Literature

Mahābhārata and its Place in Indian Culture – Part 2

The story of the Mahābhārata is gigantic. It is thus divided into eighteen parvas. These divisions are called kāṇḍas in the Rāmāyaṇa. What is termed as ‘sandhi’ in later works such as Jaiminī-bhārata corresponds to an adhyāya. Several adhyāyas together constitute a parva. The word ‘parva’ means a span between two nodes of a sugarcane. Just like the span between nodes in a sugarcane stalk, so also is the role played by the parvas in the Mahābhārata.

The Sport of Renunciation: Verses

Bhartṛhari begins his Vairāgya-śatakam with a verse on Śiva:

            चूडोत्तंसितचारुचन्द्रकलिकाचञ्चच्छिकाभास्वरो

लीलादग्धविलोलकामशलभः श्रेयोदशाग्रे स्फुरन्।

अन्तःस्फूर्जदपारमोहतिमिरप्राग्भारमुच्चाटयं-

श्चेतःसद्मनि योगिनां विजयते ज्ञानप्रदीपो हरः॥

Vairāgya-vikrīḍitam—The Sport of Renunciation

Ask a random student of Sanskrit to recite a poem—chances are you will hear a verse from Bhartṛhari’s Nīti-śatakam. Go to an Acharya seeking wise counsel—chances are you will hear a verse from Bhartṛhari’s Vairāgya-śatakam. Suppose you are interested in love as it is depicted in Sanskrit literature and consult a book—chances are you will come across a verse from Bhartṛhari’s Śṛṅgāra-śatakam. Such is our poet’s popularity.

Mandra: The Triumph of Ramkumari

Introduction

In the corpus of Dr. S.L. Bhyrappa’s twenty-three novels, seven stand out as Himalayan peaks in the order of their publication: Vamsha Vruksha, Daatu, Parva, Sakshi, Tantu, Sartha and Mandra. Of these, two share a basic and apparent similarity in the sense that they are the fine artistic and literary specimens of Dr. Bhyrappa’s profound meditations over nearly half a lifetime. These are Sakshi (1986) and Mandra (2002).

ಶೃಂಗಾರಶಯ್ಯೆ

ನಿದ್ರೆಯು ಪ್ರಕೃತಿಯಾದರೆ ಹಾಸಿಗೆಯು ಸಂಸ್ಕೃತಿ. ಮಂಚ-ಮಧುಮಂಚಗಳು ಮತ್ತೂ ಮಿಗಿಲಾದ ಸಂಸ್ಕೃತಿ. ಅಷ್ಟೇಕೆ, ಭೋಗಲೋಕದ ಸ್ವೀಕೃತಿ, ನಾಗರಕಜಗತ್ತಿನ ಸತ್ಕೃತಿ. ಸಂಸ್ಕೃತಸಾಹಿತ್ಯದಲ್ಲಿ ಈ ಎಲ್ಲ ಸ್ತರಗಳೂ ಸೇರಿ ಶೃಂಗಾರಶಯ್ಯೆಯು ಪದರುಪದರಾದ ಸುಪ್ಪತ್ತಿಗೆಯೇ ಆಗಿದೆ. ಅಲ್ಲಿಯ ಕೆಲವೊಂದು ಶಯ್ಯಾಸ್ವಾರಸ್ಯಗಳನ್ನು ವಾಚಿಕವಾಗಿ ಮಾತ್ರ ಸಹೃದಯರೊಡನೆ ಹಂಚಿಕೊಳ್ಳುವ ಹವಣು ಇಲ್ಲಿದೆ.

ಅಮರಪ್ರೇಮದ ಅಮರುಕಶತಕ--ಉಪಸಂಹಾರ

ಅಮರುಕನ ಹೆಣ್ಣುಗಳ ಹಠ ಕಾವ್ಯಪರಿಧಿಯನ್ನೂ ಮೀರಿದ ಅತಿಕವಿತಾಭೂಮಿಕೆ. ಮನಸ್ಸನ್ನು ಕಲ್ಲಾಗಿಸಿಕೊಂಡು ನಲ್ಲರನ್ನು ಮುನಿದ ಹೆಣ್ಣುಗಳು ಹೊರದೂಡುವರೆಂದು ಬಲ್ಲವರ ಅಭಿಪ್ರಾಯ. ಆದರೆ ಅಮರುಕನ ಹೆಣ್ಣುಗಳು ಮೊದಲು ತಮ್ಮೊಡಲಿನಿಂದ ಪ್ರಾಣವನ್ನು ದೂಡಲು ನಿಶ್ಚಯ ಮಾಡಿಕೊಂಡ ಬಳಿಕವೇ ಪ್ರಾಣೇಶ್ವರರನ್ನು ಮನಸ್ಸಿನಿಂದ, ಮಂದಿರದಿಂದ ಹೊರಡಿಸಬಲ್ಲರು. ಇಂಥ ನಾಯಿಕೆಯ ಬಳಿ ಮುಂಜಾನೆ ಪ್ರಿಯತಮನು ಬಂದು ಬಾಗಿಲು ತಟ್ಟಿದ್ದಾನೆ. ಇರುಳೆಲ್ಲ ಅವನಿಗಾಗಿ ಕಾದು ಕಳವಳಿಸಿದ್ದ ಆಕೆ ಅಗುಳಿ ತೆಗೆದು ನೋಡಿದಾಗ ಅವಳಿಗೆ ಕಂಡದ್ದೇನು? ಅಲತಿಗೆಯ ಬಣ್ಣವನ್ನು ಹಣೆಯಲ್ಲಿ, ತೋಳಬಂದಿಯ ಒತ್ತುಗುರುತನ್ನು ಕೊರಳಿನಲ್ಲಿ, ಕಾಡಿಗೆಯ ಕಾಲುವೆಯನ್ನು ತುಟಿಯಂಚಿನಲ್ಲಿ, ತಂಬುಲದ ಕೆಂಪನ್ನು ಕಣ್ಣಂಚಿನಲ್ಲಿ ಮೆತ್ತಿಸಿಕೊಂಡು ಬಂದ ವಿಕಟಶೃಂಗಾರದ ಮನದಾಣ್ಮ!

ಅಮರಪ್ರೇಮದ ಅಮರುಕಶತಕ--ಸಖಿಯರ ವರ್ಣನೆಗಳು

ಬಹುಪತ್ನೀವ್ರತರ ಪಾಡೇ ಬೇರೆಯ ಜಾಡಿನದು. ಅವರ ಬಹುವಲ್ಲಭತೆಯ ಸುಖ-ಸಂತೋಷಗಳು ಅದು ಹೇಗೋ ಏನೋ, ನಮಗೆ ತಿಳಿಯದು. ಆದರೆ ತಂಟೆ-ತಕರಾರುಗಳು ಮಾತ್ರ ಜಗಜ್ಜಾಹೀರು. ಇದೂ ಒಂದು ಶಯ್ಯಾಗಾರ. ಅಮರುಕನನ್ನು ನಚ್ಚಿ ನಡೆಯುತ್ತಿರುವ ಈ ನಮ್ಮ ಸಂಚಾರದ ಕೇಂದ್ರಬಿಂದುವೇ ಹೆಚ್ಚಾಗಿ ಇದಲ್ಲವೆ? ಇಲ್ಲಿ ಈವರೆಗೆ ಹಾಯಾಗಿ ಲಲ್ಲೆಗೆರೆಯುತ್ತಿದ್ದ ಕಾದಲರ ನಡುವೆ ಇದೇಕಿಂಥ ವಿರಸ? ಹಾ, ತಿಳಿಯಿತು. ಪ್ರಣಯಜಲ್ಪನದ ಈ ಅಮರಶಿಲ್ಪಿ ಮಾತಿನ ಭರದಲ್ಲಿ ತನ್ನೊಡನಿರುವ ಈಕೆಯ ಹೆಸರಿಗೆ ಬದಲಾಗಿ ಮತ್ತೊಬ್ಬಳ ಹೆಸರನ್ನು ಉಸುರಿದ್ದಾನೆ. ಇಂಥ ಪ್ರಮಾದಗಳಿಗೆ ಸಂಸ್ಕೃತದಲ್ಲಿ “ಗೋತ್ರಸ್ಖಲಿತ”ವೆಂಬ ಗಂಭೀರವಾದ ಹೆಸರಿದೆ. ಆದೆಷ್ಟೇ ಭರ್ಜರಿಯಾದ ಹೆಸರನ್ನಿಟ್ಟರೂ ಆಗುವ ಎಡವಟ್ಟು ಬದಲಾದೀತೇ?

ಅಮರಪ್ರೇಮದ ಅಮರುಕಶತಕ--ನಾಯಿಕೆಯರ ವರ್ಣನೆಗಳು

ಇಲ್ಲೊಬ್ಬಳು ಕಲಹಾಂತರಿತೆಯು ತನ್ನ ಮುನಿಸಿನ ಕೆಡುಕನ್ನು ತಾನೇ ವಿಮರ್ಶಿಸಿಕೊಳ್ಳುತ್ತಿದ್ದಾಳೆ. ಅದನ್ನು ಏಕಾಂತವಾಗಿ ಮಾಡದೆ ಎಲ್ಲ ಗೆಳತಿಯರ ನಡುವೆ ಲೋಕಾಂತದಲಿ ನಡಸಿದ್ದಾಳೆಂದರೆ ಆಕೆಯ ಪಶ್ಚಾತ್ತಾಪದ ತೀವ್ರತೆ ತಿಳಿಯದಿರದು. ಹಲುಬುವ ಆಕೆಯ ಮಾತುಗಳು ಕರುಳು ಕುಯ್ಯುವಂತಿವೆ: “ಅಯ್ಯೋ, ನಿಟ್ಟುಸಿರು ಈ ಮೊಗವನ್ನೇ ಬಾಡಿಸಿದೆ. ಹೃದಯವು ಧಮನಿಗಳ ಸಮೇತ ಕಿತ್ತುಬರುವಂತಿದೆ. ನಿದ್ರೆಯು ಅಪ್ಪಿತಪ್ಪಿ ಕೂಡ ಸುಳಿಯುತ್ತಿಲ್ಲ. ನಲ್ಲನ ಮೊಗ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಹಗಲೂ ಇರುಳೂ ಅಳುವುದೊಂದೇ ಪಾಳಿಯಾಯಿತು. ಈ ಕಾಯವು ಕರಗುತ್ತಿದೆ. ಎಂಥ ಕೆಲಸ ಮಾಡಿದೆ, ಕಾಲಿಗೆ ಬಿದ್ದವನನ್ನು ದೂರ ದೂಡಿದೆನಲ್ಲ!

ಅಮರಪ್ರೇಮದ ಅಮರುಕಶತಕ--ರಸಚಿತ್ರಗಳು

ಇಲ್ಲೊಬನಿದ್ದಾನೆ ಪ್ರಣಯಮರ್ಮಜ್ಞನಾದ ಹದಿನಾರಾಣೆಯ ಅನುಭವರಸಿಕ. ಅವನಿಗೆ ಕೊಸರಿ ಕೊಸರಿ ಪಡೆದ ಪ್ರಣಯದ ಸವಿ ಎಷ್ಟೆಂದು ಗೊತ್ತು. ಪಾಪ, ಅವನ ಕಾದಲೆಗೀಗ ಮುನಿಸು. ಹೀಗಾಗಿ ನಿರೀಕ್ಷಿತನರ್ಮವು ಸಾಧ್ಯವಾಗುತ್ತಿಲ್ಲ. ಅವನ ತಕರಾರು ಕೇಳುವಂತಿದೆ. ಅಲ್ಲದೆ ಅದರಲ್ಲೊಂದು ಮೆಚ್ಚುಗೆಯ ಧ್ವನಿಯೂ ಉಂಟೆನ್ನಿ. ಹೀಗಲ್ಲವಾದರೆ ಹಲಬುವಿಕೆಯು ಅಪ್ಪಟ ಕವಿತೆಯಾಗುವುದು ಹೇಗೆ? ಅವನ ಪರಿಶೀಲನೆ ಹೀಗಿದೆ: “ಮೊದಲಿನಂತೆ ಅವಳೀಗ ಬಟ್ಟೆಯನ್ನು ಸಡಿಲಿಸಳು ಮುಜುಗರಗೊಳ್ಳುತ್ತಿಲ್ಲ; ಚೆಂದುಟಿಗಳನ್ನು ಚುಂಬಿಸಲೆಂದು ಮುಂಗುರಳನ್ನು ಸವರಿ ಹಿಂಗತ್ತನ್ನು ಬಾಗಿಸುವಾಗ ಹುಬ್ಬೇರಿಸಿ ಮೊಗ ತಿರುಗಿಸುತ್ತಿಲ್ಲ; ಬಿಗಿಯಪ್ಪುಗೆಯನ್ನು ತಾನಾಗಿ ಸ್ವೀಕರಿಸುವುಳಲ್ಲದೆ ಮೈಸೆಟೆದುಕೊಳ್ಳುತ್ತಿಲ್ಲ.