ವಿಶ್ವವ್ಯಾಪಿ ದೀಪಾವಳೀ

ಭಾರತೀಯರು ಹಬ್ಬಗಳನ್ನು ವ್ರತ, ಪರ್ವ, ಮತ್ತು ಉತ್ಸವಗಳೆಂದು ಪ್ರಾಯಿಕವಾಗಿ ಮೂರು ವರ್ಗಗಳಲ್ಲಿ ಕಂಡರಿಸಿದ್ದಾರೆ. ವ್ರತ ವೈಯಕ್ತಿಕವಾದದ್ದು. ಧರ್ಮ-ಮೊಕ್ಷಗಳಿಗೇ ಅಲ್ಲಿ ಪ್ರಾಧಾನ್ಯ. ನಿಯಮ-ನಿಷ್ಠೆಗಳ ಅಂತರ್ಮುಖತೆಗೇ ಅಲ್ಲಿ ಅಗ್ರತಾಂಬೂಲ. ಪರ್ವ ಕೌಟುಂಬಿಕವಾದದ್ದು. ಇಲ್ಲಿ ಅರ್ಥ-ಕಾಮಗಳೂ ಹದವಾಗಿ ಕಲೆಯುತ್ತವೆ. ನಿಯಮ-ನಿಷ್ಠೆಗಳಿಗೆ ಹಾಳತವಾದ ಆತ್ಮೀಯತೆ, ಅಚ್ಚು-ಕಟ್ಟುಗಳೂ ಕೂಡಿಕೊಳ್ಳುತ್ತವೆ. ಉತ್ಸವವು ಸಾಮೂಹಿಕ(ಸಾಮಾಜಿಕ)ವಾದದ್ದು. ಇದನ್ನು ಒಂದು ಕಾಲದಲ್ಲಿ 'ಸಮಾಜ'ವೆಂದೇ ಕರೆಯುತ್ತಿದ್ದರು. ಇಲ್ಲಿ ವಿಲಾಸ-ವೈಭವ-ಸಂತೋಷಗಳು ಮೆಲ್ಗೈಯಾಗುತ್ತವೆ. ಅರ್ಥ-ಕಾಮಗಳು ಧರ್ಮ-ಮೋಕ್ಷಗಳೊಂದಿಗೆ ಸ್ಪರ್ಧಿಸುವಂತೆ ವಿಜೃಂಭಿಸಿ ಸಮಷ್ಟಿಗೆ ಜೀವನೋತ್ಸಾಹವನ್ನೂ ವಿನೋದವನ್ನೂ ತುಂಬುತ್ತವೆ. ಇಲ್ಲಿ ನಿಯಮ-ನಿಷ್ಠೆಗಳಿಗಿಂತ ಉಲ್ಲಾಸ-ವೈಭೋಗಗಳು ಪ್ರಧಾನವಾಗುತ್ತವೆ.

ಮೇಲ್ನೋಟಕ್ಕೆ ಈ ಮೂರು ವಿಭಾಗಗಳಲ್ಲಿಯೂ ಪರಸ್ಪರ ವಿರೋಧವಿರುವಂತೆ ಕಂಡರೂ ಆಳದಲ್ಲಿ ಅನುಪಮಸಾಮರಸ್ಯವೇ ಅಡಗಿದೆ. ಏಕೆಂದರೆ ಇವುಗಳಲ್ಲಿ ಅನ್ಯೋನ್ಯಪೂರಕತೆ ಇಲ್ಲದಿದ್ದರೆ ಸಮಗ್ರತಾಸಿದ್ಧಿಯೇ ಸಾಧ್ಯವಿಲ್ಲ. ಅಷ್ಟೇ ಅಲ್ಲ, ವ್ರತ-ಪರ್ವ-ಉತ್ಸವಗಳ ಆಚರಣೆಯಲ್ಲಿ ಕ್ರಮವಾಗಿ ದೇಶ-ಕಾಲಗಳ ಅನುಸರಣೆ ಹೆಚ್ಚಾಗುತ್ತಾ ಬಂದಿರುವುದನ್ನೂ ಗಮನಿಸಬಹುದು (ವ್ರತವನ್ನು ಎಲ್ಲಿಯಾದರೂ ಯಾವಾಗಲಾದರೂ ಕರ್ತೃವು – ಈತನೊಬ್ಬನೇ ಆದಕಾರಣ ಮಾಡಬಹುದು. ಆದರೆ ಪರ್ವಕ್ಕೆ ಇಷ್ಟು ಸ್ವಾತಂತ್ರ್ಯವಿಲ್ಲ. ಉತ್ಸವವಂತೂ ಅತಿಹೆಚ್ಚಾಗಿ ದೇಶ-ಕಾಲನಿಯಂತ್ರಿತ. ಇಲ್ಲಿ ಎಲ್ಲರ ಪಾಲ್ಗೊಳ್ಳುವಿಕೆಗೂ ಪ್ರಕೃತಿಯೊಡನೆ ನಿಕಟತೆಗೂ ಅನುಕೂಲಿಸುವಂತೆ ನದೀ-ತಟಾಕ-ದೇವಾಲಯ-ಕೃಷಿಕ್ಷೇತ್ರ-ವಿಶಾಲಾಂಗಣ-ಪರ್ವತ ಮುಂತಾದ ಭೂಮಸ್ಥಳಗಳೂ ವಿಶಿಷ್ಟ ಋತುಗಳ ಸಂಕ್ರಮಣಸಂದರ್ಭಗಳೂ ಅತ್ಯವಶ್ಯ. ಆದುದರಿಂದಲೇ ಆರ್ತವ – ಎಂದರೆ ಋತುಸಂಬಂಧಿತವಾದ – ಆಚರಣೆಗಳೆಲ್ಲ ವೈಭವೋಪೇತವಾದ ಉತ್ಸವಗಳಾಗಿವೆ).

ಇದು ಮಾತ್ರವಲ್ಲದೆ ಒಂದೇ ಆಚರಣೆಯು ವ್ರತ-ಪರ್ವ-ಉತ್ಸವಗಳೆಂಬ ಮೂರು ಆಯಾಮಗಳನ್ನೂ ಹೊಂದಿರಲು ಸಾಧ್ಯ. ಇಂಥ ಸಂದರ್ಭಗಳು ವಿರಳವಾದುವಾದರೂ ತುಂಬ ಸ್ವಾರಸ್ಯ ಸ್ಥಾನಗಳಾಗಿವೆ. ಹೀಗೆ ಒಂದು ಆಚರಣೆಗೆ ಈ ಮೂರು ಆಯಾಮಗಳೂ ಒದಗಿದಾಗ ಅಲ್ಲಿ – ಈಚೆಗೆ 'ವ್ಯಧಿಕರಣ ಬುದ್ಧಿ'ಗಳಾದ ಸಂಶೋಧಕಂಮನ್ಯರು ಭೇದಬುದ್ಧಿಯಿಂದ ಹುಟ್ಟುಹಾಕಿದ – ಶಿಷ್ಟ, ಪರಿಶಿಷ್ಟ, ವೈದಿಕ, ಜಾನಪದ ಎಂಬ ಎಲ್ಲ ಬಗೆಯ ಸಾಂಸ್ಕೃತಿಕಸಂದರ್ಭಗಳೂ ಸೊಗಸಾಗಿ ಸಮನ್ವಯಿಸಿ ಪರಮರಮಣೀಯವೂ ರಸಸಂಕೀರ್ಣವೂ ಆದ ಜೀವನೋತ್ಕರ್ಷಸಿದ್ಧಿಯು ಸಾಕ್ಷಾತ್ಕರಿಸುತ್ತದೆ. ಅಂಥ ಮಹಾಮೇಳದಲ್ಲಿ ಅನನ್ಯವಾದ ಆಚರಣೆಯೇ ದೀಪಾವಳಿ, ವೈಶ್ವಿಕತೇಜಸ್ಸಿನತ್ತ ಮಾನವನು ತುಡಿದಿರುವ ಅನಾದಿಯಾದ ನಿರೂಪಾವಳಿ.

ಚಂದ್ರಮಾನದ ಆಶ್ವಯುಜ-ಕಾರ್ತಿಕ ಮಾಸಗಳ (ಅಕ್ಟೋಬರ್-ನವೆಂಬರ್) ಬಹುಳ-ಚತುರ್ದಶೀ, ಅಮಾವಾಸ್ಯೆ ಮತ್ತು ಶುದ್ಧಪ್ರತಿಪತ್ ತಿಥಿಗಳಂದು ಬರುವ ದೀಪಾವಳಿಯು ಶರದೃತುವಿನ ಮಧ್ಯಮಣಿ.

ಮಳೆಗಾಲದ ಬಿರುಸು ತಗ್ಗಿ, ಬೇಸಿಗೆಯ ಬೇಗೆಯಿರದೆ, ಚಳಿಗಾಲವು ದೂರವಿರುವ ಈ ಕಾಲವು ನಿಜಕ್ಕೂ ವಾಲ್ಮೀಕಿಮಹರ್ಷಿಗಳು ಹೇಳುವಂತೆ 'ಅನೇಕಾಶ್ರಯಚಿತ್ರಶೋಭಾ,' ಕಾಳಿದಾಸನೆನ್ನುವಂತೆ 'ಬಹುಗುಣರಮಣೀಯಾ.' ನದಿಗಳ ಬಗ್ಗಡ ನೀರು ತಿಳಿಯಾಗಿ ಬೆಳಗಿ, ಬೆಳದಿಂಗಳಿನಿಂದ ರಾತ್ರಿ ಕಂಗೊಳಿಸಿ, ಹೊಲ-ಗದ್ದೆಗಳು ನಳನಳಿಸಿ, ಕಾನು-ಮಲೆಗಳು ಸಿರಿಸಿರಿಯಾಗಿ, ಪಶುಸಂಪದವು ಹೊಸ ಸೊಗಸಿನಿಂದ ಕಳೆಯೇರಿ ಮೆರೆಯುವ ಈ ಕಾಲದಲ್ಲಿ ಸಮೃದ್ಧಿಯೇ ಕೇಂದ್ರಬಿಂದುವಾಗುತ್ತದೆ. ಪ್ರಾಕೃತಿಕಸಮೃದ್ಧಿಗೆ ಸ್ಪಂದಿಸುವ ಮಾನವನ ಸಾಂಸ್ಕೃತಿಕಜೀವನವು ಈ ಸಂದರ್ಭದಲ್ಲಿ ಸಹಜವಾಗಿಯೇ ತನ್ನ ಚಿರಂತನಸಂವೆದನೆಯಾದ ಬೆಳಕಿನತ್ತ ಬೆಂಬತ್ತುವಿಕೆ, ಮೃತ್ಯವನ್ನು ಗೆಲ್ಲುವಿಕೆ ಮತ್ತು ಬಡತನವನ್ನು ತೊಡೆಯುವಿಕೆಗಳೆಂಬ  ಅಂಶತ್ರಯವನ್ನು ಸಂಕೇತಿಸುವಂತೆ ಆಚರಣೆಗಳನ್ನು ರೂಪಿಸಿಕೊಂಡಿದೆ.

ಹೀಗಾಗಿ ದೀಪಾವಳಿಯು ಬೆಳಕು-ಕತ್ತಲೆಗಳ ಸಂಗ್ರಾಮದಲ್ಲಿ ಬೆಳಕಿನ ಗೆಲುವನ್ನು ಸಾರುವ ಹಬ್ಬವೂ ಹೌದು (ಇದು ಮಾನವನ ನಿರಂತರ ಸದಸತ್ಸಂಗ್ರಾಮಸಂಘರ್ಷದ ಸಂಕೇತ ಹಾಗೂ ಅಸತ್ತಿನ ಮೇಲೆ ಸತ್ತಿನ ವಿಜಯ ಎಂಬುದು ಸುಲಭವೆದ್ಯ. ಆದರೆ ಗಮನಿಸಬೇಕಾದ ಮತ್ತೊಂದಂಶವೇನೆಂದರೆ ವಿಶುದ್ಧಭಾರತೀಯಪ್ರಜ್ಞೆಯ ಪ್ರಕಾರ ಶಾಶ್ವತವಾದ ಅಸತ್ – Eternal Evil – ಎಂಬುದು ಇಲ್ಲವೇ ಇಲ್ಲವೆಂಬುದನ್ನು ತಾರ್ಕಿಕವಾಗಿ ಬೆಳಕಿನ ಅಭಾವವೇ ಕತ್ತಲೆಂಬ ಪದಾರ್ಥವಲ್ಲದೆ ಅದಕ್ಕೆ ಪ್ರತ್ಯೇಕವೂ ನಿತ್ಯವೂ ಆದ ಸ್ವತಂತ್ರಾಸ್ತಿತ್ತ್ವವೇ ಇಲ್ಲವೆಂಬ ತತ್ತ್ವವು ಇಲ್ಲಿ ಪ್ರತಿಪಾದಿತವಾಗಿರುವುದು!), ಇದರ ವಿಸ್ತರಣವಾಗಿ ಮೃತ್ಯುವನ್ನು ಗೆದ್ದು ಅಮೃತತ್ವವನ್ನು ಪಡೆಯುವುದರ ಪ್ರತೀಕವಾಗಿ ಅಳಿದ ಪಿತೃಗಳಿಗೆ – ಅವರು ಇನ್ನೂ ಚೈತನ್ಯದಿಂದ ಇದ್ದಾರೆ ಎಂಬುದರ ಸಂಕೇತವಾಗಿ – ಸಲ್ಲಿಸುವ ಕೃತಜ್ಞತಾಸಮರ್ಚೆಯ ಸಂದರ್ಭವೂ ಹೌದು, ಪ್ರಾಕೃತಿಕಸಮೃದ್ಧಿಯನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೌಲಭ್ಯಗಳಿಗಾಗಿ ಅಳವಡಿಸಿಕೊಂಡು ಮೆರೆಯುವ ಆರ್ಥಿಕ-ಕಾಮಿಕ ವೈಭವೊತ್ಸಾಹದ ಆಚರಣೆಯೂ ಹೌದು. (ಕಾಮವೆಂದೊಡನೆಯೇ ಯಾರೂ ಹೌಹಾರಬೇಕಿಲ್ಲ. ನಮ್ಮ ಸಾಂಪ್ರದಾಯಿಕಪ್ರಜ್ಞೆಯು 'ಕಾಮ'ದಲ್ಲಿಯೇ ಸಕಲಜೀವನಸೌರಭಾಕಾರಿಯಾದ ಕಲೆಗಳನ್ನೂ ವಿದ್ಯಾ-ವಿನೋದಗಳನ್ನೂ ಸಾಂಸ್ಕೃತಿಕಸೌಖ್ಯಗಳನ್ನೂ ಅರ್ಥಪೂರ್ಣವಾಗಿ ಅಡಕಗೊಳಿಸಿದೆ.) ಒಟ್ಟಿನಲ್ಲಿ ದೀಪಾವಳಿಯು ಭಾರತೀಯರ ಸಮಗ್ರಸಮಾರಾಧನೆಯ ಸಮರ್ಥ ಅಭಿವ್ಯಕ್ತಿ, ಸುಂದರ ಅಭಿವ್ಯಕ್ತಿ.

ವೇದ ಮೂಲ

ವೇದಗಳಲ್ಲಿ ಹಾಗೂ ವೇದಾಂಗಗಳಲ್ಲಿ ಈ ಕಾಲವು ಪಾರ್ವಣ, ಶ್ರಾದ್ಧ, ಶ್ರಾವಣಿ, ಆಗ್ರಹಾಯಣಿ, ಚೈತ್ರಿ ಮತ್ತು ಆಶ್ವಯುಜಿ ಎಂಬ ಸಪ್ತಪಾಕಯಜ್ಞಸಂಸ್ಥೆಗಳನ್ನು ಆಚರಿಸಲು ವಿನಿಯುಕ್ತವಾಗಿದೆ. ಈ ಪಾಕಯಜ್ಞಸಂಸ್ಥೆಗಳಲ್ಲಿಯೇ ವ್ರತ-ಪರ್ವ-ಉತ್ಸವಗಳ ಆಯಾಮಗಳಿವೆಯಲ್ಲದೆ ದೀಪಾವಳಿಯ ಮೂರು ಮುಖಗಳಾದ ಪ್ರಕಾಶೋತ್ಕರ್ಷ, ಮೃತ್ಯುಮರ್ದನ ಮತ್ತು ಐಹಿಕ ಸಮೃದ್ಧಿಗಳ ಅನುಸಂಧಾನವೂ ಉಂಟು. ಅಷ್ಟೇ ಅಲ್ಲ, ಈಗಿನ 'ಸಂಶೋಧಕ'ರು ಪರಿಶಿಷ್ಟವೆಂದೂ ಜಾನಪದವೆಂದೂ ಎತ್ತಿಹಿಡಿಯುವ ಅನೇಕ ಸಂಗತಿಗಳೂ ಆಗ್ರಹಾಯಣಿ, ಪಾರ್ವಣ, ಶ್ರಾವಣಿ, ಚೈತ್ರಿ ಮುಂತಾದ ಕೃಷಿಸಂಬಂಧಿತವೂ ಪಾಚನಸಂಬಂಧಿತವೂ ಆದ ಇಷ್ಟಿಗಳಲ್ಲಿ ಉಂಟು. ಹೀಗಾಗಿ ಇಲ್ಲಿಯೇ ಮಾರ್ಗ-ದೇಶಿಗಳ ಮಧುರಬೀಜಾವಾಪವಿದೆ.

ಬೃಹದಾರಣ್ಯಕದಲ್ಲಿ ಬರುವ ಜ್ಯೋತಿರ್ಬ್ರಾಹ್ಮಣ ಪ್ರಕರಣವು (೪.೩.೨-೭) ಅತ್ಯಂತ ಸುಂದರವಾಗಿ ಬಾಹ್ಯಜ್ಯೋತಿಗಳಾದ ಸೂರ್ಯ-ಚಂದ್ರ-ತಾರಾ-ವಿದ್ಯುತ್-ಅಗ್ನಿಗಳ ಅರಿವನ್ನೂ ಬೆಳಕನ್ನೂ ಬೆಳಗಿಸುವ ಅಂತರ್ಜ್ಯೋತಿಯಾದ ಅಸ್ಮಿತಾಪ್ರಜ್ಞೆಯನ್ನು ಎತ್ತಿಹಿಡಿಯುವಲ್ಲಿಯೇ ದೀಪಾವಳಿಯ ಹೃದಯವಾದ ಆತ್ಮತೇಜಸ್ಸಿನ ಪ್ರತಿಮೆಯುಂಟು. ಇದನ್ನು ನಿರ್ಣಯಾಮೃತವೆಂಬ ನಿಬಂಧಗ್ರಂಥವು ಹೀಗೆ ಸಂಕ್ಷೇಪಿಸಿದೆ:

ತ್ವಂ  ಜ್ಯೋತಿಶ್ಚ ರವಿಶ್ಚಂದ್ರೋ ವಿದ್ಯುತ್ಸೌವರ್ಣತಾರಕಾಃ |
ಸರ್ವೇಷಾಂ ಜ್ಯೋತಿಷಾಂ ಜ್ಯೋತಿರ್ದೀಪಜ್ಯೋತಿಸ್ಸ್ಥಿತೇ ತಮಃ ||

ಇದು ದೀಪಾವಳಿಯಂದು ಬಳಸಬೇಕಾದ ದೀಪವಂದನಶ್ಲೋಕವೂ ಹೌದು.

ಸಮಗ್ರವೇದಸಂಸ್ಕೃತಿಯೇ ಯಜ್ಞರೂಪದ್ದು. ಯಜ್ಞದ ಆರಾಧನೈಕಸ್ತರದಲ್ಲಿ ಅಗ್ನಿಯೇ ಆದ್ಯಾಲಂಬನ. ಹೀಗಾಗಿ ದೀಪಾವಳಿಯ ದೀಪಗಳ ದೈವಿಕಮೂಲ ವೇದಗಳ ಅಗ್ನಿಮುಖದಲ್ಲಿದೆ. ಅಗ್ನಿಯು ಭೂಸ್ಥಾನೀಯದೇವತೆ. ಅಗ್ನ್ಯಾರಾಧನೆಯನ್ನು ಭಾರತ-ಇರಾಣಗಳಲ್ಲಿ ಮಾತ್ರವಲ್ಲದೆ ಪುರಾತನ ಈಜಿಪ್ಟ್, ಕ್ರೀಟ್, ಗ್ರೀಸ್, ರೋಮ್ ಗಳಲ್ಲಿಯೂ ನಡಸುತ್ತಿದ್ದರು. ಅಗ್ನ್ಯಾಧಾನವು (ಅಗ್ನಿಯನ್ನು ವಿಧಿವತ್ತಾಗಿ ಉತ್ಪಾದಿಸಿ ಆರಾಧಿಸುವ ಪ್ರಧಾನಸೋಪಾನ) ಕೃತ್ತಿಕಾನಕ್ಷತ್ರದಲ್ಲಿ ನಡೆಯಬೇಕೆಂದು ಶ್ರೌತ-ಸ್ಮಾರ್ತವಿಧಿಯುಂಟು. ಅಗ್ನಿನಕ್ಷತ್ರವೆಂದೇ ಕೃತ್ತಿಕೆಯನ್ನು ಅನಾದಿಕಾಲದಿಂದ ಆದರಿಸಿದ್ದಾರೆ. ಕಾರ್ತಿಕಮಾಸವು ಮೊದಲಾಗುವುದೇ ದೀವಳಿಗೆಯಲ್ಲಿ. ಹೀಗೆ ದೀಪಾವಳಿ-ಅಗ್ನಿಗಳ ಸಂಬಂಧ ಘನಿಷ್ಠ.

ಕೃತ್ತಿಕಾದೀಪೋತ್ಸವ, ಕಾರ್ತಿಕದೀಪಾರಾಧನೆಗಳೆಲ್ಲ ಸುವಿಖ್ಯಾತ, ಸರ್ವಜನಪ್ರಿಯ. ಸ್ಕಂದನು ಇದೇ ನಕ್ಷತ್ರದಲ್ಲಿ ಜನಿಸಿದವನು. ಆತನು ಅಗ್ನಿಸಂಭವನೂ ಹೌದು. ಹೀಗಾಗಿಯೇ ಅಮರಕೋಶವು ‘ಅಗ್ನಿಭೂಃ’ ಎಂದು ಆತನನ್ನು ಹೆಸರಿಸಿದೆ. ಅವನು ಗಂಗಾತನಯನೂ ಹೌದಷ್ಟೆ! ಹೀಗಾಗಿ ದೀಪಾವಳಿಯ (ನರಕಚತುರ್ದಶಿಯ) ಗಂಗಾಸ್ನಾನವೂ ಅಗ್ನಿಯೊಡನೆ ಬೆಸೆದುಕೊಂಡಿದೆ; ದೀಪದಲ್ಲಿ ಬೆರೆತುಕೊಂಡಿದೆ.          

ಪ್ರಾಚೀನ ಆಚರಣೆಯ ಅನೂಚಾನತೆ  

ದೀಪಾವಳಿಯ ಉತ್ಸವರೂಪವನ್ನು ಭಾರತದ ಅತ್ಯಂತ ಪ್ರಾಚೀನವೂ ವಿಸ್ತೃತವೂ ಆದ ಇಂದ್ರಮಹ ಅಥವಾ ಇಂದ್ರಧ್ವಜೋತ್ಸವದಲ್ಲಿ ಕಾಣಬಹುದು. ಇದು ಶರತ್ಕಾಲದ ಎಲ್ಲ ಹಬ್ಬಗಳಿಗೂ ಮೂಲ. ಇದರ ಬಗ್ಗೆ ವೇದಾಂಗಗಳೆನಿಸಿದ ಕಲ್ಪಸೂತ್ರಗಳಲ್ಲಿಯೂ ಇತಿಹಾಸ-ಪುರಾಣಗಳಲ್ಲಿಯೂ ವಿಪುಲೋಲ್ಲೇಖವುಂಟು. ಇದರ ಅಧ್ಯಯನವೇ ಪ್ರತ್ಯೇಕ ಪ್ರಬಂಧವಾಗುವ ಕಾರಣ ಸದ್ಯಕ್ಕೆ ಈ ವಿಸ್ತಾರವನ್ನು ಬಿಟ್ಟು ಸಾಗಬಹುದು.

ವಾತ್ಸ್ಯಾಯನನ ಕಾಮಸೂತ್ರದಲ್ಲಿ ಬರುವ 'ಯಕ್ಷರಾತ್ರಿ'ಯೇ ದೀಪಾವಳಿ ಹಬ್ಬದ ಇಂದಿನ ರೂಪಕ್ಕೆ ಅತಿನಿಕಟ ಅತ್ಯಂತ ಪ್ರಾಚೀನಲಿಖಿತದಾಖಲೆಯೆನ್ನುವುದು ಡಾ|| ವಿ. ರಾಘವನ್ನರ ಅಭಿಪ್ರಾಯ. ಯಕ್ಷರಾತ್ರಿಯು ಭೋಗಪ್ರಧಾನವಾದ, ಹರ್ಷೋತ್ಕರ್ಷದ ಬೆಳಕಿನ ಇರುಳು. ಭೋಗ-ಸಂಪದಗಳ ಅಧಿದೇವತೆಗಳೆನಿಸಿದ ಯಕ್ಷರು ವಾಣಿಜ್ಯ ಮತ್ತು ಸಾರ್ಥಗಳ ಸಂರಕ್ಷಕರೂ ಹೌದು (ಮಣಿಭದ್ರಯಕ್ಷನಂತೂ ಪ್ರಾಚೀನ ಭಾರತದ ವಣಿಗ್ಜನರ ಪರಮಪ್ರಿಯದೇವತೆ).  ಇವರೆಲ್ಲ ಧನದನೆನಿಸಿದ ಧನಾಧಿಪತಿ ಕುಬೇರನ ಅನುಚರರು. ಇಂದಿಗೂ ದೀಪಾವಳಿಯ ನಡುವಣ ಅಮಾವಾಸ್ಯೆಯ ಲಕ್ಷ್ಮೀಪೂಜೆ, ಕುಬೇರಾರಾಧನೆಗಳು ಈ ಅಂಶವನ್ನೇ ತಿಳಿಸುತ್ತಿವೆ.

ಲಕ್ಷ್ಮೀಪೂಜೆ. ಫೋಟೋ ಮೂಲ: ಗೂಗಲ್ ಫೋಟೋ ಅನ್ವೇಷಣೆ

ಅಲ್ಲದೆ ದೀಪಾವಳಿ ಹಬ್ಬದ ಒಂದು ಮುಖ್ಯ ಅಂಗವಾದ  ಆರ್ಥಿಕಸಮೃದ್ಧಿಯ ಅರ್ಚನೆಯನ್ನೂ ಸಂಕೆತಿಸಿವೆ. ನಿಬಂಧಗ್ರಂಥಗಳು ಬಲಿಪಾಡ್ಯಮಿಯ ಎರಡನೆಯ ದಿನ 'ಧನತ್ರಯೋದಶಿ'ಯೆಂಬ ವ್ರತವನ್ನು ನಡೆಸಬೇಕೆಂದು ವಿಧಿಸಿವೆ. ಅಲ್ಲದೆ ಬಲಿಪಾಡ್ಯಮಿಗೆ 'ಕುಬೇರಪ್ರತಿಪತ್' ಅಥವಾ 'ಕುಬೇರ-ಲಕ್ಷ್ಮೀಪೂಜಾಪ್ರತಿಪತ್’ ಎಂಬ ನಾಮಾಂತರಗಳೂ ಇವೆ. ಶಾಸ್ತ್ರಕಾರರು ಈ ಪ್ರತಿಪದೆಯನ್ನು ‘ದ್ಯೂತಪ್ರತಿಪತ್’ ಎಂದೂ ಹೇಳಿದ್ದಾರೆ. ಈ ದಿನದಂದೇ ಶಿವ-ಶಿವೆಯರು ಜೂಜಾಡಿದಾಗ ಗೌರಿಯು ಹರನದೆಲ್ಲವನ್ನೂ ಕಸಿದು ಆತನನ್ನು ‘ನಗ್ನಮುಷಿತ’ನನ್ನಾಗಿಸಿದಳೆಂದು ಸ್ಕಾಂದಪುರಾಣದ ಶಂಕರಸಂಹಿತೆಯ ಒಕ್ಕಣೆ. ಇದನ್ನು ಎಲ್ಲೋರಾಗುಹೆಗಳ ಶಿಲ್ಪವೊಂದು ಸುಮನೋಹರವಾಗಿ ಕಂಡಿರಿಸಿರುವುದು ಸ್ಮರಣೀಯ. ಇಂಥ ಪೌರಾಣಿಕವಿನೋದಗಳು ನಮ್ಮ ಚಿರಂತನರ ರಾಸಿಕ್ಯಕ್ಕೆ ಸೂರ್ಯಸಾಕ್ಷಿಗಳು.

ವೇದಗಳಲ್ಲಿ ಶರತ್ಕಾಲದಿಂದ ನವವರ್ಷದ ಆರಂಭ ಮಾಡುತ್ತಿದ್ದುದರ ಉಲ್ಲೇಖವಿದೆ. ಅಲ್ಲದೆ 'ನೂರು ಶರತ್ಕಾಲ ನಾವು ಸುಖವಾಗಿ ಬಾಳೋಣ, ಒಳಿತನ್ನು ಕೇಳೋಣ, ಸೊಗಸನ್ನು ಕಾಣೋಣ, ನಲವನ್ನು ಹಾಡೋಣ, ಗೆಲುವನ್ನು ಹೊಂದೋಣ' ಎಂಬಿವೇ ಅಭಿಪ್ರಾಯಗಳ ಉದಾತ್ತಮನೋಹರ ಜೀವನೋತ್ಸಾಹದ ಮಂತ್ರಗಳು ವೇದಗಳಲ್ಲಿವೆ. ಈ ಹಿನ್ನೆಲೆಯಲ್ಲಿ ವಿಕ್ರಮಸಂವತ್ಸರ (ವಿಕ್ರಮಶಕೆ) ಚಕ್ರದ ಆರಂಭ ಶರತ್ಕಾಲದಲ್ಲಿಯೇ ಆಗುವುದು ಗಮನಾರ್ಹ. ಅಂತೆಯೇ ವಿಕ್ರಮಶಕೆಯನ್ನೇ ಹೆಚ್ಚಾಗಿ ಆಧರಿಸುವ ಉತ್ತರ ಭಾರತೀಯರೂ, ಅವರಲ್ಲಿಯ ವರ್ತಕವರ್ಗಪ್ರಮುಖರೆನಿಸಿ ದಕ್ಷಿಣಕ್ಕೂ ಬಂದಿರುವ ಸೇಠರು (ಶ್ರೇಷ್ಠಿಗಳು), ಮಾರವಾಡಿಗಳೂ ತಮ್ಮ ವಾಣಿಜ್ಯದ, ಲೇವಾದೇವಿಯ, ಆಯವ್ಯಯದ ಎಲ್ಲ ಲೆಕ್ಕಪತ್ರ ದಸ್ತಾವೇಜುಗಳನ್ನು ದೀಪಾವಳಿಯಿಂದಲೇ ಆರಂಭಿಸುತ್ತಾರೆ, ಅಲ್ಲಿಗೇ ಮುಗಿಸುತ್ತಾರೆ. ಸೌರಮಾನದಲ್ಲಿಯೂ ಸಹ ದೀಪಾವಳಿಯು ತುಲಾಮಾಸದಲ್ಲಿಯೇ ಬರುವ ಕಾರಣ ತುಲಾ (ತಕ್ಕಡಿ) ಸಂಕೇತವೂ ಈ ಹಬ್ಬದ  ವಾಣಿಜ್ಯ-ಆರ್ಥಿಕಸಮೃದ್ಧಿಯ ವ್ಯಾವಹಾರಿಕ ಆಯಾಮವನ್ನು ಧ್ವನಿಸಿದೆಯೆನ್ನಬಹುದು.

ನರಕಚತುರ್ದಶಿ, ಬಲಿಪಾಡ್ಯಮಿ

ದೀಪಾವಳಿಯು ಒಂದು ಹಬ್ಬಮಾತ್ರವಲ್ಲ, ಅದೊಂದು ಪರ್ವಸಮೂಹವೇ ಹೌದೆಂಬುದು ಮುಂದೆ ನಮಗಿಲ್ಲಿ ಸಿದ್ಧವಾಗುತ್ತದೆ.ಶಕ್ರಾರ್ಚಾಎಂಬ ನಾಮಾಂತಾರವುಳ್ಳ ಇಂದ್ರಾರಾಧನಪರ್ವಸಂಚಯವು ಉಪೇಂದ್ರನ ಆರಾಧನೆಯೂ ಆಗಿದೆ. ವಿಷ್ಣುವಿನ ಇಪ್ಪತ್ನಾಲ್ಕು ಅವತಾರಗಳಲ್ಲಿ ಒಂದಾದ ಧನ್ವಂತರಿಯ ಸ್ಮೃತಿಯೂ ಇಲ್ಲಿದೆಯೆಂಬುದಕ್ಕೆ ತಮಿಳುನಾಡಿನಲ್ಲಿ ಇಂದಿಗೂ ನರಕಚತುರ್ದಶಿಯ ಬೆಳಗ್ಗೆ ಆರೋಗ್ಯದಾಯಕವಾದ ಲೇಹ್ಯವನ್ನು ಧನ್ವಂತರಿಯ ಪ್ರಸಾದವೆಂದು ಭಕ್ಷಿಸುವುದು ಸಾಕ್ಷಿಯಾಗಿದೆ. ಆದಿತ್ಯನೇ ವಿಷ್ಣು, ಅಂತರಿಕ್ಷಸ್ಥಾನೀಯನಾದ ಇಂದ್ರನೇ ನಾರಾಯಣ (ನಾರ > ನೀರಿನ ಅಯನ > ಹಾದಿ) ಎಂಬ ವೈದಿಕಸಮೀಕರಣದಂತೆ ಇಂದ್ರನು ಹೇಗೆ ವಿಷ್ಣುವೂ ಹೌದೋ ಹಾಗೆಯೇ ವಿಷ್ಣುವು ಶಿವನೂ ಹೌದು (ಆದಿತ್ಯನ ಭೂಸ್ಥಾನೀಯ ರೂಪ ಅಗ್ನಿ. ಅಗ್ನಿಯ ಶಾಂತ-ಘೋರ ರೂಪಗಳೇ ಶಿವ-ರುದ್ರರೆಂಬುದು ವೈದಿಕವಿದ್ಯಾಸಿದ್ಧಸತ್ಯ.)

ಹೀಗಾಗಿ ಶಿವನ ಪೂಜೆಯೂ ಇದೇ ಸಂದರ್ಭದಲ್ಲಿ ಕೇದಾರೇಶ್ವರವ್ರತವೆಂದು ದೀಪಾವಳಿಯಲ್ಲಿ ಅಡಕವಾಗಿದೆ.

ನರಕಚತುರ್ದಶಿಯು ಕೇವಲ ನರಕಾಸುರಸಂಹಾರಮಾಡಿದ ಶ್ರೀಕೃಷ್ಣನ ಯಶೋಗಾಥೆಯ ಸ್ಮೃತಿ ಮಾತ್ರವಲ್ಲ; ನರಕಭೀತಿಯ, ಅರ್ಥಾತ್ ಮೃತ್ಯುಭಯದ ನಿವಾರಣೆಯೂ ಹೌದು; ಅಳಿದ ಪಿತೃಗಳ ಸಂಸ್ಮೃತಿಯೂ ಹೌದು. ಈ ಮೂಲಕ ಅಳಿದವರ ಅಮರತೆಯನ್ನು ಸಾಬೀತು ಮಾಡುವ ಯತ್ನ ಇಲ್ಲಿದೆ. ಹೀಗಾಗಿಯೇ ಧರ್ಮಶಾಸ್ತ್ರದ ಕೆಲವು ಕೃತಿಗಳಲ್ಲಿ ಈ ದಿನವನ್ನು ಪ್ರೇತಚತುರ್ದಶಿಯೆಂದೂ ಹೆಸರಿಸಲಾಗಿದೆ. ಲಿಂಗಪುರಾಣವೂ ಸಹ ಇದೇ ಮಾತನ್ನು ಎತ್ತಿಹಿಡಿದಿದೆ. ಪದ್ಮಪುರಾಣವಂತೂ ಈ ಹಬ್ಬದ ಸ್ಥಾನವನ್ನು ಮೃತ್ಯುಜಯತೆಯೆಂದೇ ಕೊಂಡಾಡಿದೆ:

ಅಪಮೃತ್ಯುರ್ವಿನಶ್ಯತಿ ಸ್ನಾನಂ ನರಕಭೀರುಭಿಃ |

ಯಮಲೋಕಂ ನ ಪಶ್ಯತಿ ನರಕಸ್ಯ ಕ್ಷಯಾಯ ವೈ || (೪.೧೨೪.೪)   

ನರಕಚತುರ್ದಶಿಯಂತೆಯೇ ಬಲಿಪಾಡ್ಯಮಿಯೂ ವಿಷ್ಣುವಿಜಯದ ಕಥೆಯೇ. ಆದರೆ ಇಲ್ಲಿ ಬಲಿಚಕ್ರವರ್ತಿಯ ದಾನವೀರದ ದೀಪ್ತಿಯೂ ಇದೆ. ಈ ಕಥೆಯನ್ನು ಆರ್ಯ-ಅನಾರ್ಯ(ದ್ರಾವಿಡ)ಸಂಘರ್ಷ ಹಾಗೂ ಆರ್ಯರ ಆಕ್ರಮಣಶೀಲತೆಯ ಬಗ್ಗೆ ಅನುಚಿತವಾಗಿ ಬಳಸಿಕೊಳ್ಳಲಾಗಿದೆ. ಆದರೆ ಇಲ್ಲಿರುವುದು ಪ್ರಕೃತಿಯಲ್ಲಿ ಕಾಣುವ ಋತುಪರಿವರ್ತನೆ. ಅಷ್ಟೇಕೆ, ಈಚಿನ ಸಂಶೋಧನೆಗಳನ್ನು ಗಮನಿಸಿದರೆ ಈ ಪುರಾಣಕಥೆಯು ಭಾರತದ ಸಪ್ತಸಿಂಧೂಪ್ರದೇಶ(ಬ್ರಹ್ಮಾವರ್ತ)ದಿಂದ ಸಿಡಿದು ಹೊರಬಂದು, ದಾಶರಾಜ್ಞಯುದ್ಧದಲ್ಲಿ ಸೋತು ಪಶ್ಚಿಮದತ್ತ ನಡೆದ ಆರ್ಯರದೇ ಒಂದು ಗುಂಪು (ಇವರೇ ಅಸುರರೆಂದೂ ಪೂರ್ವದೇವರೆಂದೂ ವಿಶ್ರುತರು) ಪಾರ್ಶವರಾದ (ಪರ್ಷಿಯಾದತ್ತ ಸರಿದ) ಸಂಗತಿಯನ್ನು ಧ್ವನಿಸುತ್ತದೆಂದೂ ಹೇಳಬಹುದು. ಒಟ್ಟಿನಲ್ಲಿದು ಭಾರತೀಯರದೇ ಕಥೆ, ಆಂತರಿಕಸಂಘರ್ಷ ಹಾಗೂ ಪ್ರಾಕೃತಿಕವ್ಯತ್ಯಾಸಗಳ ಸ್ಮೃತಿಗಾಥೆ.

ಭಾರತದದ ನಾನಾಮೂಲೆಗಳಲ್ಲಿ ದೀಪಾವಳಿಯ ಆಚರಣೆ  

ನಾವಿಲ್ಲಿ ಗಮನಿಸಬೇಕಾದ ಮತ್ತೊಂದಂಶವೆಂದರೆ ದೀಪಾವಳಿಯ ವ್ರತವಿಭಾಗದಲ್ಲಿ ಈ ಹಬ್ಬವೂ ಅಡಕಗೊಂಡಿದೆಯೆಂಬುದನ್ನು. ಐತಿಹಾಸಿಕವಾದ ಚಂದ್ರಗುಪ್ತವಿಕ್ರಮಾದಿತ್ಯನ ಶಕವಿಜಯವೂ ದೀಪಾವಳಿಯಲ್ಲಿ ಅಡಗಿರುವುದು ಗಮನಾರ್ಹ.

ಅಂತೆಯೇ ಜೈನಮತದ ತೀರ್ಥಂಕರರಲ್ಲಿ ಅಂತಿಮನೆನಿಸಿದ ಭಗವಾನ್ ಮಹಾವೀರನ ನಿರ್ಯಾಣದ ದಿನವೂ ದೀಪಾವಳಿಯೇ.

ಬಂಗಾಳದ ಶಾಕ್ತರು ಸನತ್ಕುಮಾರಸಂಹಿತಾನುಸಾರವಾಗಿ ದೀಪಾವಳಿಯಲ್ಲಿಮಹಾರಾತ್ರಿಎಂಬ ಹೆಸರಿನ ದೇವೀಪೂಜೆ ಮಾಡುತ್ತಾರೆ.

ಪ್ರಾಚೀನಭಾರತದಲ್ಲಿಮಾರ್ಗಪಾಲೀಪೂಜಾಎಂಬ ಹೆಸರಿನಿಂದ ದೀಪಾವಳಿಯಲ್ಲಿ ಪ್ರಯಾಣಿಕರು (ವಿಶೇಷತಃ ಸಾರ್ಥರು) ಮಾರ್ಗರಕ್ಷಕ ಶಕ್ತಿದೇವತೆಗಳನ್ನು ದಿಬ್ಬಗಳಲ್ಲಿ ಪೂಜಿಸಿ ಗಜ-ತುರಗ-ರಥವೈಭವದೊಡನೆ ಮೆರವಣಿಗೆ ಮಾಡಿಸುತ್ತಿದ್ದರು. ಇಲ್ಲೆಲ್ಲ ಶಕ್ತ್ಯಾರಾಧನೆಯು ಸಹಜವಾಗಿಯೇ ಋತುಸಂಬಂಧಿಪರ್ವವಾದ ದೀಪಾವಳಿಗೆ ತಳಿಕೆಬಿದ್ದಿರುವುದು ಸ್ಪಷ್ಟ.

ಮಣಿಪುರ-ತ್ರಿಪುರಗಳ ನಾಗರಿಗೂ ದೀಪಾವಳಿ ಪಿತೃಪೂಜಾದಿನ.  ವಿಶೇಷತಃ ಬಲಿಪಾಡ್ಯಮಿಯ ಮರುದಿನಯಮದ್ವಿತೀಯಾಎಂದೇ ಈ ಆಚರಣೆ ಉಂಟು. ತರ್ಪಣಾದಿಗಳೂ ಇಲ್ಲಿವೆ.

ಉತ್ತರಭಾರತದಲ್ಲಿ ಇದೇ ದಿನದಂದು ಋಗ್ವೇದದಲ್ಲಿಯೇ ಬರುವ ಆದಿಮ ಸೋದರ-ಸೋದರಿಯರಾದ ಯಮ-ಯಮಿಯರ ಪೂಜೆಯೂ ತದಂಗವಾಗಿ ಅಣ್ಣ-ತಂಗಿಯರ ಹಬ್ಬವೂ ಇದೆ. ಇದನ್ನು ನಾರದಪುರಾಣ ಶಿಫಾರಾಸುಮಾಡಿದೆ ಕೂಡ (೧.೧೧೧.೧೮-೧೯). ಈ ಹಬ್ಬಕ್ಕೆಭಗಿನೀ-ಹಸ್ತಭೋಜನಎಂಬ ಹೆಸರೂ ಇದೆ.

ಸುಂದರ ದೀಪಗಳು. ಫೋಟೋ ಮೂಲ: ಗೂಗಲ್ ಫೋಟೋ ಅನ್ವೇಷಣೆ

ಶ್ರೀಹರ್ಷನ ‘ನಾಗಾನಂದ’ ನಾಟಕದಲ್ಲಿಯೇ ದೀಪಾವಳಿಗೂ ಅಳಿಯನಿಗೂ ನಂಟಿರುವುದು ಸೂಕ್ಷ್ಮವಾಗಿ ಗೋಚರಿಸುತ್ತದೆ. ಅಲ್ಲದೆ ಇದನ್ನುದೀಪಪ್ರತಿಪದುತ್ಸವಎಂದೂ ಹೇಳಲಾಗಿದೆ (ಅಂಕ ೪). ಈ ಹಬ್ಬವನ್ನು ಸುಖರಾತ್ರಿ, ಸುಖಸುಪ್ತಿಕಾ ಎಂಬಿವೇ ಹೆಸರುಗಳಿಂದ ನೀಲಮತಪುರಾಣ, ಆದಿತ್ಯಪುರಾಣಾದಿಗಳು ವಿವರಿಸಿವೆ. ಅಷ್ಟೇ ಅಲ್ಲ, ಇದು ಸ್ನಾನ-ಪಾನ-ಭೋಜನ-ವಿನೋದಗಳ ಉತ್ಸವವೂ ಹೌದೆಂದು ತಿಳಿಯುತ್ತದೆ. ಜೊತೆಗೆ ಜೂಜಾಟಕ್ಕೂ ಇಲ್ಲಿ ಅವಕಾಶವಿದೆ! (ನಮ್ಮ ಪೂರ್ವಿಕರು ಸಂಪೂರ್ಣವಾಗಿ ತೊಡೆದುಹಾಕಲು ಆಗದ ಚಟಗಳನ್ನು ಕೆಲವೇ ದಿನಗಳಿಗೆ ನಿಯಂತ್ರಿಸಿ, ಅಲ್ಲಿಯೂ ಅವುಗಳಿಗೆ ಧಾರ್ಮಿಕ-ವೈನೋದಿಕ-ಸಾಂಸ್ಕೃತಿಕ ಆಯಾಮಗಳನ್ನೇ ನೀಡಿರುವುದನ್ನು ಗಮನಿಸಿದಾಗ ಅವರ ವಿಶಾಲಬುದ್ಧಿ ಹಾಗೂ ವ್ಯವಹಾರಚಾತುರ್ಯಗಳಲ್ಲದೆ ಮಾನವನ ಮೂಲಭೂತದೌರ್ಬಲ್ಯಗಳನ್ನು ಸೂಕ್ಷ್ಮವಾಗಿ ವಿವೆಚಿಸಿದ ಪರಿಯೂ ತಿಳಿಯದಿರದು.) ಇದನ್ನುದ್ಯೂತಪ್ರತಿಪತ್ಎಂದೂ ಹೇಳಿ ಕಾಲ (ಮಹಾಕಾಲ > ಶಿವ) ಮತ್ತು ಕಾಳಿ (ಶಕ್ತಿ)ಯರು ಆಡುವ ಜಗತ್ಸೃಷ್ಟಿ-ಸ್ಥಿತಿ-ಲಯಗಳ ಜೂಜಾಟಕ್ಕಿದನ್ನು ಒಪ್ಪವಿಡಲಾಗಿದೆ.

ದೀಪಾವಳಿಯಲ್ಲಿ ಗೋಪೂಜೆಯೂ ಒಂದು ಅಂಗ. ಇಂದೂ ಸಹ ಮಲೆನಾಡು ಹಾಗೂ ಕರಾವಳಿಯ ಪ್ರದೇಶಗಳಲ್ಲಿ ಗೋವುಗಳಿಗೆ ಅಲಂಕಾರ-ಅರ್ಚನೆ-ಆಶನಾರ್ಪಣೆಗಳು ಸೊಗಸಾಗಿ ನಡೆದುಬಂದಿವೆ. ಇದನ್ನು ಧರ್ಮಶಾಸ್ತ್ರಗಳಲ್ಲಿಗೋವತ್ಸ-ದ್ವಾದಶೀಎಂಬ ಹೆಸರಿನಿಂದ ನೀರುತುಂಬುವ ಹಬ್ಬಕ್ಕೆ ಮುನ್ನವೇ ನಡೆಸಲಾಗುತ್ತಿತ್ತು. ಶ್ರೀಕೃಷ್ಣನುಇಂದ್ರಮಹಎಂಬ ಇಂದ್ರಾರಾಧನೆಗೆ ದನ-ಕರುಗಳ ಹಾಗೂ ಪರ್ವತಪೂಜೆಯ ಆಯಾಮ ನೀಡಿ ದೀಪಾವಳಿಗೆ ಮತ್ತಷ್ಟು ವ್ಯಾಪ್ತಿಯನ್ನೂ ಅರ್ಥವಂತಿಕೆಯನ್ನೂ ತಂದಿದ್ದಿಲ್ಲಿ ಸ್ಮರಣೀಯ.

ದೀಪಾವಳಿಯ ಆಚರಣೆ ಜಗದ್ವ್ಯಾಪಿ  

ದೀಪಾವಳಿಯು ಮುಖ್ಯವಾಗಿ ಬೆಳಕಿನ ಹಬ್ಬವಾದರೂ ಸದ್ದು-ಗದ್ದಲಗಳಿಗೆ ಇಲ್ಲಿ ಆಸ್ಪದವುಂಟಾದದ್ದು ಇತ್ತೀಚೆಗೆ. ನಿಬಂಧಗ್ರಂಥಗಳಲ್ಲಿ ಬಾಣಬಿರುಸುಗಳು ಉಲ್ಲೇಖಗೊಂಡಿವೆ. ಮಹಾಲಯ ಅಮಾವಾಸ್ಯೆಗಾಗಿ ಭೂಲೋಕಕ್ಕೆ ಬಂದ ಪಿತೃಗಳು ಮತ್ತೆ ತಮ್ಮ ಲೋಕಕ್ಕೆ ತೆರಳಲು ದಾರಿ ತೋರುವುದಕ್ಕಾಗಿ ಈ ಬಗೆಯ ಪಟಾಕಿ-ಮತಾಪು ಮೇಲಾಟಗಳು ಬೇಕಾದವೆಂದು ಅಲ್ಲಿ ಒಕ್ಕಣೆಯಿದೆ:

ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಲಯೇ |

ಉಜ್ಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತೋ ವ್ರಜಂತು ತೇ ||

ಉಲ್ಕಾಹಸ್ತಾ ನರಾಃ ಕುರ್ಯುಃ ಪಿತೃಣಾಂ ಮಾರ್ಗದರ್ಶನಂ ||

ಅಲ್ಲದೆ ಬಾಣ-ಬಿರುಸುಗಳ ದಾನವೂ (ಉಲ್ಕಾದಾನ) ವಿಹಿತವಾಗಿದೆ. ಪಿತೃಗಳಿಗೆ ದೀಪಾರಾಧನೆಯನ್ನು ಮಾಡುವದೀಪಶ್ರಾದ್ಧವಿಧಾನವೂ ಇಲ್ಲಿದೆ. ಉತ್ತರಕರ್ನಾಟಕ-ಮಹಾರಾಷ್ಟ್ರ ಪ್ರದೇಶಗಳಲ್ಲಿ ತೇಲಿಬಿಡುವ ಆಕಾಶಬುಟ್ಟಿಯೂ ಇದೆ ತತ್ತ್ವವನ್ನು ಒಳಗೊಂಡದ್ದು. (ಇಂಥ ಆರಾಧನೆಯನ್ನು ಭಾರತೀಯಸಂಸ್ಕೃತಿಯ ನಿಕಟಸಾದೃಶ್ಯವಿರುವ ಇಂಕಾ-ಮಾಯಾಸಂಸ್ಕೃತಿಗಳ ನೆಲೆಯಾದ ಮೆಕ್ಸಿಕೋದಲ್ಲಿ All Souls’ Day ಎಂದು ನಡೆಸುತ್ತಾರೆ. ಅದೂ ಇದೇ ಋತುವಿನಲ್ಲಿ - ನವೆಂಬರ್ ಏಳರಂದು - ಬರುತ್ತದೆ. ಈ ಸಂದರ್ಭದಲ್ಲಿ ಶ್ಮಶಾನಗಳಲ್ಲಿ ದೀಪಾರಾಧನೆ, ಸರ್ವತ್ರ ಜ್ಯೋತಿರ್ವಿಲಾಸ, ಬಾಣ-ಬಿರುಸುಗಳ ಮೇಳ ಸಾಗುತ್ತದೆ.)

ಕಾರ್ತಿಕಮಾಸದಲ್ಲಿ ದೀಪಗಳನ್ನು ನೀರಿನಲ್ಲಿ ತೇಲಿಬಿಡುವುದು ನಮ್ಮ ದೇಶದಲ್ಲಿ ಸರ್ವತ್ರ ಸಂದಿರುವ ಆಚಾರ. ಇದೂ ದೀಪಾವಳಿಯ ವಿಸ್ತಾರವೇ. ಇಂಥ ಪ್ರವೃತ್ತಿಯನ್ನು ಥೈಲ್ಯಾಂಡಿನಲ್ಲಿಯೂ ಕಾಣಬಹುದು. ಇದನ್ನುಮೇ ಖೋಂಗಾ ಬಾ’ (ತಾಯಿ ಗಂಗೆಯ ಆರಾಧನೆಗಾಗಿ)ಲೊಯ್ ಕಾರ್ತೊಂಗ್’ (ಬಾಳೆಲೆಯ ದೊನ್ನೆಯಲ್ಲಿ ದೀಪವನ್ನು ತೇಲಿಸುವುದು) ಎನ್ನುವರು. ಕ್ಯಾಂಬೋಡಿಯಾ ಹಾಗೂ ಬರ್ಮಾಗಳಲ್ಲಿಯೂ ಇದೇ ಪದ್ಧತಿಯು ಪಿತೃಗಳಿಗೆ ದಾರಿತೋರಲೆಂದು ಬಳಕೆಯಲ್ಲಿದೆ. ಚೀನಾದಲ್ಲಿಯೂ ಕಾರ್ತಿಕಪೂರ್ಣಿಮೆ ಲಾಟೀನುಹಬ್ಬವಾಗಿದೆ. ಜಪಾನಿನಲ್ಲಿಬೊನ್ ಮಟ್ ಸುರಿ ಎಂಬುದಾಗಿ (ಪಿತೃಪೂಜೆ) ನೀರಿನಲ್ಲಿ, ಎತ್ತರದ ಎಡೆಗಳಲ್ಲಿ ದೀಪಶ್ರೇಣಿಯಿರುವುದಲ್ಲದೆ ಪಿಂಡಪ್ರದಾನ ಮತ್ತು ತರ್ಪಣಾದಿಗಳೂ ಉಂಟು. ಈಜಿಪ್ಟಿನಲ್ಲಿ ದೀಪಾವಳಿಯು ನೂತನಾಗ್ನಿಪ್ರಜ್ವಾಲನಪರ್ವವಾಗಿತ್ತು. ಮನೆ-ಮನೆಗಳ ಬಾಗಿಲಿನಲ್ಲಿಯೂ ದೀಪವಿರಿಸಿ ಹಬ್ಬದಡುಗೆ ಮಾಡಿ ಒಸೈರಿಸ್ (ಮೊದಲು ಮೃತನಾದ ಮನುಜದೇವ) ಪೂಜೆ ನಡೆಸುತ್ತಿದ್ದರು. ಗ್ರೀಕರುಕ್ಯಾಂಡಲೇಮಸ್ಎಂದು ಆಚರಿಸುತ್ತಿದ್ದ ದೀಪಾವಳಿಯು ಕ್ರೈಸ್ತಮತಕ್ಕೂ ಅನಂತರ ಹರಿದುಬಂದಿತು. ಯೆಹೂದ್ಯರಛ(ಹ)ನುಕ್ಕೋಹ್ದೀಪಾವಳಿಯೇ. ರೋಮನ್ನರಲೆಮೂರಿಯಾದೀಪಾವಳಿ ಹಾಗೂ ಅನಾಥಪಿತೃತರ್ಪಣಮಹೋತ್ಸವವಾಗಿತ್ತು (ನಮ್ಮಲ್ಲಿಯೂ ನಿರ್ಗತಿಗರಾಗಿ, ನಿರ್ಬಾಂಧವರಾಗಿ ಸತ್ತವರಿಗೆಕಾರುಣ್ಯಪಿತೃಗಳೆಂದು ಹೆಸರಿಸಿ ತರ್ಪಣ ಬಿಡುತ್ತಿದ್ದ ಪರಂಪರೆಯಿದೆ.ಯೇಷಾಂ ನ ಮಾತಾ ನ ಪಿತಾ ನ ಬಂಧುರ್ನಾನ್ಯಗೊತ್ರಿಣಃ | ತೇ ಸರ್ವೇ ತೃಪ್ತಿಮಾಯಾಂತು ಮಯೋತ್ಸೃಷ್ಟೈಃ ಕುಶೋದಕೈಃ ||” ಎಂಬ ಶ್ಲೋಕವೇ ಇದಕ್ಕೆ ಪ್ರಮಾಣ.) ನೇಪಾಳದಲ್ಲಿಧನತ್ರಯೋದಶಿಎಂಬ ಹೆಸರಿನಲ್ಲಿ ಲಕ್ಷ್ಮೀಪೂಜೆ ಇದ್ದದ್ದಲ್ಲದೆ ಕಾಗೆ ಹಾಗೂ ನಾಯಿಗಳಿಗೆ ವಿಶೇಷವಾದ ಅನ್ನಸಂತರ್ಪಣೆ ಸಾಗುತ್ತಿತ್ತು. ಇದನ್ನು ಧರ್ಮಶಾಸ್ತ್ರಗಳಲ್ಲಿ 'ಕಾಕತ್ರಯೋದಶಿ' ಮತ್ತು 'ಕುಕ್ಕುರತ್ರಯೋದಶಿ' ಎಂದು ಹೆಸರಿಸಲಾಗಿದೆ. ಕಾಗೆಗೂ ಪಿತೃಗಳಿಗೂ ಇರುವ ಸಂಬಂಧ ಸರ್ವವೇದ್ಯ. ನಾಯಿಗೂ ಕಾಲಭೈರವನಿಗೂ ಇರುವ ಸಂಬಂಧ ಸಹ ಸುವಿದಿತವೇ. ಯಮನಿಗೂ ನಾಯಿಗಳಿಗೂ ಇರುವ ಸಂಬಂಧ ವೇದವಿಶ್ರುತ.

ಹೀಗೆ ಜಗದಗಲಕ್ಕೂ ದೀಪಾವಳಿಯು ಪ್ರಕಾಶಪ್ರೀತಿ-ಪಿತೃಪೂಜೆ-ಸುಖಸಮೃದ್ಧಿಗಳ ಸಮಾಹಾರವಾಗಿ 'ಅಸತೋ ಮಾ ಸದ್ಗಮಯ | ತಮಸೋ ಮಾ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃತಂ ಗಮಯ ||' ಎಂಬ ವೈದಿಕಶಾಂತಿಮಂತ್ರದ ಸ್ಫೂರ್ತಿಯಿಂದ ಹರಡಿ ನಾನಾವಿಧವಾಗಿ ರೂಪ-ರೂಪಾಂತರಗಳನ್ನು ತಳೆದ ಪರಿ ತುಂಬ ಸ್ವರಸ, ಸುರಸ. ಹೀಗಾಗಿ ಇದು ಅಕ್ಷರಶಃ ವಿಶ್ವವ್ಯಾಪಿ ದೀಪಾವಳಿಯೇ.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Indian Perspective of Truth and Beauty in Homer’s Epics is a unique work on the comparative study of the Greek Epics Iliad and Odyssey with the Indian Epics – Rāmāyaṇa and Mahābhārata. Homer, who laid the foundations for the classical tradition of the West, occupies a stature similar to that occupied by the seer-poets Vālmīki and Vyāsa, who are synonymous with the Indian culture. The author...

Karnataka’s celebrated polymath, D V Gundappa brings together in the sixth volume of reminiscences character sketches of prominent public figures, liberals, and social workers. These remarkable personages hailing from different corners of South India are from a period that spans from the late nineteenth century to the mid-twentieth century. Written in Kannada in the 1970s, these memoirs go...

An Introduction to Hinduism based on Primary Sources

Authors: Śatāvadhānī Dr. R Ganesh, Hari Ravikumar

What is the philosophical basis for Sanātana-dharma, the ancient Indian way of life? What makes it the most inclusive and natural of all religio-philosophical systems in the world?

The Essential Sanātana-dharma serves as a handbook for anyone who wishes to grasp the...

Karnataka’s celebrated polymath, D V Gundappa brings together in the fifth volume, episodes from the lives of traditional savants responsible for upholding the Vedic culture. These memorable characters lived a life of opulence amidst poverty— theirs  was the wealth of the soul, far beyond money and gold. These vidvāns hailed from different corners of the erstwhile Mysore Kingdom and lived in...

Padma Bhushan Dr. Padma Subrahmanyam represents the quintessence of Sage Bharata’s art and Bhārata, the country that gave birth to the peerless seer of the Nāṭya-veda. Padma’s erudition in various streams of Indic knowledge, mastery over many classical arts, deep understanding of the nuances of Indian culture, creative genius, and sublime vision bolstered by the vedāntic and nationalistic...

Bhārata has been a land of plenty in many ways. We have had a timeless tradition of the twofold principle of Brāhma (spirit of wisdom) and Kṣāttra (spirit of valour) nourishing and protecting this sacred land. The Hindu civilisation, rooted in Sanātana-dharma, has constantly been enriched by brāhma and safeguarded by kṣāttra.
The renowned Sanskrit poet and scholar, Śatāvadhānī Dr. R...

ಛಂದೋವಿವೇಕವು ವರ್ಣವೃತ್ತ, ಮಾತ್ರಾಜಾತಿ ಮತ್ತು ಕರ್ಷಣಜಾತಿ ಎಂದು ವಿಭಕ್ತವಾದ ಎಲ್ಲ ಬಗೆಯ ಛಂದಸ್ಸುಗಳನ್ನೂ ವಿವೇಚಿಸುವ ಪ್ರಬಂಧಗಳ ಸಂಕಲನ. ಲೇಖಕರ ದೀರ್ಘಕಾಲಿಕ ಆಲೋಚನೆಯ ಸಾರವನ್ನು ಒಳಗೊಂಡ ಈ ಹೊತ್ತಗೆ ಪ್ರಧಾನವಾಗಿ ಛಂದಸ್ಸಿನ ಸೌಂದರ್ಯವನ್ನು ಲಕ್ಷಿಸುತ್ತದೆ. ತೌಲನಿಕ ವಿಶ್ಲೇಷಣೆ ಮತ್ತು ಅಂತಃಶಾಸ್ತ್ರೀಯ ಅಧ್ಯಯನಗಳ ತೆಕ್ಕೆಗೆ ಬರುವ ಬರೆಹಗಳೂ ಇಲ್ಲಿವೆ. ಶಾಸ್ತ್ರಕಾರನಿಗಲ್ಲದೆ ಸಿದ್ಧಹಸ್ತನಾದ ಕವಿಗೆ ಮಾತ್ರ ಸ್ಫುರಿಸಬಲ್ಲ ಎಷ್ಟೋ ಹೊಳಹುಗಳು ಕೃತಿಯ ಮೌಲಿಕತೆಯನ್ನು ಹೆಚ್ಚಿಸಿವೆ. ಈ...

Karnataka’s celebrated polymath, D V Gundappa brings together in the fourth volume, some character sketches of the Dewans of Mysore preceded by an account of the political framework of the State before Independence and followed by a review of the political conditions of the State after 1940. These remarkable leaders of Mysore lived in a period that spans from the mid-nineteenth century to the...

Bharatiya Kavya-mimamseya Hinnele is a monograph on Indian Aesthetics by Mahamahopadhyaya N. Ranganatha Sharma. The book discusses the history and significance of concepts pivotal to Indian literary theory. It is equally useful to the learned and the laity.

Sahitya-samhite is a collection of literary essays in Kannada. The book discusses aestheticians such as Ananda-vardhana and Rajashekhara; Sanskrit scholars such as Mena Ramakrishna Bhat, Sridhar Bhaskar Varnekar and K S Arjunwadkar; and Kannada litterateurs such as DVG, S L Bhyrappa and S R Ramaswamy. It has a foreword by Shatavadhani Dr. R Ganesh.

The Mahābhārata is the greatest epic in the world both in magnitude and profundity. A veritable cultural compendium of Bhārata-varṣa, it is a product of the creative genius of Maharṣi Kṛṣṇa-dvaipāyana Vyāsa. The epic captures the experiential wisdom of our civilization and all subsequent literary, artistic, and philosophical creations are indebted to it. To read the Mahābhārata is to...

Shiva Rama Krishna

சிவன். ராமன். கிருஷ்ணன்.
இந்திய பாரம்பரியத்தின் முப்பெரும் கதாநாயகர்கள்.
உயர் இந்தியாவில் தலைமுறைகள் பல கடந்தும் கடவுளர்களாக போற்றப்பட்டு வழிகாட்டிகளாக விளங்குபவர்கள்.
மனித ஒற்றுமை நூற்றாண்டுகால பரிணாம வளர்ச்சியின் பரிமாணம்.
தனிநபர்களாகவும், குடும்ப உறுப்பினர்களாகவும், சமுதாய பிரஜைகளாகவும் நாம் அனைவரும் பரிமளிக்கிறோம்.
சிவன் தனிமனித அடையாளமாக அமைகிறான்....

ऋतुभिः सह कवयः सदैव सम्बद्धाः। विशिष्य संस्कृतकवयः। यथा हि ऋतवः प्रतिसंवत्सरं प्रतिनवतामावहन्ति मानवेषु तथैव ऋतुवर्णनान्यपि काव्यरसिकेषु कामपि विच्छित्तिमातन्वते। ऋतुकल्याणं हि सत्यमिदमेव हृदि कृत्वा प्रवृत्तम्। नगरजीवनस्य यान्त्रिकतां मान्त्रिकतां च ध्वनदिदं चम्पूकाव्यं गद्यपद्यमिश्रितमिति सुव्यक्तमेव। ऐदम्पूर्वतया प्रायः पुरीपरिसरप्रसृतानाम् ऋतूनां विलासोऽत्र प्रपञ्चितः। बेङ्गलूरुनामके...

The Art and Science of Avadhānam in Sanskrit is a definitive work on Sāhityāvadhānam, a form of Indian classical art based on multitasking, lateral thinking, and extempore versification. Dotted throughout with tasteful examples, it expounds in great detail on the theory and practice of this unique performing art. It is as much a handbook of performance as it is an anthology of well-turned...

This anthology is a revised edition of the author's 1978 classic. This series of essays, containing his original research in various fields, throws light on the socio-cultural landscape of Tamil Nadu spanning several centuries. These compelling episodes will appeal to scholars and laymen alike.
“When superstitious mediaevalists mislead the country about its judicial past, we have to...

The cultural history of a nation, unlike the customary mainstream history, has a larger time-frame and encompasses the timeless ethos of a society undergirding the course of events and vicissitudes. A major key to the understanding of a society’s unique character is an appreciation of the far-reaching contributions by outstanding personalities of certain periods – especially in the realms of...

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhānī Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective to every discussion. These essays deal with the philosophy, history, aesthetics, and practice of...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...