Literature

ಶೃಂಗಾರಶಯ್ಯೆ

ನಿದ್ರೆಯು ಪ್ರಕೃತಿಯಾದರೆ ಹಾಸಿಗೆಯು ಸಂಸ್ಕೃತಿ. ಮಂಚ-ಮಧುಮಂಚಗಳು ಮತ್ತೂ ಮಿಗಿಲಾದ ಸಂಸ್ಕೃತಿ. ಅಷ್ಟೇಕೆ, ಭೋಗಲೋಕದ ಸ್ವೀಕೃತಿ, ನಾಗರಕಜಗತ್ತಿನ ಸತ್ಕೃತಿ. ಸಂಸ್ಕೃತಸಾಹಿತ್ಯದಲ್ಲಿ ಈ ಎಲ್ಲ ಸ್ತರಗಳೂ ಸೇರಿ ಶೃಂಗಾರಶಯ್ಯೆಯು ಪದರುಪದರಾದ ಸುಪ್ಪತ್ತಿಗೆಯೇ ಆಗಿದೆ. ಅಲ್ಲಿಯ ಕೆಲವೊಂದು ಶಯ್ಯಾಸ್ವಾರಸ್ಯಗಳನ್ನು ವಾಚಿಕವಾಗಿ ಮಾತ್ರ ಸಹೃದಯರೊಡನೆ ಹಂಚಿಕೊಳ್ಳುವ ಹವಣು ಇಲ್ಲಿದೆ.

ಅಮರಪ್ರೇಮದ ಅಮರುಕಶತಕ--ಉಪಸಂಹಾರ

ಅಮರುಕನ ಹೆಣ್ಣುಗಳ ಹಠ ಕಾವ್ಯಪರಿಧಿಯನ್ನೂ ಮೀರಿದ ಅತಿಕವಿತಾಭೂಮಿಕೆ. ಮನಸ್ಸನ್ನು ಕಲ್ಲಾಗಿಸಿಕೊಂಡು ನಲ್ಲರನ್ನು ಮುನಿದ ಹೆಣ್ಣುಗಳು ಹೊರದೂಡುವರೆಂದು ಬಲ್ಲವರ ಅಭಿಪ್ರಾಯ. ಆದರೆ ಅಮರುಕನ ಹೆಣ್ಣುಗಳು ಮೊದಲು ತಮ್ಮೊಡಲಿನಿಂದ ಪ್ರಾಣವನ್ನು ದೂಡಲು ನಿಶ್ಚಯ ಮಾಡಿಕೊಂಡ ಬಳಿಕವೇ ಪ್ರಾಣೇಶ್ವರರನ್ನು ಮನಸ್ಸಿನಿಂದ, ಮಂದಿರದಿಂದ ಹೊರಡಿಸಬಲ್ಲರು. ಇಂಥ ನಾಯಿಕೆಯ ಬಳಿ ಮುಂಜಾನೆ ಪ್ರಿಯತಮನು ಬಂದು ಬಾಗಿಲು ತಟ್ಟಿದ್ದಾನೆ. ಇರುಳೆಲ್ಲ ಅವನಿಗಾಗಿ ಕಾದು ಕಳವಳಿಸಿದ್ದ ಆಕೆ ಅಗುಳಿ ತೆಗೆದು ನೋಡಿದಾಗ ಅವಳಿಗೆ ಕಂಡದ್ದೇನು? ಅಲತಿಗೆಯ ಬಣ್ಣವನ್ನು ಹಣೆಯಲ್ಲಿ, ತೋಳಬಂದಿಯ ಒತ್ತುಗುರುತನ್ನು ಕೊರಳಿನಲ್ಲಿ, ಕಾಡಿಗೆಯ ಕಾಲುವೆಯನ್ನು ತುಟಿಯಂಚಿನಲ್ಲಿ, ತಂಬುಲದ ಕೆಂಪನ್ನು ಕಣ್ಣಂಚಿನಲ್ಲಿ ಮೆತ್ತಿಸಿಕೊಂಡು ಬಂದ ವಿಕಟಶೃಂಗಾರದ ಮನದಾಣ್ಮ!

ಅಮರಪ್ರೇಮದ ಅಮರುಕಶತಕ--ಸಖಿಯರ ವರ್ಣನೆಗಳು

ಬಹುಪತ್ನೀವ್ರತರ ಪಾಡೇ ಬೇರೆಯ ಜಾಡಿನದು. ಅವರ ಬಹುವಲ್ಲಭತೆಯ ಸುಖ-ಸಂತೋಷಗಳು ಅದು ಹೇಗೋ ಏನೋ, ನಮಗೆ ತಿಳಿಯದು. ಆದರೆ ತಂಟೆ-ತಕರಾರುಗಳು ಮಾತ್ರ ಜಗಜ್ಜಾಹೀರು. ಇದೂ ಒಂದು ಶಯ್ಯಾಗಾರ. ಅಮರುಕನನ್ನು ನಚ್ಚಿ ನಡೆಯುತ್ತಿರುವ ಈ ನಮ್ಮ ಸಂಚಾರದ ಕೇಂದ್ರಬಿಂದುವೇ ಹೆಚ್ಚಾಗಿ ಇದಲ್ಲವೆ? ಇಲ್ಲಿ ಈವರೆಗೆ ಹಾಯಾಗಿ ಲಲ್ಲೆಗೆರೆಯುತ್ತಿದ್ದ ಕಾದಲರ ನಡುವೆ ಇದೇಕಿಂಥ ವಿರಸ? ಹಾ, ತಿಳಿಯಿತು. ಪ್ರಣಯಜಲ್ಪನದ ಈ ಅಮರಶಿಲ್ಪಿ ಮಾತಿನ ಭರದಲ್ಲಿ ತನ್ನೊಡನಿರುವ ಈಕೆಯ ಹೆಸರಿಗೆ ಬದಲಾಗಿ ಮತ್ತೊಬ್ಬಳ ಹೆಸರನ್ನು ಉಸುರಿದ್ದಾನೆ. ಇಂಥ ಪ್ರಮಾದಗಳಿಗೆ ಸಂಸ್ಕೃತದಲ್ಲಿ “ಗೋತ್ರಸ್ಖಲಿತ”ವೆಂಬ ಗಂಭೀರವಾದ ಹೆಸರಿದೆ. ಆದೆಷ್ಟೇ ಭರ್ಜರಿಯಾದ ಹೆಸರನ್ನಿಟ್ಟರೂ ಆಗುವ ಎಡವಟ್ಟು ಬದಲಾದೀತೇ?

ಅಮರಪ್ರೇಮದ ಅಮರುಕಶತಕ--ನಾಯಿಕೆಯರ ವರ್ಣನೆಗಳು

ಇಲ್ಲೊಬ್ಬಳು ಕಲಹಾಂತರಿತೆಯು ತನ್ನ ಮುನಿಸಿನ ಕೆಡುಕನ್ನು ತಾನೇ ವಿಮರ್ಶಿಸಿಕೊಳ್ಳುತ್ತಿದ್ದಾಳೆ. ಅದನ್ನು ಏಕಾಂತವಾಗಿ ಮಾಡದೆ ಎಲ್ಲ ಗೆಳತಿಯರ ನಡುವೆ ಲೋಕಾಂತದಲಿ ನಡಸಿದ್ದಾಳೆಂದರೆ ಆಕೆಯ ಪಶ್ಚಾತ್ತಾಪದ ತೀವ್ರತೆ ತಿಳಿಯದಿರದು. ಹಲುಬುವ ಆಕೆಯ ಮಾತುಗಳು ಕರುಳು ಕುಯ್ಯುವಂತಿವೆ: “ಅಯ್ಯೋ, ನಿಟ್ಟುಸಿರು ಈ ಮೊಗವನ್ನೇ ಬಾಡಿಸಿದೆ. ಹೃದಯವು ಧಮನಿಗಳ ಸಮೇತ ಕಿತ್ತುಬರುವಂತಿದೆ. ನಿದ್ರೆಯು ಅಪ್ಪಿತಪ್ಪಿ ಕೂಡ ಸುಳಿಯುತ್ತಿಲ್ಲ. ನಲ್ಲನ ಮೊಗ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಹಗಲೂ ಇರುಳೂ ಅಳುವುದೊಂದೇ ಪಾಳಿಯಾಯಿತು. ಈ ಕಾಯವು ಕರಗುತ್ತಿದೆ. ಎಂಥ ಕೆಲಸ ಮಾಡಿದೆ, ಕಾಲಿಗೆ ಬಿದ್ದವನನ್ನು ದೂರ ದೂಡಿದೆನಲ್ಲ!

ಅಮರಪ್ರೇಮದ ಅಮರುಕಶತಕ--ರಸಚಿತ್ರಗಳು

ಇಲ್ಲೊಬನಿದ್ದಾನೆ ಪ್ರಣಯಮರ್ಮಜ್ಞನಾದ ಹದಿನಾರಾಣೆಯ ಅನುಭವರಸಿಕ. ಅವನಿಗೆ ಕೊಸರಿ ಕೊಸರಿ ಪಡೆದ ಪ್ರಣಯದ ಸವಿ ಎಷ್ಟೆಂದು ಗೊತ್ತು. ಪಾಪ, ಅವನ ಕಾದಲೆಗೀಗ ಮುನಿಸು. ಹೀಗಾಗಿ ನಿರೀಕ್ಷಿತನರ್ಮವು ಸಾಧ್ಯವಾಗುತ್ತಿಲ್ಲ. ಅವನ ತಕರಾರು ಕೇಳುವಂತಿದೆ. ಅಲ್ಲದೆ ಅದರಲ್ಲೊಂದು ಮೆಚ್ಚುಗೆಯ ಧ್ವನಿಯೂ ಉಂಟೆನ್ನಿ. ಹೀಗಲ್ಲವಾದರೆ ಹಲಬುವಿಕೆಯು ಅಪ್ಪಟ ಕವಿತೆಯಾಗುವುದು ಹೇಗೆ? ಅವನ ಪರಿಶೀಲನೆ ಹೀಗಿದೆ: “ಮೊದಲಿನಂತೆ ಅವಳೀಗ ಬಟ್ಟೆಯನ್ನು ಸಡಿಲಿಸಳು ಮುಜುಗರಗೊಳ್ಳುತ್ತಿಲ್ಲ; ಚೆಂದುಟಿಗಳನ್ನು ಚುಂಬಿಸಲೆಂದು ಮುಂಗುರಳನ್ನು ಸವರಿ ಹಿಂಗತ್ತನ್ನು ಬಾಗಿಸುವಾಗ ಹುಬ್ಬೇರಿಸಿ ಮೊಗ ತಿರುಗಿಸುತ್ತಿಲ್ಲ; ಬಿಗಿಯಪ್ಪುಗೆಯನ್ನು ತಾನಾಗಿ ಸ್ವೀಕರಿಸುವುಳಲ್ಲದೆ ಮೈಸೆಟೆದುಕೊಳ್ಳುತ್ತಿಲ್ಲ.

ಅಮರಪ್ರೇಮದ ಅಮರುಕಶತಕ--ಅಮರುಕನೊಡನೆ ರಸಯಾತ್ರೆ

ಅಮರುಕನೊಡನೆ ರಸಯಾತ್ರೆ

ಪ್ರಕೃತಕೃತಿಯ ಪದ್ಯಗಳನ್ನು ಪ್ರಧಾನವಾಗಿ ಮುನಿದ ನಾಯಿಕೆಗೆ ಸಖಿಯ ಹಿತಬೋಧೆ, ಭಾವಶಬಲಿತೆಯಾದ ನಾಯಿಕೆಯು ಸಖಿಯರಿಗೆ ಹೇಳುವ ಮಾತುಗಳು, ನಾಯಕ-ನಾಯಿಕೆಯರ ಸಂವಾದ, ನಾಯಕ-ಸಖಿಯರ ಸಂವಾದ, ಕವಿಯದೇ ಆದ ನಿರೂಪಣೆ ಎಂಬಿವೇ ಕೆಲವು ವಿಭಾಗಗಳಲ್ಲಿ ಅಡಕಮಾಡಬಹುದು. ಇವುಗಳಲ್ಲಿ ಕವಿಯು ಯಾವುದೇ ವ್ಯಕ್ತಿಗೂ ಪಕ್ಷಪಾತವಿಲ್ಲದೆ—ತನ್ನದೇ ಆದ ಪೂರ್ವಗ್ರಹಗಳೂ ಇಲ್ಲದೆ—ಅಪ್ಪಟವಾದ ಪ್ರಣಯವನ್ನು ಮಡಿ-ಮೈಲಿಗೆಗಳ ಗೋಜಿಲ್ಲದೆ ಸಾಕ್ಷಾತ್ಕರಿಸುತ್ತಾನೆ. ಈ ಕಾರಣದಿಂದಲೇ ಅಮರುಕನನ್ನು ಚಿತ್ತವೃತ್ತಿಸಾರ್ವಭೌಮನೆಂದೂ ಪದ್ಯರೂಪದಲ್ಲಿ ನೃತ್ಯವನ್ನು ಕಂಡರಿಸಿದ ರಸಶಿಲ್ಪಿಯೆಂದೂ ಶಂಕೆಯಿಲ್ಲದೆ ಹೇಳಬಹುದು. ಪ್ರಕೃತಲೇಖನದಲ್ಲಿ ಇಂಥ ಶೃಂಗಾರಸಂದರ್ಭಗಳ ಪರಿಚಯ ಮಾಡಿಕೊಳ್ಳೋಣ.  

On poetry--Meter and Rhyme

Art experience is essentially personal. It never demands external attestation. It differs from person to person, taking shape based on their attitude and saṃskāra. Poetic criticism, therefore, can never find consensus. There is a popular saying, “loko bhinnaruciḥ,” “tastes differ.” I’m afraid it is only half a statement. Here is the other half: to a certain extent there does exist a natural consensus among us. This is perhaps due to the common background and experience of humans.

On Poetry--Truth and Beauty

I am of the firm opinion that a devoted study of literature is ātmasaṃskāraka—it refines us from within. The poet reveals in a suggestive manner the extent of our desires, strengths, and frailties. His world is one full of natural splendour: its current cleanses our character, its sunlight helps blossom the flower of our heart and bring out its fragrance, a mere touch of its wind transforms our bones into iron posts. To bring about such a magical transformation might not always be the poet’s objective. This is the underlying wonder in the poetic process.