Author:hari
ಇಂದು ಸಂಸ್ಕೃತಭಾಷೆಯ ಅಧ್ಯಯನಕ್ಕೆ ವಿಪುಲ ಅವಕಾಶಗಳಿವೆ. ಅದರ ಪ್ರಚಾರ-ಪ್ರಸಾರಗಳಿಗೆ ಹಲವಾರು ಮಾಧ್ಯಮಗಳು ಲಭ್ಯವಿವೆ. ಸಂಘಟನೆಯ ರೂಪದ ಸಂಭಾಷಣಾಂದೋಲನದಿಂದ ಮೊದಲ್ಗೊಂಡು ಸಾಂಪ್ರದಾಯಿಕವಾದ ಶಾಸ್ತ್ರಾಧ್ಯಯನದವರೆಗೆ ಎಲ್ಲಕ್ಕೂ ಅನೇಕ ವ್ಯಕ್ತಿಗಳ, ಸಂಸ್ಥೆಗಳ ಸಹಕಾರವಿದೆ. ತಂತ್ರಜ್ಞಾನದ ಪ್ರಯೋಜನದಿಂದ ಹೊಸಬಗೆಯ ಪಾಠ್ಯಕ್ರಮಗಳನ್ನು ರಚಿಸಿ, ಅಧ್ಯಯನಕ್ಕೆ ಅನುಕೂಲಿಸುವ ವಿವಿಧ ಉಪಕರಣಗಳನ್ನು ರೂಪಿಸಿ ದೇವವಾಣಿಯನ್ನು ವಿದ್ಯಾರ್ಥಿಗಳಿಗೂ ವಿದ್ವಾಂಸರಿಗೂ ಹತ್ತಿರವಾಗಿಸುವುದು ಇಂದು ಸರಳವಾಗಿದೆ. ಹಸ್ತಪ್ರತಿಗಳ ಸೂಕ್ಷ್ಮ ಅವಲೋಕನಕ್ಕೆ, ವ್ಯಾಕರಣವೇ ಮೊದಲಾದ ಶಾಸ್ತ್ರಗಳ ಕಲಿಕೆಗೆ ಹಲವು ಬಗೆಯ ತಂತ್ರಾಶಗಳಿಂದ ದೊರೆತಿರುವ ನೆರವು ಅಷ್ಟಿಷ್ಟಲ್ಲ.
ಪರಾಭವಕ್ಕೆ ಕಾರಣಗಳು
ಪರಾಭವಕ್ಕೆ ವಿಶ್ಲೇಷಕರು ಏನೇನೊ ಕಾರಣಗಳನ್ನು ಸೂಚಿಸಿದ್ದಾರೆ. ಭಾರತೀಯರಲ್ಲಿದ್ದ ಶಸ್ತ್ರಾಸ್ತ್ರಗಳು ಹಿಂದಿನವು, ಅದಕ್ಷವಾದವು (antiquated) ಎಂದು ಒಂದು ಗತಾನುಗತಿಕ ವಾದ. ಆಧುನಿಕ ತಂತ್ರಜ್ಞಾನವನ್ನು ಬಳಸಲು ಭಾರತೀಯರು ಉತ್ಸಾಹಿತರಾಗಿರಲಿಲ್ಲ ಮಾತ್ರವಲ್ಲ, ಆಧುನಿಕ ಯುದ್ಧವಿಧಾನಗಳ ಬಗ್ಗೆ ಅವರಲ್ಲಿ ಒಂದಷ್ಟು ಭೀತಿಯೇ ಇತ್ತು – ಎಂದೂ ವಾದವಿದೆ. ತಲೆಯ ಮೇಲೆ ಎತ್ತರದಲ್ಲಿ ಉದ್ದಕ್ಕೂ ಕಾಣುವ ಟೆಲೆಗ್ರಾಫ್ ತಂತಿ ಕೂಡ ನಮ್ಮವರಿಗೆ ಭಯಕಾರಣವಾಗಿತ್ತು – ಎನ್ನಲಾಗಿದೆ. “ನಾವು ಎಲ್ಲಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ – ಎಲ್ಲ ಮಾಹಿತಿಯೂ ಬ್ರಿಟಿಷರಿಗೆ ರವಾನೆಯಾಗುತ್ತಿದ್ದುದು ಈ ತಂತಿಗಳ ಮೂಲಕವೇ.” ಇಂತಹ ಕಾರಣಗಳೂ ಸೂಚಿಸಿದ್ದಾರೆ.
One night sleep eluded him, he was thinking, “I’ve been deeply interested in her, I’ve neglected others, where are my other wives? Where are my ministers?” he heard a female voice, “Alas! Such difficulty!” he turned towards the direction of the voice where he saw only the face of the woman through the window, resulting in a delusion that it might be the moon. As he kept staring bewildered, she extended her hand and signalled through her fingers, “Come to me!” Having seen Gandharvadattā asleep he went without fear.
A theatrical performance that is rich in prose-like spoken language, employs gesture language that isn’t stylized and has āṅgika that largely divorced from pure nṛtta can be called nāṭya; such a theatrical performance is closer to loka-dharmī. In another case where vācika takes the form of lyrics (which are largely in metrical patterns) set to a rāga and to a rhythmic pattern, and when āṅgika becomes stylized like in nṛtta, the performance assumes the form of a nṛtya.
The humour in Śrīmad-rāmāyaṇam has always appeared in the most appropriate places. Humour always demands an awareness of the world around us. Only someone who can understand the world and the whims and fancies of the people can handle humour well. In that respect, maharṣi Vālmīki is someone who knows the world well. The observation made by maharṣi Kaṇva in the play abhijñāna-śākuntalam, ‘वनौकसोऽपि सन्तो लौकिकज्ञा वयम्’ i.e.
ಮತ್ತೊಮ್ಮೆ ರಾಯರೇ ವಿದ್ಯಾಭವನದಲ್ಲಿ ಶಾಕುಂತಲವನ್ನು ಕುರಿತು ಭಾಷಣ ಮಾಡಿದರು. ಈ ಕೃತಿಯ ವಿಷಯದಲ್ಲಿ ಪದ್ಮನಾಭನ್ ಅವರಿಗೆ ನಿರತಿಶಯವಾದ ಪ್ರೀತಿ. ಅದು ಯಾವ ಕಾರಣವೋ ನನಗೆ ತಿಳಿಯದು; ರಾಯರ ಮನೋಧರ್ಮ ಅಂದು ಕುದುರಿಕೊಂಡಿರಲಿಲ್ಲ. ಹೀಗಾಗಿ ಉಪನ್ಯಾಸ ಎಲ್ಲರಿಗೂ ಅರಕೆ ತಂದಿತು. ಕಡೆಗೆ ಪದ್ಮನಾಭನ್ ಅವರು ನಾಟಕದ ಭರತವಾಕ್ಯವನ್ನು ಕುರಿತು ಸ್ವಲ್ಪ ಬೆಳಕು ಚೆಲ್ಲಬೇಕೆಂದು ಕೇಳಿಕೊಂಡರು. ಶಾಕುಂತಲದ ಭರತವಾಕ್ಯ ಲೋಕಪ್ರಸಿದ್ಧವಷ್ಟೆ. ಅದರ ಸ್ವಾರಸ್ಯ ಬಹುಮುಖವಾದುದು; ನಮ್ಮನ್ನು ಅಂತರ್ಮುಖರನ್ನಾಗಿ ಮಾಡುವಂಥದ್ದು. ಆದರೆ ನಮ್ಮೆಲ್ಲರ ನಿರೀಕ್ಷೆಗೆ ಆಘಾತ ತರುವಂತೆ ರಾಯರು ಅವರ ವಿಶಿಷ್ಟ ಧ್ವನಿಯಲ್ಲಿ, “ವಿಶೇಷವೇನೂ ಇಲ್ಲ. ಮಳೆ-ಬೆಳೆ ಚೆನ್ನಾಗಿ ಆಗಲಿ ಅಂತ ಹೇಳಿದ್ದಾನೆ ಕವಿ, ಅಷ್ಟೇ” ಎಂದುಬಿಟ್ಟರು!
“ಚಲೋ ದಿಲ್ಲೀ!”
ಈಗ ಸುಪ್ರಸಿದ್ಧವಾಗಿರುವ “ಚಲೋ ದಿಲ್ಲೀ!” ಎಂಬ ಘೋಷಣೆ ಹುಟ್ಟಿಕೊಂಡದ್ದು ಆ ಸಂದರ್ಭದಲ್ಲಿ. ಅಲ್ಲಿಂದಾಚೆಗೆ ಅದು ಲೆಕ್ಕವಿಲ್ಲದಷ್ಟು ಬಾರಿ ಬಳಕೆಯಾಗಿದೆ. ಸುಭಾಷಚಂದ್ರ ಬೋಸರ ಸೇನಾಭಿಯಾನದಲ್ಲೂ (1944) ಮೊಳಗಿದ್ದು ಅದೇ ಘೋಷಣೆಯೇ.
1857ರಲ್ಲಿ ಎರಡು ಘೋಷಣೆಗಳು ಜೊತೆಜೊತೆಯಾಗಿ ಕೇಳಬಂದವು: ‘ಚಲೋ ದಿಲ್ಲೀ!”; “ಮಾರೋ ಫಿರಂಗೀ ಕೋ!”
ಈ ಮಂತ್ರಘೋಷದೊಂದಿಗೆ ಮೀರಠಿನ ಸೈನಿಕಸಮೂಹಗಳು ದೆಹಲಿ ತಲಪಿದವು.
तुष्टेन येन देहार्धमप्युमायै समर्पितम्।
स वो ददात्वभिमतं वरदः पार्वतीपतिः॥May Śiva, who has given half his body to Umā being pleased with her, grant your wishes.
निशि विघ्नजितो वोऽव्यात् ताण्डवोद्दण्डितः करः।
शोणश्चन्द्रातपत्रस्य तन्वन्विद्रुमदण्डताम्॥
ರಂಗನಾಥ್ ಅವರು ಕಾರ್ಯಕ್ರಮಗಳ ನಿರ್ದೇಶನದ ಹೊಣೆ ಹೊತ್ತಂತೆಯೇ ಕೆಲವು ಕಾಲ ಗಾಂಧಿ ಕೇಂದ್ರದ ಬಾಧ್ಯತೆಯನ್ನೂ ನಿರ್ವಹಿಸುತ್ತಿದ್ದರು. ಆಗ ಅಲ್ಲಿಯ ಸಂಶೋಧನೆಗಳ ಮಾರ್ಗದರ್ಶನಕ್ಕೆ ಸಂಸ್ಕೃತವಿದ್ವಾಂಸರಾದ ಕೆ. ಟಿ. ಪಾಂಡುರಂಗಿ ಅವರು ಬರುತ್ತಿದ್ದರು. ಇವರ ಪರಿಚಯ ನನಗೆ ತುಂಬ ಹಿಂದಿನದು. ನನ್ನ ವಿದ್ಯಾಗುರುಗಳಿಗೆಲ್ಲ ಪಾಠ ಹೇಳಿದ ಕಾರಣ ಇವರು ನನ್ನ ಪರಮಗುರು. ಕೆ. ಟಿ. ಪಿ. ಅವರ ಸಮಾಧಾನಗುಣ, ನವುರಾದ ವಿನೋದಪ್ರಜ್ಞೆ ಮತ್ತು ವಿಶಾಲವಾದ ಶಾಸ್ತ್ರಜ್ಞಾನ ಯಾರನ್ನೂ ಮೆಚ್ಚಿಸುವಂಥವು. ಅವರು ಉದ್ವಿಗ್ನತೆಯಿಲ್ಲದೆ ಯಾವ ಸಂಗತಿಯನ್ನೂ ತಿಳಿಯಾಗಿ ನಿರೂಪಿಸಬಲ್ಲವರಾಗಿದ್ದರು. ಅವರು ನನ್ನ ಮೆಚ್ಚಿನ ಅಧ್ಯಯನಕ್ಷೇತ್ರಗಳಾದ ಸಾಹಿತ್ಯಶಾಸ್ತ್ರ ಮತ್ತು ಶಾಂಕರವೇದಾಂತಗಳನ್ನೂ ಚೆನ್ನಾಗಿ ಬಲ್ಲವರಾಗಿದ್ದರು.










