‘ಹೆಬ್ಬೆರಳು’ ರೂಪಕದ ಸಂಕ್ಷಿಪ್ತ ಪರಾಮರ್ಶೆ ಈ ರೂಪಕವನ್ನು ಪೈಗಳು ನಾಲ್ಕು ‘ನೋಟ’(ದೃಶ್ಯ)ಗಳಿರುವ ಏಕಾಂಕವೆಂದು ಹೆಸರಿಸಿದ್ದಾರೆ. ಆರುನೂರ ಎಂಬತ್ನಾಲ್ಕು ಸರಳರಗಳೆಯ (ಪೈಗಳ ಪ್ರಕಾರ ‘ಝಂಪೆ’) ಪಂಕ್ತಿಗಳೂ ‘ಛಂದ’ ಎಂಬ ಪ್ರಕಾರಕ್ಕೆ ನಿಕಟವಾದ ಒಂಬತ್ತು ಚೌಪದಿಗಳೂ ಇಲ್ಲಿವೆ. ಹೀಗೆ ಇದನ್ನೊಂದು ಪದ್ಯರೂಪಕವೆನ್ನಬಹುದು. ಇಲ್ಲಿ ಗ್ರೀಕರ ರೂಪಕಗಳ ಅವಿಭಾಜ್ಯ ಅಂಗವಾದ ‘ಖೋರಸ್’ ಎಂಬ ನಟ-ನರ್ತಕರ ಗುಂಪು ಬಂದಿರುವುದು ಗಮನಾರ್ಹ. ಬಹುಶಃ ನವೋದಯ ಕನ್ನಡಸಾಹಿತ್ಯದ ಮಟ್ಟಿಗೆ ಗ್ರೀಕ್ ರುದ್ರ(ಗಂಭೀರ)ನಾಟಕಗಳ ಅನುವಾದ/ರೂಪಾಂತರಗಳ ಹೊರತಾಗಿ ಮತ್ತೆಲ್ಲಿಯೂ ಈ ಖೋರಸ್...
Ocean
ಭಂಗೀಭಣಿತಿ ಎಷ್ಟೋ ಬಾರಿ ಮಹಾಕವಿಗಳು ತಮ್ಮ ಕಾವ್ಯದ ನಡುವೆ ಪ್ರೌಢವೂ ಸಾಭಿಪ್ರಾಯವೂ ಆದ ಹೇಳಿಕೆಗಳನ್ನು ಮಾಡುವುದುಂಟು. ಇವುಗಳೆಲ್ಲ ಕಟ್ಟಕಡೆಗೆ ರಸಧ್ವನಿಯಲ್ಲಿ ಪರ್ಯವಸಿಸುತ್ತವೆಂಬುದು ಸತ್ಯ. ಆದರೆ ರೂಪದ ಮಟ್ಟಿಗೆ ಇವನ್ನು ನಿರ್ದಿಷ್ಟವಾದ ಒಂದು ಸ್ಫುಟಾಲಂಕಾರದಲ್ಲಿ ಅಳವಡಿಸಲಾಗುವುದಿಲ್ಲ; ಲಕ್ಷಣೆ ಮತ್ತು ವ್ಯಂಜನೆಗಳಿಗೂ ನೇರವಾಗಿ ತಳುಕು ಹಾಕಲು ಅನುಕೂಲಿಸುವುದಿಲ್ಲ. ಇಂಥವನ್ನು ಕುಂತಕನ ಮಾತಿನಂತೆ ‘ಭಂಗೀಭಣಿತಿ’ ಎನ್ನಬಹುದು. ಕನ್ನಡದಲ್ಲಿ ಡಿ.ವಿ.ಜಿ., ಕುವೆಂಪು, ಪುತಿನ ಮೊದಲಾದವರಲ್ಲಿ ಇವನ್ನು ಹೇರಳವಾಗಿ ಕಾಣಬಹುದು. ಪೈಗಳೂ ಇವರ ಸಾಲಿಗೆ...
{ಅತಿಶಯೋಕ್ತಿ} ಅತಿಶಯೋಕ್ತಿಯನ್ನು ಕಾವ್ಯಜೀವಾತುವೆಂದು ಆಲಂಕಾರಿಕರು ಪರಿಗಣಿಸುತ್ತಾರೆ. ಇದನ್ನು ಎಲ್ಲ ಅಲಂಕಾರಗಳ ಅಂತಸ್ತತ್ತ್ವವೆಂದೂ ಗಣಿಸುವುದುಂಟು.[1] ಮಹತ್ತನ್ನು ವರ್ಣಿಸುವಾಗ ಇದರ ವಿನಿಯೋಗ ಮಿಗಿಲಾಗಿ ಸ್ವಾಗತಾರ್ಹ. ಅಂಥ ಒಂದು ಸಂದರ್ಭವನ್ನು ವಿದ್ಯಾರಣ್ಯರ ಸ್ತುತಿಯಲ್ಲಿ ನೋಡಬಹುದು: ಸತ್ಯದ ಭೂಮಿ ಧರ್ಮದಮೃತಾಂಬುಧಿ ಶುಷ್ಕತುರುಷ್ಕಕಾನನಾ- ಭೀಲದವಾನಲಂ ನಿಖಿಲ ಕನ್ನಡನಾಡಿನ ಸೂತಿಕಾನಿಲಂ ಶುದ್ಧಚಿದಂಬರಂ ಬೆರೆಯೆ ಪಂಚತೆಗಂದಿಗತೀತಪಂಚಭೂ- ತಂ ನಿನತಾತ್ಮಮೊಂದಿ ಪರಮಾತ್ಮನನಾದುದಭಿನ್ನಮದ್ವಯಂ (‘ಶ್ರೀವಿದ್ಯಾರಣ್ಯರ ಅಡಿದಾವರೆಯಲ್ಲಿ’, ಪು. ೪೮...
ಉಪಗುಪ್ತ ಮತ್ತು ವಾಸವದತ್ತೆಯರನ್ನು ಕುರಿತ ಕಥನಕವನವೊಂದರಲ್ಲಿ ಪೈಗಳು ವಾಸವದತ್ತೆಯ ಮೇಲೆ ಬಂದೆರಗಿದ ಕೊಲೆಯ ಆರೋಪವನ್ನು ಬಣ್ಣಿಸುತ್ತಾರೆ. ಈ ಪ್ರಸಂಗದಲ್ಲಿ ಊರಿನ ಜನರು ಗಾಳಿಸುದ್ದಿಗಳಿಗೆಲ್ಲ ದಿಕ್ಕುದೆಸೆಯನ್ನು ಕಲ್ಪಿಸಿ ಅವೆಲ್ಲ ಕಡೆಗೆ ವಾಸವದತ್ತೆಯೇ ಅಪರಾಧಿನಿ ಎಂಬತ್ತ ಬೆರಳು ಚಾಚುವ ಬಗೆಯನ್ನು ಹೀಗೆ ಕವನಿಸಿದ್ದಾರೆ: ಸೂಚಿಸುತಿದೆಲ್ಲವೀ ಸುದ್ದಿ ವಾಸವದತ್ತೆ- ಯನೆ, ಉದೀಚಿಯನೆಂತೊ ಸೂಜಿಗಲ್ಲಂತೆ (‘ವಾಸವದತ್ತೆ’, ಪು. ೨೭೦) ಸ್ವತಂತ್ರವಾಗಿ ಇಳಿಬಿಟ್ಟ ಅಯಸ್ಕಾಂತ ತನ್ನಂತೆಯೇ ಉತ್ತರಮುಖಿಯಾಗುವ ವಾಸ್ತವವಿಲ್ಲಿ ಉಪಮಾನವಾಗಿದೆ. ಇಲ್ಲಿಯ ಅಯಸ್ಕಾಂತ...
Ocean
ಅಲಂಕಾರ ಇನ್ನು ಅಲಂಕಾರಗಳತ್ತ ದೃಷ್ಟಿ ಹಾಯಿಸುವುದಾದರೆ, ಪೈಗಳಿಗೆ ಶಬ್ದ ಮತ್ತು ಅರ್ಥಗಳ ಸ್ತರದ ಅಲಂಕಾರಗಳೆರಡೂ ಪ್ರಿಯವೆಂದು ತಿಳಿಯುತ್ತದೆ. ತತ್ತ್ವತಃ ಛಂದಸ್ಸು ಕೂಡ ಶಬ್ದಾಲಂಕಾರವೇ ಆದರೂ ಅದನ್ನು ಪ್ರತ್ಯೇಕವಾಗಿ ಪರಿಗಣಿಸುವಷ್ಟು ಆ ಶಾಸ್ತ್ರ ಬೆಳೆದಿದೆ. ಅಲ್ಲಿಯೇ ಆದಿಪ್ರಾಸ ಮತ್ತು ಅಂತ್ಯಪ್ರಾಸಗಳಂಥ ಮೂಲಭೂತ ಶಬ್ದಾಲಂಕಾರಗಳೂ ವಿವೇಚನೆಗೆ ಬರುತ್ತವೆ. ಏಕೆಂದರೆ ಸಾಂಪ್ರದಾಯಿಕ ಬಂಧಗಳಲ್ಲಿ ಆದಿಪ್ರಾಸ ಅನಿವಾರ್ಯ. ನವೀನ ಬಂಧಗಳಲ್ಲಿ ಅಂತ್ಯಪ್ರಾಸವೇ ಅವುಗಳ ಛಂದೋನಿರ್ದಿಷ್ಟತೆಗೆ ದಿಕ್ಸೂಚಿ. ಹೀಗೆ ಈ ಎರಡು ಪ್ರಕಾರಗಳ ಪ್ರಾಸಗಳನ್ನು ಛಂದಸ್ಸಿನ ವಲಯಕ್ಕೆ...
Ocean
ಪರಂಪರೆಯ ಪರಿಜ್ಞಾನ ಮತ್ತು ಸಂಪ್ರದಾಯದ ಮುಂದುವರಿಕೆಯ ಜೊತೆಗೆ ಪ್ರಯೋಗಶೀಲತೆ ಹಾಗೂ ನೂತನ ಆವಿಷ್ಕಾರಗಳ ವಿಷಯದಲ್ಲಿ ಕೂಡ ಪೈಗಳಿಗೆ ಆಸ್ಥೆಯುಂಟು. ಇದಕ್ಕೆ ಅವರ ಛಂದೋನುಶೀಲನವೂ ಒಂದು ಸಮರ್ಥ ನಿದರ್ಶನ. ಆದಿಪ್ರಾಸದ ಪಾಲನೆ ಮತ್ತು ಅದರ ನಿರಾಸದೊಂದಿಗೆ ಪೈಗಳು ಅಲ್ಲಲ್ಲಿ ಸಾಂಪ್ರದಾಯಿಕ ವೃತ್ತಗಳನ್ನು ಹಿಗ್ಗಿಸುವ ಇಲ್ಲವೇ ಹೊಸ ಬಗೆಯ ರಚನೆಗೆ ಒಗ್ಗಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಉದಾ: ಚಂಪಕಮಾಲೆಯ ಪ್ರತಿಪಾದದಲ್ಲಿಯೂ ಹೆಚ್ಚಿನ ಭ-ಗಣವೊಂದನ್ನು ಸೇರಿಸುವ ಮೂಲಕ ಇಪ್ಪತ್ತನಾಲ್ಕು ಅಕ್ಷರಗಳ ಹೊಸತೊಂದು ಸಮವೃತ್ತವನ್ನು ಅವರು ರೂಪಿಸಿಕೊಂಡಿದ್ದಾರೆ.[1]...
Nature
ಪೈಗಳ ಕವಿತೆಯಲ್ಲಿ ಭಕ್ತಿಯ ಮತ್ತೊಂದು ಆಯಾಮವಾದ ಹೃದಯವಿಸ್ತಾರ, ಆತ್ಮನಿವೇದನೆ ಮತ್ತು ಭೂತಾನುಕಂಪೆಗಳನ್ನು ಕೂಡ ಗಮನಿಸಬಹುದು. ಅವರು ಮೇಲ್ನೋಟಕ್ಕೆ ಜಿಗುಟಾದ ಅಭಿಪ್ರಾಯಗಳನ್ನು ಹೊಂದಿದ ನಿರ್ಭೀತ ವಿದ್ವಾಂಸರೆಂದು ತೋರಿದರೂ ಅಂತರಂಗದಲ್ಲಿ ಅವರದು ಸಮಾರ್ದ್ರ ಮನಸ್ಸು. ಹೀಗಾಗಿ ಜಗತ್ತಿನಲ್ಲಿ ಎಲ್ಲಿ ನೋವು ಕಂಡರೂ ಎಲ್ಲಿ ಕಷ್ಟ ಕೆರಳಿದರೂ ಅವರ ಹೃದಯ ಕರಗುತ್ತದೆ, ಅವರ ಮನಸ್ಸು ಮರುಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಹಲವು ಕವಿತೆಗಳಿವೆ. ತುರ್ಕಿಯ ಪರವಾಗಿ ಅವರು ಮಾಡಿದ ಪ್ರಾರ್ಥನೆಯನ್ನು ಈಗಾಗಲೇ ನೋಡಿದ್ದೇವೆ. ‘ಹೊಲೆಯನು ಯಾರು?’ (ಪು. ೧೬) ಎಂಬ ಕವಿತೆಯಲ್ಲಿ...
ವಸ್ತು ಎಸ್. ಶಿವಾಜಿ ಜೋಯಿಸ್ ಅವರು ಸಂಪಾದಿಸಿಕೊಟ್ಟಿರುವ ಗೋವಿಂದ ಪೈಗಳ ಸಮಗ್ರ ಕವಿತೆಗಳ ಪ್ರಸ್ತಾವನೆಯನ್ನು ಕಂಡಾಗ ಅಲ್ಲಿ ಸುಮಾರು ನೂರೆಂಬತ್ತು ಕವಿತೆಗಳು ಅಡಕವಾಗಿವೆಯೆಂದು ತಿಳಿಯುತ್ತದೆ; ಇವಲ್ಲದೆ ಮತ್ತೂ ಒಂಬತ್ತು ಅನುಪಲಬ್ಧ ಕವಿತೆಗಳಿದ್ದಂತೆಯೂ ತಿಳಿಯುತ್ತದೆ.[1] ಸದ್ಯದ ಅಧ್ಯಯನವು ಪೂರ್ವೋಕ್ತ ಸಂಗ್ರಹವನ್ನಲ್ಲದೆ ‘ಹೆಬ್ಬೆರಳು’ ಎಂಬ ಏಕಾಂಕನಾಟಕವನ್ನೂ ಸೇರಿಸಿಕೊಂಡಿದೆ. ಇದಕ್ಕೆ ಕಾರಣ ಈ ರೂಪಕದ ಸಂಪೂರ್ಣ ಪದ್ಯಾತ್ಮಕತೆಯೇ. ಆದರೆ ಈ ಅವಲೋಕನದಲ್ಲಿ ಪೈಗಳು ಮಾಡಿದ ಗೀತಾಂಜಲಿಯ ಗದ್ಯಾನುವಾದವಾಗಲಿ, ಅವರ ಇಂಗ್ಲಿಷ್ ಮತ್ತು ಕೊಂಕಣಿ ಕವನಗಳಾಗಲಿ...
ಪ್ರವೇಶ ಉಕ್ತಿ ಎಂದರೆ ನುಡಿ, ಹೇಳಿಕೆ ಎಂಬೆಲ್ಲ ಅರ್ಥಗಳುಂಟು. ಬರಿಯ ಮಾತಿಗೆ ಸೊಗಸು ಬಂದಾಗ ಅದೊಂದು ವಿಶೇಷವೆನಿಸುತ್ತದೆ. ಇದು ಕವಿತೆಯಲ್ಲಿ ಎದ್ದುಕಾಣುತ್ತದೆ; ಇದಿಲ್ಲದ ಪಕ್ಷದಲ್ಲಿ ಕಾವ್ಯತ್ವಕ್ಕೆ ಕುಂದು ಬರುತ್ತದೆ. ಆದುದರಿಂದಲೇ ಕಾವ್ಯವನ್ನು ‘ಉಕ್ತಿವಿಶೇಷ’ ಎನ್ನುತ್ತಾರೆ. ರಾಜಶೇಖರನ ‘ಕರ್ಪೂರಮಂಜರೀ’ (೧.೮) ಎಂಬ ಪ್ರಾಕೃತರೂಪಕ ಈ ಮಾತನ್ನು ಸಮರ್ಥವಾಗಿ ನಿರೂಪಿಸುತ್ತದೆ: “ಉತ್ತಿವಿಸೇಸೋ ಕವ್ವಮ್” (ಉಕ್ತಿವಿಶೇಷಃ ಕಾವ್ಯಮ್). ಈ ಅಂಶವನ್ನೇ ‘ವಕ್ರತೆ’ ಎಂಬ ಹೆಸರಿನಿಂದ ಕುಂತಕ ವಿಸ್ತೃತವಾಗಿ ವಿವೇಚಿಸಿದ್ದಾನೆ. ಅವನ ಪ್ರಕಾರ ವಕ್ರತೆಯೆಂಬುದು...