History

भारतीय क्षात्त्र परम्परा - Part 2

युद्दभूमि में बडे बडे योद्दाओं द्वारा प्राण त्यागने वाले वीरों को प्राप्त ‘स्वर्गलोक’ की अवधारणा में सनातनधर्म और सेमेटिक धर्मो के मध्य मूलभूत अन्तर है। उदाहरणार्थ इस्लाम में शहीद को जन्नत मे विलासिता का सुखभोग जैसे बहत्तर हूरों के साथ शारिरिक भोग का आश्वासन दिया गया है। इसके विपरीत भारतीय परम्परानुसार हमें असंख्य ऐसे ‘वीरागल’, अर्थात् बलिदानी की स्मृति में खड़े किये गये प्रस्तर स्तंभ मिलते है जिनके तीन भाग होते है। आधारभाग में रणभूमि में योद्दा के शौर्य प्रदर्शन और उसके प्राण-त्याग का चित्रण उत्कीर्ण होता है, मध्य भाग में देवतागण उसे अपने स्वर्गिक वीमान में बैठ

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೭)

ಬ್ರಿಟಿಷರಿಗೆ ‘ದುಃಸ್ವಪ್ನ’ವಾಯಿತು ಭಾರತ

ಇಂಗ್ಲೆಂಡ್ ಲಗ್ಗೆಯಿಟ್ಟ ಕೆನಡಾ, ಆಫ್ರಿಕಾ, ಆಸ್ಟ್ರೇಲಿಯಾ ಮೊದಲಾದವೆಲ್ಲ ಬ್ರಿಟಿಷರ ಕಾಲೊನಿ (ವಸಾಹತುಗಳಾಗಿ) ತಮ್ಮ ಮೂಲಸ್ವರೂಪವನ್ನು ಕಳೆದುಕೊಂಡವು. ಈ ಪ್ರಕ್ರಿಯೆಗೆ ಏಕೈಕ ಅಪವಾದವೆಂದರೆ ಭಾರತದೇಶ ಮಾತ್ರ. ಬ್ರಿಟಿಷರು ಇಲ್ಲಿ ಇನ್ನೂರು ವರ್ಷ ರಾಜ್ಯಭಾರ ಮಾಡಿದರು. ಆದರೂ ಅವರು ಶಾಶ್ವತವಾಗಿ ನೆಲಸಲಾಗದ ಒಂದೇ ಒಂದು ದೇಶವೆಂದರೆ ಹಿಂದೂಸ್ಥಾನ. ಅವರು ಹೋದ ಬೇರೆಲ್ಲ ದೇಶಗಳನ್ನು ಅವರು ಮನೆ ಮಾಡಿಕೊಂಡರು, ‘ಟರ್ಫ್’ ಮಾಡಿಕೊಂಡರು. ಅವರಿಗೆ ಇದಕ್ಕೆ ಅವಕಾಶ ಕೊಡದ ದೇಶ ಭಾರತ. ಬ್ರಿಟಿಷರು ಇಲ್ಲಿ ಬೇರು ಬಿಡಲು ಆಗಲೇ ಇಲ್ಲ. ‘ನಮಗಿದು ಬೇಡ’ ಎಂದೇ ಹೇಳುವಷ್ಟು ಹತಾಶರಾಗಿದ್ದರು ಬ್ರಿಟಿಷರು. ಇಂಥ ಸಮೃದ್ಧ ಸುಂದರ ನಂದನವನ ಅವರಿಗೇಕೆ ಬೇಡವಾಯಿತು?

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೬)

ಪರಾಭವಕ್ಕೆ ಕಾರಣಗಳು

ಪರಾಭವಕ್ಕೆ ವಿಶ್ಲೇಷಕರು ಏನೇನೊ ಕಾರಣಗಳನ್ನು ಸೂಚಿಸಿದ್ದಾರೆ. ಭಾರತೀಯರಲ್ಲಿದ್ದ ಶಸ್ತ್ರಾಸ್ತ್ರಗಳು ಹಿಂದಿನವು, ಅದಕ್ಷವಾದವು (antiquated) ಎಂದು ಒಂದು ಗತಾನುಗತಿಕ ವಾದ. ಆಧುನಿಕ ತಂತ್ರಜ್ಞಾನವನ್ನು ಬಳಸಲು ಭಾರತೀಯರು ಉತ್ಸಾಹಿತರಾಗಿರಲಿಲ್ಲ ಮಾತ್ರವಲ್ಲ, ಆಧುನಿಕ ಯುದ್ಧವಿಧಾನಗಳ ಬಗ್ಗೆ ಅವರಲ್ಲಿ ಒಂದಷ್ಟು ಭೀತಿಯೇ ಇತ್ತು – ಎಂದೂ ವಾದವಿದೆ. ತಲೆಯ ಮೇಲೆ ಎತ್ತರದಲ್ಲಿ ಉದ್ದಕ್ಕೂ ಕಾಣುವ ಟೆಲೆಗ್ರಾಫ್ ತಂತಿ ಕೂಡ ನಮ್ಮವರಿಗೆ ಭಯಕಾರಣವಾಗಿತ್ತು – ಎನ್ನಲಾಗಿದೆ. “ನಾವು ಎಲ್ಲಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ – ಎಲ್ಲ ಮಾಹಿತಿಯೂ ಬ್ರಿಟಿಷರಿಗೆ ರವಾನೆಯಾಗುತ್ತಿದ್ದುದು ಈ ತಂತಿಗಳ ಮೂಲಕವೇ.” ಇಂತಹ ಕಾರಣಗಳೂ ಸೂಚಿಸಿದ್ದಾರೆ.

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೫)

“ಚಲೋ ದಿಲ್ಲೀ!”

ಈಗ ಸುಪ್ರಸಿದ್ಧವಾಗಿರುವ “ಚಲೋ ದಿಲ್ಲೀ!” ಎಂಬ ಘೋಷಣೆ ಹುಟ್ಟಿಕೊಂಡದ್ದು ಆ ಸಂದರ್ಭದಲ್ಲಿ. ಅಲ್ಲಿಂದಾಚೆಗೆ ಅದು ಲೆಕ್ಕವಿಲ್ಲದಷ್ಟು ಬಾರಿ ಬಳಕೆಯಾಗಿದೆ. ಸುಭಾಷಚಂದ್ರ ಬೋಸರ ಸೇನಾಭಿಯಾನದಲ್ಲೂ (1944) ಮೊಳಗಿದ್ದು ಅದೇ ಘೋಷಣೆಯೇ.

1857ರಲ್ಲಿ ಎರಡು ಘೋಷಣೆಗಳು ಜೊತೆಜೊತೆಯಾಗಿ ಕೇಳಬಂದವು: ‘ಚಲೋ ದಿಲ್ಲೀ!”; “ಮಾರೋ ಫಿರಂಗೀ ಕೋ!”

ಈ ಮಂತ್ರಘೋಷದೊಂದಿಗೆ ಮೀರಠಿನ ಸೈನಿಕಸಮೂಹಗಳು ದೆಹಲಿ ತಲಪಿದವು.

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೪)

ದುರ್ಘಟನೆ

ಹೀಗೆ ಎಲ್ಲವೂ ಸುಯೋಜಿತವಾಗಿತ್ತು.

ಆದರೆ ದುರ್ದೈವದಿಂದ ಒಂದು ಘಟನೆ ನಡೆಯಿತು.

ಸೈನಿಕರು ತುಪಾಕಿಯಲ್ಲಿ ಬಳಸುವ ಕಾಡತೂಸು(ಕಾರ್ಟ್‍ರಿಡ್ಜ್)ಗಳಲ್ಲಿ ಗುಂಡಿಯೊಂದು ಇರುತ್ತಿತ್ತು. ಅದನ್ನು ಹಲ್ಲಿನಿಂದ ಕಿತ್ತು ತೆಗೆದು ಕಾಡತೂಸನ್ನು ಕೂಡಿಸಬೇಕಾಗಿತ್ತು. ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆ ಕಲ್ಕತ್ತದ ಡಂಡಂನಲ್ಲಿತ್ತು. ಅಲ್ಲಿಂದ ಪಂಜಾಬಿನ ಅಂಬಾಲಾ ಮುಂತಾದೆಡೆಗಳಿಗೆ ರವಾನೆಯಾಗುತ್ತಿತ್ತು.

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೩)

ದೇಶವ್ಯಾಪಿ ಸಮರ

ಹೀಗೆ 1857ರ ಕ್ರಾಂತಿ ದೇಶದಲ್ಲೆಲ್ಲ ವ್ಯಾಪಿಸಿರಲಿಲ್ಲವೆಂಬ ವಾದವು ನಿರಾಧಾರ. ಎಲ್ಲೆಲ್ಲ ಹೆಚ್ಚಿನ ಜನಜಾಗೃತಿ ಇತ್ತೋ ಅಲ್ಲೆಲ್ಲ ಜನ ಭಾಗವಹಿಸಿದರು.

ದಕ್ಷಿಣ ಭಾರತದ ಜನ 1857ರ ಸಮರದಲ್ಲಿ ಭಾಗವಹಿಸಲಿಲ್ಲ ಎಂಬುದು ಇನ್ನೊಂದು ಮಿಥ್ಯಪ್ರತಿಪಾದನೆ. ಅನೇಕ ವರ್ಷ ಇಂಥ ಪ್ರಚಾರ ನಡೆದಿತ್ತು. ಈಗಲೂ ಇಲ್ಲದೆ ಇಲ್ಲ. ಆದರೆ ವಸ್ತುಸ್ಥಿತಿ ಹಾಗಿಲ್ಲ.

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೨)

ನಷ್ಟವಾದ ಸ್ವಾಯತ್ತತೆ

ಮೊದಲಿಗೆ ಬ್ರಿಟಿಷರು ಇಡೀ ರಾಜ್ಯವನ್ನು ತಮ್ಮ ಕೈವಶಮಾಡಿಕೊಂಡಿದ್ದರು. ಈಗ್ಗೆ ಐವತ್ತರವತ್ತು ವರ್ಷ ಹಿಂದೆ ಕನ್ನಡದಲ್ಲಿ ಒಂದು ಲಾವಣಿ ಎಲ್ಲಡೆ ಪ್ರಸಿದ್ಧವಾಗಿತ್ತು. ಅದರ ಕೆಲವು ಸಾಲುಗಳು ಹೀಗಿದ್ದವು:

ಮಹಿಳೆಯೊಳು ಭಾರತಭೂಮಿಯ ವೈಭವ-
ಬೆಡಗನು ಕೇಳಿದ ಬ್ರಿಟೀಷರು
ಮಹದಾಕಾಂಕ್ಷದಿ ಬಂದರು ಇಲ್ಲಿಗೆ
ವ್ಯಾಪಾರಕೋಸುಗ ಮೊದಲಿಹರು.

ಕ್ಲೈವನ ಕಪಟಾಚಾರದಿ ಭಾರತ-
ಖಂಡದಿ ನೆಲಸಿದ ಬ್ರಿಟೀಷರು
ದೈವಧರ್ಮವನು ದೃಷ್ಟಿಸದೆಮ್ಮಯ
ದೇಶದ ಸಿರಿಯನು ದೋಚಿದರು…

ಜನಸಾಮಾನ್ಯರಲ್ಲಿ ಎಷ್ಟುಮಟ್ಟಿನ ರೋಷ ಇತ್ತೆಂಬುದನ್ನು ಇದರಿಂದ ಊಹಿಸಬಹುದು.

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೧)

 

[07.04.2007ರಂದು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ 1857ರ ಸ್ವಾತಂತ್ರ್ಯ ಸಂಗ್ರಾಮದ ನೂರೈವತ್ತನೆಯ ವರ್ಷದ ಉತ್ಸವದ ಅಂಗವಾಗಿ ಖ್ಯಾತ ಇತಿಹಾಸಕಾರರಾದ ಡಾ॥ ಕೆ. ಶ್ರೀಪತಿ ಶಾಸ್ತ್ರಿಯವರ ಉಪನ್ಯಾಸ ಮಾಲಿಕೆಯನ್ನು ಏರ್ಪಡಿಸಿತ್ತು. ಅವರ ಉಪನ್ಯಾಸವನ್ನು ಶ್ರೀ. ಎಸ್. ಆರ್. ರಾಮಸ್ವಾಮಿಯವರು ಲಿಪೀಕರಿಸಿದ ಕೃತಿ ಇದಾಗಿದೆ.]