ರಾಮಕಥಾವಿಸ್ತರ: ಒಂದು ಮರುನೋಟ - 3

This article is part 3 of 7 in the series ರಾಮಕಥಾವಿಸ್ತರ

ವೈದಿಕಪರಂಪರೆಯು ಬಗೆಬಗೆಯ ರಾಮಾಯಣಗಳನ್ನು ರೂಪಿಸಿಕೊಂಡಿರುವುದರ ಮೂಲವನ್ನು ಮಹಾಭಾರತದ ವನಪರ್ವದಲ್ಲಿ ಬರುವ ರಾಮೋಪಾಖ್ಯಾನದಲ್ಲಿಯೇ ಕಾಣಬಹುದು. ಪುರಾಣಗಳಲ್ಲಿ, ಆಗಮಗಳಲ್ಲಿ, ಅಧ್ಯಾತ್ಮಗ್ರಂಥಗಳಲ್ಲಿ ವಿಭಿನ್ನಭಾಷೆಗಳ ಕವಿಗಳ ಕಾವ್ಯ-ನಾಟಕಗಳಲ್ಲಿ ಚಿತ್ರ-ವಿಚಿತ್ರವಾದ ಬೆಳೆವಣಿಗೆಯಾಗಿದೆಯಾದರೂ ಇವುಗಳೆಲ್ಲ ಒಂದು ವಿಲಕ್ಷಣಪಾಕವನ್ನು ಪಡೆದಿರುವುದು ವಾಲ್ಮೀಕಿಕೃತವೆಂದೇ ತಮ್ಮನ್ನು ಗುರುತಿಸಿಕೊಳ್ಳುವ “ಅದ್ಭುತರಾಮಾಯಣ”, “ಅಧ್ಯಾತ್ಮರಾಮಾಯಣ”, “ಆನಂದರಾಮಾಯಣ” ಮತ್ತು “ಭುಷುಂಡೀರಾಮಾಯಣ”ಗಳಂಥ ಗ್ರಂಥಗಳಲ್ಲಿ. ದಿಟವೇ, “ಯೋಗವಾಸಿಷ್ಠ”ವು ಇದೇ ಸಾಲಿಗೆ ಬರುವಂಥದ್ದು. ಆದರೆ ಅಲ್ಲಿ ರಾಮಕಥಾಭಾಗಕ್ಕಿಂತ ತತ್ತ್ವಭಾಗವೇ ಎಣೆಮೀರಿ ವಿಸ್ತರಿಸಿಕೊಂಡ ಕಾರಣ ಅದನ್ನಿಲ್ಲಿ ಲೆಕ್ಕಿಸಲಾಗುವುದಿಲ್ಲ. ಪ್ರಾಯಶಃ ರಾಮಸಂಬಂಧವನ್ನೂ ವಾಲ್ಮೀಕಿಯ ಹೆಸರನ್ನೂ ಅಂಟಿಸಿಕೊಂಡ ಗ್ರಂಥಗಳ ಪೈಕಿ ತತ್ತ್ವಸ್ವಾರಸ್ಯ ಮತ್ತು ಕಾವ್ಯಸೌಂದರ್ಯಗಳ ದೃಷ್ಟಿಯಿಂದ “ಯೋಗವಾಸಿಷ್ಠ”ವೇ ಸರ್ವೋಚ್ಚ. ಇದರ ಗಾತ್ರವೂ ಎಲ್ಲಕ್ಕಿಂತ ಮಿಗಿಲು.

ಬೌದ್ಧ ಮತ್ತು ಜೈನರ ಪರಂಪರೆಗಳಲ್ಲಿ ಕೂಡ ರಾಮಕಥೆ ಹರಿದುಬಂದಿದ್ದರೂ ಅದು ಮುಖ್ಯವಾಹಿನಿಯಲ್ಲಿ ಸೇರಿಹೋಗಿಲ್ಲ. ಜೊತೆಗೆ ಬೌದ್ಧರ “ದಶರಥಜಾತಕ” ತುಂಬ ಅಲ್ಪಗಾತ್ರದ ಕೃತಿ; ಮತ್ತಿದರ ಸ್ವಾರಸ್ಯವೂ ಬಲು ಕಡಮೆ. ಜೈನಪರಂಪರೆಯಲ್ಲೇನೋ ವಿಮಲಸೂರಿಯ “ಪಉಮಚರಿಯ” ಕೃತಿಯಿಂದ ಮೊದಲ್ಗೊಂಡು ಬೇರೆ ಬೇರೆ ಪುರಾಣ-ಕಾವ್ಯಗಳಲ್ಲಿ ರಾಮಕಥೆ ಬೆಳೆದಿದ್ದರೂ ಗಾಢವಾದ ಜೈನಮತವಾಸನೆಯು ಮೂಲದ ರಾಮಕಥೆಯ ಸೊಗಸುಗಳನ್ನೆಷ್ಟನ್ನೋ ಸಪ್ಪೆಗೊಳಿಸಿದೆ. ಜೊತೆಗೆ, ಜನಸಾಮಾನ್ಯರಿಗೆ ರಂಜನೆಯಾಗಬಲ್ಲ ಇನ್ನೆಷ್ಟೋ ಸಂದರ್ಭ-ಸ್ವಾರಸ್ಯಗಳನ್ನು ಮತವಿಚಾರದ ನಿರೂಪಣೆಗಾಗಿ ಬಲಿಗೊಟ್ಟ ಕಾರಣ ಸ್ವತಃ ಜೈನರಿಗೇ ಇವು ಅರೋಚಕವೆನಿಸಿವೆ. ಒಂದಂತೂ ನಿಜ, ಬೌದ್ಧ ಮತ್ತು ಜೈನಪರಂಪರೆಗಳ ರಾಮಕಥಾನಕಗಳು ವಾಲ್ಮೀಕಿಪ್ರತಿಭೆಯ ವಿಕೃತಿಯೇ ಹೊರತು ಆ ಸಂಸ್ಕೃತಿಗೆ ಮೂಲವೆನಿಸಬಲ್ಲ ಪ್ರಕೃತಿಯಲ್ಲ. ಇವು ಯಶಸ್ವಿಯಾದ, ಜನಾದರಣೆ ಗಳಿಸಿದ ಯಾವುದೇ ಸುಂದರಸಂಗತಿಯನ್ನು ತಮ್ಮ ತಮ್ಮ ಮತಪ್ರಚಾರಕ್ಕೆ ಬಳಸಿಕೊಳ್ಳುವ ಸಂಘಟಿತಮತಗಳ ಜಾಣ್ಮೆಗೂ ಸಾಕ್ಷಿ.

“ಅದ್ಭುತರಾಮಾಯಣ”, “ಅಧ್ಯಾತ್ಮರಾಮಾಯಣ”, “ಆನಂದರಾಮಾಯಣ” ಮತ್ತು “ಭುಷುಂಡೀರಾಮಾಯಣ”ಗಳೇ ವಾಲ್ಮೀಕಿರಾಮಾಯಣಕ್ಕಿಂತ ಮಿಗಿಲಾಗಿ ದೇಶಭಾಷೆಗಳ ರಾಮಕಥಾಕಾವ್ಯಗಳನ್ನು ಪ್ರಭಾವಿಸಿವೆಯೆಂದರೆ ಆಶ್ಚರ್ಯವಾಗಬಹುದು. ಸಂಸ್ಕೃತದ ಹೆಚ್ಚಿನ ಮಹಾಕವಿಗಳೆಲ್ಲ ತಮ್ಮ ರಾಮಕಥಾಶ್ರಿತವಾದ ಕಾವ್ಯ-ನಾಟಕಗಳನ್ನು ರಚಿಸಿದ ಬಳಿಕ ಮೇಲೆ ಕಾಣಿಸಿದ ರಾಮಾಯಣಗಳು ಹರಳುಗಟ್ಟಿರುವುದು ಸಂಭವನೀಯ. ಈ ಕಾರಣದಿಂದಲೇ ಭಾಸ, ಕಾಳಿದಾಸ, ಭವಭೂತಿ, ದಿಙ್ನಾಗರಂಥ ಕವಿಗಳ ಕೃತಿಗಳಲ್ಲಿ ಕಾಣಸಿಗದ ವಿವರಗಳು ದೇಶಭಾಷೆಗಳ ರಾಮಕಥಾಕಾವ್ಯಗಳಲ್ಲಿ ತೋರಿಕೊಳ್ಳುತ್ತವೆ. ನಾವೆಲ್ಲ ಬಲ್ಲಂತೆ ದೇಶಭಾಷೆಗಳಲ್ಲಿ ಸಾಹಿತ್ಯಸೃಷ್ಟಿ ಸಾವಿರಾರು ವರ್ಷಗಳಿಗೆ ಮುನ್ನವೇ ಮೊದಲಾದರೂ ಯಾವ ಭಾಷೆಯಲ್ಲಿಯೂ ರಾಮಕಥೆ ಸಾವಿರ ವರ್ಷಗಳಿಗೂ ಹಿಂದಿನ ಕಾವ್ಯಗಳಲ್ಲಿ ಉಪಲಭ್ಯವಿಲ್ಲದಿರುವುದು ಗಮನಾರ್ಹ.

ತಮಿಳಿನ “ಕಂಬರಾಮಾಯಣ” ಮತ್ತು ಕನ್ನಡದ “ಭುವನೈಕರಾಮಾಭ್ಯುದಯ” (ಪೊನ್ನನ ಅನುಪಲಬ್ಧಕೃತಿ) ಸುಮಾರು ಸಾವಿರ ವರ್ಷಗಳ ಮುನ್ನ ರಚಿತವಾದವು. ತೆಲುಗಿನ ಭಾಸ್ಕರಾದಿಗಳ ರಾಮಾಯಣ ಇವುಗಳಿಗಿಂತ ಹಲವು ಶತಮಾನಗಳಷ್ಟು ಅರ್ವಾಚೀನ. ನಾಗಚಂದ್ರನ “ರಾಮಚಂದ್ರಚರಿತಪುರಾಣ”ವಂತೂ ಅಪ್ಪಟವಾಗಿ ಜೈನಕೃತಿ. ಇನ್ನುಳಿದಂತೆ ಒರಿಯಾ, ಬಂಗಾಳಿ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಬಂದ ರಾಮಾಯಣಗಳೆಲ್ಲ ಮತ್ತೂ ಈಚಿನವು; ಯಾವುವೂ ಆರೇಳು ನೂರು ವರ್ಷಗಳ ಹಿಂದೆ ಹೋಗುವುದಿಲ್ಲ. ಕನ್ನಡ, ತೆಲುಗು, ಮಲಯಾಳ ಭಾಷೆಗಳ ಇನ್ನಿತರ ರಾಮಕಾವ್ಯಗಳೂ ಹೆಚ್ಚು-ಕಡಮೆ ಈ ಕಾಲಮಾನವನ್ನೇ ಅನುಸರಿಸುತ್ತವೆ. ಒಟ್ಟಿನಲ್ಲಿ ನಿರಪವಾದವೆಂಬಂತೆ ಇವೆಲ್ಲ ರಾಮಾಯಣದ ಮತೀಯ-ತತ್ತ್ವೀಯ-ಔಪಾಸನೀಯಮುಖಗಳು ಬಲಿತ ಬಳಿಕವೇ ರಚಿತವಾಗಿವೆಯೆಂಬುದು ಸತ್ಯ. ಇಂಥ ಆಧಾರ ಇವುಗಳಿಗೆ ದಕ್ಕಿರುವುದು ಮೇಲೆ ಕಾಣಿಸಿದ ರಾಮಾಯಣಗಳಿಂದ. ಬಹುಶಃ “ಕಂಬರಾಮಾಯಣ”ವೊಂದು ಶ್ರೀವೈಷ್ಣವಪರಂಪರೆಯ ಕೆಲವು ಅಂಶಗಳನ್ನು ಹೆಣೆದುಕೊಂಡು ಬೆಳೆದಿದೆ ಎಂಬ ಅಪವಾದವನ್ನುಳಿದರೆ ಮಿಕ್ಕೆಲ್ಲ ಪ್ರಸಿದ್ಧವಾದ ಪ್ರಾಂತೀಯಭಾಷಾರಾಮಾಯಣಗಳೂ ಸ್ಥೂಲಾದ್ವೈತದ ವಿಶಾಲದೃಷ್ಟಿಕೋನವನ್ನೇ ನೆಮ್ಮಿ ನಡೆದಿವೆ. ಇವುಗಳ ಪೈಕಿ ತುಲಸೀದಾಸರ “ರಾಮಚರಿತಮಾನಸ” ಜಗದ್ವಿಖ್ಯಾತ. ಇದು ಪ್ರಧಾನವಾಗಿ “ಅಧ್ಯಾತ್ಮರಾಮಾಯಣ” ಮತ್ತು “ಆನಂದರಾಮಾಯಣ”ಗಳ ಪ್ರಭಾವದಿಂದ ರೂಪುಗೊಂಡ ಕೃತಿ. ಇದನ್ನೂ ವೈಷ್ಣವಮತಗಳು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ಈಗಲೂ ಬಗೆಬಗೆಯ ವ್ಯಾಖ್ಯಾಶೀರ್ಷಾಸನಗಳನ್ನು ಹಾಕುತ್ತಿರುವುದು ದೃಷ್ಟಚರ. ಕೇರಳದಲ್ಲಿ ಇಂದಿಗೂ ಪಾರಾಯಣಗ್ರಂಥವಾಗಿರುವ ಎಳುತ್ತಚ್ಚಾನ್ ಕವಿಯ “ಅಧ್ಯಾತ್ಮರಾಮಾಯಣ” ತನ್ನ ಹೆಸರಿನಿಂದಲೇ ಪೂರ್ವೋಕ್ತಕೃತಿಗೆ ಋಣಿಯೆಂದು ತಿಳಿಸಿದೆ. ಒರಿಸ್ಸಾದ ಸರಳದಾಸನ ರಾಮಾಯಣವೂ ಬಲುಮಟ್ಟಿಗೆ ಇದೇ ಜಾಡಿನದು. ಬಂಗಾಳದ ಕೃತ್ತಿವಾಸನ ರಾಮಾಯಣ ಅದ್ವೈತದಲ್ಲಿಯೇ ಆತ್ಯಂತಿಕವಾದ ತಾತ್ಪರ್ಯವುಳ್ಳ ಶಾಕ್ತಮತದ ಪ್ರಭಾವದಿಂದ ಬೆಳೆದಿದೆ. ಹೀಗೆ ಮತ್ತಷ್ಟು ಉದಾಹರಣೆಗಳನ್ನು ಬೆಳೆಸಬಹುದಾದರೂ ತೀರ್ಮಾನವೇನೂ ವ್ಯತ್ಯಾಸವಾಗದ ಕಾರಣ ಇಲ್ಲಿಗೆ ವಿರಮಿಸಬಹುದು.

ಇದೆಲ್ಲವನ್ನೂ ಗಮನಿಸಿದಾಗ ನಮ್ಮ ದೇಶದ ಜನಮಾನಸದಲ್ಲಿ ಸಾಕ್ಷಾತ್ತಾಗಿ ವಾಲ್ಮೀಕಿಮುನಿಗಳ ರಾಮಾಯಣವು ಹೊಕ್ಕು ನೆಲಸಿರುವುದಕ್ಕಿಂತ ಹೆಚ್ಚಾಗಿ ಅದು “ಅದ್ಭುತರಾಮಾಯಣ”, “ಅಧ್ಯಾತ್ಮರಾಮಾಯಣ” ಮತ್ತು “ಆನಂದರಾಮಾಯಣ”ಗಳಂಥ ಸಂಸ್ಕೃತಗ್ರಂಥಗಳ ಮೂಲಕ ಹಾಯ್ದುಬಂದು ಸ್ಥಿರಗೊಂಡಿದೆಯೆಂದು ನಿಶ್ಚಯಿಸಬಹುದು. ಗೀತ, ನೃತ್ಯ, ನಾಟಕ, ಚಿತ್ರ, ಶಿಲ್ಪ, ಚಲನಚಿತ್ರ ಮತ್ತು ದೂರದರ್ಶನಗಳ ಮಟ್ಟಿಗೂ ಇದು ಅನ್ವಯಿಸುವ ತಥ್ಯ. ಈ ಮೊದಲೇ ನಾವು ಗಮನಿಸಿದಂತೆ ಅದ್ಭುತ-ಅಧ್ಯಾತ್ಮ-ಆನಂದರಾಮಾಯಣಗಳು ಮತ, ಉಪಾಸನೆ, ಜಾನಪದ ಮತ್ತು ದರ್ಶನಗಳಂಥ ಹತ್ತಾರು ಎಳೆಗಳನ್ನು ಸೇರಿಸಿಕೊಂಡು ರಾಮಕಥೆಗೆ ಬೆಸೆದುಕೊಂಡ ಕಾರಣ ಇವುಗಳ ಸಾಹಿತ್ಯಕಮೌಲ್ಯ ಹೇಗೇ ಇದ್ದರೂ ಸಾಂಸ್ಕೃತಿಕಮೌಲ್ಯ ಸಾಂದ್ರವಾಗಿದೆ, ಮತ್ತಿದು ಜನರಿಂದ ಹುಟ್ಟಿ ಜನರಲ್ಲಿ ಬೆಳೆದು ಜನರಿಗಾಗಿಯೇ ಮುಡಿಪಾಗಿದೆ. ಈ ಕಾರಣದಿಂದಲೇ ಇವುಗಳಿಂದ ಪ್ರಭಾವಿತವಾದ ದೇಶಭಾಷೆಗಳ ಕಾವ್ಯ-ನಾಟಕಗಳು ಹಾಗೂ ಕಲಾಕೃತಿಗಳು ನಮ್ಮ ಜನತೆಯನ್ನು ಗಾಢವಾಗಿ ಆವರಿಸಿವೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿರುವ ತತ್ತ್ವವು ಸಂಕುಚಿತವಾಗಿಲ್ಲದೆ, ವಿಶ್ವಜನೀನವಾದ ಸಮನ್ವಯದೃಷ್ಟಿಯಿಂದ ಕೂಡಿರುವುದು ನಿಜಕ್ಕೂ ನೆಮ್ಮದಿಯ ಸಂಗತಿ.

ಇದನ್ನು ಮನಗಂಡಾಗ ಯಾವುದೇ ಸಮಾಜದ ಅಧಿಕಸಂಖ್ಯೆಯ ಜನತೆ ಅಧಿದೈವವನ್ನೇ ತನ್ನ ಅಂತರಂಗದ ಉಪಶಾಂತಿಗೆ ನೆಮ್ಮುವುದೆಂದು ಸ್ಪಷ್ಟವಾಗುತ್ತದೆ. ಅದು ಅಧಿಭೂತದ ಬರ್ಬರವಾಸ್ತವದಲ್ಲಿ ನಿಂತಿದ್ದರೂ ಅಂತರಂಗದ ಅಧ್ಯಾತ್ಮವನ್ನು ಪ್ರತ್ಯಭಿಜ್ಞಾನ ಮಾಡಿಕೊಳ್ಳಲು ಅಶಕ್ತವಾಗಿದ್ದರೂ ಅಧಿದೈವ ಮತ್ತು ಅಧಿಯಜ್ಞಗಳ ಮೂಲಕ ಅನುದಿನದ ಜಂಜಾಟಗಳಿಗೆ ತಾತ್ಕಾಲಿಕದ್ದಾದರೂ ತಾಳಿಕೊಳ್ಳಬಲ್ಲಂಥ ಸಮಾಧಾನವನ್ನು ಪಡೆದು ಬದುಕನ್ನು ಸಾಗಿಸುತ್ತದೆ. ಇದು ಸ್ವಲ್ಪದ ಸಿದ್ಧಿಯಲ್ಲ. ಆದರೆ ಇದು ಸ್ವಯಂಪೂರ್ಣವಲ್ಲದ ಕಾರಣ ಹೇಳಲಾಗದ ಕೊರತೆಯೊಂದು ಅಂತರಂಗದೊಳಗೆ ಮುಲುಗುತ್ತಲೇ ಇರುತ್ತದೆ. ಈ ಕೊರಗನ್ನು ತೀರಿಸಿಕೊಳ್ಳುವುದಕ್ಕೆ ಪಾರಮಾರ್ಥಿಕವಾಗಿ ಕೇವಲಾದ್ವೈತತತ್ತ್ವವೊಂದೇ ಪರಿಹಾರ. ಆದರೆ ಇದು ಎಲ್ಲರಿಗೂ ಇರಲಿ, ಕೆಲವೇ ಮಂದಿಗೂ ದುಷ್ಕರವಾಗುವ ಅಸಿಧಾರಾವ್ರತ. ಹೀಗಾಗಿ ವ್ಯಾವಹಾರಿಕಜಗತ್ತಿನಲ್ಲಿ ಒಂದು ಮಟ್ಟಿಗಾದರೂ ಇಂಥ ಕೊರತೆಯನ್ನು ನೀಗಿಸುವಲ್ಲಿ ನೆರವಾಗಬಲ್ಲದ್ದು ಬ್ರಹ್ಮಾಸ್ವಾದವೆನಿಸಿದ ಅಧ್ಯಾತ್ಮಕ್ಕೆ ಅನುಜವರೇಣ್ಯನಾದ ರಸಾಸ್ವಾದ. ಇದನ್ನೇ ಇಂದ್ರಿಯಗ್ರಾಹ್ಯವಾದ ಜಗತ್ತಿನ ಮಟ್ಟಿಗೆ ಅಧ್ಯಾತ್ಮವೆನ್ನಬಹುದು, ಬ್ರಹ್ಮೋಪಾಸನೆಯೆಂದೂ ಹೇಳಬಹುದು. ಇದು ನಮ್ಮವೇ ಆದ ಭಾವಗಳ ತಟಸ್ಥದರ್ಶನದಲ್ಲಿದೆ, ತನ್ಮೂಲಕ ಒದಗಿಬರುವ ರಸರೂಪದ ಆಸ್ವಾದನೆಯಲ್ಲಿದೆ.

ಮೂಲತಃ ಆದಿಕವಿ ವಾಲ್ಮೀಕಿಮುನಿಗಳು ಹವಣಿಸಿಕೊಟ್ಟದ್ದೇ ಇದನ್ನು! ಅವರು ಮನಗಾಣಿಸಿರುವ ರಾಮಕಥೆಯು ಪ್ರಧಾನವಾಗಿ ಜ್ಞಾತುಮೇವಂವಿಧಂ ನರಮ್ ಎಂಬ ಜಿಜ್ಞಾಸೆಯಿಂದ ಹೊರಟು ಆತ್ಮಾನಂ ಮಾನುಷಂ ಮನ್ಯೇ ಎಂದು ಭಾವಿಸಿಕೊಂಡ ಕಾವ್ಯನಾಯಕನ ಜೀವನಸ್ವಾರಸ್ಯ. ಇಲ್ಲಿ ಅಲೌಕಿಕ ಮತ್ತು ಅತಿಮಾನುಷಸ್ತರಗಳು ಅಲ್ಲಲ್ಲಿ ಅಷ್ಟಿಷ್ಟು ಇಣಿಕಿದರೂ ಅವುಗಳ ಪ್ರಮೇಯ ಅಲ್ಪಮಾತ್ರದ್ದು. ಅಂತೆಯೇ ಇಲ್ಲಿ ಅದ್ಭುತಗಳಿಗೆ, ಪವಾಡಗಳಿಗೆ ಅವಕಾಶ ಕೊಡುವುದಕ್ಕಿಂತ ಹೆಚ್ಚಾಗಿ ಮಾನವಜೀವನದ ಕಷ್ಟ-ಸುಖಗಳಿಗೆ ಮಿಗಿಲಾದ ಅವಧಾರಣೆ ಸಂದಿದೆ. ನಾಗರಕತೆಯ ಭೌತಿಕಸಮೃದ್ಧಿಯ ಚಿಲ್ಲರೆ ಚಮತ್ಕಾರಗಳನ್ನು ಚಿತ್ರಿಸುವುದಕ್ಕಿಂತ ಹೆಚ್ಚಾಗಿ ನೈಸರ್ಗಿಕವಾದ ಜೀವಸಮೃದ್ಧಿಯನ್ನು ಕಾಣಿಸುವ ಆಸ್ಥೆ ಮೆರೆದಿದೆ. ಹೀಗಾಗಿಯೇ ಯುದ್ಧಕಾಂಡದ ಅತಿಲೋಕವಿಸ್ಮಯಗಳಿಗಿಂತ ಅಯೋಧ್ಯಾಕಾಂಡದ ಮನುಷ್ಯಸಹಜವಾದ ಸಂದಿಗ್ಧಗಳು ಮಿಗಿಲಾದ ಮಹತ್ತ್ವವನ್ನು ಹೊಂದುತ್ತವೆ; ಬಾಲಕಾಂಡ-ಉತ್ತರಕಾಂಡಗಳ ಬಗೆಬಗೆಯ ಚಿತ್ರಾದ್ಭುತಕಥೆಗಳಿಗಿಂತ ಹೆಚ್ಚಾಗಿ ನರಲೋಕ, ವಾನರಲೋಕ ಮತ್ತು ರಾಕ್ಷಸಲೋಕಗಳ ಭಾವತುಮುಲಗಳು ಮನಸ್ಸನ್ನು ಸೆಳೆಯುತ್ತವೆ; ಅಯೋಧ್ಯೆ-ಲಂಕೆಗಳ ಶ್ರೀಮಂತಿಕೆಗಿಂತ ಹೇಮಂತ, ವಸಂತ, ವರ್ಷಾ ಮತ್ತು ಶರದೃತುಗಳ ಪ್ರಕೃತಿಸೌಂದರ್ಯವೇ ಹೃದಯಂಗಮವಾಗುತ್ತದೆ. ಹೀಗಾಗಿ ಆದಿಕವಿಗಳ ಅವಧಾರಣೆ ಹೆಚ್ಚಾಗಿರುವುದು ಪ್ರಕೃತಿಗೆ ನಿಕಟವಾಗಿ ಬದುಕುವುದರೊಟ್ಟಿಗೆ ಅಂತರಂಗಪ್ರಕೃತಿಗೆ ಮತ್ತೂ ನಿಕಟವಾಗಿ ಬದುಕಬೇಕೆಂಬ ಅಂಶದಲ್ಲಿ. ಇದು ಪರವರ್ತಿರಾಮಾಯಣಗಳಲ್ಲಿ ತುಂಬ ವಿರಳವಾದ ಕಾಣ್ಕೆ. ಆದರೆ ಅವುಗಳೇ ಹೆಚ್ಚಿನ ಜನತೆಗೆ ಆಪ್ಯಾಯನವೆನಿಸಿರುವುದು ಮಾರ್ಮಿಕವಿಡಂಬನೆ: ಗತಾನುಗತಿಕೋ ಲೋಕೋ ನ ಲೋಕಃ ಪಾರಮಾರ್ಥಿಕಃ.

ಇದಕ್ಕೆ ಕಾರಣ ತುಂಬ ಸ್ಪಷ್ಟ. ಸಾಮಾನ್ಯಮಾನವಮನಸ್ಸು ನಿರಪವಾದವೆಂಬಂತೆ ಅರ್ಥ-ಕಾಮಸಂತ್ರಸ್ತ ಮತ್ತು ಫಲಕೃಪಣ. ಸದಾ ಯೋಗ-ಕ್ಷೇಮಕಾತರ್ಯವನ್ನು ಹೊಂದಿದ ಜನತೆಗೆ ಮತ್ತಾವುದನ್ನೋ ಪಡೆಯಬೇಕೆಂಬ ನಿರಂತರವಾದ ಹಪಹಪಿಕೆಯಲ್ಲದೆ ಇರುವುದನ್ನೇ ಅರಿಯಬೇಕೆಂಬ ವಿವೇಕವಿರುವುದಿಲ್ಲ. ಇದು ಸಾಕ್ಷಾತ್ತಾಗಿ ರಾಮಾಯಣದಿಂದಲೂ ಸ್ಪಷ್ಟವಾಗುವ ಸತ್ಯ. ರಾವಣನಿಗಾದರೂ ಇದ್ದದ್ದು ಇಂಥದ್ದೇ ಹಳಹಳಿಕೆ. ಅವನಿಗೆ ಎಣೆಯಿಲ್ಲದ ಬಲವಿದ್ದ ಕಾರಣ ಅವನ ಆಶೆ ಲೋಕಸಂತ್ರಾಸಕವಾಗುವುದರಲ್ಲಿ ಸಫಲವಾಯಿತು. ಆದರೆ ನಮ್ಮ ಬಡಪಾಯಿಗಳಾದ ಶ್ರೀಸಾಮಾನ್ಯರಿಗೆ ಹೊಟ್ಟೆಯಲ್ಲೆಷ್ಟು ಬಯಕೆಯಿದ್ದರೂ ರಟ್ಟೆಯಲ್ಲಷ್ಟು ಬಲವಿಲ್ಲದ ಕಾರಣ ಆ ಮಟ್ಟಿನ ಲೋಕೋಪಪ್ಲವ ಆಗುತ್ತಿಲ್ಲವೆಂಬುದೇ ಭರವಸೆಯ ಸಂಗತಿ. ಇದೇನೂ ಸಂತಸದ ಸಂಗತಿಯಲ್ಲ; ಬರಿಯ ಸಮಾಧಾನದ ಸ್ಥಿತಿ.

*      *      *

ವಾಲ್ಮೀಕಿಮಹರ್ಷಿಗಳ ಮೂಲಕೃತಿಯ ವಿವಿಧವ್ಯಾಖ್ಯಾನಗಳು, ಪುರಾಣ-ಇತಿಹಾಸಗಳ ರಾಮಾಖ್ಯಾನಗಳು, ಸಂಸ್ಕೃತದ ಪ್ರಾಚೀನಕವಿಗಳ ಕಾವ್ಯ-ನಾಟಕಗಳು ಮತ್ತು ಜನಪದಜೀವನದ ಕಲ್ಪನೆ-ಐತಿಹ್ಯಗಳೆಲ್ಲ ಅರ್ವಾಚೀನರಾಮಾಯಣಗಳ ಮೇಲೆ ಪ್ರಭಾವ ಬೀರಿರುವುದನ್ನು ನಾವು ಗಮನಿಸಿದ್ದೇವೆ. ಇಲ್ಲಿ ವಿಷ್ಣುವಿನ ಅವತಾರವೆಂದು ಮೂಲವೇ ಒಕ್ಕಣಿಸುವ ರಾಮತತ್ತ್ವದ ಜೊತೆಗೆ ಶೈವ ಮತ್ತು ಶಾಕ್ತಸಂಪ್ರದಾಯಗಳೂ ಸೇರಿರುವುದು ಮೇಲ್ನೋಟಕ್ಕೇ ತೋರುತ್ತದೆ. ಆದರೆ ಇವೆಲ್ಲ ದೇವತಾತಾರತಮ್ಯವಿಲ್ಲದ ಅದ್ವೈತದೃಷ್ಟಿಗೆ ಅನುಗುಣವಾಗಿರುವುದೊಂದು ಸಮಾಧಾನಕರವಾದ ಅಂಶ. ಏನಿದ್ದರೂ ಗೋವಿಂದರಾಜ, ಪೆರಿಯವಾಚ್ಚಾನ್ ಪಿಳ್ಳೆ ಮುಂತಾದವರ ಶ್ರೀವೈಷ್ಣವದೃಷ್ಟಿಕೋನವುಳ್ಳ ವ್ಯಾಖ್ಯಾನಗಳು ಹಾಗೂ ಮಧ್ವಾಚಾರ್ಯರ “ಮಹಾಭಾರತತಾತ್ಪರ್ಯನಿರ್ಣಯ”ದಂಥ ಸದ್ವೈಷ್ಣವದೃಷ್ಟಿಯ ನಿರೂಪಣೆ ಇದಕ್ಕೆ ಅಪವಾದ. ಆದರೆ ಇಂಥ ಸಂಕುಚಿತದೃಷ್ಟಿಯನ್ನು ಅಖಿಲಭಾರತವ್ಯಾಪಿಯಾದ ರಾಮಾಯಣಮನೋಧರ್ಮ ಮುಖ್ಯವೆಂದು ಗಣಿಸದಿರುವುದು ಗಮನಾರ್ಹ. ಈ ಕಾರಣದಿಂದಲೇ ಇಂದಿಗೂ ಜನಮಾನಸದಲ್ಲಿ ದೇಶಭಾಷೆಗಳ ಬರೆಹಗಳ ಮೂಲಕ, ಗೀತ-ನೃತ್ಯ-ರೂಪಕ-ಚಲನಚಿತ್ರಗಳ ಮೂಲಕ ನೆಲೆಗೊಂಡ ರಾಮಕಥೆ ಶೈವ-ವೈಷ್ಣವ-ಶಾಕ್ತಮತಗಳ ಸಾಮರಸ್ಯವುಳ್ಳ ಅದ್ವೈತದೃಷ್ಟಿಯದೇ. ಆದುದರಿಂದ ಅರ್ವಾಚೀನರಾಮಾಯಣಗಳ ಉದ್ದೇಶ ಒಳ್ಳೆಯದೆಂದು ನಾವು ತೀರ್ಮಾನಿಸಬಹುದು. ಆದರೆ ರಸದೃಷ್ಟಿ, ಪಾತ್ರಪ್ರೌಢಿಮೆ ಮತ್ತು ಈ ಮೂಲಕ ಧ್ವನಿತವಾಗುವ ನೈಜವಾದ ಜೀವನದರ್ಶನಗಳು ಅಲ್ಲಿ ಸೊರಗಿವೆಯೆಂಬುದು ಸ್ವಲ್ಪ ಖೇದಕರ ಅಂಶ.

ಇಂತಿದ್ದರೂ ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಂಗಿನಾಮ್ ಎಂಬ ಗೀತಾವಾಕ್ಯದಂತೆ ಈ ಎಲ್ಲ ಅರ್ವಾಚೀನರಾಮಕಥೆಗಳು ಭಕ್ತ-ಭಾವುಕರ ಮುಗ್ಧಮನಸ್ಸುಗಳಿಗೆ ನೋವಾಗದಂತೆ ಮೂಲದ ಎಷ್ಟೋ “ಅಹಿತಕರ” ಅಂಶಗಳನ್ನು ಸೌಮ್ಯಗೊಳಿಸಿರುವುದು ಸ್ಮರಣೀಯ. ಆದರೆ ಈ ಬಗೆಯ ಮೃದೂಕರಣದಲ್ಲಿ ತನ್ನದೇ ಆದ ತೊಡಕಿರುವುದು ವಿಜ್ಞವೇದ್ಯ. ಏಕೆಂದರೆ ವೈಶ್ವಿಕವಾದ ಮಾನವಜೀವನದ ಭಾವಸಂಘರ್ಷಗಳು ರಾಗ-ದ್ವೇಷಗಳ ಮೂಲದಲ್ಲಿರುವ ಕಾರಣ ಯಾವ ಮಹಾಕವಿಯೇ ಆಗಲಿ, ಸಾಹಿತ್ಯನಿರ್ಮಿತಿಗೆ ತೊಡಗಿದಾಗ ಇವುಗಳ ಶೋಧನೆಗೆ ಕೈಯಿಕ್ಕುವುದು ಅನಿವಾರ್ಯ. ಅರ್ಥ-ಕಾಮಗಳ ಅಬ್ಬರವನ್ನು ಧರ್ಮದ ಬೆಳಕಿನಲ್ಲಿ ಕಂಡಾಗಲೇ ಒಳಿತು-ಕೆಡಕುಗಳ ಅರಿವಾಗುವುದು. ಧರ್ಮದ ಕಾಂತಿಯಿಲ್ಲದೆ ಇವುಗಳ ಹೋರಾಟವನ್ನು ಕಾಣಲು ಹೊರಟರೆ ನಮಗೆ ದಕ್ಕುವುದು ನೋಟವಲ್ಲ, ಕಾಟ ಮಾತ್ರ. ಧರ್ಮವು ಎಲ್ಲವನ್ನೂ ತಾಳಿಸಿ, ಬಾಳಿಸುವ ಪ್ರಜ್ಞೆಯೆಂದರಿಯದೆ ಕೇವಲ ದೇಶ-ಕಾಲಗಳಿಗಷ್ಟೇ ಸೀಮಿತವಾದ ಕೆಲವೊಂದು ಸ್ಥೂಲಮೌಲ್ಯ/ಮೌಲ್ಯಾಭಾಸಗಳಿಗೆ ಜೋತುಬಿದ್ದು ಯಾವುದೇ ಮಹಾಕಥೆಯನ್ನಾಗಲಿ “ಸಂಸ್ಕರಿಸಿ”, “ಹಿತಗೊಳಿಸಿ” ಕೊಡುವ ಚಾಪಲ್ಯ ಅದೆಷ್ಟು ಕಾಳಜಿಯಿಂದ ಕೂಡಿದ್ದರೂ ಅರ್ಥಪೂರ್ಣವೆನಿಸದು. ಏಕೆಂದರೆ ಪೂರ್ವೋಕ್ತವಾದ ಸ್ಥೂಲಮೌಲ್ಯಗಳು ಬರಿಯ ಧರ್ಮಾಭಾಸಗಳು, ಸೀಮಿತನೀತಿಗಳು. ಇವು ಮತ್ತೆ ಮತ್ತೆ ಮಾರ್ಪಡುತ್ತಿರುತ್ತವೆ. ಈ ಮಾರ್ಪಾಟಿಗೆ ದೇಶ-ಕಾಲಗಳಲ್ಲದೆ ಜೀವಿಕಾಪದ್ಧತಿಗಳ ವ್ಯತ್ಯಾಸಗಳೂ ಕಾರಣ; ನಿರಂತರವಾಗಿ ಬೆಳೆಯುತ್ತಿರುವ ಮಾಹಿತಿಯ ಜಗತ್ತಿನ ಅರಿವೂ ಕಾರಣ. ಇಷ್ಟೇ ಅಲ್ಲದೆ ಇಂಥ ಸ್ಥೂಲಮೌಲ್ಯಗಳು ಕೇವಲಾನುಭವದಲ್ಲಿ ನೆಲೆಗೊಳ್ಳದೆ ನಂಬಿಕೆ-ಹಾರೈಕೆಗಳಂಥ ಅಭಿನಿವೇಶಗಳಲ್ಲಿ ಬೇರೂರಿದ ಕಾರಣ ಇವೆಲ್ಲ ದೇಶ-ಕಾಲಗಳ ಹರಿವಿನಲ್ಲಿ ಎಷ್ಟೋ ಬಾರಿ ಅಪ್ರಸ್ತುತವಾಗುತ್ತವೆ, ಹಾಸ್ಯಾಸ್ಪದವಾಗುತ್ತವೆ, ಕೆಲವೊಮ್ಮೆ ಅಪಾಯಕಾರಿಯೂ ಆಗುತ್ತವೆ.

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Karnataka’s celebrated polymath, D V Gundappa brings together in the fourth volume, some character sketches of the Dewans of Mysore preceded by an account of the political framework of the State before Independence and followed by a review of the political conditions of the State after 1940. These remarkable leaders of Mysore lived in a period that spans from the mid-nineteenth century to the...

Bharatiya Kavya-mimamseya Hinnele is a monograph on Indian Aesthetics by Mahamahopadhyaya N. Ranganatha Sharma. The book discusses the history and significance of concepts pivotal to Indian literary theory. It is equally useful to the learned and the laity.

Sahitya-samhite is a collection of literary essays in Kannada. The book discusses aestheticians such as Ananda-vardhana and Rajashekhara; Sanskrit scholars such as Mena Ramakrishna Bhat, Sridhar Bhaskar Varnekar and K S Arjunwadkar; and Kannada litterateurs such as DVG, S L Bhyrappa and S R Ramaswamy. It has a foreword by Shatavadhani Dr. R Ganesh.

The Mahābhārata is the greatest epic in the world both in magnitude and profundity. A veritable cultural compendium of Bhārata-varṣa, it is a product of the creative genius of Maharṣi Kṛṣṇa-dvaipāyana Vyāsa. The epic captures the experiential wisdom of our civilization and all subsequent literary, artistic, and philosophical creations are indebted to it. To read the Mahābhārata is to...

Shiva Rama Krishna

சிவன். ராமன். கிருஷ்ணன்.
இந்திய பாரம்பரியத்தின் முப்பெரும் கதாநாயகர்கள்.
உயர் இந்தியாவில் தலைமுறைகள் பல கடந்தும் கடவுளர்களாக போற்றப்பட்டு வழிகாட்டிகளாக விளங்குபவர்கள்.
மனித ஒற்றுமை நூற்றாண்டுகால பரிணாம வளர்ச்சியின் பரிமாணம்.
தனிநபர்களாகவும், குடும்ப உறுப்பினர்களாகவும், சமுதாய பிரஜைகளாகவும் நாம் அனைவரும் பரிமளிக்கிறோம்.
சிவன் தனிமனித அடையாளமாக அமைகிறான்....

ऋतुभिः सह कवयः सदैव सम्बद्धाः। विशिष्य संस्कृतकवयः। यथा हि ऋतवः प्रतिसंवत्सरं प्रतिनवतामावहन्ति मानवेषु तथैव ऋतुवर्णनान्यपि काव्यरसिकेषु कामपि विच्छित्तिमातन्वते। ऋतुकल्याणं हि सत्यमिदमेव हृदि कृत्वा प्रवृत्तम्। नगरजीवनस्य यान्त्रिकतां मान्त्रिकतां च ध्वनदिदं चम्पूकाव्यं गद्यपद्यमिश्रितमिति सुव्यक्तमेव। ऐदम्पूर्वतया प्रायः पुरीपरिसरप्रसृतानाम् ऋतूनां विलासोऽत्र प्रपञ्चितः। बेङ्गलूरुनामके...

The Art and Science of Avadhānam in Sanskrit is a definitive work on Sāhityāvadhānam, a form of Indian classical art based on multitasking, lateral thinking, and extempore versification. Dotted throughout with tasteful examples, it expounds in great detail on the theory and practice of this unique performing art. It is as much a handbook of performance as it is an anthology of well-turned...

This anthology is a revised edition of the author's 1978 classic. This series of essays, containing his original research in various fields, throws light on the socio-cultural landscape of Tamil Nadu spanning several centuries. These compelling episodes will appeal to scholars and laymen alike.
“When superstitious mediaevalists mislead the country about its judicial past, we have to...

The cultural history of a nation, unlike the customary mainstream history, has a larger time-frame and encompasses the timeless ethos of a society undergirding the course of events and vicissitudes. A major key to the understanding of a society’s unique character is an appreciation of the far-reaching contributions by outstanding personalities of certain periods – especially in the realms of...

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhānī Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective to every discussion. These essays deal with the philosophy, history, aesthetics, and practice of...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...