Nature
ಮತ್ತೊಮ್ಮೆ ರಾಯರೇ ವಿದ್ಯಾಭವನದಲ್ಲಿ ಶಾಕುಂತಲವನ್ನು ಕುರಿತು ಭಾಷಣ ಮಾಡಿದರು. ಈ ಕೃತಿಯ ವಿಷಯದಲ್ಲಿ ಪದ್ಮನಾಭನ್ ಅವರಿಗೆ ನಿರತಿಶಯವಾದ ಪ್ರೀತಿ. ಅದು ಯಾವ ಕಾರಣವೋ ನನಗೆ ತಿಳಿಯದು; ರಾಯರ ಮನೋಧರ್ಮ ಅಂದು ಕುದುರಿಕೊಂಡಿರಲಿಲ್ಲ. ಹೀಗಾಗಿ ಉಪನ್ಯಾಸ ಎಲ್ಲರಿಗೂ ಅರಕೆ ತಂದಿತು. ಕಡೆಗೆ ಪದ್ಮನಾಭನ್ ಅವರು ನಾಟಕದ ಭರತವಾಕ್ಯವನ್ನು ಕುರಿತು ಸ್ವಲ್ಪ ಬೆಳಕು ಚೆಲ್ಲಬೇಕೆಂದು ಕೇಳಿಕೊಂಡರು. ಶಾಕುಂತಲದ ಭರತವಾಕ್ಯ ಲೋಕಪ್ರಸಿದ್ಧವಷ್ಟೆ. ಅದರ ಸ್ವಾರಸ್ಯ ಬಹುಮುಖವಾದುದು; ನಮ್ಮನ್ನು ಅಂತರ್ಮುಖರನ್ನಾಗಿ ಮಾಡುವಂಥದ್ದು. ಆದರೆ ನಮ್ಮೆಲ್ಲರ ನಿರೀಕ್ಷೆಗೆ ಆಘಾತ ತರುವಂತೆ...
ರಂಗನಾಥ್ ಅವರು ಕಾರ್ಯಕ್ರಮಗಳ ನಿರ್ದೇಶನದ ಹೊಣೆ ಹೊತ್ತಂತೆಯೇ ಕೆಲವು ಕಾಲ ಗಾಂಧಿ ಕೇಂದ್ರದ ಬಾಧ್ಯತೆಯನ್ನೂ ನಿರ್ವಹಿಸುತ್ತಿದ್ದರು. ಆಗ ಅಲ್ಲಿಯ ಸಂಶೋಧನೆಗಳ ಮಾರ್ಗದರ್ಶನಕ್ಕೆ ಸಂಸ್ಕೃತವಿದ್ವಾಂಸರಾದ ಕೆ. ಟಿ. ಪಾಂಡುರಂಗಿ ಅವರು ಬರುತ್ತಿದ್ದರು. ಇವರ ಪರಿಚಯ ನನಗೆ ತುಂಬ ಹಿಂದಿನದು. ನನ್ನ ವಿದ್ಯಾಗುರುಗಳಿಗೆಲ್ಲ ಪಾಠ ಹೇಳಿದ ಕಾರಣ ಇವರು ನನ್ನ ಪರಮಗುರು. ಕೆ. ಟಿ. ಪಿ. ಅವರ ಸಮಾಧಾನಗುಣ, ನವುರಾದ ವಿನೋದಪ್ರಜ್ಞೆ ಮತ್ತು ವಿಶಾಲವಾದ ಶಾಸ್ತ್ರಜ್ಞಾನ ಯಾರನ್ನೂ ಮೆಚ್ಚಿಸುವಂಥವು. ಅವರು ಉದ್ವಿಗ್ನತೆಯಿಲ್ಲದೆ ಯಾವ ಸಂಗತಿಯನ್ನೂ ತಿಳಿಯಾಗಿ...
ಇ. ಎಸ್. ವೆಂಕಟರಾಮಯ್ಯ ನ್ಯಾಯಮೂರ್ತಿ ಇ. ಎಸ್. ವೆಂಕಟರಾಮಯ್ಯನವರ ಮುಖಪರಿಚಯ ನನಗೆ ಹಿಂದೆಯೇ ಗೋಖಲೆಸಂಸ್ಥೆಯಲ್ಲಿ ಆಗಿತ್ತು. ಅವರು ಡಿ.ವಿ.ಜಿ.ಯವರ ಶಿಷ್ಯವರ್ಗಕ್ಕೆ ಸೇರಿದವರು. ಡಿ.ವಿ.ಜಿ. ಜನ್ಮಶತಾಬ್ದಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರ ಭಾಷಣವನ್ನೂ ಕೇಳಿದ್ದೆ. ನನಗೆ ಎದ್ದುಕಂಡದ್ದು ಅವರ ಸ್ನಿಗ್ಧತೆ ಮತ್ತು ವಿನಯವಂತಿಕೆ. ಭಾರತದ ಸರ್ವೋಚ್ಚನ್ಯಾಯಾಲಯದ ಪ್ರಧಾನನ್ಯಾಯಮೂರ್ತಿಗಳ ಮಹೋನ್ನತ ಸ್ಥಾನ ಅವರಿಗಿದ್ದರೂ ಹಮ್ಮು-ಬಿಮ್ಮಿನ ಸೋಂಕಿಲ್ಲದ ಆ ವ್ಯಕ್ತಿತ್ವ ನನಗೆ ತುಂಬ ಮೆಚ್ಚಾಗಿತ್ತು. ಅವರನ್ನು ಮೊತ್ತಮೊದಲು ಧಾರಾಳವಾಗಿ ಮಾತನಾಡಿಸಿದ್ದು...
ಎಂ. ಎನ್. ಚಂದ್ರಶೇಖರ್ ಭವನದಲ್ಲಿ ಯಜುರ್ವೇದವನ್ನು ಕಲಿಸಲು ಚಂದ್ರಶೇಖರ್ ಅವರನ್ನು ನಾವು ಕೇಳಿಕೊಂಡಿದ್ದೆವೆಂದು ಈಗಾಗಲೇ ಪ್ರಸ್ತಾವಿಸಿದ್ದಾಗಿದೆ. ಇವರು ವೇದ-ಸಂಸ್ಕೃತಗಳಿಗೆ ಹೆಸರಾದ ಮತ್ತೂರಿನವರು. ಆ ಗ್ರಾಮದ ಪುರೋಹಿತರ ಕುಟುಂಬದವರು. ಇವರ ಮನೆಯವರೆಲ್ಲ ನನಗೆ ಆತ್ಮೀಯರು, ಗೌರವನೀಯರು. ಚಂದ್ರಶೇಖರ್ ಅವರ ಹಿರಿಯ ಅಣ್ಣಂದಿರು ಬ್ರಹ್ಮಶ್ರೀ ಮಾರ್ಕಂಡೇಯ ಅವಧಾನಿಗಳು ಈಚೆಗಷ್ಟೇ ನಮ್ಮನ್ನು ಅಗಲಿದರು. ಇವರೂ ಇವರ ಮತ್ತೊಬ್ಬ ತಮ್ಮಂದಿರೂ ಬಾಳಿನ ಕೊನೆಗಾಲದಲ್ಲಿ ಸಂನ್ಯಸಿಸಿ ಮುಕ್ತರಾದವರು. ಊರಿಗೇ ಪುರೋಹಿತರಾಗಿ ಆ ವೃತ್ತಿಗೆ ಸಾರ್ಥಕ್ಯವನ್ನು ತಂದುಕೊಟ್ಟವರು...
ಭವನದ ಯಾವುದೇ ಕಾರ್ಯಕ್ರಮದಲ್ಲಿ ವೇದಘೋಷ ಆಗಬೇಕಿದ್ದಾಗ ಅದನ್ನು ರಾಜಗೋಪಾಲ್ ಅವರೇ ನಿರ್ವಹಿಸುತ್ತಿದ್ದರು. ಘೋಷಕ್ಕೊಂದು ಗಾತ್ರ ಬೇಕೆನಿಸಿದರೆ ಅವರಿಗೆ ಹತ್ತಿರದವರಾದ ಗಣೇಶ ಘನಪಾಠಿಗಳನ್ನು ಕರೆಸಿಕೊಳ್ಳುತ್ತಿದ್ದರು. ಇಬ್ಬರೂ ಘನಾಂತವಾಗಿ ಯಜುರ್ವೇದವನ್ನು ಬಲ್ಲವರಾದರೂ ರಾಜಗೋಪಾಲ್ ಅವರ ದನಿ ಮೃದು, ಮಧುರ, ಸಮಾಹಿತ. ಗಣೇಶ ಘನಪಾಠಿಗಳ ಧ್ವನಿಯಲ್ಲಿ ರೂಕ್ಷತೆ ಹೆಚ್ಚು; ಅಬ್ಬರವೂ ಮಿಗಿಲು. ಎಲ್ಲಿಯೂ ಅವರು ತಮ್ಮ ದನಿಯನ್ನೇ ಮುಂದುಮಾಡುತ್ತಿದ್ದರು. ಆದರೆ ರಾಜಗೋಪಾಲ್ ಯಾರೊಡನೆ ವೇದ ಹೇಳುವಾಗಲೂ ಅನುನಯ ಮತ್ತು ಅನುಸರಣೆಗಳನ್ನು ತಮ್ಮ ಆಧಾರಶ್ರುತಿಯಾಗಿ...
ಘನಪಾಠಿಗಳು ಶಾಲೆಯ ಮುಖವನ್ನು ಕಂಡವರಲ್ಲ. ಇಂಗ್ಲಿಷನ್ನು ಕಲಿತವರಲ್ಲ. ಅವರು ಅಪ್ಪಟ ಗುರುಕುಲದ ವಿದ್ಯಾರ್ಥಿ. ಅವರ ತಾತನವರು ತಮಿಳುನಾಡಿನಲ್ಲಿ ನ್ಯಾಯಮೂರ್ತಿಗಳಾಗಿದ್ದರು. ಅವರಿಗೊಬ್ಬ ತಮ್ಮ. ಆತ ಮಾತ್ರ ವೇದ-ಶಾಸ್ತ್ರಗಳನ್ನು ಬಲ್ಲವರಾಗಿದ್ದರು; ವೈದಿಕವೃತ್ತಿಯಲ್ಲಿಯೇ ಉಳಿದಿದ್ದರು. ಅವರ ಹೆಸರು ಕೂಡ ರಾಜಗೋಪಾಲಶರ್ಮಾ ಎಂದೇ. ನ್ಯಾಯಮೂರ್ತಿಗಳಾಗಿದ್ದ ಅಣ್ಣ ಚಿಕ್ಕ ವಯಸ್ಸಿಗೇ ತೀರಿಕೊಂಡರು. ತಬ್ಬಲಿಗಳಾದ ಅವರ ಮಕ್ಕಳನ್ನು ತಮ್ಮ ರಾಜಗೋಪಾಲಶರ್ಮರೇ ಸಾಕಿ ಸಲಹಿದರು. ಅವರಿಗೆಲ್ಲ ವೇದಾಭ್ಯಾಸ ಮಾಡಿಸಿದರೂ ಲೌಕಿಕವಿದ್ಯೆಗಳಲ್ಲಿಯೇ ಮುಂದುವರಿಸಿ ಕೆಲಸ-ಬೊಗಸೆ...
Himalaya
ಪರಿಚಿತರಿಗೆಲ್ಲ ಅಡ್ಡಹೆಸರನ್ನಿಡುವುದರಲ್ಲಿ ಎಸ್. ಕೆ. ಎಮ್. ಅಗ್ರಗಣ್ಯರು. ಒಬ್ಬ ಸಂಗೀತವಿದುಷಿಯನ್ನು ‘ಎನ್. ಬಿ.’ ಎಂದು ಕರೆಯುತ್ತಿದ್ದರು. ಆಗೆಲ್ಲ ಅಬ್ರಾಹ್ಮಣರನ್ನು ಸೂಚ್ಯವಾಗಿ ಹೀಗೆ ನಿರ್ದೇಶಿಸುತ್ತಿದ್ದುದು ಲೋಕದ ವಾಡಿಕೆ. ಇದನ್ನು ಗಮನಿಸಿದ ನಾನು “ಇಲ್ಲ ಸರ್; ಅವರು ಬ್ರಾಹ್ಮಣರೇ” ಎಂದೆ. ಆಗ ಕೃಷ್ಣಮೂರ್ತಿ ನಗುತ್ತ “ನಿಮಗೆ ವಾಸ್ತವ ಹೇಳಿದರೆ ಬೇಜಾರಾಗಬಹುದು. ಆದರೆ ಸತ್ಯವೇ ಮುಖ್ಯ ಅಲ್ಲವೇ! ಇದರ ಅರ್ಥ ನಾನ್-ಬ್ರಾಹ್ಮಿನ್ ಎಂದಲ್ಲ; ‘ನಿತ್ಯಬಹಿಷ್ಠೆ’ ಅಂತ!” ಇದನ್ನು ಕೇಳಿ ನಾನು ಮೂರ್ಚ್ಛೆ ಹೋಗುವುದೊಂದು ಬಾಕಿ. ಹೀಗೆಯೇ ಅವರಿಗೆ ಚೆನ್ನಾಗಿ...
ರಂಗನಾಥ್ ಅವರ ಮೊದಲ ಮಗಳ ಹೆಸರು ಅಂಜನಾ. ಎರಡನೆಯ ಮಗಳು ಹುಟ್ಟಿದಾಗ ಯಾವ ಹೆಸರು ಇಡಬೇಕೆಂದು ಕೇಳಿದಾಗ ಎಸ್. ಕೆ. ಎಮ್. ಹೀಗೆ ಹೇಳಿದ್ದರಂತೆ: “ನಿರಂಜನಾ ಅಂತ ಇಡಿ. ಮತ್ತೂ ಒಬ್ಬಳು ಹುಟ್ಟಿದರೆ ಇದ್ದೇ ಇದೆ ಅಮೃತಾಂಜನಾ!” ಇಲ್ಲಿಯ ಧ್ವನಿ ಆ ಕಾಲದ ಕನ್ಯಾಪಿತೃಗಳಿಗೆ ಚೆನ್ನಾಗಿ ತಿಳಿಯುತ್ತದೆ. ಚೋದ್ಯವೆಂದರೆ ರಂಗನಾಥ್ ಅವರಿಗೆ ನಿಜಕ್ಕೂ ಮೂವರು ಹೆಣ್ಣುಮಕ್ಕಳಾದರು! ಪುಣ್ಯಕ್ಕೆ ಹೆಸರುಗಳು ಮಾತ್ರ ಬೇರೆಯಾದವು. ಕೃಷ್ಣಮೂರ್ತಿಗಳ ಈ ವಿನೋದ ಎಚ್. ಕೆ. ಆರ್. ಅವರಿಗೆ ಅದೆಷ್ಟು ಇಷ್ಟವಾಯಿತೆಂದರೆ ಒಮ್ಮೆ ಡಿ.ವಿ.ಜಿ. “ನಿಮಗೆಷ್ಟು ಮಕ್ಕಳು?” ಎಂದು ಕೇಳಿದಾಗ “...
ವಿದ್ವದ್ರಸಿಕರ ಸಾಹಚರ್ಯ ೧೯೮೭ ಮತ್ತು ೧೯೮೮ರ ನಡುವೆ ಡಿ.ವಿ.ಜಿ. ಅವರ ಜನ್ಮಶತಾಬ್ದಿಯ ಅಂಗವಾಗಿ ರಂಗನಾಥ್ ವಾರಕ್ಕೊಂದರಂತೆ ಐವತ್ತೆರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಇದರ ಆಯೋಜನೆಯಲ್ಲಿ ನನ್ನನ್ನೂ ತೊಡಗಿಸಿದರು. ಆಗಲೇ ಹಿರಿಯರಾದ ಎನ್. ರಂಗನಾಥಶರ್ಮಾ, ಎಂ. ವಿ. ಸೀತಾರಾಮಯ್ಯ, ಟಿ. ಎನ್. ಪದ್ಮನಾಭನ್, ಡಿ. ಆರ್. ವೆಂಕಟರಮಣನ್, ನೀಲತ್ತಹಳ್ಳಿ ಕಸ್ತೂರಿ ಮುಂತಾದವರ ಬಳಕೆ ನನಗೆ ಒದಗಿತು. ಇದೇ ಸಂದರ್ಭದಲ್ಲಿ ಕುಲಪತಿ ಕೆ. ಎಂ. ಮುನ್ಷಿ ಅವರ ಜನ್ಮಶತಾಬ್ದಿಯೂ ಬಂದದ್ದು ಒಂದು ಸುಂದರ ಯೋಗಾಯೋಗ. ಈ ಕಾರಣದಿಂದಲೇ ನಾನು ಮುನ್ಷಿ ಅವರ ಎಲ್ಲ ಕೃತಿಗಳನ್ನೂ...
ಕಾರ್ಯಕ್ರಮಗಳ ನಿರ್ವಾಹ ರಂಗನಾಥ್ ಅವರು ಭವನಕ್ಕೆ ಬಂದ ಬಳಿಕ ಸುಮಾರು ಹತ್ತು ವರ್ಷಗಳ ಕಾಲ ನಡಸಿದ ಕಾರ್ಯಕ್ರಮಗಳ ಸಂಖ್ಯೆ ಅಕ್ಷರಶಃ ಸಾವಿರಾರು. ಸಾಮಾನ್ಯವಾಗಿ ತಿಂಗಳಿಗೆ ಹದಿನೈದಿಪ್ಪತ್ತು ಕಾರ್ಯಕ್ರಮಗಳು. ಕೆಲವೊಮ್ಮೆ ಇಪ್ಪತ್ತೈದನ್ನೂ ಮೀರುತ್ತಿದ್ದವು. Down the Memory Lane, Milestones in English Literature, Milestones in Sanskrit Literature, Humour: The Oil for the Wheel of Life, ಕನ್ನಡಸಾಹಿತ್ಯದ ಸಾಲು ದೀಪಗಳು, ಮಹಾಭಾರತದ ಪಾತ್ರಗಳು, ದರ್ಶನಪ್ರಪಂಚ, ಸಂಸ್ಕೃತಸಾಹಿತ್ಯಪ್ರಪಂಚ, ಪಂಚಮಹಾಕಾವ್ಯಗಳು ಮುಂತಾದ ಎಷ್ಟೋ...