kṛṣṇa-dvaipāyana Vyāsa. The epic captures the experiential wisdom of our civilization and all subsequent literary, artistic, and philosophical creations are indebted to it. To read the Mahābhārata is to...

Shiva Rama Krishna

சிவன். ராமன். கிருஷ்ணன்.
இந்திய பாரம்பரியத்தின் முப்பெரும் கதாநாயகர்கள்.
உயர் இந்தியாவில் தலைமுறைகள் பல கடந்தும் கடவுளர்களாக போற்றப்பட்டு வழிகாட்டிகளாக விளங்குபவர்கள்.
மனித ஒற்றுமை நூற்றாண்டுகால பரிணாம வளர்ச்சியின் பரிமாணம்.
தனிநபர்களாகவும், குடும்ப உறுப்பினர்களாகவும், சமுதாய பிரஜைகளாகவும் நாம் அனைவரும் பரிமளிக்கிறோம்.
சிவன் தனிமனித அடையாளமாக அமைகிறான்....

ऋतुभिः सह कवयः सदैव सम्बद्धाः। विशिष्य संस्कृतकवयः। यथा हि ऋतवः प्रतिसंवत्सरं प्रतिनवतामावहन्ति मानवेषु तथैव ऋतुवर्णनान्यपि काव्यरसिकेषु कामपि विच्छित्तिमातन्वते। ऋतुकल्याणं हि सत्यमिदमेव हृदि कृत्वा प्रवृत्तम्। नगरजीवनस्य यान्त्रिकतां मान्त्रिकतां च ध्वनदिदं चम्पूकाव्यं गद्यपद्यमिश्रितमिति सुव्यक्तमेव। ऐदम्पूर्वतया प्रायः पुरीपरिसरप्रसृतानाम् ऋतूनां विलासोऽत्र प्रपञ्चितः। बेङ्गलूरुनामके...

The Art and Science of Avadhānam in Sanskrit is a definitive work on Sāhityāvadhānam, a form of Indian classical art based on multitasking, lateral thinking, and extempore versification. Dotted throughout with tasteful examples, it expounds in great detail on the theory and practice of this unique performing art. It is as much a handbook of performance as it is an anthology of well-turned...

This anthology is a revised edition of the author's 1978 classic. This series of essays, containing his original research in various fields, throws light on the socio-cultural landscape of Tamil Nadu spanning several centuries. These compelling episodes will appeal to scholars and laymen alike.
“When superstitious mediaevalists mislead the country about its judicial past, we have to...

The cultural history of a nation, unlike the customary mainstream history, has a larger time-frame and encompasses the timeless ethos of a society undergirding the course of events and vicissitudes. A major key to the understanding of a society’s unique character is an appreciation of the far-reaching contributions by outstanding personalities of certain periods – especially in the realms of...

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhānī Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective to every discussion. These essays deal with the philosophy, history, aesthetics, and practice of...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...