Literature

“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ಕಲಾಸ್ವಾದದಲ್ಲಿ ರಸ-ಭಾವನೈರಂತರ್ಯ

ಕಲಾಸ್ವಾದದಲ್ಲಿ ರಸ-ಭಾವನೈರಂತರ್ಯ: ಒಂದು ಜಿಜ್ಞಾಸೆ

ಭರತನು “ರಸಾಧ್ಯಾಯ”ದಲ್ಲೊಂದೆಡೆ:

“ನ ಭಾವಹೀನೋऽಸ್ತಿ ರಸೋ ನ ಭಾವೋ ರಸವರ್ಜಿತಃ | ಪರಸ್ಪರಕೃತಾ ಸಿದ್ಧಿರನಯೋರಭಿನಯೇ ಭವೇತ್ ||” (೬.೩೬)

“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ಸಾಹಿತ್ಯದಲ್ಲಿ ದೃಶ್ಯಕಾವ್ಯದ ಮೇಲ್ಮೆ

ಸಾಹಿತ್ಯದಲ್ಲಿ ದೃಶ್ಯಕಾವ್ಯದ ಮೇಲ್ಮೆ

ಅಭಿನವಭಾರತಿಯ ಮೊದಲಿಗೇ ದೃಶ್ಯಕಾವ್ಯದ ಮೇಲ್ಮೆಯನ್ನು ಅಭಿನವಗುಪ್ತನು ಹೇಳಿದ್ದಾನೆ. ಈ ಭಾವವನ್ನು ಕೃತಿಯ ಆದ್ಯಂತ ಅಲ್ಲಲ್ಲಿ ಬಿತ್ತರಿಸಿದ್ದಾನೆ ಕೂಡ. ವಿಶೇಷತಃ “ರಸಾಧ್ಯಾಯ”ದಲ್ಲಿ ಈ ಸಂಗತಿಯನ್ನು ಮತ್ತೆ ಪ್ರಸ್ತಾವಿಸುತ್ತಾನೆ. ಅಲ್ಲದೆ ಈ ಬಗೆಯಲ್ಲಿ ದೃಶ್ಯಕಾವ್ಯದಲ್ಲಿರುವ ರಸಪಾರಮ್ಯಕ್ಕೆ ಕಾರಣವನ್ನೂ ಹೇಳುತ್ತಾನೆ. ಮುಖ್ಯವಾಗಿ ಇಲ್ಲಿ ಚತುರ್ವಿಧಾಭಿನಯಗಳೂ ಸಮುಚಿತವಾದ ವೃತ್ತಿ-ಪ್ರವೃತ್ತಿಗಳೂ ಸೇರಿರುತ್ತವೆ; ಸಹೃದಯರಿಗೆ ಪ್ರತ್ಯೇಕವಾಗಿ ಕಲ್ಪಿಸಿಕೊಳ್ಳುವ ಶ್ರಮವಿಲ್ಲದೆಯೇ ವಿಭಾವಾನುಭಾವಸಾಮಗ್ರಿಯು ಇಂದ್ರಿಯಗೋಚರವಾಗುತ್ತದೆ. ಇಲ್ಲೆಲ್ಲ ತನ್ನ ಗುರುವಾದ ಭಟ್ಟತೌತನ ಪಾಠದ ಫಲವಂತಿಕೆಯನ್ನು ಚೆನ್ನಾಗಿ ಕಾಣಿಸಿದ್ದಾನೆ:

“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ಭಾವವನ್ನು ಕುರಿತ ಒಳನೋಟಗಳು

ಭಾವವನ್ನು ಕುರಿತ ಒಳನೋಟಗಳು

ಅಭಿನವಗುಪ್ತನು ಚಿತ್ತವೃತ್ತಿಸ್ವರೂಪಗಳೇ ಭಾವಗಳೆಂದು ಹೇಳುತ್ತ ಜಗತ್ತೆಲ್ಲವೂ ಭಾವಾತ್ಮಕವೆಂಬ ತಾತ್ತ್ವಿಕದೃಷ್ಟಿಯನ್ನೂ ಬೀರುತ್ತಾನೆ. ನಾಟ್ಯಶಾಸ್ತ್ರವು ಚರ್ಚಿಸುವ “ಭವಂತೀತಿ ಭಾವಾಃ ಕಿಂ ವಾ ಭಾವಯಂತೀತಿ ಭಾವಾಃ” (ಸಪ್ತಮಾಧ್ಯಾಯದ ಉಪಕ್ರಮ) ಎಂಬ ಅಭಿಪ್ರಾಯವು ಕಡೆಗೆ “ಭಾವಯಂತೀತಿ ಭಾವಾಃ” (ಅಲ್ಲಿಯೇ) ಎನ್ನುವ ನಿಲುಗಡೆಗೆ ಬರುವ ಕ್ರಮವನ್ನು ಚೆನ್ನಾಗಿ ಗ್ರಹಿಸಿ “ಭಾವಯಂತಿ” ಎಂಬುದು ವಸ್ತುತಃ ನಮ್ಮಲ್ಲಿ ಆಸ್ವಾದನವನ್ನುಂಟುಮಾಡುತ್ತವೆ ಹಾಗೂ ನಮ್ಮ ಹೃದಯವನ್ನು ವ್ಯಾಪಿಸುತ್ತವೆಂಬ ಅರ್ಥದಲ್ಲಿಯೇ ಗ್ರಾಹ್ಯವೆಂದು ವಿವರಿಸುತ್ತಾನೆ ಕೂಡ:

“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ರಸಸೂತ್ರವಿವರಣೆ

ಅಭಿನವಗುಪ್ತನು ಮತ್ತೊಂದು ಕಡೆಯೂ (ಸಂ.೧, ಪು.೨೮೦) ರಸ ಮತ್ತು ಪುರುಷಾರ್ಥಗಳ ಸಂಬಂಧವನ್ನು ಚರ್ಚಿಸುತ್ತಾನೆ. ಅವನ ಪ್ರಕಾರ ರತಿಭಾವದಿಂದ ಉದ್ಭವಿಸುವ ಶೃಂಗಾರರಸವು ಕಾಮವೆಂಬ ಪುರುಷಾರ್ಥಕ್ಕೆ ಸಂವಾದಿ. ಅಂತೆಯೇ ಕ್ರೋಧಭಾವದಿಂದ ಹೊಮ್ಮುವ ರೌದ್ರರಸವು ಅರ್ಥಕ್ಕೆ ಸಂವಾದಿ. ಇದೇ ರೀತಿ ಧರ್ಮಕ್ಕೆ ಉತ್ಸಾಹಮೂಲದ ವೀರರಸವು ಸಂವಾದಿ. ಮೋಕ್ಷಕ್ಕಂತೂ ತತ್ತ್ವಜ್ಞಾನದಿಂದ ಹೊಮ್ಮುವ ನಿರ್ವೇದವೆಂಬ ಭಾವಮೂಲವಾದ ಶಾಂತರಸವೇ ಸಂವಾದಿ. “ದಶರೂಪಕಾಧ್ಯಾಯ”ದಲ್ಲಿಯೂ ಒಂದು ಕಡೆ ನಾಟಕ ಮತ್ತು ಪ್ರಕರಣಗಳ ಪುರುಷಾರ್ಥಪಾರಮ್ಯವನ್ನು ಚರ್ಚಿಸುತ್ತ ವಿವಿಧರಸಗಳಿಗೆ ಪುರುಷಾರ್ಥಗಳು ಹೇಗೆ ಹೊಂದಿಕೊಂಡು ಬರುತ್ತವೆಂಬುದನ್ನು ವಿಸ್ತರಿಸುತ್ತಾನೆ. ಇಲ್ಲಿಯೂ ರೌದ್ರರಸವನ್ನು ಅರ್ಥಕ್ಕೆ ಒಪ್ಪವಿಡುವುದು ಸುವೇದ್ಯ.

दिवः कान्तिमत्खण्डमेकम्—मेघदूते उज्जयिनीवर्णनम्

कविः कालिदासः

सोऽयमत्र विहितः कविकुलगुरोः कालिदासस्य काव्यसौन्दर्यसौविध्याविष्कारात्मकः प्रकल्पः। एष पुनरखण्डानन्दप्रदानपटुं खण्डकाव्यप्रवेकं मेघदूतं विषयीकृत्य कल्पितः। सत्यमेव; कालिदासवाङ्मयस्य नूतनविमर्शः प्रायेण वितथः प्रयासः। तथापि महाकवेरस्य वचोविच्छित्तिर्मां निजास्वादप्रकटीकरणाय मुखरीकुरुते। स्पष्टमेव मन्ये चापल्यचोदितमिदं कर्मेति। कुतोऽस्य पिपठिषाऽपेक्षिता वाचकानाम्? इति प्रश्नः समुदियत्। इदमस्तु कालिदासमुखेनैव समाधानम्—

“प्रणयिषु वा दाक्षिण्यादथवा सद्वस्तुपुरुषबहुमानात्।