Literature

ಪ್ರಾಸ: ಒಂದು ವಿವೇಚನೆ - 4

ಛಂದೋಗತಿ-ಅನುಪ್ರಾಸ

ನಾವು ಈಗಾಗಲೇ ಅನುಪ್ರಾಸದ ಹಲವಾರು ಉದಾಹರಣೆಗಳನ್ನು ಕಂಡಿರುವ ಕಾರಣ ಈಗ ಮತ್ತೂ ಕೆಲವೊಂದು ಮಾದರಿಗಳ ಮೂಲಕ ಇದರ ಸೊಗಸನ್ನು ಮನದಟ್ಟು ಮಾಡಿಕೊಳ್ಳುವುದಷ್ಟೇ ಉಳಿಯುತ್ತದೆ.

ಲಯರಹಿತವಾದ ವರ್ಣವೃತ್ತಗಳಲ್ಲಿ ಅನುಪ್ರಾಸವು ತಾಳಾನುಸಾರವಾಗಿ ಬರಲು ಸಾಧ್ಯವೇ ಇಲ್ಲ. ಆದರೂ ಪದ್ಯದ ಆದ್ಯಂತ ಕಾಣಸಿಗುವಾಗ, ಪದಗಳು ಮುಗಿದಂತೆಲ್ಲ ಬರುವಾಗ, ಯತಿಸ್ಥಾನದಲ್ಲಿ ತಲೆದೋರುವಾಗ ಹೆಚ್ಚಿನ ಆಕರ್ಷಣೆ ಉಂಟಾಗುತ್ತದೆ. ಉದಾಹರಣೆಗೆ ಕೆಲವೊಂದು ಪದ್ಯಗಳನ್ನು ಗಮನಿಸಬಹುದು. ವಿಶೇಷತಃ ಈ ಬಗೆಯ ಅನುಪ್ರಾಸಗಳು ಹಲವೊಮ್ಮೆ ಛೇಕಾನುಪ್ರಾಸ ಮತ್ತು ಯಮಕಗಳತ್ತ ಕೂಡ ವಾಲುವ ಪರಿ ಗಮನಾರ್ಹ. ಪ್ರಸ್ತುತ ಉದಾಹರಣೆಗಳಲ್ಲಿಯೂ ಅಂಥವಿರುವುದು ದೃಷ್ಟಚರ.

ಪದ್ಯದ ಆದ್ಯಂತ, ಹೆಚ್ಚಿನ ಪದಗಳ ಮುಗಿತಾಯದಲ್ಲಿ ಕಾಣಸಿಗುವ ಅನುಪ್ರಾಸ: 

S. L. Bhyrappa’s ‘Mandra’: A Study

The novel ‘Mandra’ by S. L. Bhyrappa which appeared in 2002 is unique in several respects. It is woven around music and musicians. It is not only a tour de force as novel-writing goes; it is in a class by itself because of the high degree of its sensitivity, multi-layered structure, richness of insight and extra-ordinary narrative skill. The work is a great deal more than mere story-telling; its portrayal of characters and its thematic intensity are of epic dimensions. The dialogues have a lyrical quality one seldom expects in a work of fiction. (More about this later).

ಪ್ರಾಸ: ಒಂದು ವಿವೇಚನೆ - 2

ಅಂತ್ಯಪ್ರಾಸ

ಅಂತ್ಯಪ್ರಾಸದ ಇತಿಹಾಸವು ಸಾಕಷ್ಟು ಪ್ರಾಚೀನ. ವಿಶೇಷತಃ ರಗಳೆಗಳಲ್ಲಿ ಎರಡು-ಎರಡು ಸಾಲುಗಳು ಯುಗ್ಮಕಗಳೆಂಬಂತೆ ಅಂತ್ಯಪ್ರಾಸದೊಡನೆ ಸೇರಿ ಬರುತ್ತವೆ. ಇಲ್ಲಿ ಆದಿಪ್ರಾಸವಿದ್ದರೂ ಇಲ್ಲದಿದ್ದರೂ ಅಂತ್ಯಪ್ರಾಸ ನಿಯತವಾಗಿ ಬರುವುದು ಗಮನಾರ್ಹ. ಸಂಸ್ಕೃತ ಮತ್ತು ಪ್ರಾಕೃತ-ಅಪಭ್ರಂಶಗಳ ಗೀತಸಾಹಿತ್ಯದಲ್ಲಿಯೂ ಅಂತ್ಯಪ್ರಾಸವನ್ನು ಗುರುತಿಸಬಹುದು.[1] ಇಲ್ಲಿ ಆದಿಪ್ರಾಸವಿರುವುದಿಲ್ಲ. ಇದರ ಮುಂದುವರಿಕೆಯನ್ನು ಹಿಂದೀ ಮೊದಲಾದ ಉತ್ತರಭಾರತದ ಭಾಷೆಗಳ ಸಾಹಿತ್ಯದಲ್ಲಿ ಕಾಣಬಹುದು.

ಕನ್ನಡದಲ್ಲಿ ಅಂತ್ಯಪ್ರಾಸವು ರಗಳೆಗಳ ಮೂಲಕ ತೋರಿಕೊಳ್ಳುವ ಕ್ರಮವನ್ನು ಈ ಕೆಲವು ಉದಾಹರಣೆಗಳು ನಿರೂಪಿಸುತ್ತವೆ:

ಪ್ರಾಸ: ಒಂದು ವಿವೇಚನೆ - 1

ಅಪೌರುಷೇಯವೆನಿಸಿದ ವೇದವಾಙ್ಮಯದಲ್ಲಿ ಪ್ರಾಸಬದ್ಧವಾದ ಅನೇಕ ಪಂಕ್ತಿಗಳಿವೆ. ಆದಿಕವಿ ವಾಲ್ಮೀಕಿಯಲ್ಲಿ ಪ್ರಾಸಾನುಪ್ರಾಸಗಳ ಸಮೃದ್ಧಿಯನ್ನು ಕಾಣಬಹುದು. ಅಷ್ಟೇಕೆ, ಭಾರತೀಯ ಭಾಷೆಗಳೆಲ್ಲ ಸಹಜವಾಗಿ ಪ್ರಾಸಾನುಪ್ರಾಸಗಳಿಗೆ ಒಗ್ಗಿಬಂದಿವೆ. ನಮ್ಮ ಅನುದಿನದ ಸಂಭಾಷಣೆಗಳಲ್ಲಿ, ಗಾದೆಮಾತುಗಳಲ್ಲಿ, ಜಾನಪದರ ಗೇಯಗಳಲ್ಲಿ, ನಾಟಕ-ಸಿನೆಮಾಗಳ ಹಾಡುಗಳಲ್ಲಿ ಪ್ರಾಸಾನುಪ್ರಾಸಗಳದೇ ಸಾಮ್ರಾಜ್ಯ. ಪ್ರಾಸದ ಮೂಲಕ ಎಂಥ ಗಹನ ವಿಚಾರವನ್ನೂ ಮನಸ್ಸಿಗೆ ಹತ್ತಿರ ಮಾಡಬಹುದು.

‘ನೆಲೆ’: ಸಾವಿನ ಹಿನ್ನೆಲೆಯಲ್ಲಿ ಜೀವನಮೀಮಾಂಸೆ - 3

ಪಾರ್ವತಿ. ಇವಳೂ ಜವರಾಯಿಯಂತೆ ಜೀವನದ ಬಗೆಗೆ ಆಸ್ಥೆಯುಳ್ಳವಳು. ಯಾವ ಕೆಲಸ ಮಾಡಿದರೂ ಅದರಲ್ಲಿ ಒಪ್ಪ-ಓರಣ ಇರುವಂತೆ ನೋಡಿಕೊಳ್ಳುವ ಮನೋಭಾವದವಳು. ಈಕೆಯನ್ನು ಹುಟ್ಟು-ಸಾವುಗಳಿಗೆ ಹತ್ತಿರವಿರುವ ನರ್ಸ್ ಉದ್ಯೋಗದವಳೆಂದು ಚಿತ್ರಿಸುವ ಮೂಲಕ ಭೈರಪ್ಪನವರು ಔಚಿತ್ಯ ಕಾಪಾಡಿಕೊಂಡಿದ್ದಾರೆ. ಇದರಿಂದ ಕೃತಿಯ ಕಥನತಂತ್ರಕ್ಕಾದ ಪ್ರಯೋಜನ ಬಲು ಮಿಗಿಲು. ನಾಯಿನಾಗರಾಜಯ್ಯನ ಸಾವಿನಿಂದ ತತ್ತರಿಸುತ್ತಿದ್ದ ಜವರಾಯಿಯ ಭಾವತುಮುಲವನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಪಾರ್ವತಿಗೆ ನೆರವಾದದ್ದು ಅವಳ ವೃತ್ತಿ. ರೋಗಬಾಧಿತರನ್ನು ಪ್ರತಿದಿನವೂ ನೋಡುತ್ತಿದ್ದ ಅವಳಿಗೆ ಸಾವಿನ ಅನಿವಾರ್ಯತೆಯ ತಿಳಿವಳಿಕೆ ಚೆನ್ನಾಗಿತ್ತು.