ಅಯೋಧ್ಯೆಯ ಶ್ರೀರಾಮಮಂದಿರ
ದೇವಾಲಯಗಳು ಭಾರತೀಯ ಸಂಸ್ಕೃತಿಯ ಕೇಂದ್ರಬಿಂದು ಎಂಬುದು ಸಕಲ ಭಾರತೀಯರೂ ಬಲ್ಲ ತಥ್ಯವೇ ಆಗಿದೆ. ಸುಂದರ ದೇವಾಲಯಗಳ ನಿರ್ಮಾಣವು ಆಡಳಿತ ವರ್ಗದ ದಕ್ಷತೆಯ ಹಾಗೂ ರಾಷ್ಟ್ರದ ಆರ್ಥಿಕ ಸಮೃದ್ಧಿಯ ಸಂಕೇತವೂ ಹೌದು. ಪ್ರಾಚೀನ ಕಾಲದಿಂದಲೂ ಭಾರತಾದ್ಯಂತ ನಿರ್ಮಾಣವಾಗಿರುವ ದೇವಾಲಯಗಳು ಇದಕ್ಕೆ ಪುರಾವೆಯಾಗಿ ನಿಂತಿವೆ. ರಾಮಾಯಣದಲ್ಲಿಯೇ ದೇವಾಯತನಗಳ, ಚೈತ್ಯಗಳ ಹಾಗೂ ಅಧಿಷ್ಠಾನಗಳ ಉಲ್ಲೇಖವಿದೆ. ರಾಮನ ಕಾಲದಲ್ಲಿಯೂ ಅಯೋಧ್ಯೆಯಲ್ಲಿ ದೇವಾಲಯಗಳಿದ್ದವು ಎಂದು ಊಹಿಸಲು ರಾಮಾಯಣದಲ್ಲಿ ಆಧಾರಗಳಿವೆ.