ಮಹಾಭಾರತದ ನುಡಿಬೆಡಗು--ನುಡಿಗಟ್ಟು
ಗೆಳತಿಯರಿಂದ ಬಾವಿಗೆ ತಳ್ಳಲ್ಪಟ್ಟ ದೇವಯಾನಿಯನ್ನು ಯಯಾತಿ ಕೈಹಿಡಿದು ಎತ್ತಿದ ಬಳಿಕ ಅವಳು ಅವನನ್ನೇ ಮದುವೆಯಾಗಲು ಬಯಸುತ್ತಾಳೆ. ಅವನು “ಬ್ರಾಹ್ಮಣಕನ್ಯೆಯನ್ನು ಕ್ಷತ್ರಿಯ ಪರಿಣಯಿಸುವುದು ವರ್ಣಧರ್ಮಕ್ಕೆ ವಿರುದ್ಧ” ಎಂದರೆ ಇವಳು, “ಪಾಣಿಧರ್ಮದ ಪ್ರಕಾರ ಸರಿಯಾಗುತ್ತದೆ” ಎಂದು ಪ್ರತಿವಾದಿಸುತ್ತಾಳೆ. “ಪಾಣಿಧರ್ಮ”ವೆಂದರೆ ಕೈಹಿಡಿದೊಡನೆಯೇ ವಿವಾಹವಾಯಿತೆಂದು ಒಪ್ಪುವುದು ಹಾಗೂ ಕೈಹಿಡಿದವಳನ್ನು ಕಡೆಯ ತನಕ ಉಳಿಸಿಕೊಳ್ಳುವುದು.
ಪಾಣಿಧರ್ಮಃ (೧.೭೬.೨೦)