Literature

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 2)

ಭೀಮ ಹುಟ್ಟಿನಿಂದಲೇ ಮಹಾಬಲಶಾಲಿ, ವಜ್ರದೇಹಿ, ಉಳಿದವರಿಗಿಂತಲೂ ಸಂಪೂರ್ಣ ಭಿನ್ನ ಎಂದು ಚಿತ್ರಿಸುತ್ತಾನೆ ಕುಮಾರವ್ಯಾಸ.  ಭೀಮನ ಜನನದ ನಂತರ ಕುಂತಿ ಇಂದ್ರನನ್ನು ಜಪಿಸಿ, ಅರ್ಜುನನನ್ನು ಪಡೆಯುತ್ತಾಳೆ.  “ಲೋಕತ್ರಿತ್ರಯದಲಿ ಬಲುಗೈ ಕಣಾ, ಪಶುಪತಿಗೆ, ಪುರುಷೋತ್ತಮಗೆ ಸರಿ ಮಿಗಿಲೆಂಬ…” (ಆದಿಪರ್ವ 4.60), ಸುತನನಿತ್ತೆನು ಎಂದು ಹೇಳಿ ಇಂದ್ರ ಹಿಂದಿರುಗುತ್ತಾನೆ.  ಅರ್ಜುನ ಜನಿಸಿದಾಗ ದೇವದುಂದುಭಿ ಮೊಳಗಿ, ಕುಸುಮಾವಳಿಯ ಮಳೆ ಸುರಿದು ಪ್ರಕೃತಿಯಲ್ಲಿ ಶುಭ ಶಕುನಗಳಾಗುತ್ತವೆ.  ಅರ್ಜುನನ ಜನನಕ್ಕೆ ಮೂರು ತಿಂಗಳ ಮುನ್ನ ಶ್ರೀ ಕೃಷ್ಣನ ಜನನವಾಗಿ ಇವರಿಬ್ಬರೂ ಸುಮಾರು ಸಮ ವಯಸ್ಕರಾಗಿರುತ್ತಾರೆ.  ನಂತರ ಅಶ್ವಿನೀ ದೇವತೆಗಳಿಂದ ಮಾದ್ರಿಯಲ್ಲಿ ನಕುಲ ಸಹದೇವರು ಜನಿಸುತ್ತಾರೆ.  ಈ ಮಕ್ಕಳ ಜನನದ ವಿವರಗಳು ಭಾರತದ ಕಥೆಗೆ ಪ್ರಸ್ತಾವನೆಯಾಗುತ್ತದೆ.

ಕರ್ಣಾಟ ಭಾರತ ಕಥಾಮಂಜರಿ - ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 1)

‘ಕರ್ಣಾಟ-ಭಾರತ-ಕಥಾಮಂಜರಿ’, ಕುಮಾರವ್ಯಾಸನೆಂದು ಬಿರುದು ಪಡೆದ ಗದುಗಿನ ನಾರಾಯಣಪ್ಪನಿಂದ ವಿರಚಿಸಲ್ಪಟ್ಟು, ‘ಗದುಗಿನ ಭಾರತ’ ವೆಂದೇ ಖ್ಯಾತಿ ಪಡೆದು ಕರ್ನಾಟಕದ ಹಳ್ಳಿಹಳ್ಳಿಯಲ್ಲಿಯೂ ಜನರ ನಾಲಿಗೆಯ ಮೇಲೆ ನಲಿಯುತ್ತಿರುವ ಮಹಾಕಾವ್ಯ. ಕನ್ನಡ-ಸಾಹಿತ್ಯ-ಕ್ಷೇತ್ರದ ತೃತೀಯ ನವೋದಯದಲ್ಲಿ ವೈಷ್ಣವಭಕ್ತಿಯನ್ನು ತನ್ನ ಕಾವ್ಯಗಂಗೆಯ ಮೂಲಕ ಪುನರುತ್ಥಾನಗೊಳಿಸಿದವನು ಕುಮಾರವ್ಯಾಸನೆಂದು ಅನೇಕ ವಿದ್ವಾಂಸರ ಅಭಿಮತ. ಕುಮಾರವ್ಯಾಸನ ಕಾವ್ಯದ ಬಗೆಗೆ ಬರೆಯಬಲ್ಲ ಪಾಂಡಿತ್ಯವಾಗಲೀ, ಭಾಷಾ-ಪ್ರೌಢಿಮೆಯಾಗಲೀ ಇರದಿದ್ದರೂ, ನನ್ನ ಆಯುಷ್ಯದ ಈ ಅವಧಿಯಲ್ಲಿ ಕೃತಿಯನ್ನು ಮತ್ತೆ ಓದಿದಾಗ ನನ್ನ ಮನಸ್ಸಿನಲ್ಲಿ ರೂಪುಗೊಂಡ ಕೆಲವು ಅನಿಸಿಕೆಗಳನ್ನಿಲ್ಲಿ ಅಭಿವ್ಯಕ್ತಿಸುತ್ತಿದ್ದೇನೆ. ಈ ಅನಿಸಿಕೆಗಳು ಕೃತಿಯಲ್ಲಿ ಕಂಡು ಬರುವ ಸಂಗತಿಗಳನ್ನು ಮಾತ್ರ ಆಧರಿಸಿರುವುವು.

ಮಹಾಭಾರತದ ನುಡಿಬೆಡಗು--ಉಪಸಂಹಾರ

೩. ವಿಶಿಷ್ಟಸಮಾಸಗಳು

ಭಾರತೀಯಭಾಷೆಗಳ ಬಲಗಳ ಪೈಕಿ ಒಂದು ಸಮಾಸಗುಂಫನಶಕ್ತಿ. ಸಂಸ್ಕೃತಕ್ಕಿದು ಸರ್ವೋಚ್ಚವಾಗಿದೆ. ಈ ಮೂಲಕ ನುಡಿಗೆ ಹೊಸತೊಂದು ಕಸುವನ್ನು ನೀಡುವುದಲ್ಲದೆ ಅಂದ-ಅಡಕಗಳನ್ನೂ ತರಬಹುದು. ಜೊತೆಗೆ, ರೂಪಕನಿರ್ಮಾಣದಲ್ಲಿ ಸಮಾಸವೇ ಸರ್ವಸಮರ್ಥ. ಲೋಕಪ್ರಸಿದ್ಧವಾದ ದ್ವಂದ್ವ, ತತ್ಪುರುಷ, ಬಹುವ್ರೀಹಿ, ಕರ್ಮಧಾರಯಗಳಂಥ ಸಮಾಸಗಳಲ್ಲದೆ ಪ್ರಾದಿ, ನಞ್, ಅಲುಕ್, ಉಪಪದ, ಅವ್ಯಯೀಭಾವಗಳಂಥ ಸಮಾಸಗಳಲ್ಲಿ ಹೆಚ್ಚಿನ ಪ್ರಯೋಗಗಳಿಗೆ ನುಡಿಗಟ್ಟುಗಳಾಗುವ ಅವಕಾಶವಿರುತ್ತದೆ. ಇಂಥ ಕೆಲವು ಮಾದರಿಗಳನ್ನು ಪರಿಶೀಲಿಸೋಣ.

ಮಹಾಭಾರತದ ನುಡಿಬೆಡಗು--ನುಡಿಗಟ್ಟಿನ ಉದಾಹರಣೆಗಳು

ಸಂಸ್ಕೃತದಲ್ಲಿ ಯಾವುದನ್ನಾದರೂ ಅದರ ಸ್ವಭಾವ ಇಂಥದ್ದೆಂದು ವರ್ಣಿಸುವಾಗ “ಧರ್ಮ”ಪದವನ್ನು ಸಮಾಸದ ಕೊನೆಗೆ ಬಳಸಿ ನುಡಿಗಟ್ಟಾಗಿಸುವುದುಂಟು. ಉದಾಹರಣೆಗೆ: “ಭೈಕ್ಷ್ಯಧರ್ಮಾ ಯತಯಃ” (ಯತಿಗಳು ಭಿಕ್ಷೆ ಬೇಡಿ ಬದುಕುವಂಥವರು). ಹೀಗೆಯೇ ಆಶ್ರಯವಿಲ್ಲದೆ ಬದುಕಲಾರದವರು ಬಳ್ಳಿಯಂಥವರು: “ಲತಾಧರ್ಮಾಃ.”

ಲತಾಧರ್ಮಾಃ (೫.೨೯.೪೯)

ಬಡವರಿಗೆ ಹಸಿವೆ ಹೆಚ್ಚೆಂಬುದು ನಾಣ್ನುಡಿ. ಗಟ್ಟಿಮುಟ್ಟಾದವರು ಕಲ್ಲನ್ನೂ ತಿಂದು ಅರಗಿಸಿಕೊಳ್ಳುತ್ತಾರೆಂದು ಕೂಡ ಹೇಳುವುದುಂಟು. ಇವುಗಳಿಗೆ ಸಂವಾದಿ ಮಹಾಭಾರತದಲ್ಲಿದೆ. ಆ ಪ್ರಕಾರ “ಬಡವರ ಹೊಟ್ಟೆಯಲ್ಲಿ ಕಟ್ಟಿಗೆಯೂ ಕರಗಿಹೋಗುತ್ತದೆ!”

ಮಹಾಭಾರತದ ನುಡಿಬೆಡಗು--ನುಡಿಗಟ್ಟು

ಗೆಳತಿಯರಿಂದ ಬಾವಿಗೆ ತಳ್ಳಲ್ಪಟ್ಟ ದೇವಯಾನಿಯನ್ನು ಯಯಾತಿ ಕೈಹಿಡಿದು ಎತ್ತಿದ ಬಳಿಕ ಅವಳು ಅವನನ್ನೇ ಮದುವೆಯಾಗಲು ಬಯಸುತ್ತಾಳೆ. ಅವನು “ಬ್ರಾಹ್ಮಣಕನ್ಯೆಯನ್ನು ಕ್ಷತ್ರಿಯ ಪರಿಣಯಿಸುವುದು ವರ್ಣಧರ್ಮಕ್ಕೆ ವಿರುದ್ಧ” ಎಂದರೆ ಇವಳು, “ಪಾಣಿಧರ್ಮದ ಪ್ರಕಾರ ಸರಿಯಾಗುತ್ತದೆ” ಎಂದು ಪ್ರತಿವಾದಿಸುತ್ತಾಳೆ. “ಪಾಣಿಧರ್ಮ”ವೆಂದರೆ ಕೈಹಿಡಿದೊಡನೆಯೇ ವಿವಾಹವಾಯಿತೆಂದು ಒಪ್ಪುವುದು ಹಾಗೂ ಕೈಹಿಡಿದವಳನ್ನು ಕಡೆಯ ತನಕ ಉಳಿಸಿಕೊಳ್ಳುವುದು.

ಪಾಣಿಧರ್ಮಃ (೧.೭೬.೨೦)

ಮಹಾಭಾರತದ ನುಡಿಬೆಡಗು--ಉದಾಹರಣೆಗಳು

ಋಷಿಕುಮಾರ ಋಷ್ಯಶೃಂಗ ಹೆಣ್ಣನ್ನೇ ಕಾಣದೆ ಬೆಳೆದವನು. ಅವನು ಮೊದಲ ಬಾರಿಗೆ ಬೈತಲೆ ತೆಗೆದುಕೊಂಡು ಹೆರಳು ಹಾಕಿಕೊಂಡ ಹೆಂಗಸರನ್ನು ಕಂಡಾಗ ಅವರ ಹಣೆಯೇ ಎರಡು ಪಾಲಾದಂತೆ ಭ್ರಮಿಸುತ್ತಾನೆ. ಅದನ್ನು ತುಂಬ ಚಮತ್ಕಾರಕವಾಗಿ ಮಹಾಭಾರತ ಹೇಳುವ ಪರಿ ಹೀಗಿದೆ:

ದ್ವೈಧೀಕೃತಾ ಭಾಂತಿ ಸಮಾ ಲಲಾಟೇ (೩.೧೧೨.೯)

ಮಹಾಭಾರತದ ನುಡಿಬೆಡಗು

 

ಯದ್ವಿಜ್ಞಾನಮಹಾವ್ಯೋಮ್ನಿ ಕ್ರಿಯತೇ ತಚ್ಚರಾಚರಮ್ |

ತಸ್ಮೈ ಜ್ಞೇಯದರಿದ್ರಾಯ ನಮೋ ಭಾರತವೇಧಸೇ ||

(ವರದವಿದ್ವಾಂಸನ “ಜ್ಞಾನಪಂಜರ”ವ್ಯಾಖ್ಯಾನ)

(ಯಾರ ಅನುಭವಜನ್ಯಜ್ಞಾನವೆಂಬ ಮಹಾಕಾಶದಲ್ಲಿ ಸಕಲಚರಾಚರಗಳೂ ರೂಪಿತವಾಗುವುವೋ ಅಂಥ ಭಾರತಬ್ರಹ್ಮನಿಗೆ ನಮಸ್ಕಾರ. ಆ ಕೃತಿಯೂ ಅದರ ಕರ್ತೃವೂ ನಮ್ಮ ಪಾಲಿಗೆ ತಿಳಿಯಲು ಮತ್ತಾವುದನ್ನೂ ಉಳಿಸಿಲ್ಲ.)

The Sport of Renunciation: Bhartṛhari’s Vairāgya-śatakam

वयमिह परितुष्टा वल्कलैस्त्वं दुकूलैः

सम इह परितोषो निर्विशेषो विशेषः।

स तु भवति दरिद्रो यस्य तृष्णा विशाला

मनसि च परितुष्टे कोऽर्थवान् को दरिद्रः॥