ವ್ಯಂಜನಾವ್ಯಾಪಾರವು ಪ್ರಮಾಣವಲ್ಲವೆಂಬ ಮತ್ತೊಂದು ಆಕ್ಷೇಪ ಹೀಗಿದೆ: ಧೂಮೇನ ಧ್ವನ್ಯತಾಂ ವಹ್ನಿಶ್ಚಕ್ಷುಷಾ ಧ್ವನ್ಯತಾಂ ಘಟಃ | ಅರ್ಥಶ್ಚೇದ್ಧ್ವನಯೇದರ್ಥಂ ಕಾ ಪ್ರಮಾಣವ್ಯವಸ್ಥಿತಿಃ || (೨೦.೧೬) ಅರ್ಥಶಕ್ತಿಮೂಲಧ್ವನಿಯು ಹೇಗೆ ತಾನೆ ಪ್ರಮಾಣವೆನಿಸೀತು? ಹಾಗೊಮ್ಮೆ ಒಪ್ಪಿದಲ್ಲಿ ಹೊಗೆಯಿಂದ ಬೆಂಕಿಯೂ ಕಣ್ಣಿಂದ ಮಡಕೆಯೂ ಧ್ವನಿತವಾಗಬೇಕು! ಶಬ್ದವು ಅರ್ಥಕ್ಕೆ ಲಿಂಗವಾಗುವುದು ಸಹಜ. ನೈಯಾಯಿಕರ ಪ್ರಕಾರ ವ್ಯಂಗ್ಯಾರ್ಥವೂ ಇಂಥ ಲಿಂಗದ ಮೂಲಕ ತಿಳಿದುಬರುವ ಆನುಮಾನಿಕಜ್ಞಾನ. ಆದರೆ ಅರ್ಥಕ್ಕೆ ಅರ್ಥವೇ ಲಿಂಗವಾಗುವುದು ಹೇಗೆಂಬ ಆಕ್ಷೇಪ ಇಲ್ಲಿದೆ. ಏಕೆಂದರೆ ಆನಂ...
ಮೀಮಾಂಸಕರು ಮೊದಲಿನಿಂದಲೂ ಕಾವ್ಯವಿರೋಧಿಗಳು. ಅವರತ್ತ ಕವಿ ಹೀಗೆ ಕಟಾಕ್ಷಿಸುತ್ತಾನೆ: ಅರ್ಥೇಷ್ವಲಂಕಾರವಿದಃ ಪ್ರಮಾಣಂ             ಶಬ್ದೇಷು ನಃ ಶಬ್ದವಿದೋ ಮುನೀಂದ್ರಾಃ | ಕೇ ತಾಂತ್ರಿಕಾಣಾಂ ಕವಯೋ ಭವಂತಿ             ಕೇ ವಾ ಕವೀನಾಮಪಿ ತಾಂತ್ರಿಕಾಃ ಸ್ಯುಃ || (೧.೭೦) ಕಾವ್ಯಾರ್ಥವನ್ನು ಕುರಿತಂತೆ ಆಲಂಕಾರಿಕರು ಪ್ರಮಾಣ. ಪದಶುದ್ಧಿಯನ್ನು ಕುರಿತಂತೆ ಮುನಿತ್ರಯವೇ ಪ್ರಮಾಣ. ಆದರೆ ಮೀಮಾಂಸಕರ ಪೈಕಿ ಯಾರು...
Himalaya
ಕಾವ್ಯಕಲೆ ಸಕಲಮಾನವರಿಗೆ ಸಂತೋಷಕಾರಿಯೆಂಬ ತಥ್ಯವನ್ನು ತನ್ನದಾದ ನಿರುಪಮರೀತಿಯಲ್ಲಿ ಹೀಗೆ ಸಮರ್ಥಿಸುತ್ತಾನೆ: ಆವರ್ಣಶಕ್ತಿಗ್ರಹಮಾಪವರ್ಗಂ             ದುಃಖೈಕರೂಪಾ ವಿರಚಯ್ಯ ವಿದ್ಯಾಃ | ವಿಶ್ರಾಂತಿಹೇತೋಃ ಕವಿತಾಂ ಜನಾನಾಂ             ವೇಧಾಃ ಸದಾನಂದಮಯೀಂ ಕಿಮಾಧಾತ್ || (೧.೩೧) ವರ್ಣಮಾಲೆ-ವ್ಯಾಕರಣಗಳಿಂದ ಮೊದಲ್ಗೊಂಡು ಮೋಕ್ಷಶಾಸ್ತ್ರದವರೆಗೆ ಕಲಿಯಲು ತುಂಬ ಕಷ್ಟವಾದ ವಿದ್ಯೆಗಳನ್ನೆಲ್ಲ ರೂಪಿಸಿದ ಬಳಿಕ ಬ...
ಸಾಹಿತ್ಯ-ಸಂಗೀತಗಳ ತೌಲನಿಕವ್ಯತ್ಯಾಸವನ್ನು ಕವಿಯು ಬಲ್ಲ: ಕರ್ಣಂ ಗತಂ ಶುಷ್ಯತಿ ಕರ್ಣ ಏವ             ಸಂಗೀತಕಂ ಸೈಕತವಾರಿರೀತ್ಯಾ | ಆನಂದಯತ್ಯಂತರನುಪ್ರವಿಶ್ಯ             ಸೂಕ್ತಿಃ ಕವೇರೇವ ಸುಧಾಸಗಂಧಾ || (೧.೧೭) ಕಿವಿಯನ್ನು ಹೊಕ್ಕ ಹಾಡು ಮರಳಿಗೆ ಬಿದ್ದ ನೀರಿನಂತೆ ಅಲ್ಲಿಯೇ ಬತ್ತುತ್ತದೆ. ಆದರೆ ಅಮೃತಸಮಾನವಾದ ಕವಿಸೂಕ್ತಿ ಅಂತರಂಗವನ್ನು ಹೊಕ್ಕು ಆನಂದವನ್ನೀಯುತ್ತದೆ. ನೀಲಕಂಠದೀಕ್ಷಿತನು ಬಹುಶಃ “ಸಂ...
ನಾವಿನ್ನು “ಶಿವಲೀಲಾರ್ಣವ”ದತ್ತ ತಿರುಗಬಹುದು. ಇದರಲ್ಲಿ ನೀಲಕಂಠದೀಕ್ಷಿತನ ವ್ಯಾಪಕವಾದ ಕಾವ್ಯಚಿಂತನೆ ಕಂಡುಬರುತ್ತದೆ. ಮೊದಲಿಗೇ ಕವಿಯು ಧ್ವನಿಯ ಮಹತ್ತ್ವವನ್ನು ಸಾರುತ್ತಾನೆ: ಸಾಹಿತ್ಯವಿದ್ಯಾಜಯಘಂಟಯೈವ             ಸಂವೇದಯಂತೇ ಕವಯೋ ಯಶಾಂಸಿ | ಯಥಾ ಯಥಾಸ್ಯಾಂ ಧ್ವನಿರುಜ್ಜಿಹೀತೇ             ತಥಾ ತಥಾ ಸಾರ್ಹತಿ ಮೂಲ್ಯಭೇದಾನ್ || (೧.೮) ಸಾಹಿತ್ಯವಿದ್ಯೆಯೆಂಬ ಜಯಘಂಟಿಕೆಯಿಂದಲೇ ಕವಿಗಳು ಕೀರ್ತಿಯನ್ನು...
ಇಂಥ ಕಲ್ಪನೆಯಿಂದ ಹುಟ್ಟಿದ ಸಾಹಿತ್ಯದ ಸ್ವರೂಪವನ್ನು ಹೀಗೆ ಬಣ್ಣಿಸುತ್ತಾನೆ: ಅಸ್ತಿ ಸಾರಸ್ವತಂ ಚಕ್ಷುರಜ್ಞಾತಸ್ವಾಪಜಾಗರಮ್ | ಗೋಚರೋ ಯಸ್ಯ ಸರ್ವೋऽಪಿ ಯಃ ಸ್ವಯಂ ಕರ್ಣಗೋಚರಃ || (೧.೯) ಎಚ್ಚರ-ನಿದ್ರೆಗಳಿಲ್ಲದ ನೇತ್ರವೇ ಸಾಹಿತ್ಯ. ಇದರ ದೃಷ್ಟಿಗೆ ಎಲ್ಲವೂ ತೋರಿಕೊಳ್ಳುತ್ತದೆ; ಇದು ಮಾತ್ರ ಕಿವಿಗೆ ಎಟುಕುತ್ತದೆ. ಇದು ನಿಜಕ್ಕೂ ಅತ್ಯದ್ಭುತವಾದ ಶ್ಲೋಕ. ಇಲ್ಲಿ ಕವಿಯು ಸಾಹಿತ್ಯದ ಪರಿಧಿಗೆಟುಕದ ಪದಾರ್ಥವೇ ಇಲ್ಲವೆಂದು ಹೇಳಿರುವುದಲ್ಲದೆ ಅದು ಜೀವಸಾಮಾನ್ಯದ ಅವಸ್ಥೆಗಳಾದ ಎಚ್ಚರ-ನಿದ್ರೆಗಳನ್ನೂ ಮೀರಿದೆಯೆಂದು ಗುರುತಿಸಿದ್ದಾನೆ. ನಿದ್ರೆಯಲ್ಲಿ ಕನಸ...
Himalaya
ಗಂಗಾದೇವಿ ಕಥನಕಾವ್ಯಗಳನ್ನು ರಚಿಸಿದ ಕವಯಿತ್ರಿಯರ ಪೈಕಿ ಗಂಗಾದೇವಿಯ ಸ್ಥಾನ ಅದ್ವಿತೀಯ. ಅಷ್ಟೇಕೆ, ವಾರ್ತಮಾನಿಕ ವಸ್ತುವನ್ನು ಆಧರಿಸಿ ಪ್ರಸನ್ನಗಂಭೀರವಾದ ಶೈಲಿಯಲ್ಲಿ ಕಲ್ಪನಾವೈಚಿತ್ರ್ಯವಿರುವಂತೆ ಕಾವ್ಯವನ್ನು ರಚಿಸಿದ ಕವಿಗಳ ಪಂಕ್ತಿಯಲ್ಲಿಯೇ ಇವಳ ಸ್ಥಾನ ಗಣ್ಯವಾದುದು. ಈಕೆಯ “ಮಧುರಾವಿಜಯ” ಅಥವಾ “ವೀರಕಂಪಣರಾಯಚರಿತ” ಎಂಬ ಐತಿಹಾಸಿಕಮಹಾಕಾವ್ಯದ ಮೊದಲಿಗೆ ಬರುವ ಕೆಲವು ಮಾತುಗಳು ನಮ್ಮ ಉದ್ದೇಶಕ್ಕೆ ಪೂರಕವಾಗಿವೆ. ಗಂಗಾದೇವಿ ಗುಣ-ದೋಷಗಳನ್ನು ಕುರಿತು ಹೇಳುವ ಮಾತುಗಳು ಮನನೀಯ: ಪ್ರಬಂಧಮೀಷನ್ಮಾತ್ರೋऽಪಿ ದೋಷೋ ನಯತಿ ದೂಷ್ಯತಾಮ್ |   ...
ವೇಂಕಟನಾಥ ವೇದಾಂತದೇಶಿಕರೆಂಬ ಗೌರವಾಭಿಧಾನವನ್ನು ಗಳಿಸಿದ್ದ ವೇಂಕಟನಾಥನು “ಕವಿತಾರ್ಕಿಕಕೇಸರಿ” ಎಂದು ಪ್ರಸಿದ್ಧ. ಈತನ ಕಾವ್ಯಗಳ ಪೈಕಿ “ಸಂಕಲ್ಪಸೂರ್ಯೋದಯ”ವೆಂಬ ನಾಟಕವು ನಮ್ಮ ಉದ್ದೇಶವನ್ನು ಕೆಲಮಟ್ಟಿಗೆ ಈಡೇರಿಸುತ್ತದೆ. ಈ ಕೃತಿ ಹನ್ನೊಂದನೆಯ ಶತಾಬ್ದದಲ್ಲಿದ್ದ ಕೃಷ್ಣಮಿಶ್ರಯತಿಯ “ಪ್ರಬೋಧಚಂದ್ರೋದಯ”ವನ್ನು ಆದ್ಯಂತ ಅನುಕರಿಸಿದೆ. ಈ ಅನುಕರಣೆ ಇತಿವೃತ್ತ ಮತ್ತು ಪಾತ್ರಗಳನ್ನೆಲ್ಲ ವ್ಯಾಪಿಸಿಕೊಂಡಿದೆ. ಇಂತಿದ್ದರೂ ಮೂಲಕ್ಕೆ ತನ್ನ ಆನೃಣ್ಯವನ್ನು ನಾಮಮಾತ್ರವಾಗಿಯೂ ಹೇಳದ ಮತಾಗ್ರಹ ವೇಂಕಟನಾಥನದು. ಆದರೆ ಪ್ರಬೋಧಚಂದ್ರೋದಯದಲ್ಲಿ ಪರಾಮೃಷವಾಗದ ಶಾಂತರಸಮೀಮ...
ಹಸ್ತಿಮಲ್ಲ ಕನ್ನಡ-ಸಂಸ್ಕೃತಗಳೆರಡರಲ್ಲಿಯೂ ವಿದ್ವತ್ಕವಿಯಾಗಿದ್ದ ಹಸ್ತಿಮಲ್ಲನ ಕಾಲ ಇನ್ನೂ ಅನಿಶ್ಚಿತ. ಈತನ “ಅಂಜನಾಪವನಂಜಯ” ಎಂಬ ನಾಟಕದ ಪ್ರಸ್ತಾವನೆಯಲ್ಲಿ ಬರುವ ಕೆಲವೊಂದು ಮಾತುಗಳು ವಿವೇಚನೀಯ: ಸಮೀಚೀನಾ ವಾಚಃ ಸರಲಸರಲಾ ಕಾಪಿ ರಚನಾ             ಪರಾ ವಾಚೋಯುಕ್ತಿಃ ಕವಿಪರಿಷದಾರಾಧನಪರಾ | ಅನಾಲೀಢೋ ಗಾಢಃ ಪರಮನತಿಗೂಢೋऽಪಿ ಚ ರಸಃ             ಕವೀನಾಂ ಸಾಮಗ್ರೀ ಝಟಿತಿ ಚಲಿತಂ ಕಂ ನ ಕುರುತೇ || (೧.೨) ಮ...
ಕಲ್ಹಣ “ರಾಜತರಂಗಿಣಿ”ಯ ಕರ್ತನಾಗಿ ಈ ಮಹಾಕವಿಯು ಸಮಾರ್ಜಿಸಿದ ಯಶಸ್ಸು ನಿರುಪಮಾನ. ಸಂಸ್ಕೃತದಲ್ಲಿ ಇತಿಹಾಸದ ಬಲವುಳ್ಳ ಕೃತಿಗಳಿಗಾಗಲಿ, ಚರಿತ್ರಪ್ರಧಾನವಾದ ಕಾವ್ಯಗಳಿಗಾಗಲಿ ಕೊರತೆಯಿಲ್ಲ. ಇಂತಿದ್ದರೂ ಕಲ್ಪನಾಂಶಕ್ಕಿಂತ ವಾಸ್ತವಾಂಶವನ್ನೇ ಹೆಚ್ಚಾಗಿ ಉಳ್ಳ ರಾಜತರಂಗಿಣಿಯು ಕಾವ್ಯಾರ್ಹತೆಯನ್ನು ಗಳಿಸಿದುದು ಮಹತ್ತ್ವದ ಸಂಗತಿ. ಇದು ಸಾಧ್ಯವಾದದ್ದು ಕಲ್ಹಣನ ವ್ಯಕ್ತಿತ್ವಘನತೆ ಮತ್ತು ಮಾನವಸ್ವಭಾವಪರಿಜ್ಞಾನಗಳಿಂದ. ಹೀಗಾಗಿ ಇವನ ಕೃತಿಯ ಒಂದೆರಡು ಮಾತುಗಳು ಕಾವ್ಯಮೀಮಾಂಸೆಗೆ ಮುಖ್ಯವೆನಿಸಿವೆ: ಶ್ಲಾಘ್ಯಃ ಸ ಏವ ಗುಣವಾನ್ ರಾಗದ್ವೇಷಬಹಿಷ್ಕೃತಾ | ಭೂತಾರ್...